15 ವಯಸ್ಸಿನ ಹಂತಕನ ಕರಾಳತೆ ದಿನ ದಿನಕ್ಕೊಂದು ರೋಚಕತೆ ಪಡಿತಿದೆ
ಪ್ರಬುದ್ಧ ಸಾವು ಬೆನ್ನಲ್ಲೇ ನೂರಾರು ಅನುಮಾನಗಳು ಸುತ್ತಿಕೊಂಡಿದ್ದವು
ನನ್ನ ರಕ್ತ ಅಂತಹ ತಪ್ಪು ಮಾಡಲ್ಲ ಅಂದಿದ್ದ ತಾಯಿ ಮಾತೇ ನಿಜ ಆಯ್ತು
ಬೆಂಗಳೂರು: ಮುದ್ದು ಮೊಗದ ಮಗಳನ್ನು ಕಳೆದುಕೊಂಡ ಹೆತ್ತವಳ ನೋವು ಇನ್ನು ಮಾಸಿಲ್ಲ. ಬಹುಶಃ ಮಾಸೋದಕ್ಕೆ ಸಾಧ್ಯವೇ ಇಲ್ಲ. ಆದ್ರೆ ಪ್ರಬುದ್ಧಳನ್ನ ಹುರಿದು ಮುಕ್ಕಿದ 15ರ ಹಂತಕನ ಕರಾಳತೆ ಮಾತ್ರ ದಿನ ದಿನಕ್ಕೂ ರೋಚಕತೆ ಪಡೀತಾಯಿದೆ. ಇದೀಗ ಅಪ್ರಾಪ್ತ ಅಪರಾಧಿಯ ಮರ್ಡರ್ ಪ್ರಿ ಪ್ಲಾನ್ ರಹಸ್ಯ ರಿವೀಲ್ ಆಗಿದೆ.
ಇದನ್ನೂ ಓದಿ: ಗ್ರಾಮ ಪಂಚಾಯತಿ ಸಿಬ್ಬಂದಿ ನಿರ್ಲಕ್ಷ್ಯದಿಂದ 2 ವರ್ಷದ ಬಾಲಕ ಸಾವು.. ಏನಾಯಿತು?
ಸುಬ್ರಹ್ಮಣ್ಯಪುರ ಪ್ರಬುದ್ಧ ಸಾವು ಪ್ರಾರಂಭದ ದಿನದಲ್ಲೇ ನೂರಾರು ಅನುಮಾನಗಳನ್ನ ಸುತ್ತಿಕೊಂಡಿತ್ತು. ಯುವತಿ ದೇಹ ಮಣ್ಣಲ್ಲಿ ಮಣ್ಣಾದ್ರೂ ಇದು ಆತ್ಮಹತ್ಯನಾ ಕೊಲೆನಾ ಅನ್ನೋದೇ ರಿವೀಲ್ ಆಗಿರಲಿಲ್ಲ. ಕೊನೆಗೆ ನನ್ನ ರಕ್ತ ಅಂತ ತಪ್ಪು ಮಾಡಲ್ಲ ಅಂದಿದ್ದ ತಾಯಿಯ ಮಾತೇ ನಿಜ ಆಯ್ತು. ಪ್ರಬುದ್ಧಳನ್ನ ಹಾಡಹಗಲೇ ಮನೆಗೆ ಬಂದು ಕೊಲೆ ಮಾಡಿದ ತಮ್ಮನ ಸ್ನೇಹಿತನ ಕ್ರೂರತೆಯೂ ಬಯಲಾಯ್ತು. ಆದ್ರೆ. ಅಪ್ರಾಪ್ತ ಬಾಲಕ ಅದೆಷ್ಟರ ಮಟ್ಟಿಗೆ ಕೊಲೆಗಾರನಾಗೋಕೆ ಸಜ್ಜಾಗಿದ್ದ ಅನ್ನೋದೇ ಈ ಶಾಕಿಂಗ್.
ಪ್ಲಾನ್ 01 : ಸಿಸಿಟಿವಿ ಜೊತೆ ಕಣ್ಣಾಮುಚ್ಚಾಲೆ
ಪ್ರಬುದ್ಧ ಮನೆ ಮುಂದಿನ ಸಿಸಿಟಿವಿ ತಪ್ಪಿಸಲು ಖತರ್ನಾಕ್ ಸಂಚು ರೂಪಿಸಿದ್ದ. ಇದೇ ಕಾರಣಕ್ಕೆ ಅಕ್ಕಪಕ್ಕದ ಮನೆಯ ಟೆರೆಸ್ ಮೇಲಿಂದ ಆರೋಪಿ ಪ್ರಬುದ್ಧ ಮನೆಗೆ ಎಂಟ್ರಿ ಕೊಟ್ಟಿದ್ದ.
ಪ್ಲಾನ್ 02 : ಆತ್ಮಹತ್ಯೆಗೆ ಯತ್ನಿಸಿದ ವಿಚಾರ ತಿಳಿದೇ ಕೈ ಕಟ್
ಪ್ರಬುದ್ಧ ಮನೆಗೆ ಹಿಂದಿನ ಬಾಗಿಲಿನಿಂದ ಎಂಟ್ರಿಕೊಟ್ಟಿದ್ದ ಆರೋಪಿ, ಬರುವ ಮೊದಲೇ ಮರ್ಡರ್ ಪ್ಲಾನ್ ಮಾಡಿದ್ದ. ಹೀಗಾಗಿ ಬರಬರುತ್ತ ಕದ್ದಿದ್ದನ್ನ ಅಪ್ಪ-ಅಮ್ಮಗೆ ಹೇಳಬೇಡಿ ಅಂತ ಪ್ರಬುದ್ಧಗೆ ಕೇಳಿದ್ದ. ಮನವಿಗೆ ಸ್ಪಂದಿಸದಿದ್ದಾಗ ಪ್ರಬುದ್ಧಳ ಕೊಲೆಗೆ ತೀರ್ಮಾನಿಸಿದ್ದ. ಆಕೆ ಈ ಹಿಂದೆ ಆತ್ಮಹತ್ಯೆಗೆ ಯತ್ನಿಸಿದ ವಿಚಾರ ತಿಳಿದು ಪ್ರಜ್ಞೆ ತಪ್ಪಿ ಬಿದ್ದಿದ್ದ ಪ್ರಬುದ್ಧಾಳ ಕೈಯನ್ನ ತನ್ನ ಚಾಕುವಿನಿಂದ ಕಟ್ ಮಾಡಿದ್ದ.
ಪ್ಲಾನ್ 03: ವೈದ್ಯರಿಗೂ ಚಳ್ಳೆಹಣ್ಣು ತಿನ್ನಿಸಿದ್ದ ಆರೋಪಿ
ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದ ವೈದ್ಯರಿಗೂ ಆರೋಪಿ ಯಾಮಾರಿಸಿದ್ದ. ಇದಕ್ಕೆ ಪುಷ್ಟಿ ನೀಡುವಂತೆ ಪ್ರಬುದ್ಧ ದೇಹದ ಮೇಲೆ ಬೇರೆ ವ್ಯಕ್ತಿಯ ಬೆರಳಚ್ಚು ಪತ್ತೆಯಾಗಿಲ್ಲ. ಹೀಗಾಗಿ ಕೈ ಕಟ್ ಆಗಿ ರಕ್ತಸ್ರಾವವಾಗಿ ಸಾವಿಗೀಡಾಗಿದ್ದಾರೆ. ಇದು ಆತ್ಮಹತ್ಯೆಯಂತ ವೈದ್ಯರು ವರದಿ ನೀಡಿದ್ದರು.
ಇಷ್ಟೆಲ್ಲ ಕ್ರಿಮಿನಲ್ ಮೈಂಡ್ ಹೊಂದಿದ್ದ 15ರ ಹಂತಕ ಈ ವಯಸ್ಸಿಗೆ ಅದೆಲ್ಲಿಂದ ಇಷ್ಟೋಂದು ಧೈರ್ಯ, ಕ್ರೌರ್ಯ ಮೈಗೂಡಿಸಿಕೊಂಡನೋ ಗೊತ್ತಿಲ್ಲ. ಆದ್ರೆ, ಅದ್ಯವಾ ಸಿಸಿಟಿವಿ ಕಣ್ಣಿಂದ ತಪ್ಪಿಸಿಕೊಳ್ಳಲು ಜಂಪಿಂಗ್ ಜಂಪಾಗ್ ನಡೆಸಿದ್ನೋ, ಎಕ್ಸಿಟ್ ಆಗೋ ವೇಳೆ ಅದೇ ಸಿಸಿಟಿವಿಯಲ್ಲಿ ಸೆರೆಯಾಗಿ ಈಗ ಜೈಲು ಸೇರಿಸಿದ್ದಾನೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
15 ವಯಸ್ಸಿನ ಹಂತಕನ ಕರಾಳತೆ ದಿನ ದಿನಕ್ಕೊಂದು ರೋಚಕತೆ ಪಡಿತಿದೆ
ಪ್ರಬುದ್ಧ ಸಾವು ಬೆನ್ನಲ್ಲೇ ನೂರಾರು ಅನುಮಾನಗಳು ಸುತ್ತಿಕೊಂಡಿದ್ದವು
ನನ್ನ ರಕ್ತ ಅಂತಹ ತಪ್ಪು ಮಾಡಲ್ಲ ಅಂದಿದ್ದ ತಾಯಿ ಮಾತೇ ನಿಜ ಆಯ್ತು
ಬೆಂಗಳೂರು: ಮುದ್ದು ಮೊಗದ ಮಗಳನ್ನು ಕಳೆದುಕೊಂಡ ಹೆತ್ತವಳ ನೋವು ಇನ್ನು ಮಾಸಿಲ್ಲ. ಬಹುಶಃ ಮಾಸೋದಕ್ಕೆ ಸಾಧ್ಯವೇ ಇಲ್ಲ. ಆದ್ರೆ ಪ್ರಬುದ್ಧಳನ್ನ ಹುರಿದು ಮುಕ್ಕಿದ 15ರ ಹಂತಕನ ಕರಾಳತೆ ಮಾತ್ರ ದಿನ ದಿನಕ್ಕೂ ರೋಚಕತೆ ಪಡೀತಾಯಿದೆ. ಇದೀಗ ಅಪ್ರಾಪ್ತ ಅಪರಾಧಿಯ ಮರ್ಡರ್ ಪ್ರಿ ಪ್ಲಾನ್ ರಹಸ್ಯ ರಿವೀಲ್ ಆಗಿದೆ.
ಇದನ್ನೂ ಓದಿ: ಗ್ರಾಮ ಪಂಚಾಯತಿ ಸಿಬ್ಬಂದಿ ನಿರ್ಲಕ್ಷ್ಯದಿಂದ 2 ವರ್ಷದ ಬಾಲಕ ಸಾವು.. ಏನಾಯಿತು?
ಸುಬ್ರಹ್ಮಣ್ಯಪುರ ಪ್ರಬುದ್ಧ ಸಾವು ಪ್ರಾರಂಭದ ದಿನದಲ್ಲೇ ನೂರಾರು ಅನುಮಾನಗಳನ್ನ ಸುತ್ತಿಕೊಂಡಿತ್ತು. ಯುವತಿ ದೇಹ ಮಣ್ಣಲ್ಲಿ ಮಣ್ಣಾದ್ರೂ ಇದು ಆತ್ಮಹತ್ಯನಾ ಕೊಲೆನಾ ಅನ್ನೋದೇ ರಿವೀಲ್ ಆಗಿರಲಿಲ್ಲ. ಕೊನೆಗೆ ನನ್ನ ರಕ್ತ ಅಂತ ತಪ್ಪು ಮಾಡಲ್ಲ ಅಂದಿದ್ದ ತಾಯಿಯ ಮಾತೇ ನಿಜ ಆಯ್ತು. ಪ್ರಬುದ್ಧಳನ್ನ ಹಾಡಹಗಲೇ ಮನೆಗೆ ಬಂದು ಕೊಲೆ ಮಾಡಿದ ತಮ್ಮನ ಸ್ನೇಹಿತನ ಕ್ರೂರತೆಯೂ ಬಯಲಾಯ್ತು. ಆದ್ರೆ. ಅಪ್ರಾಪ್ತ ಬಾಲಕ ಅದೆಷ್ಟರ ಮಟ್ಟಿಗೆ ಕೊಲೆಗಾರನಾಗೋಕೆ ಸಜ್ಜಾಗಿದ್ದ ಅನ್ನೋದೇ ಈ ಶಾಕಿಂಗ್.
ಪ್ಲಾನ್ 01 : ಸಿಸಿಟಿವಿ ಜೊತೆ ಕಣ್ಣಾಮುಚ್ಚಾಲೆ
ಪ್ರಬುದ್ಧ ಮನೆ ಮುಂದಿನ ಸಿಸಿಟಿವಿ ತಪ್ಪಿಸಲು ಖತರ್ನಾಕ್ ಸಂಚು ರೂಪಿಸಿದ್ದ. ಇದೇ ಕಾರಣಕ್ಕೆ ಅಕ್ಕಪಕ್ಕದ ಮನೆಯ ಟೆರೆಸ್ ಮೇಲಿಂದ ಆರೋಪಿ ಪ್ರಬುದ್ಧ ಮನೆಗೆ ಎಂಟ್ರಿ ಕೊಟ್ಟಿದ್ದ.
ಪ್ಲಾನ್ 02 : ಆತ್ಮಹತ್ಯೆಗೆ ಯತ್ನಿಸಿದ ವಿಚಾರ ತಿಳಿದೇ ಕೈ ಕಟ್
ಪ್ರಬುದ್ಧ ಮನೆಗೆ ಹಿಂದಿನ ಬಾಗಿಲಿನಿಂದ ಎಂಟ್ರಿಕೊಟ್ಟಿದ್ದ ಆರೋಪಿ, ಬರುವ ಮೊದಲೇ ಮರ್ಡರ್ ಪ್ಲಾನ್ ಮಾಡಿದ್ದ. ಹೀಗಾಗಿ ಬರಬರುತ್ತ ಕದ್ದಿದ್ದನ್ನ ಅಪ್ಪ-ಅಮ್ಮಗೆ ಹೇಳಬೇಡಿ ಅಂತ ಪ್ರಬುದ್ಧಗೆ ಕೇಳಿದ್ದ. ಮನವಿಗೆ ಸ್ಪಂದಿಸದಿದ್ದಾಗ ಪ್ರಬುದ್ಧಳ ಕೊಲೆಗೆ ತೀರ್ಮಾನಿಸಿದ್ದ. ಆಕೆ ಈ ಹಿಂದೆ ಆತ್ಮಹತ್ಯೆಗೆ ಯತ್ನಿಸಿದ ವಿಚಾರ ತಿಳಿದು ಪ್ರಜ್ಞೆ ತಪ್ಪಿ ಬಿದ್ದಿದ್ದ ಪ್ರಬುದ್ಧಾಳ ಕೈಯನ್ನ ತನ್ನ ಚಾಕುವಿನಿಂದ ಕಟ್ ಮಾಡಿದ್ದ.
ಪ್ಲಾನ್ 03: ವೈದ್ಯರಿಗೂ ಚಳ್ಳೆಹಣ್ಣು ತಿನ್ನಿಸಿದ್ದ ಆರೋಪಿ
ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದ ವೈದ್ಯರಿಗೂ ಆರೋಪಿ ಯಾಮಾರಿಸಿದ್ದ. ಇದಕ್ಕೆ ಪುಷ್ಟಿ ನೀಡುವಂತೆ ಪ್ರಬುದ್ಧ ದೇಹದ ಮೇಲೆ ಬೇರೆ ವ್ಯಕ್ತಿಯ ಬೆರಳಚ್ಚು ಪತ್ತೆಯಾಗಿಲ್ಲ. ಹೀಗಾಗಿ ಕೈ ಕಟ್ ಆಗಿ ರಕ್ತಸ್ರಾವವಾಗಿ ಸಾವಿಗೀಡಾಗಿದ್ದಾರೆ. ಇದು ಆತ್ಮಹತ್ಯೆಯಂತ ವೈದ್ಯರು ವರದಿ ನೀಡಿದ್ದರು.
ಇಷ್ಟೆಲ್ಲ ಕ್ರಿಮಿನಲ್ ಮೈಂಡ್ ಹೊಂದಿದ್ದ 15ರ ಹಂತಕ ಈ ವಯಸ್ಸಿಗೆ ಅದೆಲ್ಲಿಂದ ಇಷ್ಟೋಂದು ಧೈರ್ಯ, ಕ್ರೌರ್ಯ ಮೈಗೂಡಿಸಿಕೊಂಡನೋ ಗೊತ್ತಿಲ್ಲ. ಆದ್ರೆ, ಅದ್ಯವಾ ಸಿಸಿಟಿವಿ ಕಣ್ಣಿಂದ ತಪ್ಪಿಸಿಕೊಳ್ಳಲು ಜಂಪಿಂಗ್ ಜಂಪಾಗ್ ನಡೆಸಿದ್ನೋ, ಎಕ್ಸಿಟ್ ಆಗೋ ವೇಳೆ ಅದೇ ಸಿಸಿಟಿವಿಯಲ್ಲಿ ಸೆರೆಯಾಗಿ ಈಗ ಜೈಲು ಸೇರಿಸಿದ್ದಾನೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ