Advertisment

ಲಕ್ಷ್ಮೀ ಬಾರಮ್ಮದಲ್ಲಿ ಆತ್ಮ, ಪ್ರೇತಾತ್ಮಕ ಭಯಾನಕ ದೃಶ್ಯ; ನಾಗವಲ್ಲಿ ನೆನಪಿಸಿದ ಕೀರ್ತಿ..!

author-image
Veena Gangani
Updated On
ಲಕ್ಷ್ಮೀ ಬಾರಮ್ಮದಲ್ಲಿ ಆತ್ಮ, ಪ್ರೇತಾತ್ಮಕ ಭಯಾನಕ ದೃಶ್ಯ; ನಾಗವಲ್ಲಿ ನೆನಪಿಸಿದ ಕೀರ್ತಿ..!
Advertisment
  • ಲಕ್ಷ್ಮೀ ಮೈಮೇಲೆ ಕೀರ್ತಿ ಆತ್ಮ, ಬೆಚ್ಚಿಬಿದ್ದ ವಿಲನ್ ಕಾವೇರಿ
  • ವೈಷ್ಣವ್​ ಮುಂದೆ ಎಲ್ಲಾ ಸತ್ಯ ಬಾಯಿ ಬಿಡುತ್ತಾಳಾ ಕಾವೇರಿ
  • ‘ಕಾವೇರಿ ಪಾಪದ ಕೊಡ ಇಲ್ಲಿಗೆ ಮುಕ್ತಾಯ’ ವೀಕ್ಷಕರು ಏನಂದ್ರು?

ದಿನದಿಂದ ದಿನಕ್ಕೆ ಲಕ್ಷ್ಮೀ ಬಾರಮ್ಮ ಸೀರಿಯಲ್​ ರೋಚಕ ಟ್ವಿಸ್ಟ್​ ಪಡೆದುಕೊಳ್ಳುತ್ತಿದೆ. ಲಕ್ಷ್ಮೀ ಬಾರಮ್ಮ ಧಾರಾವಾಹಿಯಲ್ಲಿ ಲಕ್ಷ್ಮೀ ಮೈಮೇಲೆ ಕೀರ್ತಿ ದೆವ್ವ ಬಂದಿದೆ ಅಂಥ ಕಾವೇರಿ ಮಂತ್ರವಾದಿಯ ಮುಂದೆ ಕರೆದುಕೊಂಡು ಹೋಗಿದ್ದಾಳೆ. ಈಗ ಕಾವೇರಿಯೇ ಲಕ್ಷ್ಮೀಯನ್ನು ಬಲವಂತವಾಗಿ ಮಾಟ-ಮಂತ್ರ ಮಾಡಿಸುವವರ ಮುಂದೆ ಕರೆದು ತಂದಿದ್ದಾಳೆ.

Advertisment

ಇದನ್ನೂ ಓದಿ: ಡಾ.ಬ್ರೋ ಕಂಪನಿಯಲ್ಲಿ ಉದ್ಯೋಗ ಅವಕಾಶ.. ಗೋಪ್ರವಾಸದಲ್ಲಿ ಗಗನ್ ಜೊತೆ ನೀವೂ ಸೇರಿಕೊಳ್ಳಿ!

publive-image

ನಿನ್ನ ದೇಹದ ಮೇಲೆ ಹಾಳಾದ ಕೀರ್ತಿಯ ದೆವ್ವ ಬಂದಿದೆ ಅನ್ನು ಬಿಡಿಸಬೇಕು ಅಂತ ಲಕ್ಷ್ಮೀ ಮುಂದೆ ಹೇಳಿ ಬಿಟ್ಟಿದ್ದಾಳೆ. ಆಗ ಏಕಾಏಕಿ ಲಕ್ಷ್ಮೀ ಮೈಮೇಲೆ ಕೀರ್ತಿ ಬಂದಿದ್ದು, ಇದನ್ನು ನೋಡಿದ ಕಾವೇರಿ ಮತ್ತೆ ಬೆಚ್ಚಿ ಬಿದ್ದಿದ್ದಾಳೆ. ಇದೇ ಹೊತ್ತಿಗೆ ಅದೇ ಮಂಡಲದ ಬಳಿಕ ವೈಷ್ಣವ್ ಕುಟುಂಬಸ್ಥರು ಬಂದಿದ್ದಾರೆ. ಇವರ ಮುಂದೆ ಲಕ್ಷ್ಮೀ ವೈಷ್ ಬಂದಿದ್ದಾನೆ. ಅವನ ಮುಂದೆ ನೀವು ಸತ್ಯ ಹೇಳಲೇಬೇಕು. ಹೇಳಿ ಹೇಳಿ ಅಂತ ಲಕ್ಷ್ಮೀ ಕಿರುಚಾಡಿದ್ದಾಳೆ.

Advertisment


ಆಗ ಕಾವೇರಿ ತಡವರಿಸಿದ್ದಾಳೆ. ತಾನು ತೋಡಿದ ಹಳ್ಳಕ್ಕೆ ಕಾವೇರಿ ತಾನೇ ಬಿದ್ದಿದ್ದಾಳೆ. ಈಗಲಾದರೂ ವೈಷ್ಣವ ಮುಂದೆ ತನ್ನ ಅಸಲಿ ಮುಖವಾಡ ಬಯಲು ಮಾಡುತ್ತಾಳಾ, ವೈಷ್ ಮುಂದೆ ಎಲ್ಲಾ ಸತ್ಯ ಹೇಳಿ ಬಿಡುತ್ತಾಳಾ ಅಥವಾ ಅಲ್ಲಿಯೂ ಕೂಡ ಸುಳ್ಳು ಕಥೆ ಕಟ್ಟುತ್ತಾಳಾ ಅಂತ ಮುಂದಿನ ಎಪಿಸೋಡ್​ನಲ್ಲಿ ಕಾದು ನೋಡಬೇಕಿದೆ.

publive-image

ಇದೇ ಎಪಿಸೋಡ್​ನ ನೋಡಿದ ವೀಕ್ಷಕರು ಸಖತ್​ ಥ್ರಿಲ್ ಆಗಿದ್ದಾರೆ. ಅಬ್ಬಬ್ಬಾ ಲಕ್ಷ್ಮೀ ನಟನೆ ಭಯಂಕರ, ವೈಷ್ಣವ್​ ನಿಮ್ಮ ಅಮ್ಮನ ಬಾಯಿಂದ ಬರುವ ಸತ್ಯ ಕೇಳು, ಕಾವೇರಿ ಮುಖವಾಡ ಇಲ್ಲಿಗೆ ಬಯಲು, ಸತ್ಯಕ್ಕೆ ಯಾವಾಗಲೂ ಜಯ ಸಿಕ್ಕೇ ಸಿಕುತ್ತೆ ಅಂತೆಲ್ಲಾ ಕಾಮೆಂಟ್ಸ್​ ಹಾಕಿದ್ದಾರೆ. ಅಲ್ಲದೇ ಕೀರ್ತಿಯ ನಟನೆ, ನಾಗವಲ್ಲಿಯನ್ನು ನೆನಪಿಸುವಂತಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment