ಮನೆ ಮಾಲೀಕರು ಓದಲೇಕಾದ ಸ್ಟೋರಿ ಇದು
ಹೋಮ್ ಲೋನ್ ಪಡೆಯೋ ಮುನ್ನ ಹುಷಾರ್
ಮನೆಗೆ ನುಗ್ಗಿ ದಾಂಧಲೆ ಮಾಡ್ತಾರೆ ಬ್ಯಾಂಕ್ ಸಿಬ್ಬಂದಿ
ಬೆಂಗಳೂರು: ಮನೆ ವಸ್ತುಗಳೆಲ್ಲಾ ಬೀದಿಗೆ ಬಿದ್ದಿವೆ. ಗೇಟ್ಗೆ ಬೀಗ ಹಾಕಿ ಸೀಜ್ ಮಾಡಲಾಗಿದೆ. ಅಲ್ಲೊಬ್ರು ಅಯ್ಯೋ ನಮ್ಮ ಮಗ ಒಳಗೇ ಇದ್ದಾನೆ ಅಂತ ಆತಂಕದಲ್ಲಿದ್ದಾರೆ. ಇಲ್ಲೊಬ್ರು ಎದೆ ಹಿಡ್ಕೊಂಡು ಕೆಳಗೆ ಬಿದ್ದು ಒದ್ದಾಡ್ತಿದ್ದಾರೆ. ಇದು ನಡೆದಿದ್ದು ಮತ್ತೆಲ್ಲೂ ಅಲ್ಲ, ಬದಲಿಗೆ ಬೆಂಗಳೂರಿನಲ್ಲೇ!
ಕೆಂಗೇರಿ ಉಪನಗರದಲ್ಲಿರೋ ಈ ಮೂರಂತಸ್ತಿನ ಮನೆ ನಿರ್ಮಿಸೋಕೆ ಮಾಲೀಕ ತುಮಕೂರಿನ ವೀರಶೈವ ಕೋ ಆಪರೇಟಿವ್ ಬ್ಯಾಂಕ್ನಲ್ಲಿ 2 ಕೋಟಿ ಲೋನ್ ಮಾಡಿದ್ದ. ಆದ್ರೆ ತೀರಿಸಲಾಗದೆ ತಪ್ಪಿಸಿಕೊಂಡು ಓಡಾಡ್ತಿದ್ರ ಅನ್ನೋ ವಿಚಾರ ಕೋರ್ಟ್ನಲ್ಲಿ ಕೇಸ್ ಆಗಿತ್ತು. ಆದ್ರೆ ಈ ಕೇಸ್ ಡಿಸ್ಮಿಸ್ ಮಾಡಿದ್ರೂ ಬ್ಯಾಂಕ್ ಸಿಬ್ಬಂದಿ ದರ್ಪ ತೋರಿರೋ ಆರೋಪ ಕೇಳಿ ಬರ್ತಿದೆ.
ಬ್ಯಾಂಕ್ ಸಿಬ್ಬಂದಿ ಮನೆ ಮಾಲೀಕರ ವಸ್ತುಗಳನ್ನ ಮನೆಯಿಂದ ಹೊರಗೆ ಹಾಕಿದ್ದು, ಬಾಡಿಗೆದಾರರ ವಸ್ತುಗಳನ್ನ ಒಳಗೇ ಬಿಟ್ಟು ಬೀಗ ಹಾಕಿದ್ದಾರೆ. ಇಲ್ಲೂ ಒಂದು ಎಡವಟ್ಟು ಮಾಡಿದ್ದು, ಬಾಡಿಗೆದಾರನೊಬ್ಬ ಮನೆಯೊಳಗೇ ಸಿಲುಕಿಕೊಂಡು ಒದ್ದಾಡುವಂತಾಯ್ತು. ಮಲಗಿದ್ದ ಯುವಕನನ್ನ ಗಮನಿಸದೇ ಬೀಗ ಹಾಕೊಂಡು ಹೋಗಿದ್ದರು. ನಂತರ ಆ ಯುವಕನ ಪೋಷಕರು ಪೊಲೀಸರಿಗೆ ಮಾಹಿತಿ ಕೊಟ್ಟು ಅವರ ಸಹಾಯದಿಂದ ಆತನನ್ನ ಹೊರ ಕರೆತರಲಾಯಿತು.
ಏಕಾಏಕಿ ಮನೆಗೆ ನುಗ್ಗಿದ ಬ್ಯಾಂಕ್ ಸಿಬ್ಬಂದಿ
ಇದ್ದಕ್ಕಿದ್ದಂತೆ ಬಂದ 20-30 ಮಂದಿ ಸಿಬ್ಬಂದಿ ಏಕಾಏಕಿ ವಸ್ತುಗಳನ್ನ ಹೊರಗೆ ಹಾಕಿದ್ದಲ್ಲದೇ ದೈಹಿಕ ಹಲ್ಲೆಯನ್ನೂ ಮಾಡಿದ್ದಾರೆ ಎಂದು ಆರೋಪಿಸಿರುವ ಮನೆ ಮಾಲೀಕನ ಪರ ವಕೀಲರು ಕೋರ್ಟ್ ಮೂಲಕ ಕಾನೂನು ಕ್ರಮಕ್ಕೆ ಮುಂದಾಗ್ತೀವಿ ಅಂತ ಹೇಳ್ತಿದ್ದಾರೆ. ಅದೇನೇ ಇರ್ಲಿ ಯಾವುದೇ ದಾಖಲೆಗಳಿಲ್ಲದೇ ಬಂದು ದಾಂಧಲೆ ನಡೆಸಿರೋ ಬ್ಯಾಂಕ್ ಸಿಬ್ಬಂದಿ ನಡೆ ನಿಜಕ್ಕೂ ಆಕ್ಷೇಪಾರ್ಹ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ಮನೆ ಮಾಲೀಕರು ಓದಲೇಕಾದ ಸ್ಟೋರಿ ಇದು
ಹೋಮ್ ಲೋನ್ ಪಡೆಯೋ ಮುನ್ನ ಹುಷಾರ್
ಮನೆಗೆ ನುಗ್ಗಿ ದಾಂಧಲೆ ಮಾಡ್ತಾರೆ ಬ್ಯಾಂಕ್ ಸಿಬ್ಬಂದಿ
ಬೆಂಗಳೂರು: ಮನೆ ವಸ್ತುಗಳೆಲ್ಲಾ ಬೀದಿಗೆ ಬಿದ್ದಿವೆ. ಗೇಟ್ಗೆ ಬೀಗ ಹಾಕಿ ಸೀಜ್ ಮಾಡಲಾಗಿದೆ. ಅಲ್ಲೊಬ್ರು ಅಯ್ಯೋ ನಮ್ಮ ಮಗ ಒಳಗೇ ಇದ್ದಾನೆ ಅಂತ ಆತಂಕದಲ್ಲಿದ್ದಾರೆ. ಇಲ್ಲೊಬ್ರು ಎದೆ ಹಿಡ್ಕೊಂಡು ಕೆಳಗೆ ಬಿದ್ದು ಒದ್ದಾಡ್ತಿದ್ದಾರೆ. ಇದು ನಡೆದಿದ್ದು ಮತ್ತೆಲ್ಲೂ ಅಲ್ಲ, ಬದಲಿಗೆ ಬೆಂಗಳೂರಿನಲ್ಲೇ!
ಕೆಂಗೇರಿ ಉಪನಗರದಲ್ಲಿರೋ ಈ ಮೂರಂತಸ್ತಿನ ಮನೆ ನಿರ್ಮಿಸೋಕೆ ಮಾಲೀಕ ತುಮಕೂರಿನ ವೀರಶೈವ ಕೋ ಆಪರೇಟಿವ್ ಬ್ಯಾಂಕ್ನಲ್ಲಿ 2 ಕೋಟಿ ಲೋನ್ ಮಾಡಿದ್ದ. ಆದ್ರೆ ತೀರಿಸಲಾಗದೆ ತಪ್ಪಿಸಿಕೊಂಡು ಓಡಾಡ್ತಿದ್ರ ಅನ್ನೋ ವಿಚಾರ ಕೋರ್ಟ್ನಲ್ಲಿ ಕೇಸ್ ಆಗಿತ್ತು. ಆದ್ರೆ ಈ ಕೇಸ್ ಡಿಸ್ಮಿಸ್ ಮಾಡಿದ್ರೂ ಬ್ಯಾಂಕ್ ಸಿಬ್ಬಂದಿ ದರ್ಪ ತೋರಿರೋ ಆರೋಪ ಕೇಳಿ ಬರ್ತಿದೆ.
ಬ್ಯಾಂಕ್ ಸಿಬ್ಬಂದಿ ಮನೆ ಮಾಲೀಕರ ವಸ್ತುಗಳನ್ನ ಮನೆಯಿಂದ ಹೊರಗೆ ಹಾಕಿದ್ದು, ಬಾಡಿಗೆದಾರರ ವಸ್ತುಗಳನ್ನ ಒಳಗೇ ಬಿಟ್ಟು ಬೀಗ ಹಾಕಿದ್ದಾರೆ. ಇಲ್ಲೂ ಒಂದು ಎಡವಟ್ಟು ಮಾಡಿದ್ದು, ಬಾಡಿಗೆದಾರನೊಬ್ಬ ಮನೆಯೊಳಗೇ ಸಿಲುಕಿಕೊಂಡು ಒದ್ದಾಡುವಂತಾಯ್ತು. ಮಲಗಿದ್ದ ಯುವಕನನ್ನ ಗಮನಿಸದೇ ಬೀಗ ಹಾಕೊಂಡು ಹೋಗಿದ್ದರು. ನಂತರ ಆ ಯುವಕನ ಪೋಷಕರು ಪೊಲೀಸರಿಗೆ ಮಾಹಿತಿ ಕೊಟ್ಟು ಅವರ ಸಹಾಯದಿಂದ ಆತನನ್ನ ಹೊರ ಕರೆತರಲಾಯಿತು.
ಏಕಾಏಕಿ ಮನೆಗೆ ನುಗ್ಗಿದ ಬ್ಯಾಂಕ್ ಸಿಬ್ಬಂದಿ
ಇದ್ದಕ್ಕಿದ್ದಂತೆ ಬಂದ 20-30 ಮಂದಿ ಸಿಬ್ಬಂದಿ ಏಕಾಏಕಿ ವಸ್ತುಗಳನ್ನ ಹೊರಗೆ ಹಾಕಿದ್ದಲ್ಲದೇ ದೈಹಿಕ ಹಲ್ಲೆಯನ್ನೂ ಮಾಡಿದ್ದಾರೆ ಎಂದು ಆರೋಪಿಸಿರುವ ಮನೆ ಮಾಲೀಕನ ಪರ ವಕೀಲರು ಕೋರ್ಟ್ ಮೂಲಕ ಕಾನೂನು ಕ್ರಮಕ್ಕೆ ಮುಂದಾಗ್ತೀವಿ ಅಂತ ಹೇಳ್ತಿದ್ದಾರೆ. ಅದೇನೇ ಇರ್ಲಿ ಯಾವುದೇ ದಾಖಲೆಗಳಿಲ್ಲದೇ ಬಂದು ದಾಂಧಲೆ ನಡೆಸಿರೋ ಬ್ಯಾಂಕ್ ಸಿಬ್ಬಂದಿ ನಡೆ ನಿಜಕ್ಕೂ ಆಕ್ಷೇಪಾರ್ಹ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ