/newsfirstlive-kannada/media/post_attachments/wp-content/uploads/2024/08/bgm.jpg)
ಬೆಳಗಾವಿ: ಇಂದು ರಾಜ್ಯಾದ್ಯಂತ ಕರ್ನಾಟಕ ಸರ್ಕಾರವು ಇಂದು ಕರ್ನಾಟಕ ಆಡಳಿತ ಸೇವೆ (ಕೆಎಎಸ್) ಪ್ರಿಲಿಮ್ಸ್ ಪರೀಕ್ಷೆ ನಡೆಯುತ್ತಿದೆ. ಆದರೆ ಕೆಎಎಸ್ ಪರೀಕ್ಷೆಯ ವೇಳೆ ಅಂಜುಮನ್ ಕಾಲೇಜಿನಲ್ಲಿ ಮತ್ತೊಂದು ಯಡವಟ್ಟು ನಡೆದಿದೆ.
ಇದನ್ನೂ ಓದಿ: KAS ಪ್ರಿಲಿಮ್ಸ್ ಪರೀಕ್ಷೆಯಲ್ಲೂ ಪ್ರಶ್ನೆ ಪತ್ರಿಕೆ ಸೋರಿಕೆ ಆರೋಪ; ಆಕಾಂಕ್ಷಿಗಳಿಗೆ ಬಗೆಹರಿಯದ ಗೊಂದಲ
ಇದನ್ನೂ ಓದಿ:ಗೊಂದಲ, ಪ್ರತಿಭಟನೆ ನಡುವೆ ಇಂದು KAS ಪ್ರಿಲಿಮ್ಸ್ ಪರೀಕ್ಷೆ; ಆತಂಕದಲ್ಲೇ 2.5 ಲಕ್ಷ ಪರೀಕ್ಷಾರ್ಥಿಗಳು ಭಾಗಿ
/newsfirstlive-kannada/media/post_attachments/wp-content/uploads/2024/08/bgm1.jpg)
ಹೌದು, ಪರೀಕ್ಷೆ ಬರೆಯಲು ಬಂದಿದ್ದ ಆಕಾಂಕ್ಷಿಗಳಿಗೆ ಪ್ರಶ್ನೆ ಪತ್ರಿಕೆ ಕೊಡಲು 15 ನಿಮಿಷ ಲೇಟ್ ಮಾಡಿದ್ದರು. ಬಳಿಕ ಪ್ರಶ್ನೆ ಪತ್ರಿಕೆ ಅದಲು, ಬದಲು ಆಗಿದೆ ಎಂದು ಆಕ್ರೋಶ ಹೊರ ಹಾಕಿದ್ದಾರೆ. ಒಎಂಆರ್ ಶೀಟ್ ಅದಲು ಬದಲಾಗಿ ಗೊಂದಲ ಸೃಷ್ಟಿಯಾಗಿತ್ತು. ಹೀಗಾಗಿ ಪೊಲೀಸ್ ಅಧಿಕಾರಿಗಳ ಜೊತೆ ಪರೀಕ್ಷಾರ್ಥಿಗಳ ವಾಗ್ವಾದ ನಡೆಸಿದ್ದರು.
ಆ ಕೂಡಲೇ ಘಟನಾ ಸ್ಥಳಕ್ಕೆ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಭೇಟಿ ನೀಡಿ ಪರೀಶಿಲನೆ ನಡೆಸಿದ್ದಾರೆ. ಬಳಿಕ OMR ಶೀಟ್ ಅದಲು, ಬದಲಿನ ತನಿಖೆ ಮಾಡ್ತೀವಿ. ವಿದ್ಯಾರ್ಥಿಗಳಿಗೆ ಹೆಚ್ಚಿನ ಸಮಯ ನೀಡಲು ಕೆಪಿಎಸ್ಸಿಗೆ ಪತ್ರ ಬರೆಯುತ್ತೇವೆ.
ಸದ್ಯ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ಆರಂಭ ಮಾಡಿದ್ದಾರೆ ಎಂದು ಹೇಳಿದ್ದಾರೆ.
/newsfirstlive-kannada/media/post_attachments/wp-content/uploads/2024/08/bgm2.jpg)
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us