ಇಂಡೋ-ಇಂಗ್ಲೆಂಡ್ 3ನೇ ಟೆಸ್ಟ್ನಿಂದ ರಾಹುಲ್ ಔಟ್
ರಾಹುಲ್ ಫಿಟ್ನೆಸ್ ವಿಚಾರದಲ್ಲಿ ಬಿಸಿಸಿಐಗೆ ಗೊಂದಲ
ಮೆಡಿಕಲ್ ಟೀಮ್ ಕಾರ್ಯವೈಖರಿ ಬಗ್ಗೆ ಹುಟ್ಟಿದ ಪ್ರಶ್ನೆ
ಇಂಡೋ-ಇಂಗ್ಲೆಂಡ್ ನಡುವಿನ 3ನೇ ಟೆಸ್ಟ್ನಿಂದ ಕೆ.ಎಲ್.ರಾಹುಲ್ ಹೊರ ಬಿದ್ದಿರೋದು ಹಲ ಪ್ರಶ್ನೆಗಳನ್ನ ಹುಟ್ಟಿಸಿದೆ. ರಾಜ್ಕೋಟ್ ಟೆಸ್ಟ್ ಆಡಲು ರಾಹುಲ್ ಅಲಭ್ಯ ಎಂದ ಬೆನ್ನಲ್ಲೇ ಏನ್ ನಡೀತಾಯಿದೆ ಬಿಸಿಸಿಐನಲ್ಲಿ ಎಂಬ ಚರ್ಚೆ ಆರಂಭವಾಗಿದೆ. ಪ್ಲೇಯರ್ಸ್ ಜೊತೆ ಬಿಸಿಸಿಐ ಆಟವಾಡ್ತಿದ್ಯಾ? ಅಥವಾ ಸೂಪರ್ ಸ್ಟಾರ್ಗಳಿಗೆ ಬಿಸಿಸಿಐ ಸರಂಡರ್ ಆಗಿದ್ಯಾ? ಅನ್ನೋದು ಸದ್ಯ ಹಾಟ್ ಟಾಪಿಕ್ ಆಗಿದೆ.
ಇಂಡೋ-ಇಂಗ್ಲೆಂಡ್ ನಡುವಿನ 3ನೇ ಟೆಸ್ಟ್ ಪಂದ್ಯಕ್ಕೆ ವೇದಿಕೆ ಸಜ್ಜಾಗಿದೆ. ಹೈದ್ರಾಬಾದ್ ಟೆಸ್ಟ್ ಸೋತು, ವಿಶಾಖಪಟ್ಟಣದಲ್ಲಿ ಗೆದ್ದು ಬೀಗಿರುವ ಟೀಮ್ ಇಂಡಿಯಾ ರಾಜ್ಕೋಟ್ನಲ್ಲಿ ರಾಜನಂತೆ ಮೆರೆದಾಡೋ ಲೆಕ್ಕಾಚಾರದಲ್ಲಿದೆ. ಪಂದ್ಯದ ಆರಂಭಕ್ಕೂ ಮುನ್ನವೇ ಹಿನ್ನಡೆಗಳು ಎದುರಾಗ್ತಿವೆ. ಸರಣಿಗೆ ವಿರಾಟ್ ಕೊಹ್ಲಿ ಅಲಭ್ಯತೆರಾದ ಬೆನ್ನಲ್ಲೇ ಅನುಭವಿ ಕೆ.ಎಲ್.ರಾಹುಲ್ ಕೂಡ ಪಂದ್ಯದಿಂದ ಹೊರಬಿದ್ದಿದ್ದಾರೆ.
ಪ್ಲೇಯರ್ಸ್ ಜೊತೆ ಆಟವಾಡ್ತಿದ್ಯಾ ಬಿಸಿಸಿಐ?
ಈ ಪ್ರಶ್ನೆ ಕೇಳೋದಕ್ಕೆ ಕಾರಣಯಿದೆ. ಹೇಳಿಕೊಳ್ಳೋಕೆ ಬಿಸಿಸಿಐ ವಿಶ್ವದ ಶ್ರೀಮಂತ ಕ್ರಿಕೆಟ್ ಸಂಸ್ಥೆ. ಇಂಟರ್ ನ್ಯಾಷನಲ್ ಕ್ರಿಕೆಟ್ ಕೌನ್ಸಿಲ್ ಕೂಡ ಬಿಸಿಸಿಐ ಹುಕುಂ ಇಲ್ಲದೇ ಹೆಜ್ಜೆ ಇಡಲ್ಲ ಅನ್ನೋದು ಓಪನ್ ಸೀಕ್ರೆಟ್. ಇಂತಾ ಬಿಸಿಸಿಐಗೆ ತನ್ನ ಆಟಗಾರರ ಫಿಟ್ನೆಸ್ ಬಗ್ಗೆನೇ ಮಾಹಿತಿ ಇಲ್ಲ. ಒಂದು ಸಣ್ಣ ಇಂಜುರಿಯನ್ನ ಮ್ಯಾನೇಜ್ ಮಾಡೋಕೆ ಆಗ್ತಿಲ್ಲ.
ರಾಹುಲ್ ಫಿಟ್ನೆಸ್ ವಿಚಾರದಲ್ಲಿ ಬಿಸಿಸಿಐಗೆ ಗೊಂದಲ
ಮೊದಲ ಟೆಸ್ಟ್ನ ಬಳಿಕ ಕ್ವಾಡ್ರೈಸಿಪ್ (quadricep injury) ಇಂಜುರಿಗೆ ತುತ್ತಾದ ಕೆ.ಎಲ್.ರಾಹುಲ್, 2ನೇ ಟೆಸ್ಟ್ನಿಂದ ಹೊರ ಬಿದ್ರು. ಬಳಿಕ ಹೈದ್ರಾಬಾದ್ನಿಂದ ನೇರವಾಗಿ ಬಂದಿಳಿದಿದ್ದು ಬೆಂಗಳೂರಿನ ಎನ್ಸಿಎಗೆ. ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯ ವೈದ್ಯರ ಮೇಲ್ವಿಚಾರಣೆಯಲ್ಲಿ ರಾಹುಲ್, ಪುನಶ್ಚೇತನ ಶಿಬಿರದಲ್ಲಿ ಭಾಗಿಯಾಗಿದ್ದರು. ಅದಾಗಿ ಸ್ವಲ್ಪ ದಿನಕ್ಕೆ ಬಿಸಿಸಿಐ, ಸರಣಿಯ ಉಳಿದ ಪಂದ್ಯಗಳಿಗೆ ತಂಡವನ್ನು ಪ್ರಕಟಿಸಿತ್ತು. ಸಬ್ಜೆಕ್ಟ್ ಟು ಫಿಟ್ನೆಸ್ ಕ್ಲೀಯರೆನ್ಸ್ ಎಂಬ ಷರತ್ತಿನ ಅಡಿಯಲ್ಲಿ ರಾಹುಲ್ ಕೂಡ ತಂಡದಲ್ಲಿ ಸ್ಥಾನ ಪಡೆದಿದ್ದರು. ಆದ್ರೆ ಈಗ ನೋಡಿದ್ರೆ ಅನ್ಫಿಟ್ ರಾಹುಲ್, ಪಂದ್ಯದಿಂದ ಹೊರಬಿದ್ದಿದ್ದಾರೆ.
ಸೂಪರ್ ಸ್ಟಾರ್ಗಳಿಗೆ ‘ಸರಂಡರ್’ ಆಗ್ತಿದ್ಯಾ ಬಿಸಿಸಿಐ?
ಎನ್ಸಿಎನಲ್ಲಿ ರಿಹ್ಯಾಬ್ಗೆ ಒಳಗಾಗಿರುವ ಕೆ.ಎಲ್ ರಾಹುಲ್ರ ಫಿಟ್ನೆಸ್ನ ಇಂಚಿಂಚೂ ಮಾಹಿತಿ ಬಿಸಿಸಿಐಗೆ ಇದ್ದೇ ಇರುತ್ತೆ. ಯಾವುದೆ ಆಟಗಾರ ಇರಲಿ. ಫುಲ್ ಫಿಟ್ ಆಗಿದ್ದಾರಾ.? ಇಲ್ವಾ.? ಎಂಬ ಮಾಹಿತಿಯನ್ನ ಪಡೆಯದೇ ತಂಡಕ್ಕೆ ಆಯ್ಕೆ ಮಾಡಲ್ಲ. ಅದ್ರೆ, ಶನಿವಾರ ಫಿಟ್ ಆಗಿದ್ದ ರಾಹುಲ್, ಸೋಮವಾರ ನೋಡಿದ್ರೆ ಅನ್ಫಿಟ್ ಆಗಿದ್ದಾರೆ. ಇದನ್ನ ನೋಡಿದ ಮೇಲೆ ಕೆಲ ಆಟಗಾರರ ವಿಚಾರದಲ್ಲಿ ಖಡಕ್ ನಿರ್ಧಾರ ಕೈಗೊಳ್ಳೋ ಬಿಸಿಸಿಐ, ಸ್ಟಾರ್ಗಳ ವಿಚಾರದಲ್ಲಿ ಸರಂಡರ್ ಆಗ್ತಿದ್ಯಾ ಎಂಬ ಅನುಮಾನ ನಿಮ್ಮಲ್ಲೂ ಮೂಡದೇ ಇರಲ್ಲ. ಇದೇ ವಿಚಾರ ಇದೀಗ ಬಿಸಿಸಿಐ ವಲಯದಲ್ಲೂ ಕೆಲ ಅಧಿಕಾರಿಗಳ ಸಿಟ್ಟಿಗೆ ಕಾರಣವಾಗಿದೆ
‘ತಪ್ಪಾದ ಸಂದೇಶವನ್ನ ಕೊಡುತ್ತಿದೆ’
ಬಿಸಿಸಿಐನ ಮೆಡಿಕಲ್ ಟೀಮ್ಗೆ ರಾಹುಲ್ ಇಂಜುರಿ ಗಂಭೀರ ಸ್ವರೂಪದ್ದು ಎಂದು ತಿಳಿದ ಮೇಲೆ ತಂಡಕ್ಕೆ ಆಯ್ಕೆ ಮಾಡಿದ್ದೇಕೆ.? ಆಟಗಾರರು ಸೋಷಿಯಲ್ ಮೀಡಿಯಾಗಳಲ್ಲಿ ನಾನು ಫಿಟ್ ಎಂಬಂತಾ ಸಂದೇಶಗಳು ನೀಡುವ ವಿಡಿಯೋ ಮತ್ತು ಪೋಸ್ಟ್ಗಳನ್ನ ಹಾಕೋದೇಕೆ? ಇದು ತಪ್ಪಾದ ಸಂದೇಶವನ್ನ ಕೊಡುತ್ತಿದೆ-ಬಿಸಿಸಿಐ ಅಧಿಕಾರಿ
ಸೋಷಿಯಲ್ ಮೀಡಿಯಾ ಪೋಸ್ಟ್ಗಳೇ ಫಿಟ್ನೆಸ್ ಸರ್ಟಿಫಿಕೇಟ್
ಬಿಸಿಸಿಐ ಅಧಿಕಾರಿ ಮೆಡಿಕಲ್ ಟೀಮ್ ಫಿಟ್ನೆಸ್ ಸರ್ಟಿಫಿಕೇಟ್ ನೀಡಿದ್ರ ಬಗ್ಗೆ ಪ್ರಶ್ನೆ ಎತ್ತಿದ್ದಾರೆ. ಇದ್ರ ಜೊತೆಗೆ ಆಟಗಾರರ ಸೋಷಿಯಲ್ ಮೀಡಿಯಾ ಪೋಸ್ಟ್ಗಳು ತಪ್ಪು ಸಂದೇಶ ಕೊಡ್ತಿವೆ ಅಂದಿದ್ದಾರೆ. ಪಂದ್ಯದಿಂದ ಹೊರ ಬೀಳೋಕೂ ಮುನ್ನ ಕೆ.ಎಲ್ ರಾಹುಲ್ ಕೂಡ ಎನ್ಸಿಎನಲ್ಲಿ ಬ್ಯಾಟಿಂಗ್ ಅಭ್ಯಾಸ ನಡೆಸೋ ಪೋಸ್ಟ್ ಹಾಕಿದ್ರು. ಹೀಗಾಗಿ ಆಟಗಾರರು ಸೋಷಿಯಲ್ ಮೀಡಿಯಾದಲ್ಲಿ ಹಾಕ್ತಿರುವ ಫೋಸ್ಟ್ಗಳ ಆಧಾರದಲ್ಲಿ ತಂಡದ ಆಯ್ಕೆ ಆಗ್ತಿದ್ಯಾ ಎಂಬ ಪ್ರಶ್ನೆ ಈಗ ಹುಟ್ಟಿದೆ.
ಮೆಡಿಕಲ್ ಟೀಮ್ ಕಾರ್ಯವೈಖರಿಯ ಬಗ್ಗೆ ಹುಟ್ಟಿದ ಪ್ರಶ್ನೆ
ಕೆ.ಎಲ್ ರಾಹುಲ್ ತಂಡಕ್ಕೆ ಬರೋದು ಹಾಗೇ ಹೋಗೋದು ಇಂದು ನಿನ್ನೆಯ ಕಥೆಯಲ್ಲ. ಜನವರಿ 2021ರಿಂದ ಈವರೆಗೆ ಬರೋಬ್ಬರಿ 6 ಬಾರಿ ರಾಹುಲ್ ಮೇಜರ್ ಇಂಜುರಿಗೆ ತುತ್ತಾಗಿದ್ದಾರೆ. ರಾಹುಲ್ ಹೊರತಾಗಿ ಇನ್ನೂ ಕೆಲ ಆಟಗಾರರ ಪಾಲಿಗೆ ಎನ್ಸಿಎನೇ ತವರು ಮನೆಯಾಗಿದೆ. ಹೀಗೆ ಪದೇ ಪದೇ ಆಟಗಾರರು ಇಂಜುರಿ ತುತ್ತಾಗ್ತಿರೋದು ಎನ್ಸಿಎನ ಮೆಡಿಕಲ್ ಟೀಮ್ ಇಂಡಿಯಾ ಸಾಮರ್ಥ್ಯದ ಬಗ್ಗೆ ಪ್ರಶ್ನೆ ಹುಟ್ಟು ಹಾಕಿದೆ.
ಒಟ್ಟಿನಲ್ಲಿ ರಾಹುಲ್ ಇಂಜುರಿ ಡ್ರಾಮಾ ಬಿಸಿಸಿಐನಲ್ಲಿ ಎಲ್ಲವೂ ಸರಿಯಿಲ್ಲ ಅನ್ನೋದನ್ನ ಬಟಾ ಬಯಲು ಮಾಡಿದೆ. ಮುಂದಾದ್ರೂ, ತಂಡದ ಆಯ್ಕೆಗೂ ಮುನ್ನ ಸೆಲೆಕ್ಷನ್ ಕಮಿಟಿ ಎಚ್ಚರಿಕೆಯ ಹೆಜ್ಜೆ ಇಡುತ್ತಾ? ಮೆಡಿಕಲ್ ಟೀಮ್ನಿಂದ ಬಿಗ್ಬಾಸ್ಗಳು ಸ್ಪಷ್ಟ ಮಾಹಿತಿಯನ್ನು ಪಡೀತಾರಾ? ಕಾದು ನೋಡಬೇಕಿದೆ.
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್
ಇಂಡೋ-ಇಂಗ್ಲೆಂಡ್ 3ನೇ ಟೆಸ್ಟ್ನಿಂದ ರಾಹುಲ್ ಔಟ್
ರಾಹುಲ್ ಫಿಟ್ನೆಸ್ ವಿಚಾರದಲ್ಲಿ ಬಿಸಿಸಿಐಗೆ ಗೊಂದಲ
ಮೆಡಿಕಲ್ ಟೀಮ್ ಕಾರ್ಯವೈಖರಿ ಬಗ್ಗೆ ಹುಟ್ಟಿದ ಪ್ರಶ್ನೆ
ಇಂಡೋ-ಇಂಗ್ಲೆಂಡ್ ನಡುವಿನ 3ನೇ ಟೆಸ್ಟ್ನಿಂದ ಕೆ.ಎಲ್.ರಾಹುಲ್ ಹೊರ ಬಿದ್ದಿರೋದು ಹಲ ಪ್ರಶ್ನೆಗಳನ್ನ ಹುಟ್ಟಿಸಿದೆ. ರಾಜ್ಕೋಟ್ ಟೆಸ್ಟ್ ಆಡಲು ರಾಹುಲ್ ಅಲಭ್ಯ ಎಂದ ಬೆನ್ನಲ್ಲೇ ಏನ್ ನಡೀತಾಯಿದೆ ಬಿಸಿಸಿಐನಲ್ಲಿ ಎಂಬ ಚರ್ಚೆ ಆರಂಭವಾಗಿದೆ. ಪ್ಲೇಯರ್ಸ್ ಜೊತೆ ಬಿಸಿಸಿಐ ಆಟವಾಡ್ತಿದ್ಯಾ? ಅಥವಾ ಸೂಪರ್ ಸ್ಟಾರ್ಗಳಿಗೆ ಬಿಸಿಸಿಐ ಸರಂಡರ್ ಆಗಿದ್ಯಾ? ಅನ್ನೋದು ಸದ್ಯ ಹಾಟ್ ಟಾಪಿಕ್ ಆಗಿದೆ.
ಇಂಡೋ-ಇಂಗ್ಲೆಂಡ್ ನಡುವಿನ 3ನೇ ಟೆಸ್ಟ್ ಪಂದ್ಯಕ್ಕೆ ವೇದಿಕೆ ಸಜ್ಜಾಗಿದೆ. ಹೈದ್ರಾಬಾದ್ ಟೆಸ್ಟ್ ಸೋತು, ವಿಶಾಖಪಟ್ಟಣದಲ್ಲಿ ಗೆದ್ದು ಬೀಗಿರುವ ಟೀಮ್ ಇಂಡಿಯಾ ರಾಜ್ಕೋಟ್ನಲ್ಲಿ ರಾಜನಂತೆ ಮೆರೆದಾಡೋ ಲೆಕ್ಕಾಚಾರದಲ್ಲಿದೆ. ಪಂದ್ಯದ ಆರಂಭಕ್ಕೂ ಮುನ್ನವೇ ಹಿನ್ನಡೆಗಳು ಎದುರಾಗ್ತಿವೆ. ಸರಣಿಗೆ ವಿರಾಟ್ ಕೊಹ್ಲಿ ಅಲಭ್ಯತೆರಾದ ಬೆನ್ನಲ್ಲೇ ಅನುಭವಿ ಕೆ.ಎಲ್.ರಾಹುಲ್ ಕೂಡ ಪಂದ್ಯದಿಂದ ಹೊರಬಿದ್ದಿದ್ದಾರೆ.
ಪ್ಲೇಯರ್ಸ್ ಜೊತೆ ಆಟವಾಡ್ತಿದ್ಯಾ ಬಿಸಿಸಿಐ?
ಈ ಪ್ರಶ್ನೆ ಕೇಳೋದಕ್ಕೆ ಕಾರಣಯಿದೆ. ಹೇಳಿಕೊಳ್ಳೋಕೆ ಬಿಸಿಸಿಐ ವಿಶ್ವದ ಶ್ರೀಮಂತ ಕ್ರಿಕೆಟ್ ಸಂಸ್ಥೆ. ಇಂಟರ್ ನ್ಯಾಷನಲ್ ಕ್ರಿಕೆಟ್ ಕೌನ್ಸಿಲ್ ಕೂಡ ಬಿಸಿಸಿಐ ಹುಕುಂ ಇಲ್ಲದೇ ಹೆಜ್ಜೆ ಇಡಲ್ಲ ಅನ್ನೋದು ಓಪನ್ ಸೀಕ್ರೆಟ್. ಇಂತಾ ಬಿಸಿಸಿಐಗೆ ತನ್ನ ಆಟಗಾರರ ಫಿಟ್ನೆಸ್ ಬಗ್ಗೆನೇ ಮಾಹಿತಿ ಇಲ್ಲ. ಒಂದು ಸಣ್ಣ ಇಂಜುರಿಯನ್ನ ಮ್ಯಾನೇಜ್ ಮಾಡೋಕೆ ಆಗ್ತಿಲ್ಲ.
ರಾಹುಲ್ ಫಿಟ್ನೆಸ್ ವಿಚಾರದಲ್ಲಿ ಬಿಸಿಸಿಐಗೆ ಗೊಂದಲ
ಮೊದಲ ಟೆಸ್ಟ್ನ ಬಳಿಕ ಕ್ವಾಡ್ರೈಸಿಪ್ (quadricep injury) ಇಂಜುರಿಗೆ ತುತ್ತಾದ ಕೆ.ಎಲ್.ರಾಹುಲ್, 2ನೇ ಟೆಸ್ಟ್ನಿಂದ ಹೊರ ಬಿದ್ರು. ಬಳಿಕ ಹೈದ್ರಾಬಾದ್ನಿಂದ ನೇರವಾಗಿ ಬಂದಿಳಿದಿದ್ದು ಬೆಂಗಳೂರಿನ ಎನ್ಸಿಎಗೆ. ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯ ವೈದ್ಯರ ಮೇಲ್ವಿಚಾರಣೆಯಲ್ಲಿ ರಾಹುಲ್, ಪುನಶ್ಚೇತನ ಶಿಬಿರದಲ್ಲಿ ಭಾಗಿಯಾಗಿದ್ದರು. ಅದಾಗಿ ಸ್ವಲ್ಪ ದಿನಕ್ಕೆ ಬಿಸಿಸಿಐ, ಸರಣಿಯ ಉಳಿದ ಪಂದ್ಯಗಳಿಗೆ ತಂಡವನ್ನು ಪ್ರಕಟಿಸಿತ್ತು. ಸಬ್ಜೆಕ್ಟ್ ಟು ಫಿಟ್ನೆಸ್ ಕ್ಲೀಯರೆನ್ಸ್ ಎಂಬ ಷರತ್ತಿನ ಅಡಿಯಲ್ಲಿ ರಾಹುಲ್ ಕೂಡ ತಂಡದಲ್ಲಿ ಸ್ಥಾನ ಪಡೆದಿದ್ದರು. ಆದ್ರೆ ಈಗ ನೋಡಿದ್ರೆ ಅನ್ಫಿಟ್ ರಾಹುಲ್, ಪಂದ್ಯದಿಂದ ಹೊರಬಿದ್ದಿದ್ದಾರೆ.
ಸೂಪರ್ ಸ್ಟಾರ್ಗಳಿಗೆ ‘ಸರಂಡರ್’ ಆಗ್ತಿದ್ಯಾ ಬಿಸಿಸಿಐ?
ಎನ್ಸಿಎನಲ್ಲಿ ರಿಹ್ಯಾಬ್ಗೆ ಒಳಗಾಗಿರುವ ಕೆ.ಎಲ್ ರಾಹುಲ್ರ ಫಿಟ್ನೆಸ್ನ ಇಂಚಿಂಚೂ ಮಾಹಿತಿ ಬಿಸಿಸಿಐಗೆ ಇದ್ದೇ ಇರುತ್ತೆ. ಯಾವುದೆ ಆಟಗಾರ ಇರಲಿ. ಫುಲ್ ಫಿಟ್ ಆಗಿದ್ದಾರಾ.? ಇಲ್ವಾ.? ಎಂಬ ಮಾಹಿತಿಯನ್ನ ಪಡೆಯದೇ ತಂಡಕ್ಕೆ ಆಯ್ಕೆ ಮಾಡಲ್ಲ. ಅದ್ರೆ, ಶನಿವಾರ ಫಿಟ್ ಆಗಿದ್ದ ರಾಹುಲ್, ಸೋಮವಾರ ನೋಡಿದ್ರೆ ಅನ್ಫಿಟ್ ಆಗಿದ್ದಾರೆ. ಇದನ್ನ ನೋಡಿದ ಮೇಲೆ ಕೆಲ ಆಟಗಾರರ ವಿಚಾರದಲ್ಲಿ ಖಡಕ್ ನಿರ್ಧಾರ ಕೈಗೊಳ್ಳೋ ಬಿಸಿಸಿಐ, ಸ್ಟಾರ್ಗಳ ವಿಚಾರದಲ್ಲಿ ಸರಂಡರ್ ಆಗ್ತಿದ್ಯಾ ಎಂಬ ಅನುಮಾನ ನಿಮ್ಮಲ್ಲೂ ಮೂಡದೇ ಇರಲ್ಲ. ಇದೇ ವಿಚಾರ ಇದೀಗ ಬಿಸಿಸಿಐ ವಲಯದಲ್ಲೂ ಕೆಲ ಅಧಿಕಾರಿಗಳ ಸಿಟ್ಟಿಗೆ ಕಾರಣವಾಗಿದೆ
‘ತಪ್ಪಾದ ಸಂದೇಶವನ್ನ ಕೊಡುತ್ತಿದೆ’
ಬಿಸಿಸಿಐನ ಮೆಡಿಕಲ್ ಟೀಮ್ಗೆ ರಾಹುಲ್ ಇಂಜುರಿ ಗಂಭೀರ ಸ್ವರೂಪದ್ದು ಎಂದು ತಿಳಿದ ಮೇಲೆ ತಂಡಕ್ಕೆ ಆಯ್ಕೆ ಮಾಡಿದ್ದೇಕೆ.? ಆಟಗಾರರು ಸೋಷಿಯಲ್ ಮೀಡಿಯಾಗಳಲ್ಲಿ ನಾನು ಫಿಟ್ ಎಂಬಂತಾ ಸಂದೇಶಗಳು ನೀಡುವ ವಿಡಿಯೋ ಮತ್ತು ಪೋಸ್ಟ್ಗಳನ್ನ ಹಾಕೋದೇಕೆ? ಇದು ತಪ್ಪಾದ ಸಂದೇಶವನ್ನ ಕೊಡುತ್ತಿದೆ-ಬಿಸಿಸಿಐ ಅಧಿಕಾರಿ
ಸೋಷಿಯಲ್ ಮೀಡಿಯಾ ಪೋಸ್ಟ್ಗಳೇ ಫಿಟ್ನೆಸ್ ಸರ್ಟಿಫಿಕೇಟ್
ಬಿಸಿಸಿಐ ಅಧಿಕಾರಿ ಮೆಡಿಕಲ್ ಟೀಮ್ ಫಿಟ್ನೆಸ್ ಸರ್ಟಿಫಿಕೇಟ್ ನೀಡಿದ್ರ ಬಗ್ಗೆ ಪ್ರಶ್ನೆ ಎತ್ತಿದ್ದಾರೆ. ಇದ್ರ ಜೊತೆಗೆ ಆಟಗಾರರ ಸೋಷಿಯಲ್ ಮೀಡಿಯಾ ಪೋಸ್ಟ್ಗಳು ತಪ್ಪು ಸಂದೇಶ ಕೊಡ್ತಿವೆ ಅಂದಿದ್ದಾರೆ. ಪಂದ್ಯದಿಂದ ಹೊರ ಬೀಳೋಕೂ ಮುನ್ನ ಕೆ.ಎಲ್ ರಾಹುಲ್ ಕೂಡ ಎನ್ಸಿಎನಲ್ಲಿ ಬ್ಯಾಟಿಂಗ್ ಅಭ್ಯಾಸ ನಡೆಸೋ ಪೋಸ್ಟ್ ಹಾಕಿದ್ರು. ಹೀಗಾಗಿ ಆಟಗಾರರು ಸೋಷಿಯಲ್ ಮೀಡಿಯಾದಲ್ಲಿ ಹಾಕ್ತಿರುವ ಫೋಸ್ಟ್ಗಳ ಆಧಾರದಲ್ಲಿ ತಂಡದ ಆಯ್ಕೆ ಆಗ್ತಿದ್ಯಾ ಎಂಬ ಪ್ರಶ್ನೆ ಈಗ ಹುಟ್ಟಿದೆ.
ಮೆಡಿಕಲ್ ಟೀಮ್ ಕಾರ್ಯವೈಖರಿಯ ಬಗ್ಗೆ ಹುಟ್ಟಿದ ಪ್ರಶ್ನೆ
ಕೆ.ಎಲ್ ರಾಹುಲ್ ತಂಡಕ್ಕೆ ಬರೋದು ಹಾಗೇ ಹೋಗೋದು ಇಂದು ನಿನ್ನೆಯ ಕಥೆಯಲ್ಲ. ಜನವರಿ 2021ರಿಂದ ಈವರೆಗೆ ಬರೋಬ್ಬರಿ 6 ಬಾರಿ ರಾಹುಲ್ ಮೇಜರ್ ಇಂಜುರಿಗೆ ತುತ್ತಾಗಿದ್ದಾರೆ. ರಾಹುಲ್ ಹೊರತಾಗಿ ಇನ್ನೂ ಕೆಲ ಆಟಗಾರರ ಪಾಲಿಗೆ ಎನ್ಸಿಎನೇ ತವರು ಮನೆಯಾಗಿದೆ. ಹೀಗೆ ಪದೇ ಪದೇ ಆಟಗಾರರು ಇಂಜುರಿ ತುತ್ತಾಗ್ತಿರೋದು ಎನ್ಸಿಎನ ಮೆಡಿಕಲ್ ಟೀಮ್ ಇಂಡಿಯಾ ಸಾಮರ್ಥ್ಯದ ಬಗ್ಗೆ ಪ್ರಶ್ನೆ ಹುಟ್ಟು ಹಾಕಿದೆ.
ಒಟ್ಟಿನಲ್ಲಿ ರಾಹುಲ್ ಇಂಜುರಿ ಡ್ರಾಮಾ ಬಿಸಿಸಿಐನಲ್ಲಿ ಎಲ್ಲವೂ ಸರಿಯಿಲ್ಲ ಅನ್ನೋದನ್ನ ಬಟಾ ಬಯಲು ಮಾಡಿದೆ. ಮುಂದಾದ್ರೂ, ತಂಡದ ಆಯ್ಕೆಗೂ ಮುನ್ನ ಸೆಲೆಕ್ಷನ್ ಕಮಿಟಿ ಎಚ್ಚರಿಕೆಯ ಹೆಜ್ಜೆ ಇಡುತ್ತಾ? ಮೆಡಿಕಲ್ ಟೀಮ್ನಿಂದ ಬಿಗ್ಬಾಸ್ಗಳು ಸ್ಪಷ್ಟ ಮಾಹಿತಿಯನ್ನು ಪಡೀತಾರಾ? ಕಾದು ನೋಡಬೇಕಿದೆ.
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್