ಶೆಡ್ಗೆ ಪೆಟ್ರೋಲ್ ಸುರಿದು ಬೆಂಕಿಯಿಟ್ಟ ದುಷ್ಕರ್ಮಿಗಳು
ಭೀಕರ ಘಟನೆಯಲ್ಲಿ ಒಂದೇ ಕುಟುಂಬದ ಮೂವರ ಸಾವು
ಪೊಲೀಸರಿಂದ 20 ಜನರ ವಿಚಾರಣೆ, 4 ಮಂದಿ ವಶಕ್ಕೆ
ಬಾಗಲಕೋಟೆ: ಶೆಡ್ ಗೆ ಪೆಟ್ರೋಲ್ ಸುರಿದು ಬೆಂಕಿಯಿಟ್ಟ ದುಷ್ಕರ್ಮಿಗಳು ಇಬ್ಬರನ್ನು ಸಜೀವ ದಹನ ಮಾಡಿದ ಭೀಕರ ಘಟನೆ ಬಾಗಲಕೋಟೆ ಜಿಲ್ಲೆ ಮುಧೋಳ ತಾಲೂಕಿನ ಬೆಳಗಲಿಯಲ್ಲಿ ನಡೆದಿದೆ. ಬೆಳಗಲಿ ಸರಹದ್ದಿನ ತೋಟದ ಮನೆಯಲ್ಲಿ ಇಂಥಹದೊಂದು ಭೀಕರ ಘಟನೆ ನಡೆದಿದೆ. ಇದೇ ಜುಲೈ 16ರ ತಡರಾತ್ರಿ ತೋಟದಲ್ಲಿದ್ದ ಶೆಡ್ ಗೆ ಪೆಟ್ರೋಲ್ ಸುರಿದು ಬೆಂಕಿಯಿಟ್ಟಿದ್ದಾರೆ ದುಷ್ಕರ್ಮಿಗಳು. ಭೀಕರ ಘಟನೆಯಲ್ಲಿ 27 ವರ್ಷದ ಸುಬಾನ್, ಜಯಬಿನ್ ಹಾಗೂ ಶಬಾನಾ ಎಂಬುವವರು ಮೃತಪಟ್ಟಿದ್ದಾರೆ.
ಬೆಳಗಲಿಯ ಸರಹದ್ದಿನಲ್ಲಿರುವ ದಸ್ತಗಿರಿ ಸಾಬ್ ಎಂಬುವವರಿಗೆ ಸೇರಿದ್ದ ಶೆಡ್ಗೆ ಇದೇ ಜುಲೈ 16ರ ತಡರಾತ್ರಿ ದುಷ್ಕರ್ಮಿಗಳು ಪೆಟ್ರೋಲ್ ಸುರಿದು ಬೆಂಕಿಯಿಟ್ಟಿದ್ದರು. ದುರ್ಘಟನೆಯಲ್ಲಿ ದಸ್ತಗಿರಿ ಸಾಬ್ ಹಾಗೂ ಸುಬಾನ್ ಗಂಭೀರವಾಗಿ ಗಾಯಗೊಂಡಿದ್ದರೆ..ದಸ್ತಗಿರಿ ಸಾಬ್ನ ಪತ್ನಿ ಜಯಬಿನ್ ಹಾಗೂ ಮಗಳು ಶಬಾನಾ ಸ್ಥಳದಲ್ಲಿಯೇ ಸುಟ್ಟು ಕರಕಲಾಗಿ ಜೀವ ಬಿಟ್ಟಿದ್ದರೆ. ಶೇಕಡಾ 50 ರಷ್ಟು ದೇಹಭಾಗ ಸುಟ್ಟಿದ್ದ ಸುಬಾನ್ರನ್ನ ಚಿಕಿತ್ಸೆಗಾಗಿ ಬೆಳಗಾವಿಯ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು.. ಆದ್ರೆ ಚಿಕಿತ್ಸೆ ಫಲಕಾರಿಯಾಗದೆ ಸುಬಾನ್ ತಡರಾತ್ರಿ 3 ಗಂಟೆಗೆ ಮೃತಪಟ್ಟಿದ್ದಾರೆ. ದಸ್ತಗಿರಿ ಸಾಬ್ಗೆ ಚಿಕಿತ್ಸೆ ಇನ್ನೂ ಮುಂದುವರೆದಿದೆ..
ಘಟನೆಯಲ್ಲಿ ಯಾರ ಕೈವಾಡವಿದೆಯೆಂದು ಇನ್ನೂ ಸ್ಪಷ್ಟವಾಗಿ ತಿಳಿದು ಬಂದಿಲ್ಲ.. ಸದ್ಯ ಮುಧೋಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಒಟ್ಟು 20 ಜನರನ್ನು ಪೊಲೀಸರು ವಿಚಾರಣೆ ನಡೆಸಿ ನಾಲ್ವರನ್ನು ವಶಕ್ಕೆ ಪಡೆದು ವಿಚಾರಣೆ ಮುಂದುವರಿಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ಶೆಡ್ಗೆ ಪೆಟ್ರೋಲ್ ಸುರಿದು ಬೆಂಕಿಯಿಟ್ಟ ದುಷ್ಕರ್ಮಿಗಳು
ಭೀಕರ ಘಟನೆಯಲ್ಲಿ ಒಂದೇ ಕುಟುಂಬದ ಮೂವರ ಸಾವು
ಪೊಲೀಸರಿಂದ 20 ಜನರ ವಿಚಾರಣೆ, 4 ಮಂದಿ ವಶಕ್ಕೆ
ಬಾಗಲಕೋಟೆ: ಶೆಡ್ ಗೆ ಪೆಟ್ರೋಲ್ ಸುರಿದು ಬೆಂಕಿಯಿಟ್ಟ ದುಷ್ಕರ್ಮಿಗಳು ಇಬ್ಬರನ್ನು ಸಜೀವ ದಹನ ಮಾಡಿದ ಭೀಕರ ಘಟನೆ ಬಾಗಲಕೋಟೆ ಜಿಲ್ಲೆ ಮುಧೋಳ ತಾಲೂಕಿನ ಬೆಳಗಲಿಯಲ್ಲಿ ನಡೆದಿದೆ. ಬೆಳಗಲಿ ಸರಹದ್ದಿನ ತೋಟದ ಮನೆಯಲ್ಲಿ ಇಂಥಹದೊಂದು ಭೀಕರ ಘಟನೆ ನಡೆದಿದೆ. ಇದೇ ಜುಲೈ 16ರ ತಡರಾತ್ರಿ ತೋಟದಲ್ಲಿದ್ದ ಶೆಡ್ ಗೆ ಪೆಟ್ರೋಲ್ ಸುರಿದು ಬೆಂಕಿಯಿಟ್ಟಿದ್ದಾರೆ ದುಷ್ಕರ್ಮಿಗಳು. ಭೀಕರ ಘಟನೆಯಲ್ಲಿ 27 ವರ್ಷದ ಸುಬಾನ್, ಜಯಬಿನ್ ಹಾಗೂ ಶಬಾನಾ ಎಂಬುವವರು ಮೃತಪಟ್ಟಿದ್ದಾರೆ.
ಬೆಳಗಲಿಯ ಸರಹದ್ದಿನಲ್ಲಿರುವ ದಸ್ತಗಿರಿ ಸಾಬ್ ಎಂಬುವವರಿಗೆ ಸೇರಿದ್ದ ಶೆಡ್ಗೆ ಇದೇ ಜುಲೈ 16ರ ತಡರಾತ್ರಿ ದುಷ್ಕರ್ಮಿಗಳು ಪೆಟ್ರೋಲ್ ಸುರಿದು ಬೆಂಕಿಯಿಟ್ಟಿದ್ದರು. ದುರ್ಘಟನೆಯಲ್ಲಿ ದಸ್ತಗಿರಿ ಸಾಬ್ ಹಾಗೂ ಸುಬಾನ್ ಗಂಭೀರವಾಗಿ ಗಾಯಗೊಂಡಿದ್ದರೆ..ದಸ್ತಗಿರಿ ಸಾಬ್ನ ಪತ್ನಿ ಜಯಬಿನ್ ಹಾಗೂ ಮಗಳು ಶಬಾನಾ ಸ್ಥಳದಲ್ಲಿಯೇ ಸುಟ್ಟು ಕರಕಲಾಗಿ ಜೀವ ಬಿಟ್ಟಿದ್ದರೆ. ಶೇಕಡಾ 50 ರಷ್ಟು ದೇಹಭಾಗ ಸುಟ್ಟಿದ್ದ ಸುಬಾನ್ರನ್ನ ಚಿಕಿತ್ಸೆಗಾಗಿ ಬೆಳಗಾವಿಯ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು.. ಆದ್ರೆ ಚಿಕಿತ್ಸೆ ಫಲಕಾರಿಯಾಗದೆ ಸುಬಾನ್ ತಡರಾತ್ರಿ 3 ಗಂಟೆಗೆ ಮೃತಪಟ್ಟಿದ್ದಾರೆ. ದಸ್ತಗಿರಿ ಸಾಬ್ಗೆ ಚಿಕಿತ್ಸೆ ಇನ್ನೂ ಮುಂದುವರೆದಿದೆ..
ಘಟನೆಯಲ್ಲಿ ಯಾರ ಕೈವಾಡವಿದೆಯೆಂದು ಇನ್ನೂ ಸ್ಪಷ್ಟವಾಗಿ ತಿಳಿದು ಬಂದಿಲ್ಲ.. ಸದ್ಯ ಮುಧೋಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಒಟ್ಟು 20 ಜನರನ್ನು ಪೊಲೀಸರು ವಿಚಾರಣೆ ನಡೆಸಿ ನಾಲ್ವರನ್ನು ವಶಕ್ಕೆ ಪಡೆದು ವಿಚಾರಣೆ ಮುಂದುವರಿಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ