ನನ್ನ ಮಗನನ್ನು ನೀನು ಕೊಂದಿದ್ದು ಯಾಕೆ ಎಂದು ಪ್ರಶ್ನಿಸಿದ ಗಂಡ
ನಾನು ಮಗುವನ್ನು ಕೊಂದಿಲ್ಲ ಎಂದು ಕೂಗಾಡಿದ ಸುಚನಾ ಸೇಠ್
ಕಲಗುಂಟ್ ಪೊಲೀಸ್ ಸ್ಟೇಷನ್ನಲ್ಲಿ ಗಂಡ-ಹೆಂಡತಿಯ ಜಗಳ
ನಾಲ್ಕು ವರ್ಷದ ಮಗನನ್ನು ಅಮಾನುಷವಾಗಿ ಕೊಂದು ಸಾಗಿಸಿದ ಆರೋಪದಲ್ಲಿ ಬೆಂಗಳೂರು ಮೂಲದ ಸ್ಟಾರ್ಟ್ ಅಪ್ CEO ಸುಚನಾ ಸೇಠ್ ವಿಚಾರಣೆ ಮುಂದುವರಿದಿದೆ. ಇಂದು ಸುಚನಾ ಸೇಠ್ ಅವರ ಕಸ್ಟಡಿಯ ಅವಧಿ ಅಂತ್ಯವಾಗುತ್ತಿದ್ದು, ಗೋವಾ ಪೊಲೀಸರು ಆರೋಪಿಯನ್ನ ಖುದ್ದು ಕೋರ್ಟ್ಗೆ ಹಾಜರುಪಡಿಸುತ್ತಿದ್ದಾರೆ. ಇಂದು ವಿಚಾರಣೆ ನಡೆಸಲಿರುವ ಕೋರ್ಟ್, ಸುಚನಾ ಸೇಠ್ ಅವರಿಗೆ ಪೊಲೀಸ್ ಕಸ್ಟಡಿ ವಿಸ್ತರಿಸಬಹುದು. ಇಲ್ಲವೇ ನ್ಯಾಯಾಂಗ ಬಂಧನಕ್ಕೆ ಆದೇಶಿಸುವ ಸಾಧ್ಯತೆ ಇದೆ.
ಮಗ ಚಿನ್ಮಯ್ ಸೇಠ್ ಅವರನ್ನು ಹತ್ಯೆ ಮಾಡಿದ್ದ ಆರೋಪಿ ಸುಚನಾ ಸೇಠ್ ಸದ್ಯ ಗೋವಾದ ಕಲಗುಂಟ್ ಪೊಲೀಸರ ವಶದಲ್ಲಿದ್ದಾರೆ. ಈ ಪ್ರಕರಣದ ವಿಚಾರಣೆ ವೇಳೆ ಪೊಲೀಸ್ ಸ್ಟೇಷನ್ನಲ್ಲೇ ಸುಚನಾ ಸೇಠ್ ಹಾಗೂ ಮಾಜಿ ಪತಿ ವೆಂಕಟರಾಮನ್ ನಡುವೆ ಭಾರೀ ಜಗಳ ನಡೆದಿದೆ.
ಇದನ್ನೂ ಓದಿ: ಬರೋಬ್ಬರಿ 30 ಸಾವಿರ ರೂ.ಗೆ ಟ್ಯಾಕ್ಸಿ ಬುಕ್ಕಿಂಗ್; ಸುಚನಾ ಸೇಠ್ ಕೇಸ್ ಕೆದಕಿದಷ್ಟು ಭಯಾನಕ
ಪತಿ ವೆಂಕಟರಾಮನ್ ಅವರು ನನ್ನ ಮಗನನ್ನು ನೀನು ಕೊಂದಿದ್ದು ಯಾಕೆ ಎಂದು ಪ್ರಶ್ನಿಸಿದ್ದಾರೆ. ಇದಕ್ಕೆ ಜೋರಾಗಿ ಕೂಗಾಡಿದ ಸುಚನಾ ಸೇಠ್ ಅವರು ನಾನು ಮಗುವನ್ನು ಕೊಂದಿಲ್ಲ. ನಾನು ಪೊಲೀಸ್ ಕಸ್ಟಡಿಯಲ್ಲಿದ್ದೇನೆ. ನೀನು ಆರಾಮಾಗಿ ಹೊರಗೆ ಓಡಾಡಿಕೊಂಡಿದ್ದೀಯಾ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹೀಗೆ ತೀವ್ರ ವಾಗ್ವಾದಕ್ಕೆ ಇಳಿದ ಸುಚನಾ ಸೇಠ್ ಅವರು ನನ್ನ ಈ ಪರಿಸ್ಥಿತಿಗೆ ಗಂಡ ವೆಂಕಟರಾಮನ್ ಅವರೇ ಕಾರಣ ಎಂದಿದ್ದಾರೆ. ಪತಿ ವೆಂಕಟರಾಮನ್ ಅವರು ಕಲಗುಂಟ್ ಪೊಲೀಸ್ ಸ್ಟೇಷನ್ನಲ್ಲಿ ತಮ್ಮ ಹೇಳಿಕೆಗಳನ್ನು ದಾಖಲಿಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ನನ್ನ ಮಗನನ್ನು ನೀನು ಕೊಂದಿದ್ದು ಯಾಕೆ ಎಂದು ಪ್ರಶ್ನಿಸಿದ ಗಂಡ
ನಾನು ಮಗುವನ್ನು ಕೊಂದಿಲ್ಲ ಎಂದು ಕೂಗಾಡಿದ ಸುಚನಾ ಸೇಠ್
ಕಲಗುಂಟ್ ಪೊಲೀಸ್ ಸ್ಟೇಷನ್ನಲ್ಲಿ ಗಂಡ-ಹೆಂಡತಿಯ ಜಗಳ
ನಾಲ್ಕು ವರ್ಷದ ಮಗನನ್ನು ಅಮಾನುಷವಾಗಿ ಕೊಂದು ಸಾಗಿಸಿದ ಆರೋಪದಲ್ಲಿ ಬೆಂಗಳೂರು ಮೂಲದ ಸ್ಟಾರ್ಟ್ ಅಪ್ CEO ಸುಚನಾ ಸೇಠ್ ವಿಚಾರಣೆ ಮುಂದುವರಿದಿದೆ. ಇಂದು ಸುಚನಾ ಸೇಠ್ ಅವರ ಕಸ್ಟಡಿಯ ಅವಧಿ ಅಂತ್ಯವಾಗುತ್ತಿದ್ದು, ಗೋವಾ ಪೊಲೀಸರು ಆರೋಪಿಯನ್ನ ಖುದ್ದು ಕೋರ್ಟ್ಗೆ ಹಾಜರುಪಡಿಸುತ್ತಿದ್ದಾರೆ. ಇಂದು ವಿಚಾರಣೆ ನಡೆಸಲಿರುವ ಕೋರ್ಟ್, ಸುಚನಾ ಸೇಠ್ ಅವರಿಗೆ ಪೊಲೀಸ್ ಕಸ್ಟಡಿ ವಿಸ್ತರಿಸಬಹುದು. ಇಲ್ಲವೇ ನ್ಯಾಯಾಂಗ ಬಂಧನಕ್ಕೆ ಆದೇಶಿಸುವ ಸಾಧ್ಯತೆ ಇದೆ.
ಮಗ ಚಿನ್ಮಯ್ ಸೇಠ್ ಅವರನ್ನು ಹತ್ಯೆ ಮಾಡಿದ್ದ ಆರೋಪಿ ಸುಚನಾ ಸೇಠ್ ಸದ್ಯ ಗೋವಾದ ಕಲಗುಂಟ್ ಪೊಲೀಸರ ವಶದಲ್ಲಿದ್ದಾರೆ. ಈ ಪ್ರಕರಣದ ವಿಚಾರಣೆ ವೇಳೆ ಪೊಲೀಸ್ ಸ್ಟೇಷನ್ನಲ್ಲೇ ಸುಚನಾ ಸೇಠ್ ಹಾಗೂ ಮಾಜಿ ಪತಿ ವೆಂಕಟರಾಮನ್ ನಡುವೆ ಭಾರೀ ಜಗಳ ನಡೆದಿದೆ.
ಇದನ್ನೂ ಓದಿ: ಬರೋಬ್ಬರಿ 30 ಸಾವಿರ ರೂ.ಗೆ ಟ್ಯಾಕ್ಸಿ ಬುಕ್ಕಿಂಗ್; ಸುಚನಾ ಸೇಠ್ ಕೇಸ್ ಕೆದಕಿದಷ್ಟು ಭಯಾನಕ
ಪತಿ ವೆಂಕಟರಾಮನ್ ಅವರು ನನ್ನ ಮಗನನ್ನು ನೀನು ಕೊಂದಿದ್ದು ಯಾಕೆ ಎಂದು ಪ್ರಶ್ನಿಸಿದ್ದಾರೆ. ಇದಕ್ಕೆ ಜೋರಾಗಿ ಕೂಗಾಡಿದ ಸುಚನಾ ಸೇಠ್ ಅವರು ನಾನು ಮಗುವನ್ನು ಕೊಂದಿಲ್ಲ. ನಾನು ಪೊಲೀಸ್ ಕಸ್ಟಡಿಯಲ್ಲಿದ್ದೇನೆ. ನೀನು ಆರಾಮಾಗಿ ಹೊರಗೆ ಓಡಾಡಿಕೊಂಡಿದ್ದೀಯಾ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹೀಗೆ ತೀವ್ರ ವಾಗ್ವಾದಕ್ಕೆ ಇಳಿದ ಸುಚನಾ ಸೇಠ್ ಅವರು ನನ್ನ ಈ ಪರಿಸ್ಥಿತಿಗೆ ಗಂಡ ವೆಂಕಟರಾಮನ್ ಅವರೇ ಕಾರಣ ಎಂದಿದ್ದಾರೆ. ಪತಿ ವೆಂಕಟರಾಮನ್ ಅವರು ಕಲಗುಂಟ್ ಪೊಲೀಸ್ ಸ್ಟೇಷನ್ನಲ್ಲಿ ತಮ್ಮ ಹೇಳಿಕೆಗಳನ್ನು ದಾಖಲಿಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ