ಜನವರಿಯಿಂದಲೇ IPL ಮೂಡ್ನಲ್ಲಿ ಆಟಗಾರರು
ಐಪಿಎಲ್ ಮೂಡ್ನಲ್ಲಿದ್ದವರಿಗೆ ಬಿಸಿಸಿಐ ವಾರ್ನ್
ರಣಜಿಗೆ ಚಕ್ಕರ್.. ಇಶಾನ್ಗೆ ಎಚ್ಚರಿಕೆ ಕರೆಗಂಟೆ
ಒಂದೆಡೆ ಭಾರತ ಇಂಗ್ಲೆಂಡ್ ನಡುವಿನ ಟೆಸ್ಟ್ ಸರಣಿ ನಡೀತಿದ್ರೆ, ಮತ್ತೊಂದೆಡೆ ರಣಜಿ ಟ್ರೋಫಿ ಕಾವೇರುತ್ತಿದೆ. ಕೆಲ ಆಟಗಾರರು ಮಾತ್ರ ಈಗಾಗಲೇ ಐಪಿಎಲ್ ಮೂಡ್ಗೆ ಶಿಫ್ಟ್ ಆಗಿದ್ದಾರೆ. ಇಂಥಹವರಿಗೆ ಇದೀಗ ಬಿಸಿ ಮುಟ್ಟಿಸುವ ಕೆಲಸಕ್ಕೆ ಬಿಸಿಸಿಐ ಬಿಗ್ಬಾಸ್ಗಳು ಕೈ ಹಾಕಿದ್ದಾರೆ.
ಇಶಾನ್ ಕಿಶನ್. ಸದ್ಯ ಕಾಂಟ್ರವರ್ಸಿಯಿಂದಲೇ ಸದ್ದು ಮಾಡ್ತಿರೋ ಕ್ರಿಕೆಟರ್. ಕಳೆದೊಂದು ತಿಂಗಳಿಂದ ಭಾರತೀಯ ಕ್ರಿಕೆಟ್ನ ಚರ್ಚೆಯ ಕೇಂದ್ರ ಬಿಂದು. ಸೌತ್ ಆಫ್ರಿಕಾ ಪ್ರವಾಸದಿಂದ ಹಿಂತಿರುಗಿದ ದಿನದಿಂದ ಸದಾ ಸುದ್ದಿಯಲ್ಲಿರುವ ಇಶಾನ್ ಕಿಶನ್ಗೆ, ಬಿಸಿಸಿಐ ಈಗ ಬರೆ ಎಳೆಯಲು ಮುಂದಾಗಿದೆ.
ಎಲ್ಲಕ್ಕೂ ಚಕ್ಕರ್.. ಐಪಿಎಲ್ಗೆ ಸಿದ್ಧತೆಗೆ ಹಾಜರ್
ಮೆಂಟಲ್ ಫಿಟಿಗ್ ಎಂದು ಸಬೂಬು ನೀಡಿದ್ದ ಇಶಾನ್ ಕಿಶನ್, ಸೌತ್ ಆಫ್ರಿಕಾ ಪ್ರವಾಸದಿಂದ ವಾಪಸ್ ಆಗಿದ್ದರು. ದುಬೈ ಗಿಬೈ ಅಂತೆಲ್ಲಾ ಸುತ್ತಾಡಿದ್ದ ಇಶಾನ್ ಕಿಶನ್, ಮೋಜು ಮಸ್ತಿ ಮಾಡಿದ್ರು. ಈ ಬೆನ್ನಲ್ಲೇ ಕೋಚ್ ದ್ರಾವಿಡ್ ಸೇರಿದಂತೆ ಬಿಸಿಸಿಐ ದೇಶಿ ಕ್ರಿಕೆಟ್ ಆಡುವ ಸೂಚನೆ ನೀಡಲಾಗಿತ್ತು. ಇದಕ್ಕೆಲ್ಲಾ ಕ್ಯಾರೆ ಎನ್ನದ ಇಶಾನ್, ಜಾರ್ಖಂಡ್ ಕ್ರಿಕೆಟ್ ಅಸೋಸಿಯೇಷನ್ನಿಂದಲೂ ದೂರ ಉಳಿದಿದ್ರು. ಬಿಸಿಸಿಐನ ಸೂಚನೆಯನ್ನೇ ದಿಕ್ಕರಿಸಿದ ಇಶಾನ್, ರಣಜಿ ಬದಲಿಗೆ ಹಾಜರಾಗಿರೋದು ಐಪಿಎಲ್ ಪ್ರಿಪರೇಷನ್ಗೆ.
ಪಾಂಡ್ಯ ಬ್ರದರ್ಸ್ ಜೊತೆ ಐಪಿಎಲ್ಗೆ ಇಶಾನ್ ಸಿದ್ಧತೆ
ಟೀಮ್ ಇಂಡಿಯಾದಿಂದ ದೂರ ಉಳಿದಿದ್ದ ಇಶಾನ್, ಹಾರ್ದಿಕ್ ಪಾಂಡ್ಯ ಸೇರಿದಂತೆ ಇತರೆ ಆಟಗಾರರಿಗೆ ಬಿಸಿಸಿಐ ರಣಜಿಗೆ ಹಾಜರಾಗುವಂತೆ ನೋಟಿಸ್ ನೀಡಿತ್ತು. ಅತ್ತ ರಣಜಿಗೂ ಹಾಜರಾಗದೇ, ಇತ್ತ ಎನ್ಸಿಎಗೂ ಅಟೆಂಡ್ ಆಗದ ಇಶಾನ್ ಕಿಶನ್ ಪಾಂಡ್ಯ ಬ್ರದರ್ಸ್ ಜೊತೆ ಐಪಿಎಲ್ ಪ್ರಿಪರೇಷನ್ಗೆ ತೆರಳಿದ್ದಾರೆ. ಐಪಿಎಲ್ ಆರಂಭಕ್ಕೆ ಒಂದು ತಿಂಗಳಿಗೂ ಅಧಕ ದಿನವಿದೆ. ನಡೆದುಕೊಂಡ ರೀತಿ ಬಿಸಿಸಿಐ ಬಿಗ್ಬಾಸ್ಗಳ ಕಣ್ಣು ಕೆಂಪಾಗಿಸಿದೆ.
ಐಪಿಎಲ್ ಮೂಡ್ನಲ್ಲಿದ್ದವರಿಗೆ ಬಿಸಿಸಿಐ ವಾರ್ನ್
ಏಕದಿನ ವಿಶ್ವಕಪ್ ವೇಳೆ ಆ್ಯಂಕಲ್ ಇಂಜುರಿಗೆ ತುತ್ತಾಗಿದ್ದ ಹಾರ್ದಿಕ್ ಪಾಂಡ್ಯ, ಚೇತರಿಸಿಕೊಂಡು ಹಲವು ದಿನಗಳೇ ಕಳೆದಿವೆ. ಆದ್ರೆ, ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಜನವರಿ ತಿಂಗಳಿಂದಲೇ ಐಪಿಎಲ್ ಪ್ರಿಪರೇಷನ್ನಲ್ಲೇ ಬ್ಯುಸಿಯಾಗಿದ್ದಾರೆ. ಇದೇ ಕಾರಣಕ್ಕೀಗ ಬಿಸಿಸಿಐ ಖಡಕ್ ಸಂದೇಶ ರವಾನಿಸಿದೆ. ಮುಂದಿನ ಕೆಲ ದಿನಗಳಲ್ಲಿ ಎಲ್ಲಾ ಆಟಗಾರರು, ರಾಜ್ಯ ತಂಡಗಳ ಜೊತೆ ರಣಜಿ ಆಡುವ ಬಗ್ಗೆ ಮಾತುಕತೆ ನಡೆಸುವಂತೆ ಸೂಚಿಸಿದೆ. ಇದಿಷ್ಟೇ ಅಲ್ಲ, ಅನ್ಫಿಟ್ ಇರೋ ಆಟಗಾರರೆಲ್ಲಾ ಎನ್ಸಿಎಗೆ ಹಾಜರಾಗುವಂತೆಯೂ ಎಚ್ಚರಿಕೆ ನೀಡಿದೆ. ಈ ಫೈನಲ್ ವಾರ್ನಿಂಗ್ ಅನ್ನ ಇಶಾನ್ ಪಾಲಿಸ್ತಾರಾ ಅನ್ನೋದೇ ಕುತೂಹಲ ಮೂಡಿಸಿದೆ.
ರಾಷ್ಟ್ರೀಯ ತಂಡಕ್ಕೆ ಗೈರಾಗಿ ಐಪಿಎಲ್ಗೆ ಜೈ
ಇಶಾನ್ ಕಿಶನ್ ಮಾತ್ರವೇ ಅಲ್ಲ. ಹಾರ್ದಿಕ್ ಪಾಂಡ್ಯ, ಚೆನ್ನೈ ಸೂಪರ್ ಕಿಂಗ್ಸ್ ತಂಡದ ವೇಗಿ ದೀಪಕ್ ಚಹರ್ ಕೂಡ ಇದೇ ಸಾಲಿಗೆ ಸೇರ್ತಾರೆ. ವೈಯಕ್ತಿಕ ಕಾರಣ ನೀಡಿ ಸೌತ್ ಆಫ್ರಿಕಾ ಪ್ರವಾಸದಿಂದ ಹೊರಗುಳಿದ ದೀಪಕ್ ಚಹರ್ ಕೂಡ, ರಣಜಿ ಬದಲಿಗೆ ಐಪಿಎಲ್ ಪ್ರಿಪರೇಷನ್ನಲ್ಲೇ ತೊಡಗಿದ್ದಾರೆ. ಹೀಗಾಗಿ ಇಂಥವರಿಗೆ ಪಾಠ ಕಲಿಸುವ ಕೆಲಸಕ್ಕೆ ಬಿಸಿಸಿಐ ಕೈಹಾಕಿದೆ. ಒಟ್ನಲ್ಲಿ, ಜಾಣನಿಗೆ ಮಾತಿನ ಪೆಟ್ಟು ದಡ್ಡನಿಗೆ ದೊಣ್ಣೆ ಪೆಟ್ಟು ಎಂಬ ಗಾದೆ ಮಾತಿದೆ. ಅದರಂತೆಯೇ ಇಷ್ಟು ದಿನ ಮಾತಿನ ಪೆಟ್ಟು ನೀಡಿದ್ದ ಬಿಗ್ಬಾಸ್ಗಳು, ಈಗ ಮಾತು ಕೇಳದವರಿಗೆ ದೊಣ್ಣೆ ಪೆಟ್ಟು ನೀಡೋಕೆ ಹೊರಟಿರೋದಂತು ಸತ್ಯ. ಕ್ರಿಕೆಟರ್ಸ್ ಈಗಲಾದರೂ ಬುದ್ದಿ ಕಲೀತಾರಾ ಅನ್ನೋದನ್ನು ಕಾದು ನೋಡಬೇಕಿದೆ.
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್
ಜನವರಿಯಿಂದಲೇ IPL ಮೂಡ್ನಲ್ಲಿ ಆಟಗಾರರು
ಐಪಿಎಲ್ ಮೂಡ್ನಲ್ಲಿದ್ದವರಿಗೆ ಬಿಸಿಸಿಐ ವಾರ್ನ್
ರಣಜಿಗೆ ಚಕ್ಕರ್.. ಇಶಾನ್ಗೆ ಎಚ್ಚರಿಕೆ ಕರೆಗಂಟೆ
ಒಂದೆಡೆ ಭಾರತ ಇಂಗ್ಲೆಂಡ್ ನಡುವಿನ ಟೆಸ್ಟ್ ಸರಣಿ ನಡೀತಿದ್ರೆ, ಮತ್ತೊಂದೆಡೆ ರಣಜಿ ಟ್ರೋಫಿ ಕಾವೇರುತ್ತಿದೆ. ಕೆಲ ಆಟಗಾರರು ಮಾತ್ರ ಈಗಾಗಲೇ ಐಪಿಎಲ್ ಮೂಡ್ಗೆ ಶಿಫ್ಟ್ ಆಗಿದ್ದಾರೆ. ಇಂಥಹವರಿಗೆ ಇದೀಗ ಬಿಸಿ ಮುಟ್ಟಿಸುವ ಕೆಲಸಕ್ಕೆ ಬಿಸಿಸಿಐ ಬಿಗ್ಬಾಸ್ಗಳು ಕೈ ಹಾಕಿದ್ದಾರೆ.
ಇಶಾನ್ ಕಿಶನ್. ಸದ್ಯ ಕಾಂಟ್ರವರ್ಸಿಯಿಂದಲೇ ಸದ್ದು ಮಾಡ್ತಿರೋ ಕ್ರಿಕೆಟರ್. ಕಳೆದೊಂದು ತಿಂಗಳಿಂದ ಭಾರತೀಯ ಕ್ರಿಕೆಟ್ನ ಚರ್ಚೆಯ ಕೇಂದ್ರ ಬಿಂದು. ಸೌತ್ ಆಫ್ರಿಕಾ ಪ್ರವಾಸದಿಂದ ಹಿಂತಿರುಗಿದ ದಿನದಿಂದ ಸದಾ ಸುದ್ದಿಯಲ್ಲಿರುವ ಇಶಾನ್ ಕಿಶನ್ಗೆ, ಬಿಸಿಸಿಐ ಈಗ ಬರೆ ಎಳೆಯಲು ಮುಂದಾಗಿದೆ.
ಎಲ್ಲಕ್ಕೂ ಚಕ್ಕರ್.. ಐಪಿಎಲ್ಗೆ ಸಿದ್ಧತೆಗೆ ಹಾಜರ್
ಮೆಂಟಲ್ ಫಿಟಿಗ್ ಎಂದು ಸಬೂಬು ನೀಡಿದ್ದ ಇಶಾನ್ ಕಿಶನ್, ಸೌತ್ ಆಫ್ರಿಕಾ ಪ್ರವಾಸದಿಂದ ವಾಪಸ್ ಆಗಿದ್ದರು. ದುಬೈ ಗಿಬೈ ಅಂತೆಲ್ಲಾ ಸುತ್ತಾಡಿದ್ದ ಇಶಾನ್ ಕಿಶನ್, ಮೋಜು ಮಸ್ತಿ ಮಾಡಿದ್ರು. ಈ ಬೆನ್ನಲ್ಲೇ ಕೋಚ್ ದ್ರಾವಿಡ್ ಸೇರಿದಂತೆ ಬಿಸಿಸಿಐ ದೇಶಿ ಕ್ರಿಕೆಟ್ ಆಡುವ ಸೂಚನೆ ನೀಡಲಾಗಿತ್ತು. ಇದಕ್ಕೆಲ್ಲಾ ಕ್ಯಾರೆ ಎನ್ನದ ಇಶಾನ್, ಜಾರ್ಖಂಡ್ ಕ್ರಿಕೆಟ್ ಅಸೋಸಿಯೇಷನ್ನಿಂದಲೂ ದೂರ ಉಳಿದಿದ್ರು. ಬಿಸಿಸಿಐನ ಸೂಚನೆಯನ್ನೇ ದಿಕ್ಕರಿಸಿದ ಇಶಾನ್, ರಣಜಿ ಬದಲಿಗೆ ಹಾಜರಾಗಿರೋದು ಐಪಿಎಲ್ ಪ್ರಿಪರೇಷನ್ಗೆ.
ಪಾಂಡ್ಯ ಬ್ರದರ್ಸ್ ಜೊತೆ ಐಪಿಎಲ್ಗೆ ಇಶಾನ್ ಸಿದ್ಧತೆ
ಟೀಮ್ ಇಂಡಿಯಾದಿಂದ ದೂರ ಉಳಿದಿದ್ದ ಇಶಾನ್, ಹಾರ್ದಿಕ್ ಪಾಂಡ್ಯ ಸೇರಿದಂತೆ ಇತರೆ ಆಟಗಾರರಿಗೆ ಬಿಸಿಸಿಐ ರಣಜಿಗೆ ಹಾಜರಾಗುವಂತೆ ನೋಟಿಸ್ ನೀಡಿತ್ತು. ಅತ್ತ ರಣಜಿಗೂ ಹಾಜರಾಗದೇ, ಇತ್ತ ಎನ್ಸಿಎಗೂ ಅಟೆಂಡ್ ಆಗದ ಇಶಾನ್ ಕಿಶನ್ ಪಾಂಡ್ಯ ಬ್ರದರ್ಸ್ ಜೊತೆ ಐಪಿಎಲ್ ಪ್ರಿಪರೇಷನ್ಗೆ ತೆರಳಿದ್ದಾರೆ. ಐಪಿಎಲ್ ಆರಂಭಕ್ಕೆ ಒಂದು ತಿಂಗಳಿಗೂ ಅಧಕ ದಿನವಿದೆ. ನಡೆದುಕೊಂಡ ರೀತಿ ಬಿಸಿಸಿಐ ಬಿಗ್ಬಾಸ್ಗಳ ಕಣ್ಣು ಕೆಂಪಾಗಿಸಿದೆ.
ಐಪಿಎಲ್ ಮೂಡ್ನಲ್ಲಿದ್ದವರಿಗೆ ಬಿಸಿಸಿಐ ವಾರ್ನ್
ಏಕದಿನ ವಿಶ್ವಕಪ್ ವೇಳೆ ಆ್ಯಂಕಲ್ ಇಂಜುರಿಗೆ ತುತ್ತಾಗಿದ್ದ ಹಾರ್ದಿಕ್ ಪಾಂಡ್ಯ, ಚೇತರಿಸಿಕೊಂಡು ಹಲವು ದಿನಗಳೇ ಕಳೆದಿವೆ. ಆದ್ರೆ, ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಜನವರಿ ತಿಂಗಳಿಂದಲೇ ಐಪಿಎಲ್ ಪ್ರಿಪರೇಷನ್ನಲ್ಲೇ ಬ್ಯುಸಿಯಾಗಿದ್ದಾರೆ. ಇದೇ ಕಾರಣಕ್ಕೀಗ ಬಿಸಿಸಿಐ ಖಡಕ್ ಸಂದೇಶ ರವಾನಿಸಿದೆ. ಮುಂದಿನ ಕೆಲ ದಿನಗಳಲ್ಲಿ ಎಲ್ಲಾ ಆಟಗಾರರು, ರಾಜ್ಯ ತಂಡಗಳ ಜೊತೆ ರಣಜಿ ಆಡುವ ಬಗ್ಗೆ ಮಾತುಕತೆ ನಡೆಸುವಂತೆ ಸೂಚಿಸಿದೆ. ಇದಿಷ್ಟೇ ಅಲ್ಲ, ಅನ್ಫಿಟ್ ಇರೋ ಆಟಗಾರರೆಲ್ಲಾ ಎನ್ಸಿಎಗೆ ಹಾಜರಾಗುವಂತೆಯೂ ಎಚ್ಚರಿಕೆ ನೀಡಿದೆ. ಈ ಫೈನಲ್ ವಾರ್ನಿಂಗ್ ಅನ್ನ ಇಶಾನ್ ಪಾಲಿಸ್ತಾರಾ ಅನ್ನೋದೇ ಕುತೂಹಲ ಮೂಡಿಸಿದೆ.
ರಾಷ್ಟ್ರೀಯ ತಂಡಕ್ಕೆ ಗೈರಾಗಿ ಐಪಿಎಲ್ಗೆ ಜೈ
ಇಶಾನ್ ಕಿಶನ್ ಮಾತ್ರವೇ ಅಲ್ಲ. ಹಾರ್ದಿಕ್ ಪಾಂಡ್ಯ, ಚೆನ್ನೈ ಸೂಪರ್ ಕಿಂಗ್ಸ್ ತಂಡದ ವೇಗಿ ದೀಪಕ್ ಚಹರ್ ಕೂಡ ಇದೇ ಸಾಲಿಗೆ ಸೇರ್ತಾರೆ. ವೈಯಕ್ತಿಕ ಕಾರಣ ನೀಡಿ ಸೌತ್ ಆಫ್ರಿಕಾ ಪ್ರವಾಸದಿಂದ ಹೊರಗುಳಿದ ದೀಪಕ್ ಚಹರ್ ಕೂಡ, ರಣಜಿ ಬದಲಿಗೆ ಐಪಿಎಲ್ ಪ್ರಿಪರೇಷನ್ನಲ್ಲೇ ತೊಡಗಿದ್ದಾರೆ. ಹೀಗಾಗಿ ಇಂಥವರಿಗೆ ಪಾಠ ಕಲಿಸುವ ಕೆಲಸಕ್ಕೆ ಬಿಸಿಸಿಐ ಕೈಹಾಕಿದೆ. ಒಟ್ನಲ್ಲಿ, ಜಾಣನಿಗೆ ಮಾತಿನ ಪೆಟ್ಟು ದಡ್ಡನಿಗೆ ದೊಣ್ಣೆ ಪೆಟ್ಟು ಎಂಬ ಗಾದೆ ಮಾತಿದೆ. ಅದರಂತೆಯೇ ಇಷ್ಟು ದಿನ ಮಾತಿನ ಪೆಟ್ಟು ನೀಡಿದ್ದ ಬಿಗ್ಬಾಸ್ಗಳು, ಈಗ ಮಾತು ಕೇಳದವರಿಗೆ ದೊಣ್ಣೆ ಪೆಟ್ಟು ನೀಡೋಕೆ ಹೊರಟಿರೋದಂತು ಸತ್ಯ. ಕ್ರಿಕೆಟರ್ಸ್ ಈಗಲಾದರೂ ಬುದ್ದಿ ಕಲೀತಾರಾ ಅನ್ನೋದನ್ನು ಕಾದು ನೋಡಬೇಕಿದೆ.
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್