newsfirstkannada.com

BBK10: ಸಂತುನೂ ಅಲ್ಲ.. ಪಂತುನೂ ಅಲ್ಲ ಕಣ್ರಿ; ಈ ವಾರದ ಎಲಿಮಿನೇಷನ್‌ನಲ್ಲಿ ಬಿಗ್ ಟ್ವಿಸ್ಟ್; ಏನದು?

Share :

Published January 14, 2024 at 1:11pm

    ಸಂತು-ಪಂತು ದೂರವಾಗುವ ಸಮಯದಲ್ಲಿ ಬಿಗ್‌ಬಾಸ್ ಟ್ವಿಸ್ಟ್‌!

    ಸಂಗೀತಾ ಅವರ ಜೊತೆಗೆ 4 ಮಂದಿ ಮಾತ್ರ ಫಿನಾಲೆಗೆ ಎಂಟ್ರಿ

    ವಿನಯ್, ಕಾರ್ತಿಕ್, ಡ್ರೋನ್ ಪ್ರತಾಪ್, ನಮ್ರತಾ, ತನಿಷಾ!

ಕನ್ನಡದ ಬಿಗ್‌ಬಾಸ್ ಸೀಸನ್ 10ರ ರಿಯಾಲಿಟಿ ಶೋನಲ್ಲಿ ಸಖತ್ ಟ್ವಿಸ್ಟ್ ಸಿಕ್ಕಿದೆ. ಫಿನಾಲೆಗೆ ಹತ್ತಿರವಾಗುತ್ತಿರುವ 14ನೇ ವಾರದಲ್ಲಿ ಮನೆಯಲ್ಲಿ ಉಳಿದಿರೋದು 8 ಸ್ಪರ್ಧಿಗಳು. ಈ 8 ಮಂದಿ ಸ್ಪರ್ಧಿಗಳಲ್ಲಿ ಒಬ್ಬರು ಈ ವಾರ ಎಲಿಮಿನೇಷನ್ ಆಗಲೇಬೇಕಿತ್ತು. ಆದರೆ ಈ ವಾರದ ಎಲಿಮಿನೇಷನ್‌ನಲ್ಲಿ ಎಲ್ಲರ ನಿರೀಕ್ಷೆಗೂ ಮೀರಿದ ಬೆಳವಣಿಗೆ ನಡೆದಿದ್ದು, ಮೂಲಗಳ ಪ್ರಕಾರ ನೋ ಎಲಿಮಿನೇಷನ್ ಎನ್ನಲಾಗಿದೆ.

ನ್ಯೂಸ್‌ ಫಸ್ಟ್‌ಗೆ ಸಿಕ್ಕ ಮಾಹಿತಿ ಪ್ರಕಾರ ಬಿಗ್‌ಬಾಸ್ ಸೀಸನ್ 10ರಲ್ಲಿ ಈ ವಾರವೂ ನೋ ಎಲಿಮಿನೇಷನ್ ಆಗುವ ಸಾಧ್ಯತೆ ಇದೆ. ಈ ವಾರದ ಎಲಿಮಿನೇಷನ್ ರೋಚಕ ಘಟ್ಟ ತಲುಪಿದೆ. ಸೂಪರ್ ಸಂಡೇ ಎಪಿಸೋಡ್‌ನಲ್ಲಿ ಕಿಚ್ಚ ಸುದೀಪ್ ಅವರು ಸಂತು-ಪಂತು ದೂರವಾಗುವ ಸಮಯ ಬಂದೇ ಬಿಟ್ಟಿದೆ ಎಂದು ಅನೌನ್ಸ್ ಮಾಡಿದ್ದಾರೆ. ವರ್ತೂರು ಸಂತೋಷ್, ತುಕಾಲಿ ಸಂತೋಷ್ ಇಬ್ಬರು ದೂರವಾಗಲು ಮನಸ್ಸಿಲ್ಲದೇ ಕಣ್ಣೀರು ಸುರಿಸಿದ್ದರು. ಇದನ್ನು ನೋಡಿದ ಕಿಚ್ಚ ಸುದೀಪ್ ಅವರೇ ಯಾರಲ್ಲೂ ನೋಡಿರದ ಒಂದು ಬಾಂಧವ್ಯ ನಿಮ್ಮಿಬ್ಬರಲ್ಲಿ ನಾನು ನೋಡಿದ್ದೇನೆ ಎಂದಿದ್ದಾರೆ. ಈ ನಿಷ್ಕಂಳಕವಾದ ಸ್ನೇಹ ನೋಡಿ ಇಡೀ ಬಿಗ್‌ಬಾಸ್‌ ಮನೆಯ ಸದಸ್ಯರು ಕಣ್ಣೀರು ಹಾಕಿದ್ದಾರೆ.

ಇದನ್ನೂ ಓದಿ: BBK10: ಕಣ್ಣೀರು ಸುರಿಸಿದ ಸಂತು-ಪಂತು! ಸ್ನೇಹಿತನನ್ನು ಬಿಟ್ಟು ಹೋಗಲಾರದಂತ ಸಂಬಂಧ ಬೆಸೆದ ಬಿಗ್​ ಬಾಸ್​

ಸಂತು-ಪಂತು ಈ ಸ್ನೇಹ ಅಷ್ಟು ಸುಲಭವಾಗಿ ಬೇರೆಯಾಗುವಂತದ್ದು ಅಲ್ಲ. ಇವರಿಬ್ಬರ ಬಾಂಧವ್ಯವನ್ನು ನೋಡಿದ ಬಿಗ್‌ಬಾಸ್ ಈ ವಾರ ಕೂಡ ನೋ ಎಲಿಮಿನೇಷನ್ ಮಾಡಿದೆ ಅನ್ನೋ ಮಾಹಿತಿ ಸಿಕ್ಕಿದೆ. ಮೂಲಗಳ ಪ್ರಕಾರ ಈ ವಾರಾಂತ್ಯದಲ್ಲಿ ಸಂತು-ಪಂತು ಬೇರೆಯಾಗುವ ಸಮಯ ಬಂದರೂ ಸ್ವಲ್ಪದರಲ್ಲೇ ಪಾರಾಗಿದ್ದಾರೆ ಎನ್ನಲಾಗಿದೆ. ಆದರೆ ತುಕಾಲಿ ಸಂತೋಷ್ ಅವರೇ ಮುಂದಿನ ವಾರದ ಮಧ್ಯೆ ಎಲಿಮಿನೇಟ್ ಆಗಿ ಹೊರ ಬರುವ ಸಾಧ್ಯತೆ ಇದೆ.

ಬಿಗ್‌ಬಾಸ್ ಮನೆಯಲ್ಲಿ ಸದ್ಯ 8 ಸ್ಪರ್ಧಿಗಳಿದ್ದಾರೆ. ಅದರಲ್ಲಿ ಸಂಗೀತಾ ಈಗಾಗಲೇ ಫಿನಾಲೆ ವಾರಕ್ಕೆ ಟಿಕೆಟ್ ಪಡಿದಿದ್ದಾರೆ. ಉಳಿದ 7 ಸ್ಪರ್ಧಿಗಳಲ್ಲಿ ಒಬ್ಬರಂತೂ ವಾರದ ಮಧ್ಯೆ ಎಲಿಮಿನೇಟ್ ಆಗುತ್ತಾರೆ. ಆಮೇಲೆ 6 ಮಂದಿ ಸ್ಪರ್ಧಿಗಳ ಉಳಿಯಲಿದ್ದು, ಸಂಗೀತಾ ಅವರ ಜೊತೆಗೆ 4 ಮಂದಿ ಫಿನಾಲೆಗೆ ಎಂಟ್ರಿಕೊಡಲಿದ್ದಾರೆ. ವಿನಯ್, ಕಾರ್ತಿಕ್, ಡ್ರೋನ್ ಪ್ರತಾಪ್, ನಮ್ರತಾ, ತನಿಷಾ, ವರ್ತೂರು ಸಂತೋಷ್ ಈ ಇಷ್ಟು ಮಂದಿಯಲ್ಲಿ ಯಾರಿಗೆ ಅದೃಷ್ಟ ಇದೆ ಅನ್ನೋದನ್ನ ಕಾದು ನೋಡಬೇಕಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

BBK10: ಸಂತುನೂ ಅಲ್ಲ.. ಪಂತುನೂ ಅಲ್ಲ ಕಣ್ರಿ; ಈ ವಾರದ ಎಲಿಮಿನೇಷನ್‌ನಲ್ಲಿ ಬಿಗ್ ಟ್ವಿಸ್ಟ್; ಏನದು?

https://newsfirstlive.com/wp-content/uploads/2024/01/Bigg-Boss-Kannada-16.jpg

    ಸಂತು-ಪಂತು ದೂರವಾಗುವ ಸಮಯದಲ್ಲಿ ಬಿಗ್‌ಬಾಸ್ ಟ್ವಿಸ್ಟ್‌!

    ಸಂಗೀತಾ ಅವರ ಜೊತೆಗೆ 4 ಮಂದಿ ಮಾತ್ರ ಫಿನಾಲೆಗೆ ಎಂಟ್ರಿ

    ವಿನಯ್, ಕಾರ್ತಿಕ್, ಡ್ರೋನ್ ಪ್ರತಾಪ್, ನಮ್ರತಾ, ತನಿಷಾ!

ಕನ್ನಡದ ಬಿಗ್‌ಬಾಸ್ ಸೀಸನ್ 10ರ ರಿಯಾಲಿಟಿ ಶೋನಲ್ಲಿ ಸಖತ್ ಟ್ವಿಸ್ಟ್ ಸಿಕ್ಕಿದೆ. ಫಿನಾಲೆಗೆ ಹತ್ತಿರವಾಗುತ್ತಿರುವ 14ನೇ ವಾರದಲ್ಲಿ ಮನೆಯಲ್ಲಿ ಉಳಿದಿರೋದು 8 ಸ್ಪರ್ಧಿಗಳು. ಈ 8 ಮಂದಿ ಸ್ಪರ್ಧಿಗಳಲ್ಲಿ ಒಬ್ಬರು ಈ ವಾರ ಎಲಿಮಿನೇಷನ್ ಆಗಲೇಬೇಕಿತ್ತು. ಆದರೆ ಈ ವಾರದ ಎಲಿಮಿನೇಷನ್‌ನಲ್ಲಿ ಎಲ್ಲರ ನಿರೀಕ್ಷೆಗೂ ಮೀರಿದ ಬೆಳವಣಿಗೆ ನಡೆದಿದ್ದು, ಮೂಲಗಳ ಪ್ರಕಾರ ನೋ ಎಲಿಮಿನೇಷನ್ ಎನ್ನಲಾಗಿದೆ.

ನ್ಯೂಸ್‌ ಫಸ್ಟ್‌ಗೆ ಸಿಕ್ಕ ಮಾಹಿತಿ ಪ್ರಕಾರ ಬಿಗ್‌ಬಾಸ್ ಸೀಸನ್ 10ರಲ್ಲಿ ಈ ವಾರವೂ ನೋ ಎಲಿಮಿನೇಷನ್ ಆಗುವ ಸಾಧ್ಯತೆ ಇದೆ. ಈ ವಾರದ ಎಲಿಮಿನೇಷನ್ ರೋಚಕ ಘಟ್ಟ ತಲುಪಿದೆ. ಸೂಪರ್ ಸಂಡೇ ಎಪಿಸೋಡ್‌ನಲ್ಲಿ ಕಿಚ್ಚ ಸುದೀಪ್ ಅವರು ಸಂತು-ಪಂತು ದೂರವಾಗುವ ಸಮಯ ಬಂದೇ ಬಿಟ್ಟಿದೆ ಎಂದು ಅನೌನ್ಸ್ ಮಾಡಿದ್ದಾರೆ. ವರ್ತೂರು ಸಂತೋಷ್, ತುಕಾಲಿ ಸಂತೋಷ್ ಇಬ್ಬರು ದೂರವಾಗಲು ಮನಸ್ಸಿಲ್ಲದೇ ಕಣ್ಣೀರು ಸುರಿಸಿದ್ದರು. ಇದನ್ನು ನೋಡಿದ ಕಿಚ್ಚ ಸುದೀಪ್ ಅವರೇ ಯಾರಲ್ಲೂ ನೋಡಿರದ ಒಂದು ಬಾಂಧವ್ಯ ನಿಮ್ಮಿಬ್ಬರಲ್ಲಿ ನಾನು ನೋಡಿದ್ದೇನೆ ಎಂದಿದ್ದಾರೆ. ಈ ನಿಷ್ಕಂಳಕವಾದ ಸ್ನೇಹ ನೋಡಿ ಇಡೀ ಬಿಗ್‌ಬಾಸ್‌ ಮನೆಯ ಸದಸ್ಯರು ಕಣ್ಣೀರು ಹಾಕಿದ್ದಾರೆ.

ಇದನ್ನೂ ಓದಿ: BBK10: ಕಣ್ಣೀರು ಸುರಿಸಿದ ಸಂತು-ಪಂತು! ಸ್ನೇಹಿತನನ್ನು ಬಿಟ್ಟು ಹೋಗಲಾರದಂತ ಸಂಬಂಧ ಬೆಸೆದ ಬಿಗ್​ ಬಾಸ್​

ಸಂತು-ಪಂತು ಈ ಸ್ನೇಹ ಅಷ್ಟು ಸುಲಭವಾಗಿ ಬೇರೆಯಾಗುವಂತದ್ದು ಅಲ್ಲ. ಇವರಿಬ್ಬರ ಬಾಂಧವ್ಯವನ್ನು ನೋಡಿದ ಬಿಗ್‌ಬಾಸ್ ಈ ವಾರ ಕೂಡ ನೋ ಎಲಿಮಿನೇಷನ್ ಮಾಡಿದೆ ಅನ್ನೋ ಮಾಹಿತಿ ಸಿಕ್ಕಿದೆ. ಮೂಲಗಳ ಪ್ರಕಾರ ಈ ವಾರಾಂತ್ಯದಲ್ಲಿ ಸಂತು-ಪಂತು ಬೇರೆಯಾಗುವ ಸಮಯ ಬಂದರೂ ಸ್ವಲ್ಪದರಲ್ಲೇ ಪಾರಾಗಿದ್ದಾರೆ ಎನ್ನಲಾಗಿದೆ. ಆದರೆ ತುಕಾಲಿ ಸಂತೋಷ್ ಅವರೇ ಮುಂದಿನ ವಾರದ ಮಧ್ಯೆ ಎಲಿಮಿನೇಟ್ ಆಗಿ ಹೊರ ಬರುವ ಸಾಧ್ಯತೆ ಇದೆ.

ಬಿಗ್‌ಬಾಸ್ ಮನೆಯಲ್ಲಿ ಸದ್ಯ 8 ಸ್ಪರ್ಧಿಗಳಿದ್ದಾರೆ. ಅದರಲ್ಲಿ ಸಂಗೀತಾ ಈಗಾಗಲೇ ಫಿನಾಲೆ ವಾರಕ್ಕೆ ಟಿಕೆಟ್ ಪಡಿದಿದ್ದಾರೆ. ಉಳಿದ 7 ಸ್ಪರ್ಧಿಗಳಲ್ಲಿ ಒಬ್ಬರಂತೂ ವಾರದ ಮಧ್ಯೆ ಎಲಿಮಿನೇಟ್ ಆಗುತ್ತಾರೆ. ಆಮೇಲೆ 6 ಮಂದಿ ಸ್ಪರ್ಧಿಗಳ ಉಳಿಯಲಿದ್ದು, ಸಂಗೀತಾ ಅವರ ಜೊತೆಗೆ 4 ಮಂದಿ ಫಿನಾಲೆಗೆ ಎಂಟ್ರಿಕೊಡಲಿದ್ದಾರೆ. ವಿನಯ್, ಕಾರ್ತಿಕ್, ಡ್ರೋನ್ ಪ್ರತಾಪ್, ನಮ್ರತಾ, ತನಿಷಾ, ವರ್ತೂರು ಸಂತೋಷ್ ಈ ಇಷ್ಟು ಮಂದಿಯಲ್ಲಿ ಯಾರಿಗೆ ಅದೃಷ್ಟ ಇದೆ ಅನ್ನೋದನ್ನ ಕಾದು ನೋಡಬೇಕಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Load More