newsfirstkannada.com

×

ಪ್ರಬುದ್ಧ ಕೊಲೆ ಕೇಸ್​​ಗೆ ಕ್ಷಣಕ್ಕೊಂದು ಟ್ವಿಸ್ಟ್​​; ಹಂತಕನ ಪ್ಲಾನ್​​ ಕೇಳಿದ್ರೆ ಬೆಚ್ಚಿ ಬೀಳೋದು ಗ್ಯಾರಂಟಿ

Share :

Published May 24, 2024 at 4:41pm

Update May 24, 2024 at 6:32pm

    ಕೊಲೆಯಾದ ಪ್ರಬುದ್ಧ ತಮ್ಮನ ಸ್ನೇಹಿತನಾಗಿದ್ದ ಅಪ್ರಾಪ್ತ ಆರೋಪಿ

    ಅನುಮಾನಾಸ್ಪದವಾಗಿ ಸಾವನ್ನಪ್ಪಿದ ಪ್ರಬುದ್ಧ ಸಾವಿನ ಕೇಸ್​ಗೆ ಟ್ವಿಸ್ಟ್​

    ಕೊಲೆ ಮಾಡಲೆಂದೇ ಪ್ರಬುದ್ಧಳ ಮನೆಗೆ ಬಂದಿರುವುದಾಗಿ ಶಂಕೆ ವ್ಯಕ್ತ

ಬೆಂಗಳೂರು: ಸುಬ್ರಹ್ಮಣ್ಯಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕಳೆದ ಮೇ 15 ರಂದು ಪಿಯುಸಿ ವಿದ್ಯಾರ್ಥಿನಿಯ ಬರ್ಬರ ಕೊಲೆಯಾಗಿತ್ತು. ಯುವತಿಯನ್ನು ಕೊಲೆ ಮಾಡಿದ ಅಪ್ರಾಪ್ತ ಬಾಲಕನನ್ನು ಸುಬ್ರಹ್ಮಣ್ಯಪುರ ಪೊಲೀಸರು ಬಂಧಿಸಿದ್ದಾರೆ.

ಇದನ್ನೂ ಓದಿ: ಪ್ರಬುದ್ಧ ಕೊಲೆ ಕೇಸ್‌ಗೆ ಕಾರಣವಾಗಿದ್ದು ಬರೀ 2 ಸಾವಿರ ರೂ. ಅಲ್ಲ.. ಅಸಲಿಗೆ ಅಂದು ನಡೆದಿದ್ದೇನು?

ಇನ್ನು, ಹತ್ಯೆಯಾದ ಯುವತಿ ಪ್ರಬುದ್ಧಳ ಸಾವಿನ ಸೀಕ್ರೆಟ್ ಕೊನೆಗೂ ರಿವೀಲ್​​ ಆಗಿದೆ. ಪ್ರಬುದ್ಧಳನ್ನು ಕೊಲೆ ಮಾಡಲೆಂದು ಯಾರು ಇಲ್ಲದ ವೇಳೆ ಮನೆಗೆ ಬಂದಿದ್ದನಂತೆ. ಪ್ರಬುದ್ಧ ಮೃತಪಟ್ಟ ನಂತರ ಮ್ಯಾಟ್​ನಿಂದ ಮನೆ ಕ್ಲೀನ್​ ಮಾಡಿದ್ದಾನಂತೆ. ಬಳಿಕ ​ಸಾಕ್ಷಿ ನಾಶ ಮಾಡಲು ಬಟ್ಟೆ, ಮ್ಯಾಟ್ ಸುಟ್ಟಿದ್ದನಂತೆ. ಇದಾದ ಮೇಲೆ ಚಾಕು ಹಿಡಿದು ಹಿಂಬಾಗಿಲಿಂದ ಅಪ್ರಾಪ್ತ ಎಸ್ಕೇಪ್‌ ಆಗಿದ್ದಾನೆ.

ಅಸಲಿಗೆ ಈ ಇಬ್ಬರ ನಡುವೆ ಆಗಿದ್ದೇನು?

ಅಪ್ರಾಪ್ತ ಆರೋಪಿಯು ಯುವತಿ ಪ್ರಬುದ್ಧ ತಮ್ಮನ ಸ್ನೇಹಿತನಾಗಿದ್ದ. ಈ ಹಿಂದೆ ಪ್ರಬುದ್ಧ ಮೊಬೈಲ್ ಪೌಚ್​ನಲ್ಲಿದ್ದ ಹಣ ಕದ್ದಿದ್ದನಂತೆ. ಈ ಬಗ್ಗೆ ತಮ್ಮನ ಜೊತೆ ಆರೋಪಿ ಮನೆಗೆ ಬಂದಾಗ ಪ್ರಬುದ್ಧ ಪ್ರಶ್ನೆ ಮಾಡಿದ್ದಾಳೆ. ಕದ್ದ 2000 ರೂಪಾಯಿ ಹಣವನ್ನ ವಾಪಸ್ ಕೊಡುವಂತೆ ಕೇಳಿದ್ದಾಳೆ. ಈ ವೇಳೆ ಮಾತಿಗೆ ಮಾತು ಬೆಳೆದು ಇಬ್ಬರ ನಡುವೆ ಭಾರೀ ಗಲಾಟೆ ನಡೆದಿತ್ತು. ಗಲಾಟೆ ವೇಳೆ ಪ್ರಬುದ್ಧಳನ್ನ ಅಪ್ರಾಪ್ತ ಆರೋಪಿ ದೂರ ತಳ್ಳಿದ್ದಾನೆ. ಅಪ್ರಾಪ್ತ ತಳ್ಳಿದ ರಭಸಕ್ಕೆ ಪ್ರಬುದ್ಧ ತಲೆ ಗೋಡೆಗೆ ಬಡಿದು ಮೂರ್ಛೆ ಹೋಗಿದ್ದಾಳೆ. ನಂತರ ಆರೋಪಿ ಪ್ರಬುದ್ಧಳನ್ನ ಬಾತ್ ರೂಂಗೆ ಎಳೆದೊಯ್ದಿದ್ದಾನೆ. ಆ ವೇಳೆ ಪ್ರಬುದ್ಧ ಆರೋಪಿಯಿಂದ ತಪ್ಪಿಸಿಕೊಳ್ಳಲು ಮುಖವನ್ನ ಉಗುರಿನಿಂದ ಪರಚಿದ್ದಾಳೆ. ನಂತರ ಚಾಕುವಿನಿಂದ ಪ್ರಬುದ್ಧಳ ಕೈ ಮತ್ತು ಕತ್ತು ಕೊಯ್ದಿದ್ದಾನೆ. ಆಕೆ ಮೃತಪಟ್ಟ ನಂತರ ಯಾರಿಗೂ ಅನುಮಾನ ಬಾರದಂತೆ ಮ್ಯಾಟ್​ನಿಂದ ಮನೆ ಒರೆಸಿದ್ದಾನೆ. ಬಳಿಕ ಚಾಕು ಮತ್ತು ಮ್ಯಾಟ್ ತೆಗೆದುಕೊಂಡು ಹಿಂಬಾಗಿಲಲ್ಲಿ ಎಸ್ಕೇಪ್‌ ಆಗಿದ್ದಾರೆ. ಸಾಕ್ಷಿ ನಾಶ ಮಾಡಲು ಪ್ರಬುದ್ಧ ಬಟ್ಟೆ, ಮ್ಯಾಟ್ ಸುಟ್ಟು ಹಾಕಿದ್ದಾನೆ ಅಂತ ಮಾಹಿತಿ ಲಭ್ಯವಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಪ್ರಬುದ್ಧ ಕೊಲೆ ಕೇಸ್​​ಗೆ ಕ್ಷಣಕ್ಕೊಂದು ಟ್ವಿಸ್ಟ್​​; ಹಂತಕನ ಪ್ಲಾನ್​​ ಕೇಳಿದ್ರೆ ಬೆಚ್ಚಿ ಬೀಳೋದು ಗ್ಯಾರಂಟಿ

https://newsfirstlive.com/wp-content/uploads/2024/05/prabhudda.jpg

    ಕೊಲೆಯಾದ ಪ್ರಬುದ್ಧ ತಮ್ಮನ ಸ್ನೇಹಿತನಾಗಿದ್ದ ಅಪ್ರಾಪ್ತ ಆರೋಪಿ

    ಅನುಮಾನಾಸ್ಪದವಾಗಿ ಸಾವನ್ನಪ್ಪಿದ ಪ್ರಬುದ್ಧ ಸಾವಿನ ಕೇಸ್​ಗೆ ಟ್ವಿಸ್ಟ್​

    ಕೊಲೆ ಮಾಡಲೆಂದೇ ಪ್ರಬುದ್ಧಳ ಮನೆಗೆ ಬಂದಿರುವುದಾಗಿ ಶಂಕೆ ವ್ಯಕ್ತ

ಬೆಂಗಳೂರು: ಸುಬ್ರಹ್ಮಣ್ಯಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕಳೆದ ಮೇ 15 ರಂದು ಪಿಯುಸಿ ವಿದ್ಯಾರ್ಥಿನಿಯ ಬರ್ಬರ ಕೊಲೆಯಾಗಿತ್ತು. ಯುವತಿಯನ್ನು ಕೊಲೆ ಮಾಡಿದ ಅಪ್ರಾಪ್ತ ಬಾಲಕನನ್ನು ಸುಬ್ರಹ್ಮಣ್ಯಪುರ ಪೊಲೀಸರು ಬಂಧಿಸಿದ್ದಾರೆ.

ಇದನ್ನೂ ಓದಿ: ಪ್ರಬುದ್ಧ ಕೊಲೆ ಕೇಸ್‌ಗೆ ಕಾರಣವಾಗಿದ್ದು ಬರೀ 2 ಸಾವಿರ ರೂ. ಅಲ್ಲ.. ಅಸಲಿಗೆ ಅಂದು ನಡೆದಿದ್ದೇನು?

ಇನ್ನು, ಹತ್ಯೆಯಾದ ಯುವತಿ ಪ್ರಬುದ್ಧಳ ಸಾವಿನ ಸೀಕ್ರೆಟ್ ಕೊನೆಗೂ ರಿವೀಲ್​​ ಆಗಿದೆ. ಪ್ರಬುದ್ಧಳನ್ನು ಕೊಲೆ ಮಾಡಲೆಂದು ಯಾರು ಇಲ್ಲದ ವೇಳೆ ಮನೆಗೆ ಬಂದಿದ್ದನಂತೆ. ಪ್ರಬುದ್ಧ ಮೃತಪಟ್ಟ ನಂತರ ಮ್ಯಾಟ್​ನಿಂದ ಮನೆ ಕ್ಲೀನ್​ ಮಾಡಿದ್ದಾನಂತೆ. ಬಳಿಕ ​ಸಾಕ್ಷಿ ನಾಶ ಮಾಡಲು ಬಟ್ಟೆ, ಮ್ಯಾಟ್ ಸುಟ್ಟಿದ್ದನಂತೆ. ಇದಾದ ಮೇಲೆ ಚಾಕು ಹಿಡಿದು ಹಿಂಬಾಗಿಲಿಂದ ಅಪ್ರಾಪ್ತ ಎಸ್ಕೇಪ್‌ ಆಗಿದ್ದಾನೆ.

ಅಸಲಿಗೆ ಈ ಇಬ್ಬರ ನಡುವೆ ಆಗಿದ್ದೇನು?

ಅಪ್ರಾಪ್ತ ಆರೋಪಿಯು ಯುವತಿ ಪ್ರಬುದ್ಧ ತಮ್ಮನ ಸ್ನೇಹಿತನಾಗಿದ್ದ. ಈ ಹಿಂದೆ ಪ್ರಬುದ್ಧ ಮೊಬೈಲ್ ಪೌಚ್​ನಲ್ಲಿದ್ದ ಹಣ ಕದ್ದಿದ್ದನಂತೆ. ಈ ಬಗ್ಗೆ ತಮ್ಮನ ಜೊತೆ ಆರೋಪಿ ಮನೆಗೆ ಬಂದಾಗ ಪ್ರಬುದ್ಧ ಪ್ರಶ್ನೆ ಮಾಡಿದ್ದಾಳೆ. ಕದ್ದ 2000 ರೂಪಾಯಿ ಹಣವನ್ನ ವಾಪಸ್ ಕೊಡುವಂತೆ ಕೇಳಿದ್ದಾಳೆ. ಈ ವೇಳೆ ಮಾತಿಗೆ ಮಾತು ಬೆಳೆದು ಇಬ್ಬರ ನಡುವೆ ಭಾರೀ ಗಲಾಟೆ ನಡೆದಿತ್ತು. ಗಲಾಟೆ ವೇಳೆ ಪ್ರಬುದ್ಧಳನ್ನ ಅಪ್ರಾಪ್ತ ಆರೋಪಿ ದೂರ ತಳ್ಳಿದ್ದಾನೆ. ಅಪ್ರಾಪ್ತ ತಳ್ಳಿದ ರಭಸಕ್ಕೆ ಪ್ರಬುದ್ಧ ತಲೆ ಗೋಡೆಗೆ ಬಡಿದು ಮೂರ್ಛೆ ಹೋಗಿದ್ದಾಳೆ. ನಂತರ ಆರೋಪಿ ಪ್ರಬುದ್ಧಳನ್ನ ಬಾತ್ ರೂಂಗೆ ಎಳೆದೊಯ್ದಿದ್ದಾನೆ. ಆ ವೇಳೆ ಪ್ರಬುದ್ಧ ಆರೋಪಿಯಿಂದ ತಪ್ಪಿಸಿಕೊಳ್ಳಲು ಮುಖವನ್ನ ಉಗುರಿನಿಂದ ಪರಚಿದ್ದಾಳೆ. ನಂತರ ಚಾಕುವಿನಿಂದ ಪ್ರಬುದ್ಧಳ ಕೈ ಮತ್ತು ಕತ್ತು ಕೊಯ್ದಿದ್ದಾನೆ. ಆಕೆ ಮೃತಪಟ್ಟ ನಂತರ ಯಾರಿಗೂ ಅನುಮಾನ ಬಾರದಂತೆ ಮ್ಯಾಟ್​ನಿಂದ ಮನೆ ಒರೆಸಿದ್ದಾನೆ. ಬಳಿಕ ಚಾಕು ಮತ್ತು ಮ್ಯಾಟ್ ತೆಗೆದುಕೊಂಡು ಹಿಂಬಾಗಿಲಲ್ಲಿ ಎಸ್ಕೇಪ್‌ ಆಗಿದ್ದಾರೆ. ಸಾಕ್ಷಿ ನಾಶ ಮಾಡಲು ಪ್ರಬುದ್ಧ ಬಟ್ಟೆ, ಮ್ಯಾಟ್ ಸುಟ್ಟು ಹಾಕಿದ್ದಾನೆ ಅಂತ ಮಾಹಿತಿ ಲಭ್ಯವಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Load More