ಬುಡುಕಟ್ಟು ಮಹಿಳೆಯರ ಬದುಕು ಬದಲಿಸಿದ ಬಿದಿರಿನ ಉತ್ಪನ್ನಗಳು
ಸ್ಟಾರ್ಟ್ಅಪ್ ಆರಂಭಿಸುವ ಕನಸು ಕಾಣುತ್ತಿರುವವರು ತಪ್ಪದೇ ಓದಿ
5 ವರ್ಷಗಳಲ್ಲಿ ಈ ಸ್ಟಾರ್ಟ್ಅಪ್ ಕಂಪನಿ ಗಳಿಸಿದ್ದು ಎಷ್ಟು ಗೊತ್ತಾ..?
ಮುಂಬೈ: ಬಿದಿರಿನ ಉತ್ಪನ್ನಗಳನ್ನು ನಾವು ಸಾಮಾನ್ಯವಾಗಿ ನೋಡುವುದು ಬುಡುಕಟ್ಟು ಜನಾಂಗದರಲ್ಲಿ. ಕಾಡಿನ ಮಕ್ಕಳಾಗಿ ಬೆಳೆಯುವ ಅವರೇ ಬಿದಿರನ್ನು ಹೇಗೆಲ್ಲಾ ಬದುಕಿನ ಆಹಾರವನ್ನಾಗಿ ಮಾಡಿಕೊಳ್ಳಬಹುದು ಎಂಬುವುದರ ಸ್ಪಷ್ಟವಾಗಿ ತಿಳಿದವರು. ಈಗ ಇದೇ ಬುಡಕಟ್ಟು ಜನಾಂಗದ ಕೌಶಲ್ಯವನ್ನು ತಮ್ಮ ಸ್ಟಾರ್ಟ್ಅಪ್ಗೆ ಬುನಾದಿಯನ್ನಾಗಿ ಮಾಡಿಕೊಂಡಿದ್ದಾರೆ ಮಹಾರಾಷ್ಟ್ರದ ಎಂಬಿಎ ಪದವಿದರ ಗೌರವ ಶ್ರೀವಾಸ್ತವ.
ಇದನ್ನೂ ಓದಿ: ಗಂಗಾವಳಿ ನದಿ ರಭಸಕ್ಕೆ ಮುಳುಗು ತಜ್ಞ ಈಶ್ವರ್ ಮಲ್ಪೆ ಶಾಕ್.. 3 ಮೃತದೇಹಗಳ ಬಗ್ಗೆ ಏನ್ ಹೇಳಿದ್ದಾರೆ?
ಗೌರವ ಶ್ರೀವಾಸ್ತವ ಮೂಲತಃ ಕಾರ್ಪೋರೇಟ್ ಕಂಪನಿಗಳಲ್ಲಿ ಕೆಲಸ ಮಾಡುತ್ತಿದ್ದವರು. ಜೊತೆಗೆ ಜಗತ್ತಿನಲ್ಲಿ ಬಿದಿರಿನ ಉತ್ಪನ್ನಗಳಿಗೆ ಏನೆಲ್ಲಾ ಡಿಮ್ಯಾಂಡ್ ಇದೆ ಅನ್ನೋದನ್ನ ಸ್ಪಷ್ಟವಾಗಿ ಕಂಡವರು. 2019ರಲ್ಲಿ ಗೌರವ್ ಶ್ರೀವಾತ್ಸವ್ ಅವರಿಗೆ ಸಣ್ಣದೊಂದು ಆಸೆ ಚಿಗುರೊಡೆಯಿತು. ಮಹಾರಾಷ್ಟ್ರದ ಪಲ್ಗಾರ್ನಲ್ಲಿರುವ ತಿತ್ವಾಲಿ ಎಂಬ ಗ್ರಾಮದಲ್ಲಿ ಬುಡಕಟ್ಟು ಮಹಿಳೆಯರು ತಮ್ಮ ಉಪಜೀವನಕ್ಕಾಗಿ ಬಿದಿರಿನ ಉತ್ಪನ್ನಗಳನ್ನು ಸಿದ್ಧಪಡಿಸಿ ಮಾರಿ ತಮ್ಮ ಹೊಟ್ಟೆ ತುಂಬಿಕೊಳ್ಳುತ್ತಿದ್ದರು. ಆ ಹೆಣ್ಣು ಮಕ್ಕಳಿಗೆ ಹೇಳಿಕೊಳ್ಳುವಂತಹ ಹಣವೇನು ಬರುತ್ತಿರಲಿಲ್ಲ. ಇದನ್ನು ಗಮನಿಸಿದ ಗೌತಮ್ ಒಂದೊಂದೆ ಬಿಂದುಗಳನ್ನು ಸೇರಿಸತೊಡಗಿದರು. ಬಿದಿರಿನ ಉತ್ಪನ್ನಗಳ ಸ್ಟಾರ್ಟ್ಅಪ್ ಮಾಡುವ ಆಸೆಯೊಂದು ಅಂದೇ ಚಿಗುರೊಡೆಯಿತು. ಕಾರ್ಪೋರೆಟ್ ವಲಯದಲ್ಲಿದ್ದ ಅವರಿಗೆ ಬಿದಿರಿನ ಉತ್ಪನ್ನಗಳಿಗಿರುವ ಬೇಡಿಕೆಯ ಅಂದಾಜು ಮೊದಲೇ ಇದ್ದ ಕಾರಣ. ಬುಡಕಟ್ಟು ಹೆಣ್ಣು ಮಕ್ಕಳನ್ನೆಲ್ಲಾ ಸೇರಿಸಿಕೊಂಡು ತಮ್ಮದೇ ಆದ ಸ್ಟಾರ್ಟ್ಅಪ್ ಒಂದನ್ನು ಶುರು ಮಾಡಿದ್ರು.
ಇದನ್ನೂ ಓದಿ: ಓಡುವ ರೈಲಿನಲ್ಲಿ ಸಾಹಸ ಮೆರೆಯಲು ಹೋದವ ಈಗ ಏನಾಗಿದ್ದಾನೆ: ರೀಲ್ಸ್ಗಾಗಿ ಹುಚ್ಚಾಟ ಮಾಡೋರು ತಪ್ಪದೇ ನೋಡಿ
ಸುಂದರವಾದ ಬಿದಿರಿನ ಉತ್ಪನ್ನಗಳ ಜೊತೆ ಮಹಿಳೆಯರ ಸಬಲೀಕರಣದ ಉದ್ದೇಶದಿಂದ ಗೌರವ್ ಶ್ರೀವಾತ್ಸವ್ ವಿಕ್ರಮ್ಗಢ ಬ್ಯಾಂಬು ಉದ್ಯೋಗ ಪ್ರೊಡ್ಯೂಸರ್ ಕಂಪನಿ ಲಿಮಿಟೆಡ್ ಎಂಬ ಕಂಪನಿ ಶುರು ಮಾಡಿದ್ರು ಹೀಗೆ 2019ರಲ್ಲಿ ಶುರುವಾದ ಈ ಪಯಣ 2023ರಲ್ಲಿ ಪ್ರೊಜೆಕ್ಟ್ ಗ್ರೀನ್ ಗೋಲ್ಡ್ ಬದಲಾದ ಹೆಸರಿನೊಂದಿಗೆ ತಿತ್ವಾಲಿ ಗ್ರಾಮದಲ್ಲಿ ಹೊಸ ಸ್ಟಾರ್ಟ್ಅಪ್ ಶುರು ಮಾಡಿದ್ರು. ಇಡೀ ಬುಡಕಟ್ಟು ಕುಶಲಕರ್ಮಿಗಳ ಮಾಲೀಕತ್ವವೇ ಇರುವ ಸಂಸ್ಥೆಯಾಗಿ ಬೆಳೆಯತೊಡಗಿತು. ಮೊದಲು ತಿತ್ವಾಲಿ ಗ್ರಾಮದಿಂದ ಆರಂಭವಾದ ಈ ಸ್ಟಾರ್ಟ್ಅಪ್ ಈಗ 23 ಗ್ರಾಮಗಳಿಗೆ ವಿಸ್ತರಿಸಿಕೊಂಡು ಒಟ್ಟು 700 ಬಿದಿರಿನ ಉತ್ಪನ್ನಗಳನ್ನು ತಯಾರಿಸುವ ಕುಶಲ ಕರ್ಮಿಗಳು ಇಲ್ಲಿ ಕೆಲಸ ಮಾಡುತ್ತಿದ್ದಾರೆ.
ಬಿದಿರಿನ ಬೊಂಬೆಗಳು, ಆಟಿಗಳನ್ನು ಇಲ್ಲಿ ತಯಾರಾಗುತ್ತವೆ. ಈ ತಂಡಗಳು ಈಗ ವರ್ಷಕ್ಕೆ 27 ಲಕ್ಷ ರೂಪಾಯಿಯಷ್ಟು ಆದಾಯ ಪಡೆಯುತ್ತಿದೆ. ಗೌರವ್ ಶ್ರೀವಾಸ್ತವ ಸ್ಟಾರ್ಟ್ಅಪ್ ಜೊತೆ ಜೊತೆಗೆ ಸಮಾಜಕ್ಕೆ ಏನಾದರೂ ಒಳಿತು ಮಾಡಬೇಕೆಂಬ ಉದ್ದೇಶದಿಂದ ಆರಂಭವಾದ ಈ ಸ್ಟಾರ್ಟ್ಅಪ್ ಈಗ ಜನರ ಗಮನ ಸೆಳೆಯುತ್ತಿದೆ. ಎಂಬಿಎ ಪದವಿಧರ ಈ ಸ್ಟಾರ್ಟ್ಅಪ್ ಆರಂಭ ಮಾಡುವ ಮೂಲಕ ತಮ್ಮ ಜೊತೆ ಜೊತೆಗೆ ಬುಡಕಟ್ಟು ಜನಾಂಗ ಮಹಿಳೆಯ ಆದಾಯವನ್ನು ಕೂಡ ಹೆಚ್ಚಿಸಿ ಅವರ ಬದುಕನ್ನು ಸುಂದರಗೊಳಿಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ಬುಡುಕಟ್ಟು ಮಹಿಳೆಯರ ಬದುಕು ಬದಲಿಸಿದ ಬಿದಿರಿನ ಉತ್ಪನ್ನಗಳು
ಸ್ಟಾರ್ಟ್ಅಪ್ ಆರಂಭಿಸುವ ಕನಸು ಕಾಣುತ್ತಿರುವವರು ತಪ್ಪದೇ ಓದಿ
5 ವರ್ಷಗಳಲ್ಲಿ ಈ ಸ್ಟಾರ್ಟ್ಅಪ್ ಕಂಪನಿ ಗಳಿಸಿದ್ದು ಎಷ್ಟು ಗೊತ್ತಾ..?
ಮುಂಬೈ: ಬಿದಿರಿನ ಉತ್ಪನ್ನಗಳನ್ನು ನಾವು ಸಾಮಾನ್ಯವಾಗಿ ನೋಡುವುದು ಬುಡುಕಟ್ಟು ಜನಾಂಗದರಲ್ಲಿ. ಕಾಡಿನ ಮಕ್ಕಳಾಗಿ ಬೆಳೆಯುವ ಅವರೇ ಬಿದಿರನ್ನು ಹೇಗೆಲ್ಲಾ ಬದುಕಿನ ಆಹಾರವನ್ನಾಗಿ ಮಾಡಿಕೊಳ್ಳಬಹುದು ಎಂಬುವುದರ ಸ್ಪಷ್ಟವಾಗಿ ತಿಳಿದವರು. ಈಗ ಇದೇ ಬುಡಕಟ್ಟು ಜನಾಂಗದ ಕೌಶಲ್ಯವನ್ನು ತಮ್ಮ ಸ್ಟಾರ್ಟ್ಅಪ್ಗೆ ಬುನಾದಿಯನ್ನಾಗಿ ಮಾಡಿಕೊಂಡಿದ್ದಾರೆ ಮಹಾರಾಷ್ಟ್ರದ ಎಂಬಿಎ ಪದವಿದರ ಗೌರವ ಶ್ರೀವಾಸ್ತವ.
ಇದನ್ನೂ ಓದಿ: ಗಂಗಾವಳಿ ನದಿ ರಭಸಕ್ಕೆ ಮುಳುಗು ತಜ್ಞ ಈಶ್ವರ್ ಮಲ್ಪೆ ಶಾಕ್.. 3 ಮೃತದೇಹಗಳ ಬಗ್ಗೆ ಏನ್ ಹೇಳಿದ್ದಾರೆ?
ಗೌರವ ಶ್ರೀವಾಸ್ತವ ಮೂಲತಃ ಕಾರ್ಪೋರೇಟ್ ಕಂಪನಿಗಳಲ್ಲಿ ಕೆಲಸ ಮಾಡುತ್ತಿದ್ದವರು. ಜೊತೆಗೆ ಜಗತ್ತಿನಲ್ಲಿ ಬಿದಿರಿನ ಉತ್ಪನ್ನಗಳಿಗೆ ಏನೆಲ್ಲಾ ಡಿಮ್ಯಾಂಡ್ ಇದೆ ಅನ್ನೋದನ್ನ ಸ್ಪಷ್ಟವಾಗಿ ಕಂಡವರು. 2019ರಲ್ಲಿ ಗೌರವ್ ಶ್ರೀವಾತ್ಸವ್ ಅವರಿಗೆ ಸಣ್ಣದೊಂದು ಆಸೆ ಚಿಗುರೊಡೆಯಿತು. ಮಹಾರಾಷ್ಟ್ರದ ಪಲ್ಗಾರ್ನಲ್ಲಿರುವ ತಿತ್ವಾಲಿ ಎಂಬ ಗ್ರಾಮದಲ್ಲಿ ಬುಡಕಟ್ಟು ಮಹಿಳೆಯರು ತಮ್ಮ ಉಪಜೀವನಕ್ಕಾಗಿ ಬಿದಿರಿನ ಉತ್ಪನ್ನಗಳನ್ನು ಸಿದ್ಧಪಡಿಸಿ ಮಾರಿ ತಮ್ಮ ಹೊಟ್ಟೆ ತುಂಬಿಕೊಳ್ಳುತ್ತಿದ್ದರು. ಆ ಹೆಣ್ಣು ಮಕ್ಕಳಿಗೆ ಹೇಳಿಕೊಳ್ಳುವಂತಹ ಹಣವೇನು ಬರುತ್ತಿರಲಿಲ್ಲ. ಇದನ್ನು ಗಮನಿಸಿದ ಗೌತಮ್ ಒಂದೊಂದೆ ಬಿಂದುಗಳನ್ನು ಸೇರಿಸತೊಡಗಿದರು. ಬಿದಿರಿನ ಉತ್ಪನ್ನಗಳ ಸ್ಟಾರ್ಟ್ಅಪ್ ಮಾಡುವ ಆಸೆಯೊಂದು ಅಂದೇ ಚಿಗುರೊಡೆಯಿತು. ಕಾರ್ಪೋರೆಟ್ ವಲಯದಲ್ಲಿದ್ದ ಅವರಿಗೆ ಬಿದಿರಿನ ಉತ್ಪನ್ನಗಳಿಗಿರುವ ಬೇಡಿಕೆಯ ಅಂದಾಜು ಮೊದಲೇ ಇದ್ದ ಕಾರಣ. ಬುಡಕಟ್ಟು ಹೆಣ್ಣು ಮಕ್ಕಳನ್ನೆಲ್ಲಾ ಸೇರಿಸಿಕೊಂಡು ತಮ್ಮದೇ ಆದ ಸ್ಟಾರ್ಟ್ಅಪ್ ಒಂದನ್ನು ಶುರು ಮಾಡಿದ್ರು.
ಇದನ್ನೂ ಓದಿ: ಓಡುವ ರೈಲಿನಲ್ಲಿ ಸಾಹಸ ಮೆರೆಯಲು ಹೋದವ ಈಗ ಏನಾಗಿದ್ದಾನೆ: ರೀಲ್ಸ್ಗಾಗಿ ಹುಚ್ಚಾಟ ಮಾಡೋರು ತಪ್ಪದೇ ನೋಡಿ
ಸುಂದರವಾದ ಬಿದಿರಿನ ಉತ್ಪನ್ನಗಳ ಜೊತೆ ಮಹಿಳೆಯರ ಸಬಲೀಕರಣದ ಉದ್ದೇಶದಿಂದ ಗೌರವ್ ಶ್ರೀವಾತ್ಸವ್ ವಿಕ್ರಮ್ಗಢ ಬ್ಯಾಂಬು ಉದ್ಯೋಗ ಪ್ರೊಡ್ಯೂಸರ್ ಕಂಪನಿ ಲಿಮಿಟೆಡ್ ಎಂಬ ಕಂಪನಿ ಶುರು ಮಾಡಿದ್ರು ಹೀಗೆ 2019ರಲ್ಲಿ ಶುರುವಾದ ಈ ಪಯಣ 2023ರಲ್ಲಿ ಪ್ರೊಜೆಕ್ಟ್ ಗ್ರೀನ್ ಗೋಲ್ಡ್ ಬದಲಾದ ಹೆಸರಿನೊಂದಿಗೆ ತಿತ್ವಾಲಿ ಗ್ರಾಮದಲ್ಲಿ ಹೊಸ ಸ್ಟಾರ್ಟ್ಅಪ್ ಶುರು ಮಾಡಿದ್ರು. ಇಡೀ ಬುಡಕಟ್ಟು ಕುಶಲಕರ್ಮಿಗಳ ಮಾಲೀಕತ್ವವೇ ಇರುವ ಸಂಸ್ಥೆಯಾಗಿ ಬೆಳೆಯತೊಡಗಿತು. ಮೊದಲು ತಿತ್ವಾಲಿ ಗ್ರಾಮದಿಂದ ಆರಂಭವಾದ ಈ ಸ್ಟಾರ್ಟ್ಅಪ್ ಈಗ 23 ಗ್ರಾಮಗಳಿಗೆ ವಿಸ್ತರಿಸಿಕೊಂಡು ಒಟ್ಟು 700 ಬಿದಿರಿನ ಉತ್ಪನ್ನಗಳನ್ನು ತಯಾರಿಸುವ ಕುಶಲ ಕರ್ಮಿಗಳು ಇಲ್ಲಿ ಕೆಲಸ ಮಾಡುತ್ತಿದ್ದಾರೆ.
ಬಿದಿರಿನ ಬೊಂಬೆಗಳು, ಆಟಿಗಳನ್ನು ಇಲ್ಲಿ ತಯಾರಾಗುತ್ತವೆ. ಈ ತಂಡಗಳು ಈಗ ವರ್ಷಕ್ಕೆ 27 ಲಕ್ಷ ರೂಪಾಯಿಯಷ್ಟು ಆದಾಯ ಪಡೆಯುತ್ತಿದೆ. ಗೌರವ್ ಶ್ರೀವಾಸ್ತವ ಸ್ಟಾರ್ಟ್ಅಪ್ ಜೊತೆ ಜೊತೆಗೆ ಸಮಾಜಕ್ಕೆ ಏನಾದರೂ ಒಳಿತು ಮಾಡಬೇಕೆಂಬ ಉದ್ದೇಶದಿಂದ ಆರಂಭವಾದ ಈ ಸ್ಟಾರ್ಟ್ಅಪ್ ಈಗ ಜನರ ಗಮನ ಸೆಳೆಯುತ್ತಿದೆ. ಎಂಬಿಎ ಪದವಿಧರ ಈ ಸ್ಟಾರ್ಟ್ಅಪ್ ಆರಂಭ ಮಾಡುವ ಮೂಲಕ ತಮ್ಮ ಜೊತೆ ಜೊತೆಗೆ ಬುಡಕಟ್ಟು ಜನಾಂಗ ಮಹಿಳೆಯ ಆದಾಯವನ್ನು ಕೂಡ ಹೆಚ್ಚಿಸಿ ಅವರ ಬದುಕನ್ನು ಸುಂದರಗೊಳಿಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ