newsfirstkannada.com

ಬೆಂಗಳೂರಿಗರೇ ಎಚ್ಚರ! ಮಲಗೋ ಮುನ್ನ ನಿಮ್ಮ ಬೈಕ್​ ಎಷ್ಟು ಸೇಫ್​ ಎಂದು ಚೆಕ್​ ಮಾಡಿ!

Share :

Published April 4, 2024 at 6:04am

Update April 4, 2024 at 11:07am

    ಧಗಧಗ ಹೊತ್ತಿ ಉರಿದ ಐಷಾರಾಮಿ ಎರಡು ಬೈಕ್​ಗಳು

    ಬೆಂಕಿಯ ಶಾಖಕ್ಕೆ ಸಾವನಪ್ಪಿರೋ ಎರಡು ಲವ್ ​ಬರ್ಡ್ಸ್

    ಕಣ್ಣೀರಿಟ್ಟ ಬೈಕ್​ ಮಾಲೀಕರು, ಪುಂಡರ ಮೇಲೆ ಶಂಕೆ

ಬೆಂಗಳೂರು: ಸಿಲಿಕಾನ್​ ಸಿಟಿ ಜನರೇ ಎಚ್ಚರ. ರಾತ್ರಿ ಮಲಗೋಕು ಮುಂಚೆ ಮನೆ ಮುಂದೆ ನಿಲ್ಲಿಸಿರೋ ಬೈಕ್​ ಎಷ್ಟು ಸೇಫ್​ ಅಂತ ಒಮ್ಮೆ ಚೆಕ್​ ಮಾಡಿಕೊಳ್ಳಿ. ಇಲ್ಲವಾದರೇ ರಾತ್ರಿ ಚೆನ್ನಾಗಿರೋ ಬೈಕ್​ ಬೆಳಗಾಗೋಷ್ಟರಲ್ಲಿ ಸುಟ್ಟು ಕರಕಲಾಗಿರುತ್ತೆ. ಇಂಥದೇ ಒಂದು ಅವಘಡ ರಾಜಧಾನಿಯಲ್ಲಿ ಸಂಭವಿಸಿದೆ.

ಇದನ್ನೂ ಓದಿ: ಯುಗಾದಿ ಮಟನ್ ಚೀಟಿ ಹೆಸರಲ್ಲಿ ಮೋಸ.. ಆಸಾಮಿ ಗುಡ್ಡೆ ಹಾಕಿದ್ದು ಒಂದು, ಎರಡು ಕೋಟಿಯಲ್ಲ; ಎಷ್ಟು?

ಇದನ್ನೂ ಓದಿ: VIDEO: RCB ತಂಡದ ಮುದ್ದಿನ ಯುವರಾಣಿ ಶ್ರೇಯಾಂಕ ಪಾಟೀಲ್​ಗೆ ತವರಿನಲ್ಲಿ ಅದ್ಧೂರಿ ಸ್ವಾಗತ

ಹೌದು, ಜೆ.ಪಿ ನಗರ ಪೊಲೀಸ್ ಠಾಣಾ ವ್ಯಾಪ್ತಿ, ಚಾಮುಂಡಿನಗರದಲ್ಲಿ ಈ ಅವಘಡ ಸಂಭವಿಸಿದೆ. ಮಂಗಳವಾರ ಮಧ್ಯರಾತ್ರಿ ಎಲ್ಲರೂ ಊಟ ಮುಗಿಸಿ ಅರ್ಧ ನಿದ್ರೆ ಮುಗಿಸಿದ್ರು. ಆದ್ರೆ ಆಗ ಏಕಾಏಕಿ ಕಾಣಿಸಿಕೊಂಡಿದ್ದ ಬೆಂಕಿ ಇಲ್ಲಿದ್ದ ಜನರ ನಿದ್ರೆ ಕೆಡಿಸಿತ್ತು. ಏನೋ ಹೊಗೆ ಬರ್ತಿದೆ ಅಂತ ಹೊರಗೆ ಬಂದು ನೋಡಿದ ಜನರಿಗೆ ಶಾಕ್​ ಕಾದಿತ್ತು. ಮನೆ ಮುಂದೆ ನಿಲ್ಲಿಸಲಾಗಿದ್ದ ಬೈಕ್​ಗಳು ಸುಟ್ಟು ಕರಕಲಾಗಿರೋದ್ರಿಂದ ಅದ್ರ ಮಾಲೀಕರು ಕಣ್ಣೀರಿಟ್ಟಿದ್ದಾರೆ. ಈ ಘಟನೆ ಹಿಂದೆ ಪುಂಡರ ಕೈಚಳಕ ಇರಬಹುದು ಅಂತ ಅನುಮಾನ ವ್ಯಕ್ತಪಡಿಸಿದ್ದಾರೆ ಅಲ್ಲಿನ ಸ್ಥಳೀಯರು.

ಇನ್ನು, ಈ ಅವಘಡದಲ್ಲಿ 2 ಡಿಯೋ ಬೈಕ್​, 1 ಡ್ಯೂಕ್, 1 ಹೋಂಡಾ ಕಂಪನಿ ಶೈನ್​​​​ ಬೈಕ್​ ಸುಟ್ಟು ಹೋಗಿದ್ದು, ಬಿಲ್ಡಿಂಗ್​​ ಕರಕಲಾಗಿದೆ. ಇತ್ತ ಎರಡು ಪಕ್ಷಿಗಳು ಸಾವನಪ್ಪಿದೆ. ಸಮಯ ಪ್ರಜ್ಞೆಯಿಂದ ಬೇರೆ ವಾಹನಗಳು ಬೆಂಕಿಗಾಹುತಿ ಆಗೋದನ್ನ ತಪ್ಪಿಸಲಾಗಿದೆ. ಸದ್ಯ ಇಷ್ಟೆಲ್ಲಾ ಅವಘಡ ಸಂಭವಿಸಿದ್ರು ಬೆಂಕಿ ಹೊತ್ತಿಕೊಂಡಿದ್ದಕ್ಕೆ ಕಾರಣ ಏನು ಅನ್ನೋದು ಇನ್ನೂ ತಿಳಿದುಬಂದಿಲ್ಲ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬೆಂಗಳೂರಿಗರೇ ಎಚ್ಚರ! ಮಲಗೋ ಮುನ್ನ ನಿಮ್ಮ ಬೈಕ್​ ಎಷ್ಟು ಸೇಫ್​ ಎಂದು ಚೆಕ್​ ಮಾಡಿ!

https://newsfirstlive.com/wp-content/uploads/2024/04/fire1.jpg

    ಧಗಧಗ ಹೊತ್ತಿ ಉರಿದ ಐಷಾರಾಮಿ ಎರಡು ಬೈಕ್​ಗಳು

    ಬೆಂಕಿಯ ಶಾಖಕ್ಕೆ ಸಾವನಪ್ಪಿರೋ ಎರಡು ಲವ್ ​ಬರ್ಡ್ಸ್

    ಕಣ್ಣೀರಿಟ್ಟ ಬೈಕ್​ ಮಾಲೀಕರು, ಪುಂಡರ ಮೇಲೆ ಶಂಕೆ

ಬೆಂಗಳೂರು: ಸಿಲಿಕಾನ್​ ಸಿಟಿ ಜನರೇ ಎಚ್ಚರ. ರಾತ್ರಿ ಮಲಗೋಕು ಮುಂಚೆ ಮನೆ ಮುಂದೆ ನಿಲ್ಲಿಸಿರೋ ಬೈಕ್​ ಎಷ್ಟು ಸೇಫ್​ ಅಂತ ಒಮ್ಮೆ ಚೆಕ್​ ಮಾಡಿಕೊಳ್ಳಿ. ಇಲ್ಲವಾದರೇ ರಾತ್ರಿ ಚೆನ್ನಾಗಿರೋ ಬೈಕ್​ ಬೆಳಗಾಗೋಷ್ಟರಲ್ಲಿ ಸುಟ್ಟು ಕರಕಲಾಗಿರುತ್ತೆ. ಇಂಥದೇ ಒಂದು ಅವಘಡ ರಾಜಧಾನಿಯಲ್ಲಿ ಸಂಭವಿಸಿದೆ.

ಇದನ್ನೂ ಓದಿ: ಯುಗಾದಿ ಮಟನ್ ಚೀಟಿ ಹೆಸರಲ್ಲಿ ಮೋಸ.. ಆಸಾಮಿ ಗುಡ್ಡೆ ಹಾಕಿದ್ದು ಒಂದು, ಎರಡು ಕೋಟಿಯಲ್ಲ; ಎಷ್ಟು?

ಇದನ್ನೂ ಓದಿ: VIDEO: RCB ತಂಡದ ಮುದ್ದಿನ ಯುವರಾಣಿ ಶ್ರೇಯಾಂಕ ಪಾಟೀಲ್​ಗೆ ತವರಿನಲ್ಲಿ ಅದ್ಧೂರಿ ಸ್ವಾಗತ

ಹೌದು, ಜೆ.ಪಿ ನಗರ ಪೊಲೀಸ್ ಠಾಣಾ ವ್ಯಾಪ್ತಿ, ಚಾಮುಂಡಿನಗರದಲ್ಲಿ ಈ ಅವಘಡ ಸಂಭವಿಸಿದೆ. ಮಂಗಳವಾರ ಮಧ್ಯರಾತ್ರಿ ಎಲ್ಲರೂ ಊಟ ಮುಗಿಸಿ ಅರ್ಧ ನಿದ್ರೆ ಮುಗಿಸಿದ್ರು. ಆದ್ರೆ ಆಗ ಏಕಾಏಕಿ ಕಾಣಿಸಿಕೊಂಡಿದ್ದ ಬೆಂಕಿ ಇಲ್ಲಿದ್ದ ಜನರ ನಿದ್ರೆ ಕೆಡಿಸಿತ್ತು. ಏನೋ ಹೊಗೆ ಬರ್ತಿದೆ ಅಂತ ಹೊರಗೆ ಬಂದು ನೋಡಿದ ಜನರಿಗೆ ಶಾಕ್​ ಕಾದಿತ್ತು. ಮನೆ ಮುಂದೆ ನಿಲ್ಲಿಸಲಾಗಿದ್ದ ಬೈಕ್​ಗಳು ಸುಟ್ಟು ಕರಕಲಾಗಿರೋದ್ರಿಂದ ಅದ್ರ ಮಾಲೀಕರು ಕಣ್ಣೀರಿಟ್ಟಿದ್ದಾರೆ. ಈ ಘಟನೆ ಹಿಂದೆ ಪುಂಡರ ಕೈಚಳಕ ಇರಬಹುದು ಅಂತ ಅನುಮಾನ ವ್ಯಕ್ತಪಡಿಸಿದ್ದಾರೆ ಅಲ್ಲಿನ ಸ್ಥಳೀಯರು.

ಇನ್ನು, ಈ ಅವಘಡದಲ್ಲಿ 2 ಡಿಯೋ ಬೈಕ್​, 1 ಡ್ಯೂಕ್, 1 ಹೋಂಡಾ ಕಂಪನಿ ಶೈನ್​​​​ ಬೈಕ್​ ಸುಟ್ಟು ಹೋಗಿದ್ದು, ಬಿಲ್ಡಿಂಗ್​​ ಕರಕಲಾಗಿದೆ. ಇತ್ತ ಎರಡು ಪಕ್ಷಿಗಳು ಸಾವನಪ್ಪಿದೆ. ಸಮಯ ಪ್ರಜ್ಞೆಯಿಂದ ಬೇರೆ ವಾಹನಗಳು ಬೆಂಕಿಗಾಹುತಿ ಆಗೋದನ್ನ ತಪ್ಪಿಸಲಾಗಿದೆ. ಸದ್ಯ ಇಷ್ಟೆಲ್ಲಾ ಅವಘಡ ಸಂಭವಿಸಿದ್ರು ಬೆಂಕಿ ಹೊತ್ತಿಕೊಂಡಿದ್ದಕ್ಕೆ ಕಾರಣ ಏನು ಅನ್ನೋದು ಇನ್ನೂ ತಿಳಿದುಬಂದಿಲ್ಲ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Load More