ಸತತ 6ನೇ ಸೋಲಿಗೆ ಗುರಿಯಾದ ಆರ್ಸಿಬಿ
ಗೆಲ್ಲಲೇಬೇಕಾಗಿದ್ದ ಪಂದ್ಯದಲ್ಲಿ ಆರ್ಸಿಬಿ ಎಡವಿದ್ದೆಲ್ಲಿ?
ಬೌಲರ್ಸ್ ಟ್ರ್ಯಾಕ್ಗೆ ಬರೋ ಲಕ್ಷಣಾನೇ ಇಲ್ಲ ಗುರು..!
ಗೆಲ್ಲಲೇಬೇಕಾಗಿದ್ದ ಪಂದ್ಯದಲ್ಲಿ ಆರ್ಸಿಬಿ ಮುಗ್ಗರಿಸಿದೆ. ವಿರೋಚಿತ ಸೋಲುಂಡರೂ ಆರ್ಸಿಬಿಯ ಪ್ಲೇ ಆಫ್ನ ಪ್ರವೇಶದ ಹಾದಿ ದುರ್ಗಮವಾಗಿದೆ. ಮಸ್ಟ್ ವಿನ್ ಗೇಮ್ನಲ್ಲಿ ಆರ್ಸಿಬಿ ಎಡವಿದ್ದೆಲ್ಲಿ? ಡುಪ್ಲೆಸಿ ಪಡೆಯ ಸೋಲಿಗೆ ಕಾರಣ ಏನು?
ಸೋಲಿನ ಸುಳಿಯಿಂದ ಹೊರ ಬರುತ್ತೆ ಅನ್ನೋ ಅಭಿಮಾನಿಗಳ ನಿರೀಕ್ಷೆ ಮತ್ತೆ ಹುಸಿಯಾಗಿದೆ. ಕೊಲ್ಕತ್ತಾದ ಈಡನ್ ಗಾರ್ಡನ್ನಲ್ಲೂ ಮುಗ್ಗರಿಸಿರುವ ಆರ್ಸಿಬಿ ಸೋಲಿಗೆ ಶರಣಾಗಿದೆ. ರಣರೋಚಕ ಅಂತ್ಯ ಕಂಡ ಪಂದ್ಯ ಸೋಲು, ಆರ್ಸಿಬಿ ಪಾಲಿಗೆ ಪ್ಲೇ ಆಫ್ ಬಾಗಿಲನ್ನ ಬಹುತೇಕ ಮುಚ್ಚಿದೆ. ಆಫ್ಫೀಲ್ಡ್ನಲ್ಲಿ ಭರ್ಜರಿ ತಯಾರಿ ನಡೆಸಿ ಕಣಕ್ಕಿಳಿದ ಆರ್ಸಿಬಿ ಆನ್ಫೀಲ್ಡ್ನಲ್ಲಿ ಮತ್ತದೇ ತಪ್ಪುಗಳನ್ನ ರಿಪೀಟ್ ಮಾಡ್ತು. ಪ್ರಮುಖವಾಗಿ ಈ 5 ಕಾರಣಗಳು ಸತತ 6ನೇ ಸೋಲಿಗೆ ಗುರಿ ಮಾಡಿದ್ವು.
ಇದನ್ನೂ ಓದಿ:ಮಾಜಿ ಸಚಿವ ಜೆಸಿ ಮಾಧುಸ್ವಾಮಿ ಪ್ರಯಾಣಿಸುತ್ತಿದ್ದ ಕಾರು ಅಪಘಾತ
ಕಾರಣ ನಂ.1: ತ್ರಿಮೂರ್ತಿ ವೇಗಿಗಳ ಹೀನಾಯ ಪರ್ಫಾಮೆನ್ಸ್
ಈ ಸೀಸನ್ ಐಪಿಎಲ್ನಲ್ಲಿ ಆರ್ಸಿಬಿ ಬೌಲರ್ಸ್ ಟ್ರ್ಯಾಕ್ಗೆ ಬರೋ ಲಕ್ಷಣಗಳೇ ಕಾಣ್ತಿಲ್ಲ. ನಿನ್ನೆ ಈಡನ್ ಗಾರ್ಡನ್ನಲ್ಲೂ ವೇಗಿಗಳು ಹೀನಾಯ ಪ್ರದರ್ಶನ ನೀಡಿದ್ರು. ಲಾಕಿ ಫರ್ಗ್ಯೂಸನ್, ಯಶ್ ದಯಾಳ್, ಮೊಹಮ್ಮದ್ ಸಿರಾಜ್ ಸರಾಗವಾಗಿ ರನ್ ಬಿಟ್ಟುಕೊಟ್ರು. ಇವರ ವೈಫಲ್ಯದ ಲಾಭ ಪಡೆದ ಕೆಕೆಆರ್ ಮೇಲುಗೈ ಸಾಧಿಸಿತು.
ಕಾರಣ ನಂ.2: ಪವರ್ ಪ್ಲೇನಲ್ಲಿ ಪವರ್ಲೆಸ್ ಬೌಲಿಂಗ್
ಟಾಸ್ ಗೆದ್ದು ಮೊದಲು ಬೌಲಿಂಗ್ ಆಯ್ದುಕೊಂಡ ಕ್ಯಾಪ್ಟನ್ ನಿರ್ಧಾರವನ್ನ ಬೌಲರ್ಸ್ ಸಮರ್ಥಿಸಲೇ ಇಲ್ಲ. ಮೊದಲ 6 ಓವರ್ಗಳಲ್ಲೇ 3 ವಿಕೆಟ್ ಕಬಳಿಸಿದ್ರು ಅದ್ರ ಜೊತೆಗೆ ಸಿಕ್ಕಾಪಟ್ಟೆ ರನ್ ಲೀಕ್ ಮಾಡಿದ್ರು. ಕಳಪೆ ಬೌಲಿಂಗ್ನ ಅಡ್ವಾಂಟೇಜ್ ತೆಗೆದುಕೊಂಡ ಕೆಕೆಆರ್ 6 ಓವರ್ಗಳಲ್ಲೇ ಗಳಿಸಿದ್ದು, ಬರೋಬ್ಬರಿ 75 ರನ್.
ಇದನ್ನೂ ಓದಿ: ಕೆಲಸ ಹುಡುಕುತ್ತಿರೋ ಯುವಕರಿಗೆ ಗುಡ್ನ್ಯೂಸ್, Apple ಸಂಸ್ಥೆಯಿಂದ ಭರ್ಜರಿ ಪ್ಲಾನ್..!
ಕಾರಣ ನಂ.3: ಡೆತ್ ಓವರ್ಗಳಲ್ಲಿ ದಂಡನೆಗೆ ಒಳಗಾದ ಬೌಲರ್ಸ್
ಪವರ್ ಪ್ಲೇನಲ್ಲಿ ಫೇಲ್ ಆದ ಆರ್ಸಿಬಿ ಮಿಡಲ್ ಓವರ್ನಲ್ಲಿ ಉತ್ತಮ ಪ್ರದರ್ಶನ ನೀಡಿತ್ತು. ಡೆತ್ ಓವರ್ಗಳಲ್ಲಿ ಮತ್ತೆ ಬೌಲರ್ಸ್ ದಂಡನೆಗೆ ಒಳಗಾದ್ರು. 16ರಿಂದ 20ರವರೆಗಿನ ಅಂತಿಮ ಓವರ್ಗಳಲ್ಲಿ ಶ್ರೇಯಸ್ ಅಯ್ಯರ್, ರಮಣ್ ದೀಪ್ ಸಿಂಗ್, ಆ್ಯಂಡ್ರೆ ರಸೆಲ್ ರನ್ ಕೊಳ್ಳೆ ಹೊಡೆದ್ರು. 4 ಓವರ್ಗಳಲ್ಲೇ ಕೆಕೆಆರ್ ಬರೋಬ್ಬರಿ 73 ರನ್ಗಳಿಸಿತು. ಪರಿಣಾಮ ಆರ್ಸಿಬಿ ಮುಂದೆ ಬಂದಿದ್ದು 223 ರನ್ಗಳ ಸವಾಲಿನ ಟಾರ್ಗೆಟ್.
ಕಾರಣ ನಂ.4: ಕೆರಬಿಯನ್ನರ ಕಮಾಲ್, ಆರ್ಸಿಬಿ ಕಂಗಾಲ್!
ಆರಂಭದಲ್ಲಿ 2 ವಿಕೆಟ್ ಕಳೆದುಕೊಂಡರೂ ಒಂದು ಹಂತದಲ್ಲಿ ಆರ್ಸಿಬಿ ಸುಲಭಕ್ಕೆ ಗೆಲ್ಲುತ್ತೆ ಅನ್ನೋ ನಿರೀಕ್ಷೆ ಹುಟ್ಟಿತ್ತು. ವಿಲ್ ಜಾಕ್ಸ್, ರಜತ್ ಪಟಿದಾರ್ ಆ ಭರವಸೆಯನ್ನ ಹುಟ್ಟುಹಾಕಿದ್ರು. ಆರ್ಸಿಬಿಗೆ 12 ಹಾಗೂ 13ನೇ ಓವರ್ನಲ್ಲಿ ಕೆರಬಿಯನ್ ಬೌಲರ್ಸ್ ಶಾಕ್ ನೀಡಿದ್ರು. ಆ್ಯಂಡ್ರೆ ರಸೆಲ್ 12ನೇ ಓವರ್ನಲ್ಲಿ ವಿಲ್ ಜಾಕ್ಸ್, ರಜತ್ ಪಟಿದಾರ್ ವಿಕೆಟ್ ಕಬಳಿಸಿದ್ರು. ಬಳಿಕ ಸುನಿಲ್ ನರೇನ್, 13ನೇ ಓವರ್ನಲ್ಲಿ ಕ್ಯಾಮರೂನ್ ಗ್ರೀನ್, ಮಹಿಪಾಲ್ ಲೋಮ್ರೊರ್ ವಿಕೆಟ್ ಉರುಳಿಸಿದ್ರು. ಈ 4 ವಿಕೆಟ್ ಇಡೀ ಪಂದ್ಯದ ಚಿತ್ರಣವನ್ನೇ ಬದಲಿಸಿಬಿಡ್ತು.
ಇದನ್ನೂ ಓದಿ: ಇಸ್ರೇಲ್ನ ಭೀಕರ ಯುದ್ಧಕ್ಕೆ ಸಾವನ್ನಪ್ಪಿದ ತಾಯಿ, ಗರ್ಭದಲ್ಲಿದ್ದ ಮಗು ರಕ್ಷಣೆ ಆಗಿದ್ದೇ ದೊಡ್ಡ ಪವಾಡ..!
ಕಾರಣ ನಂ.5: ಚೇಸಿಂಗ್ ವೇಳೆ ಕೈ ಕೊಟ್ಟ ಸ್ಟಾರ್ ಬ್ಯಾಟರ್ಸ್
223 ರನ್ಗಳ ಬಿಗ್ ಟಾರ್ಗೆಟ್ ಬೆನ್ನತ್ತಿದ ಆರ್ಸಿಬಿಗೆ ಚೇಸಿಂಗ್ ವೇಳೆ ನಂಬಿಕಸ್ಥ ಬ್ಯಾಟರ್ ಕೈ ಕೊಟ್ರು. ವಿರಾಟ್ ಕೊಹ್ಲಿ, ಫಾಫ್ ಡುಪ್ಲೆಸಿ ಗುಡ್ ಸ್ಟಾರ್ಟ್ ಕೊಡುವಲ್ಲಿ ಫೇಲ್ ಆದ್ರು. ಕ್ಯಾಮರೂನ್ ಗ್ರೀನ್, ಸುಯಶ್ ಪ್ರಭುದೇಸಾಯಿ, ದಿನೇಶ್ ಕಾರ್ತಿಕ್ ಸಾಮರ್ಥ್ಯಕ್ಕೆ ತಕ್ಕ ಆಟವಾಡಲಿಲ್ಲ. ಈ 5 ಪ್ರಮುಖ ಕಾರಣಗಳು ಆರ್ಸಿಬಿಯನ್ನ ಸೋಲಿಗೆ ಗುರಿ ಮಾಡಿದ್ವು. ಇದ್ರ ಜೊತೆಗೆ ಆರ್ಸಿಬಿ ಪ್ಲೇ ಆಫ್ ಕನಸೂ ಬಹುತೇಕ ಭಗ್ನವಾಯ್ತು.
ಇದನ್ನೂ ಓದಿ: ಪಂದ್ಯ ಮುಗಿದ ಮೇಲೂ ಸುಮ್ಮನಾಗದ ಕೊಹ್ಲಿ, ವಿವಾದಾತ್ಮಕ ತೀರ್ಪಿನ ಬಗ್ಗೆ ಅಂಪೈರ್ ಜೊತೆ ಮತ್ತೆ ಟಾಕ್ ಫೈಟ್..!
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್
ಸತತ 6ನೇ ಸೋಲಿಗೆ ಗುರಿಯಾದ ಆರ್ಸಿಬಿ
ಗೆಲ್ಲಲೇಬೇಕಾಗಿದ್ದ ಪಂದ್ಯದಲ್ಲಿ ಆರ್ಸಿಬಿ ಎಡವಿದ್ದೆಲ್ಲಿ?
ಬೌಲರ್ಸ್ ಟ್ರ್ಯಾಕ್ಗೆ ಬರೋ ಲಕ್ಷಣಾನೇ ಇಲ್ಲ ಗುರು..!
ಗೆಲ್ಲಲೇಬೇಕಾಗಿದ್ದ ಪಂದ್ಯದಲ್ಲಿ ಆರ್ಸಿಬಿ ಮುಗ್ಗರಿಸಿದೆ. ವಿರೋಚಿತ ಸೋಲುಂಡರೂ ಆರ್ಸಿಬಿಯ ಪ್ಲೇ ಆಫ್ನ ಪ್ರವೇಶದ ಹಾದಿ ದುರ್ಗಮವಾಗಿದೆ. ಮಸ್ಟ್ ವಿನ್ ಗೇಮ್ನಲ್ಲಿ ಆರ್ಸಿಬಿ ಎಡವಿದ್ದೆಲ್ಲಿ? ಡುಪ್ಲೆಸಿ ಪಡೆಯ ಸೋಲಿಗೆ ಕಾರಣ ಏನು?
ಸೋಲಿನ ಸುಳಿಯಿಂದ ಹೊರ ಬರುತ್ತೆ ಅನ್ನೋ ಅಭಿಮಾನಿಗಳ ನಿರೀಕ್ಷೆ ಮತ್ತೆ ಹುಸಿಯಾಗಿದೆ. ಕೊಲ್ಕತ್ತಾದ ಈಡನ್ ಗಾರ್ಡನ್ನಲ್ಲೂ ಮುಗ್ಗರಿಸಿರುವ ಆರ್ಸಿಬಿ ಸೋಲಿಗೆ ಶರಣಾಗಿದೆ. ರಣರೋಚಕ ಅಂತ್ಯ ಕಂಡ ಪಂದ್ಯ ಸೋಲು, ಆರ್ಸಿಬಿ ಪಾಲಿಗೆ ಪ್ಲೇ ಆಫ್ ಬಾಗಿಲನ್ನ ಬಹುತೇಕ ಮುಚ್ಚಿದೆ. ಆಫ್ಫೀಲ್ಡ್ನಲ್ಲಿ ಭರ್ಜರಿ ತಯಾರಿ ನಡೆಸಿ ಕಣಕ್ಕಿಳಿದ ಆರ್ಸಿಬಿ ಆನ್ಫೀಲ್ಡ್ನಲ್ಲಿ ಮತ್ತದೇ ತಪ್ಪುಗಳನ್ನ ರಿಪೀಟ್ ಮಾಡ್ತು. ಪ್ರಮುಖವಾಗಿ ಈ 5 ಕಾರಣಗಳು ಸತತ 6ನೇ ಸೋಲಿಗೆ ಗುರಿ ಮಾಡಿದ್ವು.
ಇದನ್ನೂ ಓದಿ:ಮಾಜಿ ಸಚಿವ ಜೆಸಿ ಮಾಧುಸ್ವಾಮಿ ಪ್ರಯಾಣಿಸುತ್ತಿದ್ದ ಕಾರು ಅಪಘಾತ
ಕಾರಣ ನಂ.1: ತ್ರಿಮೂರ್ತಿ ವೇಗಿಗಳ ಹೀನಾಯ ಪರ್ಫಾಮೆನ್ಸ್
ಈ ಸೀಸನ್ ಐಪಿಎಲ್ನಲ್ಲಿ ಆರ್ಸಿಬಿ ಬೌಲರ್ಸ್ ಟ್ರ್ಯಾಕ್ಗೆ ಬರೋ ಲಕ್ಷಣಗಳೇ ಕಾಣ್ತಿಲ್ಲ. ನಿನ್ನೆ ಈಡನ್ ಗಾರ್ಡನ್ನಲ್ಲೂ ವೇಗಿಗಳು ಹೀನಾಯ ಪ್ರದರ್ಶನ ನೀಡಿದ್ರು. ಲಾಕಿ ಫರ್ಗ್ಯೂಸನ್, ಯಶ್ ದಯಾಳ್, ಮೊಹಮ್ಮದ್ ಸಿರಾಜ್ ಸರಾಗವಾಗಿ ರನ್ ಬಿಟ್ಟುಕೊಟ್ರು. ಇವರ ವೈಫಲ್ಯದ ಲಾಭ ಪಡೆದ ಕೆಕೆಆರ್ ಮೇಲುಗೈ ಸಾಧಿಸಿತು.
ಕಾರಣ ನಂ.2: ಪವರ್ ಪ್ಲೇನಲ್ಲಿ ಪವರ್ಲೆಸ್ ಬೌಲಿಂಗ್
ಟಾಸ್ ಗೆದ್ದು ಮೊದಲು ಬೌಲಿಂಗ್ ಆಯ್ದುಕೊಂಡ ಕ್ಯಾಪ್ಟನ್ ನಿರ್ಧಾರವನ್ನ ಬೌಲರ್ಸ್ ಸಮರ್ಥಿಸಲೇ ಇಲ್ಲ. ಮೊದಲ 6 ಓವರ್ಗಳಲ್ಲೇ 3 ವಿಕೆಟ್ ಕಬಳಿಸಿದ್ರು ಅದ್ರ ಜೊತೆಗೆ ಸಿಕ್ಕಾಪಟ್ಟೆ ರನ್ ಲೀಕ್ ಮಾಡಿದ್ರು. ಕಳಪೆ ಬೌಲಿಂಗ್ನ ಅಡ್ವಾಂಟೇಜ್ ತೆಗೆದುಕೊಂಡ ಕೆಕೆಆರ್ 6 ಓವರ್ಗಳಲ್ಲೇ ಗಳಿಸಿದ್ದು, ಬರೋಬ್ಬರಿ 75 ರನ್.
ಇದನ್ನೂ ಓದಿ: ಕೆಲಸ ಹುಡುಕುತ್ತಿರೋ ಯುವಕರಿಗೆ ಗುಡ್ನ್ಯೂಸ್, Apple ಸಂಸ್ಥೆಯಿಂದ ಭರ್ಜರಿ ಪ್ಲಾನ್..!
ಕಾರಣ ನಂ.3: ಡೆತ್ ಓವರ್ಗಳಲ್ಲಿ ದಂಡನೆಗೆ ಒಳಗಾದ ಬೌಲರ್ಸ್
ಪವರ್ ಪ್ಲೇನಲ್ಲಿ ಫೇಲ್ ಆದ ಆರ್ಸಿಬಿ ಮಿಡಲ್ ಓವರ್ನಲ್ಲಿ ಉತ್ತಮ ಪ್ರದರ್ಶನ ನೀಡಿತ್ತು. ಡೆತ್ ಓವರ್ಗಳಲ್ಲಿ ಮತ್ತೆ ಬೌಲರ್ಸ್ ದಂಡನೆಗೆ ಒಳಗಾದ್ರು. 16ರಿಂದ 20ರವರೆಗಿನ ಅಂತಿಮ ಓವರ್ಗಳಲ್ಲಿ ಶ್ರೇಯಸ್ ಅಯ್ಯರ್, ರಮಣ್ ದೀಪ್ ಸಿಂಗ್, ಆ್ಯಂಡ್ರೆ ರಸೆಲ್ ರನ್ ಕೊಳ್ಳೆ ಹೊಡೆದ್ರು. 4 ಓವರ್ಗಳಲ್ಲೇ ಕೆಕೆಆರ್ ಬರೋಬ್ಬರಿ 73 ರನ್ಗಳಿಸಿತು. ಪರಿಣಾಮ ಆರ್ಸಿಬಿ ಮುಂದೆ ಬಂದಿದ್ದು 223 ರನ್ಗಳ ಸವಾಲಿನ ಟಾರ್ಗೆಟ್.
ಕಾರಣ ನಂ.4: ಕೆರಬಿಯನ್ನರ ಕಮಾಲ್, ಆರ್ಸಿಬಿ ಕಂಗಾಲ್!
ಆರಂಭದಲ್ಲಿ 2 ವಿಕೆಟ್ ಕಳೆದುಕೊಂಡರೂ ಒಂದು ಹಂತದಲ್ಲಿ ಆರ್ಸಿಬಿ ಸುಲಭಕ್ಕೆ ಗೆಲ್ಲುತ್ತೆ ಅನ್ನೋ ನಿರೀಕ್ಷೆ ಹುಟ್ಟಿತ್ತು. ವಿಲ್ ಜಾಕ್ಸ್, ರಜತ್ ಪಟಿದಾರ್ ಆ ಭರವಸೆಯನ್ನ ಹುಟ್ಟುಹಾಕಿದ್ರು. ಆರ್ಸಿಬಿಗೆ 12 ಹಾಗೂ 13ನೇ ಓವರ್ನಲ್ಲಿ ಕೆರಬಿಯನ್ ಬೌಲರ್ಸ್ ಶಾಕ್ ನೀಡಿದ್ರು. ಆ್ಯಂಡ್ರೆ ರಸೆಲ್ 12ನೇ ಓವರ್ನಲ್ಲಿ ವಿಲ್ ಜಾಕ್ಸ್, ರಜತ್ ಪಟಿದಾರ್ ವಿಕೆಟ್ ಕಬಳಿಸಿದ್ರು. ಬಳಿಕ ಸುನಿಲ್ ನರೇನ್, 13ನೇ ಓವರ್ನಲ್ಲಿ ಕ್ಯಾಮರೂನ್ ಗ್ರೀನ್, ಮಹಿಪಾಲ್ ಲೋಮ್ರೊರ್ ವಿಕೆಟ್ ಉರುಳಿಸಿದ್ರು. ಈ 4 ವಿಕೆಟ್ ಇಡೀ ಪಂದ್ಯದ ಚಿತ್ರಣವನ್ನೇ ಬದಲಿಸಿಬಿಡ್ತು.
ಇದನ್ನೂ ಓದಿ: ಇಸ್ರೇಲ್ನ ಭೀಕರ ಯುದ್ಧಕ್ಕೆ ಸಾವನ್ನಪ್ಪಿದ ತಾಯಿ, ಗರ್ಭದಲ್ಲಿದ್ದ ಮಗು ರಕ್ಷಣೆ ಆಗಿದ್ದೇ ದೊಡ್ಡ ಪವಾಡ..!
ಕಾರಣ ನಂ.5: ಚೇಸಿಂಗ್ ವೇಳೆ ಕೈ ಕೊಟ್ಟ ಸ್ಟಾರ್ ಬ್ಯಾಟರ್ಸ್
223 ರನ್ಗಳ ಬಿಗ್ ಟಾರ್ಗೆಟ್ ಬೆನ್ನತ್ತಿದ ಆರ್ಸಿಬಿಗೆ ಚೇಸಿಂಗ್ ವೇಳೆ ನಂಬಿಕಸ್ಥ ಬ್ಯಾಟರ್ ಕೈ ಕೊಟ್ರು. ವಿರಾಟ್ ಕೊಹ್ಲಿ, ಫಾಫ್ ಡುಪ್ಲೆಸಿ ಗುಡ್ ಸ್ಟಾರ್ಟ್ ಕೊಡುವಲ್ಲಿ ಫೇಲ್ ಆದ್ರು. ಕ್ಯಾಮರೂನ್ ಗ್ರೀನ್, ಸುಯಶ್ ಪ್ರಭುದೇಸಾಯಿ, ದಿನೇಶ್ ಕಾರ್ತಿಕ್ ಸಾಮರ್ಥ್ಯಕ್ಕೆ ತಕ್ಕ ಆಟವಾಡಲಿಲ್ಲ. ಈ 5 ಪ್ರಮುಖ ಕಾರಣಗಳು ಆರ್ಸಿಬಿಯನ್ನ ಸೋಲಿಗೆ ಗುರಿ ಮಾಡಿದ್ವು. ಇದ್ರ ಜೊತೆಗೆ ಆರ್ಸಿಬಿ ಪ್ಲೇ ಆಫ್ ಕನಸೂ ಬಹುತೇಕ ಭಗ್ನವಾಯ್ತು.
ಇದನ್ನೂ ಓದಿ: ಪಂದ್ಯ ಮುಗಿದ ಮೇಲೂ ಸುಮ್ಮನಾಗದ ಕೊಹ್ಲಿ, ವಿವಾದಾತ್ಮಕ ತೀರ್ಪಿನ ಬಗ್ಗೆ ಅಂಪೈರ್ ಜೊತೆ ಮತ್ತೆ ಟಾಕ್ ಫೈಟ್..!
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್