ಕಳೆದ ಒಂದು ವರ್ಷದ ಹಿಂದೆ ಅನುಷಾಗೆ ಸುರೇಶ್ನ ಅಸಲಿ ಬಣ್ಣ ಬಯಲು
ರಾಜಧಾನಿಯನ್ನು ದಂಗು ಬಡಿಸಿತ್ತು ಸಾರಕ್ಕಿ ಗೇಟ್ ಬಳಿಯ ಕೊಲೆ ಕೇಸ್
ತನಗೆ ಮದುವೆಯಾಗಿಲ್ಲ ಎಂದು ಯುವತಿಯನ್ನು ಪ್ರೀತಿ ಮಾಡಿದ್ದ ಸುರೇಶ್
ಬೆಂಗಳೂರು: ಇಡೀ ರಾಜ್ಯ ರಾಜಧಾನಿಯನ್ನು ದಂಗು ಬಡಿಸಿತ್ತು ಸಾರಕ್ಕಿ ಗೇಟ್ ಬಳಿ ನಡೆದ ಭೀಕರ ಜೋಡಿ ಕೊಲೆ. ಈ ಕೇಸ್ ಸಂಬಂಧ ಕ್ಷಣ ಕ್ಷಣಕ್ಕೂ ಟ್ವಿಸ್ಟ್ ಪಡೆದುಕೊಳ್ಳುತ್ತಿದೆ. ಮೃತ ಅನುಷಾ ಹಾಗೂ ಸುರೇಶ್ ಇಬ್ಬರು ಐದು ವರ್ಷಗಳಿಂದ ಪರಿಚಯವಿದ್ರು. ಈ ಹಿಂದೆ ಇಬ್ಬರು ಒಟ್ಟಿಗೆ ಕೆಲಸ ಕೂಡ ಮಾಡ್ತಿದ್ರು. ಆಗ ತನಗೆ ಮದುವೆಯಾಗಿಲ್ಲಾ ಎಂದು ಪ್ರೀತಿ ಮಾಡಿದ್ದ ಸುರೇಶ್.
ಇದನ್ನೂ ಓದಿ: ಬೆಂಗಳೂರಲ್ಲಿ ಸಾಲು, ಸಾಲು ಮರ್ಡರ್; ಗೆಳೆಯರ ಜೊತೆ ಪಾರ್ಟಿಗೆ ಹೋಗಿದ್ದ ಯುವಕನ ಬರ್ಬರ ಹತ್ಯೆ
ಆದ್ರೆ, ಕಳೆದ ಒಂದು ವರ್ಷದ ಹಿಂದೆ ಅನುಷಾಗೆ ಸುರೇಶ್ನ ಅಸಲಿ ಬಣ್ಣ ಗೊತ್ತಾಗಿದೆ. ಹೀಗಾಗಿ, ಸುರೇಶ್ನಿಂದ ಅನುಷಾ ಅಂತರ ಕಾಯ್ದುಕೊಂಡಿದ್ದಳು. ಆದ್ರೆ, ಸುರೇಶ್ ಮಾತ್ರ ಆಕೆಗೆ ಕಾಟ ಕೊಡೋದನ್ನ ನಿಲ್ಲಿಸಿರಲಿಲ್ಲ. ಹೀಗಾಗಿ, ಮೊನ್ನೆ ಬೆಳಗ್ಗೆ ಅನುಷಾ ಜೆ.ಪಿ.ನಗರದ ಠಾಣೆಗೆ ಭೇಟಿ ನೀಡಿ ಪೊಲೀಸರಿಂದ ವಾರ್ನ್ ಮಾಡಿಸಿದ್ದಾಳೆ. ಅದಲ್ಲದೇ, ಸುರೇಶ್ ಆಕೆ ತಂಟೆಗೆ ಹೋಗಲ್ಲ ಅಂತಾ ಮುಚ್ಚಳಿಗೆ ಪತ್ರ ಬರೆದುಕೊಟ್ಟಿದ್ದಾನೆ. ಇದಾದ ಮೇಲೆ ಪೊಲೀಸ್ ಠಾಣೆಯಿಂದ ಹೊರಬಂದ ಮೇಲೆ ಸುರೇಶ್ ಬಣ್ಣ ಬಣ್ಣದ ಮಾತಾಡಿದ್ದಾನೆ.
ಅದ್ಯಾವಾಗ ಅನುಷಾ ಇನ್ಮುಂದೆ ನನಗೆ ಸಿಗೋದಿಲ್ಲಾ ಅಂತಾ ಕನ್ಫರ್ಮ್ ಆಯ್ತೋ. ಸಿಟ್ಟಿಗೆದ್ದ ಸುರೇಶ್ ತಾನೇ ತಂದಿದ್ದ ಚಾಕುವಿನಿಂದ ಇರಿದೇ ಬಿಟ್ಟಿದ್ದಾನೆ. ಈ ವೇಳೆ ಪಾರ್ಕ್ಗೆ ಎಂಟ್ರಿ ಕೊಟ್ಟ ಅನುಷಾ ತಾಯಿ ಗೀತಾ ನನ್ನ ಮಗಳಿಗೆ ಏನೂ ಮಾಡಬೇಡ ಅಂತಾ ಪರಿ ಪರಿಯಾಗಿ ಬೇಡಿಕೊಂಡಿದ್ದಾರೆ. ಇಷ್ಟಾದ್ರೂ ಕೇಳದಿದ್ದಾಗ, ಅಲ್ಲೆ ಇದ್ದ ಸಿಮೆಂಟ್ ಇಟ್ಟಿಗೆ ತೆಗೆದು ತಲೆ ಮೇಲೆ ಹಾಕಿದ್ದಾರೆ. ಬಳಿಕ ಸ್ಥಳದಲ್ಲೇ ಆತನೂ ಜೀವ ಬಿಟ್ಟಿದ್ದಾನೆ.
ಇದನ್ನೂ ಓದಿ: ಶಿಕ್ಷಕರ ಮಗ ಫಯಾಜ್; ನೇಹಾ ಹಿರೇಮಠ್ರನ್ನು ಕೊಂದ ಆರೋಪಿ ಯಾರು?
ಒಟ್ಟಾರೆ, ಇದೀಗ ಜೆ.ಪಿ.ನಗರ ಪೊಲೀಸ್ ಠಾಣೆಯಲ್ಲಿ ಕೌಂಟರ್ ಕಂಪ್ಲೇಟ್ ದಾಖಲಾಗಿದೆ. ಮೃತ ಸುರೇಶ್ ಪತ್ನಿಯಿಂದ ಅನುಷಾ ತಾಯಿ ಮೇಲೆ ದೂರು ಕೊಟ್ಟಿದ್ರೆ, ಇತ್ತ ಮೃತ ಅನುಷಾ ತಾಯಿ ಸುರೇಶ್ ಮೇಲೆ ದೂರು ದಾಖಲಿಸಿದ್ದಾರೆ. ಇದೀಗ ಪೊಲೀಸರು ಎಲ್ಲಾ ಆಯಾಮದಿಂದಲೂ ತನಿಖೆ ಮುಂದುವರೆಸಿದ್ದಾರೆ. ಈ ಪ್ರೀತಿ, ಸೇಡು, ಜಿದ್ದು, ಅಸಹಾಕತೆ ಇದೆಲ್ಲರ ನಡುವೆ ಜೋಡಿ ಬೀದಿ ಹೆಣವಾದ್ರು. ಆ ತಾಯಿ ತನ್ನ ಮಗಳನ್ನೂ ಕಳೆದುಕೊಂಡು ಜೈಲು ಪಾಲಾಗಿದ್ದಾಳೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ಕಳೆದ ಒಂದು ವರ್ಷದ ಹಿಂದೆ ಅನುಷಾಗೆ ಸುರೇಶ್ನ ಅಸಲಿ ಬಣ್ಣ ಬಯಲು
ರಾಜಧಾನಿಯನ್ನು ದಂಗು ಬಡಿಸಿತ್ತು ಸಾರಕ್ಕಿ ಗೇಟ್ ಬಳಿಯ ಕೊಲೆ ಕೇಸ್
ತನಗೆ ಮದುವೆಯಾಗಿಲ್ಲ ಎಂದು ಯುವತಿಯನ್ನು ಪ್ರೀತಿ ಮಾಡಿದ್ದ ಸುರೇಶ್
ಬೆಂಗಳೂರು: ಇಡೀ ರಾಜ್ಯ ರಾಜಧಾನಿಯನ್ನು ದಂಗು ಬಡಿಸಿತ್ತು ಸಾರಕ್ಕಿ ಗೇಟ್ ಬಳಿ ನಡೆದ ಭೀಕರ ಜೋಡಿ ಕೊಲೆ. ಈ ಕೇಸ್ ಸಂಬಂಧ ಕ್ಷಣ ಕ್ಷಣಕ್ಕೂ ಟ್ವಿಸ್ಟ್ ಪಡೆದುಕೊಳ್ಳುತ್ತಿದೆ. ಮೃತ ಅನುಷಾ ಹಾಗೂ ಸುರೇಶ್ ಇಬ್ಬರು ಐದು ವರ್ಷಗಳಿಂದ ಪರಿಚಯವಿದ್ರು. ಈ ಹಿಂದೆ ಇಬ್ಬರು ಒಟ್ಟಿಗೆ ಕೆಲಸ ಕೂಡ ಮಾಡ್ತಿದ್ರು. ಆಗ ತನಗೆ ಮದುವೆಯಾಗಿಲ್ಲಾ ಎಂದು ಪ್ರೀತಿ ಮಾಡಿದ್ದ ಸುರೇಶ್.
ಇದನ್ನೂ ಓದಿ: ಬೆಂಗಳೂರಲ್ಲಿ ಸಾಲು, ಸಾಲು ಮರ್ಡರ್; ಗೆಳೆಯರ ಜೊತೆ ಪಾರ್ಟಿಗೆ ಹೋಗಿದ್ದ ಯುವಕನ ಬರ್ಬರ ಹತ್ಯೆ
ಆದ್ರೆ, ಕಳೆದ ಒಂದು ವರ್ಷದ ಹಿಂದೆ ಅನುಷಾಗೆ ಸುರೇಶ್ನ ಅಸಲಿ ಬಣ್ಣ ಗೊತ್ತಾಗಿದೆ. ಹೀಗಾಗಿ, ಸುರೇಶ್ನಿಂದ ಅನುಷಾ ಅಂತರ ಕಾಯ್ದುಕೊಂಡಿದ್ದಳು. ಆದ್ರೆ, ಸುರೇಶ್ ಮಾತ್ರ ಆಕೆಗೆ ಕಾಟ ಕೊಡೋದನ್ನ ನಿಲ್ಲಿಸಿರಲಿಲ್ಲ. ಹೀಗಾಗಿ, ಮೊನ್ನೆ ಬೆಳಗ್ಗೆ ಅನುಷಾ ಜೆ.ಪಿ.ನಗರದ ಠಾಣೆಗೆ ಭೇಟಿ ನೀಡಿ ಪೊಲೀಸರಿಂದ ವಾರ್ನ್ ಮಾಡಿಸಿದ್ದಾಳೆ. ಅದಲ್ಲದೇ, ಸುರೇಶ್ ಆಕೆ ತಂಟೆಗೆ ಹೋಗಲ್ಲ ಅಂತಾ ಮುಚ್ಚಳಿಗೆ ಪತ್ರ ಬರೆದುಕೊಟ್ಟಿದ್ದಾನೆ. ಇದಾದ ಮೇಲೆ ಪೊಲೀಸ್ ಠಾಣೆಯಿಂದ ಹೊರಬಂದ ಮೇಲೆ ಸುರೇಶ್ ಬಣ್ಣ ಬಣ್ಣದ ಮಾತಾಡಿದ್ದಾನೆ.
ಅದ್ಯಾವಾಗ ಅನುಷಾ ಇನ್ಮುಂದೆ ನನಗೆ ಸಿಗೋದಿಲ್ಲಾ ಅಂತಾ ಕನ್ಫರ್ಮ್ ಆಯ್ತೋ. ಸಿಟ್ಟಿಗೆದ್ದ ಸುರೇಶ್ ತಾನೇ ತಂದಿದ್ದ ಚಾಕುವಿನಿಂದ ಇರಿದೇ ಬಿಟ್ಟಿದ್ದಾನೆ. ಈ ವೇಳೆ ಪಾರ್ಕ್ಗೆ ಎಂಟ್ರಿ ಕೊಟ್ಟ ಅನುಷಾ ತಾಯಿ ಗೀತಾ ನನ್ನ ಮಗಳಿಗೆ ಏನೂ ಮಾಡಬೇಡ ಅಂತಾ ಪರಿ ಪರಿಯಾಗಿ ಬೇಡಿಕೊಂಡಿದ್ದಾರೆ. ಇಷ್ಟಾದ್ರೂ ಕೇಳದಿದ್ದಾಗ, ಅಲ್ಲೆ ಇದ್ದ ಸಿಮೆಂಟ್ ಇಟ್ಟಿಗೆ ತೆಗೆದು ತಲೆ ಮೇಲೆ ಹಾಕಿದ್ದಾರೆ. ಬಳಿಕ ಸ್ಥಳದಲ್ಲೇ ಆತನೂ ಜೀವ ಬಿಟ್ಟಿದ್ದಾನೆ.
ಇದನ್ನೂ ಓದಿ: ಶಿಕ್ಷಕರ ಮಗ ಫಯಾಜ್; ನೇಹಾ ಹಿರೇಮಠ್ರನ್ನು ಕೊಂದ ಆರೋಪಿ ಯಾರು?
ಒಟ್ಟಾರೆ, ಇದೀಗ ಜೆ.ಪಿ.ನಗರ ಪೊಲೀಸ್ ಠಾಣೆಯಲ್ಲಿ ಕೌಂಟರ್ ಕಂಪ್ಲೇಟ್ ದಾಖಲಾಗಿದೆ. ಮೃತ ಸುರೇಶ್ ಪತ್ನಿಯಿಂದ ಅನುಷಾ ತಾಯಿ ಮೇಲೆ ದೂರು ಕೊಟ್ಟಿದ್ರೆ, ಇತ್ತ ಮೃತ ಅನುಷಾ ತಾಯಿ ಸುರೇಶ್ ಮೇಲೆ ದೂರು ದಾಖಲಿಸಿದ್ದಾರೆ. ಇದೀಗ ಪೊಲೀಸರು ಎಲ್ಲಾ ಆಯಾಮದಿಂದಲೂ ತನಿಖೆ ಮುಂದುವರೆಸಿದ್ದಾರೆ. ಈ ಪ್ರೀತಿ, ಸೇಡು, ಜಿದ್ದು, ಅಸಹಾಕತೆ ಇದೆಲ್ಲರ ನಡುವೆ ಜೋಡಿ ಬೀದಿ ಹೆಣವಾದ್ರು. ಆ ತಾಯಿ ತನ್ನ ಮಗಳನ್ನೂ ಕಳೆದುಕೊಂಡು ಜೈಲು ಪಾಲಾಗಿದ್ದಾಳೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ