ಬಿಗ್ಬಾಸ್ ಮೂಲಕ ಸಾಕಷ್ಟು ಫ್ಯಾನ್ಸ್ಗಳನ್ನ ಗಳಿಸಿಕೊಂಡ ಬೆಂಕಿ
ಬಿಗ್ಬಾಸ್ ಸೀಸನ್ 10ಕ್ಕೆ ಎಂಟ್ರಿ ಕೊಟ್ಟಿದ್ದ ತನಿಷಾ ಕುಪ್ಪಂಡ
ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಯ್ತು ಬಿಗ್ ಸ್ಟಾರ್ಗಳ ವಿಡಿಯೋ
ಕನ್ನಡದ ಬಿಗ್ ರಿಯಾಲಿಟಿ ಶೋ ಬಿಗ್ಬಾಸ್ ಸೀಸನ್ 10ರ ಸ್ಪರ್ಧಿಯಾಗಿದ್ದ ತನಿಷಾ ಕುಪ್ಪಂಡ ಅವರು ಹೊಸ ಶಾಪ್ವೊಂದನ್ನು ಶುರು ಮಾಡಿದ್ದಾರೆ. ಹೌದು, ಬಿಗ್ಬಾಸ್ ಮೂಲಕ ಅಪಾರ ಅಭಿಮಾನಿಗಳನ್ನು ಗಳಿಸಿಕೊಂಡಿದ್ದ ತನಿಷಾ ಅವರು ಬೆಂಕಿ ಅಂತಲೇ ಸಾಕಷ್ಟು ಜನಪ್ರಿಯತೆ ಗಳಿಸಿಕೊಂಡಿದ್ದರು. ಇದೀಗ ಬಿಗ್ ಮನೆಯಿಂದ ಹೊರ ಬಂದ ಕೂಡಲೇ ತಮ್ಮ ಬಹುದಿನದ ಆಸೆಯನ್ನು ಈಡೇರಿಸಿಕೊಂಡಿದ್ದಾರೆ.
ಇದನ್ನೂ ಓದಿ: ಮಹಾನ್ ವೇದಿಕೆಗೆ ಎಂಟ್ರಿಕೊಟ್ಟು ಮೋಡಿ ಮಾಡಿದ ಆಶಿಕಾ ವರ್ಮಾ; ಯಾರು ಈಕೆ..?
ತನಿಷಾ ಕುಪ್ಪಂಡ ಅವರು ವಿಜಯನಗರ ಕ್ಲಬ್ ರೋಡ್ನಲ್ಲಿ ತಮ್ಮ ಹೊಸ ಜ್ಯೂವೆಲರಿ ಶಾಪ್ವೊಂದನ್ನು ಓಪನ್ ಮಾಡಿದ್ದಾರೆ. ಈ ಶಾಪ್ನಲ್ಲಿ ಎಲ್ಲ ತರಹದ ನೆಕ್ಲೆಸ್ಗಳು ದೊರೆಯುತ್ತವೆ. ಇನ್ನು, ನಿನ್ನೆಯಷ್ಟೇ ತನಿಷಾ ಕುಪ್ಪಂಡ ಅವರು ತಮ್ಮ ಹೊಸ ಜ್ಯೂವೆಲರಿ ಶಾಪ್ವೊಂದನ್ನು ಶುರು ಮಾಡಿದ್ದಾರೆ. ಈ ಸಮಾರಂಭಕ್ಕೆ ಬಿಗ್ಬಾಸ್ ಸ್ಪರ್ಧಿಗಳಾದ ಕಾರ್ತಿಕ್ ಮಹೇಶ್, ವಿನಯ್ ಗೌಡ, ನಮ್ರತಾ ಗೌಡ, ನೀತು, ಸಿರಿ, ಪವಿ, ರಕ್ಷಕ್ ಬುಲೆಟ್, ಸ್ನೇಹಿತ್ ಗೌಡ, ವರ್ತೂರು ಸಂತೋಷ್ ಬಂದಿದ್ದರು. ಇನ್ನು ಕಿರುತೆರೆ ನಟ ನಟಿಯರು ಕೂಡ ಶಾಪ್ಗೆ ಆಗಮಿಸಿದ್ದರು. ಆದರೆ ಅದರಲ್ಲಿ ಸಂಗೀತಾ ಶೃಂಗೇರಿ ಮಾತ್ರ ಬಂದಿರಲಿಲ್ಲ. ಇದೇ ವೇಳೆ ಸುದ್ದಿಗಾರರೊಬ್ಬರು ಬಿಗ್ಬಾಸ್ನ ಎಲ್ಲ ಸ್ಪರ್ಧಿಗಳು ಬಂದಿದ್ದಾರೆ. ಆದರೆ ಸಂಗೀತಾ ಅವರು ಬಂದಿದ್ರೆ ಎಷ್ಟೂ ಖುಷಿ ಆಗುತ್ತಿತ್ತು ಎಂದು ಕೇಳಿದ್ದಾರೆ.
View this post on Instagram
ಇದಕ್ಕೆ ಪ್ರತಿಕ್ರಿಯೆ ನೀಡಿದ ಕಾರ್ತಿಕ್ ಅವರು, ಹೌದು ಸಂಗೀತಾ ಅವರು ಬಂದಿದ್ದರೆ ತುಂಬಾ ಅಂದ್ರೆ ತುಂಬಾ ಖುಷಿ ಆಗುತ್ತಿತ್ತು ಎಂದಿದ್ದಾರೆ. ಬಳಿಕ ಮಾತಾಡಿದ ತನಿಷಾ ಅವರು, ಅವರಿಗೆ ಕಾಲ್ ಮಾಡಿದ್ದೆ. ಆದರೆ ಅವರು ಬ್ಯುಸಿ ಇದ್ದೇನೆ ಅಂತಾ ಹೇಳಿದ್ರು. ಮುಂದಿನ ದಿನಗಳಲ್ಲಿ ಬರಬಹುದು ಎಂದು ಹೇಳಿದ್ದಾರೆ. ಸದ್ಯ ಈ ಬಗ್ಗೆ ತನಿಷಾ ಅವರು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಈ ಬಗ್ಗೆ ಶೇರ್ ಮಾಡಿಕೊಂಡಿದ್ದಾರೆ. ಈ ವಿಚಾರ ತಿಳಿಯುತ್ತಿದ್ದಂತೆ ಅಭಿಮಾನಿಗಳು ತನಿಷಾ ಅವರಿಗೆ ಶುಭ ಕೋರುತ್ತಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ಬಿಗ್ಬಾಸ್ ಮೂಲಕ ಸಾಕಷ್ಟು ಫ್ಯಾನ್ಸ್ಗಳನ್ನ ಗಳಿಸಿಕೊಂಡ ಬೆಂಕಿ
ಬಿಗ್ಬಾಸ್ ಸೀಸನ್ 10ಕ್ಕೆ ಎಂಟ್ರಿ ಕೊಟ್ಟಿದ್ದ ತನಿಷಾ ಕುಪ್ಪಂಡ
ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಯ್ತು ಬಿಗ್ ಸ್ಟಾರ್ಗಳ ವಿಡಿಯೋ
ಕನ್ನಡದ ಬಿಗ್ ರಿಯಾಲಿಟಿ ಶೋ ಬಿಗ್ಬಾಸ್ ಸೀಸನ್ 10ರ ಸ್ಪರ್ಧಿಯಾಗಿದ್ದ ತನಿಷಾ ಕುಪ್ಪಂಡ ಅವರು ಹೊಸ ಶಾಪ್ವೊಂದನ್ನು ಶುರು ಮಾಡಿದ್ದಾರೆ. ಹೌದು, ಬಿಗ್ಬಾಸ್ ಮೂಲಕ ಅಪಾರ ಅಭಿಮಾನಿಗಳನ್ನು ಗಳಿಸಿಕೊಂಡಿದ್ದ ತನಿಷಾ ಅವರು ಬೆಂಕಿ ಅಂತಲೇ ಸಾಕಷ್ಟು ಜನಪ್ರಿಯತೆ ಗಳಿಸಿಕೊಂಡಿದ್ದರು. ಇದೀಗ ಬಿಗ್ ಮನೆಯಿಂದ ಹೊರ ಬಂದ ಕೂಡಲೇ ತಮ್ಮ ಬಹುದಿನದ ಆಸೆಯನ್ನು ಈಡೇರಿಸಿಕೊಂಡಿದ್ದಾರೆ.
ಇದನ್ನೂ ಓದಿ: ಮಹಾನ್ ವೇದಿಕೆಗೆ ಎಂಟ್ರಿಕೊಟ್ಟು ಮೋಡಿ ಮಾಡಿದ ಆಶಿಕಾ ವರ್ಮಾ; ಯಾರು ಈಕೆ..?
ತನಿಷಾ ಕುಪ್ಪಂಡ ಅವರು ವಿಜಯನಗರ ಕ್ಲಬ್ ರೋಡ್ನಲ್ಲಿ ತಮ್ಮ ಹೊಸ ಜ್ಯೂವೆಲರಿ ಶಾಪ್ವೊಂದನ್ನು ಓಪನ್ ಮಾಡಿದ್ದಾರೆ. ಈ ಶಾಪ್ನಲ್ಲಿ ಎಲ್ಲ ತರಹದ ನೆಕ್ಲೆಸ್ಗಳು ದೊರೆಯುತ್ತವೆ. ಇನ್ನು, ನಿನ್ನೆಯಷ್ಟೇ ತನಿಷಾ ಕುಪ್ಪಂಡ ಅವರು ತಮ್ಮ ಹೊಸ ಜ್ಯೂವೆಲರಿ ಶಾಪ್ವೊಂದನ್ನು ಶುರು ಮಾಡಿದ್ದಾರೆ. ಈ ಸಮಾರಂಭಕ್ಕೆ ಬಿಗ್ಬಾಸ್ ಸ್ಪರ್ಧಿಗಳಾದ ಕಾರ್ತಿಕ್ ಮಹೇಶ್, ವಿನಯ್ ಗೌಡ, ನಮ್ರತಾ ಗೌಡ, ನೀತು, ಸಿರಿ, ಪವಿ, ರಕ್ಷಕ್ ಬುಲೆಟ್, ಸ್ನೇಹಿತ್ ಗೌಡ, ವರ್ತೂರು ಸಂತೋಷ್ ಬಂದಿದ್ದರು. ಇನ್ನು ಕಿರುತೆರೆ ನಟ ನಟಿಯರು ಕೂಡ ಶಾಪ್ಗೆ ಆಗಮಿಸಿದ್ದರು. ಆದರೆ ಅದರಲ್ಲಿ ಸಂಗೀತಾ ಶೃಂಗೇರಿ ಮಾತ್ರ ಬಂದಿರಲಿಲ್ಲ. ಇದೇ ವೇಳೆ ಸುದ್ದಿಗಾರರೊಬ್ಬರು ಬಿಗ್ಬಾಸ್ನ ಎಲ್ಲ ಸ್ಪರ್ಧಿಗಳು ಬಂದಿದ್ದಾರೆ. ಆದರೆ ಸಂಗೀತಾ ಅವರು ಬಂದಿದ್ರೆ ಎಷ್ಟೂ ಖುಷಿ ಆಗುತ್ತಿತ್ತು ಎಂದು ಕೇಳಿದ್ದಾರೆ.
View this post on Instagram
ಇದಕ್ಕೆ ಪ್ರತಿಕ್ರಿಯೆ ನೀಡಿದ ಕಾರ್ತಿಕ್ ಅವರು, ಹೌದು ಸಂಗೀತಾ ಅವರು ಬಂದಿದ್ದರೆ ತುಂಬಾ ಅಂದ್ರೆ ತುಂಬಾ ಖುಷಿ ಆಗುತ್ತಿತ್ತು ಎಂದಿದ್ದಾರೆ. ಬಳಿಕ ಮಾತಾಡಿದ ತನಿಷಾ ಅವರು, ಅವರಿಗೆ ಕಾಲ್ ಮಾಡಿದ್ದೆ. ಆದರೆ ಅವರು ಬ್ಯುಸಿ ಇದ್ದೇನೆ ಅಂತಾ ಹೇಳಿದ್ರು. ಮುಂದಿನ ದಿನಗಳಲ್ಲಿ ಬರಬಹುದು ಎಂದು ಹೇಳಿದ್ದಾರೆ. ಸದ್ಯ ಈ ಬಗ್ಗೆ ತನಿಷಾ ಅವರು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಈ ಬಗ್ಗೆ ಶೇರ್ ಮಾಡಿಕೊಂಡಿದ್ದಾರೆ. ಈ ವಿಚಾರ ತಿಳಿಯುತ್ತಿದ್ದಂತೆ ಅಭಿಮಾನಿಗಳು ತನಿಷಾ ಅವರಿಗೆ ಶುಭ ಕೋರುತ್ತಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ