/newsfirstlive-kannada/media/post_attachments/wp-content/uploads/2024/09/MUNIRATNA_MLA.jpg)
ಬೆಂಗಳೂರು: ಜೀವ ಬೆದರಿಕೆ ಹಾಗೂ ಜಾತಿ ನಿಂದನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಸಕ ಮುನಿರತ್ನ ಅವರನ್ನು ಅರೆಸ್ಟ್ ಮಾಡಲಾಗಿದೆ. ಆಂಧ್ರದ ಚಿತ್ತೂರಿಗೆ ಹೊರಟಿದ್ದ ಮಾಜಿ ಸಚಿವ ಮುನಿರತ್ನರನ್ನ ಮುಳಬಾಗಿಲು ತಾಲೂಕಿನ ಹೊರವಲಯದ ನಂಗಲಿ ಬಳಿ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ರಾಜರಾಜೇಶ್ವರಿ ನಗರದ ಶಾಸಕ ಮುನಿರತ್ನ ಅವರು ಚೆಲುವರಾಜು ಎಂಬ ಗುತ್ತಿಗೆದಾರನಿಗೆ ಜಾತಿ ನಿಂದನೆ ಹಾಗೂ ಚಲುವರಾಜು ಎನ್ನುವರಿಗೆ ಜೀವ ಬೆದರಿಕೆ ಹಾಕಿದ್ದಾರೆಂದು ಆರೋಪವಿದೆ. ಈ ಹಿನ್ನೆಲೆಯಲ್ಲಿ ಪೊಲೀಸ್ ಠಾಣೆಯಲ್ಲಿ ಮುನಿರತ್ನ ವಿರುದ್ಧ 2 ಪ್ರಕರಣಗಳನ್ನು ದಾಖಲು ಮಾಡಲಾಗಿದೆ. ಸದ್ಯ ದಾಖಲಾದ ಕೇಸ್ಗೆ ಸಂಬಂಧ ಪಟ್ಟಂತೆ ಯಾವ್ಯಾವ ಸೆಕ್ಷನ್ಗಳನ್ನು ಹಾಕಲಾಗಿದೆ ಎಂದರೆ,
ಇದನ್ನೂ ಓದಿ:FIR ದಾಖಲು ಆಗುತ್ತಿದ್ದಂತೆ ಆಂಧ್ರಕ್ಕೆ ತೆರಳುತ್ತಿದ್ದ ಮುನಿರತ್ನ.. ಶಾಸಕ ಅರೆಸ್ಟ್ ಆಗಿದ್ದು ಎಲ್ಲಿ?
ವೇಲುನಾಯಕರ್ ನೀಡಿದ ದೂರಿನಲ್ಲಿ ಹಾಕಲಾದ ಸೆಕ್ಷನ್ಗಳು
- 1. ಅಟ್ರಾಸಿಟಿ ಕಾಯ್ದೆ ಸೆಕ್ಷನ್ 3 (1) (r) (s)
ಪರಿಶಿಷ್ಟ ಜಾತಿ ಅಥವಾ ಪರಿಶಿಷ್ಟ ಪಂಗಡದವರಿಗೆ ಅವಮಾನ
ಉದ್ದೇಶಪೂರ್ವಕವಾಗಿ ಅವಮಾನಿಸುವ ರೀತಿ ನಿಂದನೆ, ಬೆದರಿಕೆ - 2. ಪರಿಶಿಷ್ಟ ಜಾತಿ ಅಥವಾ ಪರಿಶಿಷ್ಟ ಪಂಗಡದವರಿಗೆ ಜಾತಿ ಹೆಸರಲ್ಲಿ ನಿಂದನೆ
- 3. IPC 153A (all(b): ಬೇರೆ ಜಾತಿಗೆ ಅಪಮಾನ ಮಾಡುವುದು
ಪೂರ್ವಾಗ್ರಹ ಪೀಡಿತವಾಗಿ ಜಾತಿ ಬಗ್ಗೆ ದ್ವೇಷದ ಮಾತು ಆಡುವುದು - 4. IPC 509: ಮಹಿಳೆಯ ಗೌರವಕ್ಕೆ ಧಕ್ಕೆ ತರುವ ಹೇಳಿಕೆ ಆರೋಪ
- 5. IPC 504: ಉದ್ದೇಶಪೂರ್ವಕವಾಗಿ ನಿಂದಿಸಿ, ಅಶಾಂತಿಗೆ ಪ್ರಚೋದನೆ
- 6. IPC 153: ದಂಗೆ ಹೇಳುವಂತ ಹೇಳಿಕೆ ನೀಡಿರುವುದು
ಚಲುವರಾಜು ನೀಡಿರುವ ದೂರಿನ ಸೆಕ್ಷನ್ಗಳು ಈ ಕೆಳಕಂಡಂತೆ ಇವೆ
- IPC 506: ಕ್ರಿಮಿನಲ್ ಬೆದರಿಕೆ (ಜೀವ ಬೆದರಿಕೆ)
- IPC 504: ಉದ್ದೇಶಪೂರ್ವಕವಾಗಿ ನಿಂದಿಸಿ, ಅಶಾಂತಿಗೆ ಪ್ರಚೋದನೆ
- IPC 37: ಒಂದೇ ಉದ್ದೇಶದಲ್ಲಿ ಅನೇಕ ಅಪರಾಧ
- IPC 385: ಸುಲಿಗೆ ಮಾಡುವ ಸಲುವಾಗಿ ಬೆದರಿಕೆ
- IPC 420: ವಂಚನೆ ಮಾಡುವುದು
- IPC 323: ಸ್ವತಃ ತಾನೇ ಗಾಸಿ ಮಾಡುವುದಕ್ಕೆ ಶಿಕ್ಷೆ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ