/newsfirstlive-kannada/media/post_attachments/wp-content/uploads/2024/09/Jagadish-1.jpg)
ಬಿಗ್​ ಬಾಸ್ ಕನ್ನಡ ಸೀಸನ್​​ 11 ಶುರುವಾಗಿದೆ. ದೊಡ್ಮನೆಯಲ್ಲಿ ಅಸಲಿ ಆಟ ಶುರುವಾಗಿದೆ. ಆದರೆ ಅದಕ್ಕೂ ಮುನ್ನ ಪ್ರೋಮೋ ಶೂಟ್​​ ವೇಳೆ ಕೆಲವು ಸ್ಪರ್ಧಿಗಳು ನೀಡಿರುವ ಹೇಳಿಕೆಗಳು ಈಗ ವೈರಲ್​ ಆಗುತ್ತಿದೆ. ಅದರಲ್ಲಿ ಸ್ವರ್ಧಿ ಜಗದೀಶ್ ಪ್ರೋಮೋದಲ್ಲಿ ನಾನು ಮುಂದೊಂದಿನ ಸಿಎಂ ಆಗುತ್ತೇನೆ ಎಂಬ ಮಾತು ಹರಿದಾಡುತ್ತಿದೆ.​
ಅಡ್ವಕೇಟ್ ವೃತ್ತಿ ಮಾಡುತ್ತಿದ್ದ ಜಗದೀಶ್​ ಬಿಗ್​​​ ಬಾಸ್​ ಮನೆಯೊಳಕ್ಕೆ ಎಂಟ್ರಿ ನೀಡಿದ್ದಾರೆ. ಸ್ವರ್ಗದ ಬಾಗಿಲು ಬಡಿದು ಒಳಹೊಕ್ಕಿದ್ದಾರೆ. ಅದಕ್ಕೂ ಮುನ್ನ ಪ್ರೋಮೋದಲ್ಲಿ ನ್ಯಾಯವನ್ನ ಯಾರಿಗೆ ಧ್ವನಿ ನೀಡಲ್ವೋ ಅವರಿಗೆ ಹುಡುಕಿಕೊಡೋದೆ ನನ್ನ ಕೆಲಸ, ​ಆತನ ಪಾಪದ ಕೊಡ ತುಂಬಿದೆ. ನನ್ನ ತಾಕತ್ತು ತೋರಿಸಿದ್ದೀನಿ. ನಾನೇ ಎಂದಂಥಾ ರಾಜಕಾರಣಿಗಳಾಗಿರಬಹುದು, ನಾನೇ ಎಂದಂಥಾ ಪುಢಾರಿಗಳಾಗಿರಬಹುದು. ಅವರನ್ನು ಅವರ ಯೋಗ್ಯತೆಯನ್ನ ತೋರಿಸಿಕೊಟ್ಟಿದ್ದೀನಿ. ಒಂದು ದಿನ ನಾನು ಸಿಎಂ ಆಗ್ತೀನಿ ಎಂದು ಹೇಳಿದ್ದಾರೆ.
View this post on Instagram
ಇದನ್ನೂ ಓದಿ: BBK11: ಬಿಗ್ ಬಾಸ್ ಅಸಲಿ ಆಟ ಶುರು ಮಾಡಿದ ಗೌತಮಿ ಜಾಧವ್.. ಹೊಸ ಅಧ್ಯಾಯಕ್ಕೆ ಹೊಸ ಟ್ವಿಸ್ಟ್!
ಸದ್ಯ ಕಿಚ್ಚ ನಿರೂಪಣೆಯ ಬಿಗ್​ ಬಾಸ್​ ಮನೆಯೊಳಕ್ಕೆ ಹೊಕ್ಕಿರುವ ಜಗದೀಶ್​ ಸ್ವರ್ಗದ ವಿಭಾಗದಿಂದ ಸ್ಪರ್ಧಿಸುತ್ತಿದ್ದಾರೆ. ಕೋರ್ಟ್​​, ಹೋರಾಟ ಎಂಬಂತಿದ್ದ ಜಗದೀಶ್​​ ದೊಡ್ಮನೆಯಲ್ಲಿ ಹೇಗೆ ತಮ್ಮ ಅಸಲಿ ಆಟ ಆಡಲಿದ್ದಾರೆ ಎಂದು ಕಾದು ನೋಡಬೇಕಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us