ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ ಕೇಸ್ನಲ್ಲಿ ಮುಂದುವರಿದ ವಿಚಾರಣೆ
ಶಿವಮೊಗ್ಗ ಟ್ರಯಲ್ ಬ್ಲಾಸ್ಟ್ ಪ್ರಕರಣದ ಪ್ರಮುಖ ಆರೋಪಿ NIA ವಶಕ್ಕೆ
7 ದಿನಗಳ ಕಾಲ ಎನ್ಐಎ ಅಧಿಕಾರಿಗಳ ಕಸ್ಟಡಿಗೆ ಮಾಜ್ ಮುನೀರ್
ಬೆಂಗಳೂರು: ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದ್ದಂತೆ ಓರ್ವ ಶಂಕಿತನನ್ನು ಎನ್ಐಎ ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ. ಬಾಡಿ ವಾರೆಂಟ್ ಆಧಾರದ ಮೇಲೆ ಮಾಜ್ ಮುನೀರ್ನನ್ನು ಎನ್ಐಎ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ.
ಇದನ್ನು ಓದಿ: ರಾಮೇಶ್ವರಂ ಕೆಫೆಗೆ ಬಂದು ‘ಟೈಮರ್’ ಇಟ್ಟ ಟೋಪಿವಾಲಾ.. ಸಿಸಿಟಿವಿಯ ಮತ್ತಷ್ಟು ಸ್ಫೋಟಕ ದೃಶ್ಯ ಬಯಲು
ಈ ಮಾಜ್ ಮುನೀರ್ ಶಿವಮೊಗ್ಗ ಟ್ರಯಲ್ ಬ್ಲಾಸ್ಟ್ ಕೇಸ್ನಲ್ಲಿ ಪ್ರಮುಖ ಬಂಧಿತ ಆರೋಪಿಯಾಗಿದ್ದ. ಟ್ರಯಲ್ ಬ್ಲಾಸ್ಟ್ ಕೇಸ್ ಸಂಬಂಧ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದ. ಸದ್ಯ ಎನ್ಐಎ ಅಧಿಕಾರಿಗಳು ಬಾಡಿ ವಾರೆಂಟ್ ಆಧಾರದ ಮೇಲೆ ಇತನ್ನನು 7 ದಿನಗಳ ಕಾಲ ಎನ್ಐಎ ಕಸ್ಟಡಿಗೆ ಪಡೆದುಕೊಂಡಿದ್ದಾರೆ. ಮಾಜ್ ಮುನೀರ್ ಶಿವಮೊಗ್ಗದ ತೀರ್ಥಹಳ್ಳಿ ನಿವಾಸಿ. ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್ಐಎ ಅಧಿಕಾರಿಗಳು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಏನಿದು ದಿ ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ?
ಕಳೆದ ಮಾರ್ಚ್ 1ರಂದು ಕುಂದಲಹಳ್ಳಿಯ ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಬ್ಲಾಸ್ಟ್ ಆಗಿತ್ತು. ಸ್ಫೋಟದಲ್ಲಿ ಭಾಗಿಯಾಗಿದ್ದ ಆರೋಪಿ ಬೆಳಗ್ಗೆ 10.43ಕ್ಕೆ ಬಿಎಂಟಿಸಿ ಬಸ್ನಿಂದ ಇಳಿದಿದ್ದ. ಬಸ್ನಿಂದ ಇಳಿಯುತ್ತಿದ್ದಂತೆ ತಾನು ತಂದಿದ್ದ ಬ್ಯಾಗ್ನಲ್ಲಿದ್ದ ಬಾಂಬ್ಗೆ ಟೈಮರ್ ಫಿಕ್ಸ್ ಮಾಡಿದ್ದ. ಬಳಿಕ 11.34ಕ್ಕೆ ರಾಮೇಶ್ವರಂ ಕೆಫೆಯೊಳಗೆ ಶಂಕಿತ ಎಂಟ್ರಿ ಕೊಟ್ಟಿದ್ದ. ಇನ್ನೂ ಶಂಕಿತನು ಕೆಫೆಯೊಳಗೆ ಹೋಗುತ್ತಿದ್ದಾಗ ಕೈಯಲ್ಲಿ ಗ್ಲೌಸ್ ಧರಿಸಿಕೊಂಡು ಬಂದಿದ್ದ. ಬಳಿಕ 11.43ಕ್ಕೆ ಕೆಫೆಯಿಂದ ಹೊರಗಡೆ ಹೋಗಿದ್ದ. ಜಸ್ಟ್ 10 ನಿಮಿಷದಲ್ಲಿ ಆರೋಪಿಯೂ ರವೆ ಇಡ್ಲಿ ತಿಂದು ಕೆಫೆಯಿಂದ ಎಸ್ಕೇಪ್ ಆಗಿದ್ದ. ಶಂಕಿತನು ಕೆಫೆಯಿಂದ ಎಸ್ಕೇಪ್ ಆದ ಬಳಿಕ 12 ಗಂಟೆ 55 ನಿಮಿಷಯಕ್ಕೆ ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಫೋಟಗೊಂಡಿತ್ತು. ಈ ಬಾಂಬ್ ಸ್ಫೋಟದಿಂದ 9 ಜನ ಗಾಯಗೊಂಡಿದ್ದರು. ಸದ್ಯ ಈ ಕೇಸ್ ಸಂಬಂಧ ಬಾಡಿ ವಾರೆಂಟ್ ಆಧಾರದ ಮೇಲೆ ಮಾಜ್ ಮುನೀರ್ನನ್ನು ಎನ್ಐಎ ಅಧಿಕಾರಿಗಳು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ ಕೇಸ್ನಲ್ಲಿ ಮುಂದುವರಿದ ವಿಚಾರಣೆ
ಶಿವಮೊಗ್ಗ ಟ್ರಯಲ್ ಬ್ಲಾಸ್ಟ್ ಪ್ರಕರಣದ ಪ್ರಮುಖ ಆರೋಪಿ NIA ವಶಕ್ಕೆ
7 ದಿನಗಳ ಕಾಲ ಎನ್ಐಎ ಅಧಿಕಾರಿಗಳ ಕಸ್ಟಡಿಗೆ ಮಾಜ್ ಮುನೀರ್
ಬೆಂಗಳೂರು: ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದ್ದಂತೆ ಓರ್ವ ಶಂಕಿತನನ್ನು ಎನ್ಐಎ ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ. ಬಾಡಿ ವಾರೆಂಟ್ ಆಧಾರದ ಮೇಲೆ ಮಾಜ್ ಮುನೀರ್ನನ್ನು ಎನ್ಐಎ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ.
ಇದನ್ನು ಓದಿ: ರಾಮೇಶ್ವರಂ ಕೆಫೆಗೆ ಬಂದು ‘ಟೈಮರ್’ ಇಟ್ಟ ಟೋಪಿವಾಲಾ.. ಸಿಸಿಟಿವಿಯ ಮತ್ತಷ್ಟು ಸ್ಫೋಟಕ ದೃಶ್ಯ ಬಯಲು
ಈ ಮಾಜ್ ಮುನೀರ್ ಶಿವಮೊಗ್ಗ ಟ್ರಯಲ್ ಬ್ಲಾಸ್ಟ್ ಕೇಸ್ನಲ್ಲಿ ಪ್ರಮುಖ ಬಂಧಿತ ಆರೋಪಿಯಾಗಿದ್ದ. ಟ್ರಯಲ್ ಬ್ಲಾಸ್ಟ್ ಕೇಸ್ ಸಂಬಂಧ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದ. ಸದ್ಯ ಎನ್ಐಎ ಅಧಿಕಾರಿಗಳು ಬಾಡಿ ವಾರೆಂಟ್ ಆಧಾರದ ಮೇಲೆ ಇತನ್ನನು 7 ದಿನಗಳ ಕಾಲ ಎನ್ಐಎ ಕಸ್ಟಡಿಗೆ ಪಡೆದುಕೊಂಡಿದ್ದಾರೆ. ಮಾಜ್ ಮುನೀರ್ ಶಿವಮೊಗ್ಗದ ತೀರ್ಥಹಳ್ಳಿ ನಿವಾಸಿ. ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್ಐಎ ಅಧಿಕಾರಿಗಳು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಏನಿದು ದಿ ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ?
ಕಳೆದ ಮಾರ್ಚ್ 1ರಂದು ಕುಂದಲಹಳ್ಳಿಯ ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಬ್ಲಾಸ್ಟ್ ಆಗಿತ್ತು. ಸ್ಫೋಟದಲ್ಲಿ ಭಾಗಿಯಾಗಿದ್ದ ಆರೋಪಿ ಬೆಳಗ್ಗೆ 10.43ಕ್ಕೆ ಬಿಎಂಟಿಸಿ ಬಸ್ನಿಂದ ಇಳಿದಿದ್ದ. ಬಸ್ನಿಂದ ಇಳಿಯುತ್ತಿದ್ದಂತೆ ತಾನು ತಂದಿದ್ದ ಬ್ಯಾಗ್ನಲ್ಲಿದ್ದ ಬಾಂಬ್ಗೆ ಟೈಮರ್ ಫಿಕ್ಸ್ ಮಾಡಿದ್ದ. ಬಳಿಕ 11.34ಕ್ಕೆ ರಾಮೇಶ್ವರಂ ಕೆಫೆಯೊಳಗೆ ಶಂಕಿತ ಎಂಟ್ರಿ ಕೊಟ್ಟಿದ್ದ. ಇನ್ನೂ ಶಂಕಿತನು ಕೆಫೆಯೊಳಗೆ ಹೋಗುತ್ತಿದ್ದಾಗ ಕೈಯಲ್ಲಿ ಗ್ಲೌಸ್ ಧರಿಸಿಕೊಂಡು ಬಂದಿದ್ದ. ಬಳಿಕ 11.43ಕ್ಕೆ ಕೆಫೆಯಿಂದ ಹೊರಗಡೆ ಹೋಗಿದ್ದ. ಜಸ್ಟ್ 10 ನಿಮಿಷದಲ್ಲಿ ಆರೋಪಿಯೂ ರವೆ ಇಡ್ಲಿ ತಿಂದು ಕೆಫೆಯಿಂದ ಎಸ್ಕೇಪ್ ಆಗಿದ್ದ. ಶಂಕಿತನು ಕೆಫೆಯಿಂದ ಎಸ್ಕೇಪ್ ಆದ ಬಳಿಕ 12 ಗಂಟೆ 55 ನಿಮಿಷಯಕ್ಕೆ ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಫೋಟಗೊಂಡಿತ್ತು. ಈ ಬಾಂಬ್ ಸ್ಫೋಟದಿಂದ 9 ಜನ ಗಾಯಗೊಂಡಿದ್ದರು. ಸದ್ಯ ಈ ಕೇಸ್ ಸಂಬಂಧ ಬಾಡಿ ವಾರೆಂಟ್ ಆಧಾರದ ಮೇಲೆ ಮಾಜ್ ಮುನೀರ್ನನ್ನು ಎನ್ಐಎ ಅಧಿಕಾರಿಗಳು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ