ವರ್ತೂರು ಸಂತೋಷ್ ಮತ್ತು ತುಕಾಲಿ ಸಂತೋಷ್ ಕಣ್ಣೀರು
ಬಿಗ್ ಬಾಸ್ನಲ್ಲಿ ಚೆನ್ನಾಗಿ ಆಡಿ ಗೆದ್ದುಕೊಂಡು ಬಾ ಎಂದ ಕುಚಿಕು
ನಿಮ್ಮಿಬ್ಬರದ್ದು ನಿಷ್ಕಳಂಕವಾದ ಫ್ರೆಂಡ್ಶಿಪ್ ಎಂದ ಕಿಚ್ಚ ಸುದೀಪ್
ಬಹು ಪ್ರೇಕ್ಷಕರ ಮನ ಗೆದ್ದಿರುವ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ 10 ಕಾರ್ಯಕ್ರಮ 14ನೇ ವಾರಾಂತ್ಯದತ್ತ ಬಂದು ನಿಂತಿದೆ. ಇಂದು ದೊಡ್ಮನೆಯಲ್ಲಿ ಎಲಿಮಿನೇಷನ್ ನಡೆಯಲಿಕ್ಕಿದೆ. ವರ್ತೂರು ಸಂತೋಷ್ ಅಥವಾ ತುಕಾಲಿ ಸಂತೋಷ್ ಇಬ್ಬರಲ್ಲಿ ಒಬ್ಬರು ಇಂದು ಮನೆಯಿಂದ ಹೊರ ಹೋಗೋದು ಪಕ್ಕಾ ಅನ್ನೋದನ್ನ ಕಿಚ್ಚ ಸುದೀಪ್ ಅವರೇ ಹೇಳಿದ್ದಾರೆ.
ಸಂತು-ಪಂತು ಕಣ್ಣಂಚಲ್ಲಿ ನೀರು
ಬಿಗ್ ಬಾಸ್ ಮನೆಗೆ ಕಾಲಿಟ್ಟ ಬಳಿಕ ತುಕಾಲಿ ಮತ್ತು ವರ್ತೂರು ಸ್ನೇಹ ಗಟ್ಟಿಯಾಗಿದೆ. ಆದರೀಗ ಎಲಿಮಿನೇಷನ್ ಪ್ರಕ್ರಿಯೆ ಬಂದಾಗ ಇಬ್ಬರು ಕಣ್ಣೀರು ಸುರಿಸಿದ್ದಾರೆ. ಸ್ನೇಹವನ್ನು ಬಿಟ್ಟಿರಲಾಗದ ಇಬ್ಬರು ಅತ್ತಿದ್ದಾರೆ. ಇವರ ಸ್ನೇಹವನ್ನು ಕಿಚ್ಚ ಸುದೀಪ್ ಕೊಂಡಾಡಿದ್ದಾರೆ.
ಚೆನ್ನಾಗಿ ಆಡಿ ಗೆದ್ದುಕೊಂಡು ಬಾ
ತುಕಾಲಿ ತನ್ನ ಬೆಸ್ಟ್ ಫ್ರೆಂಡ್ ವರ್ತೂರ್ ಸಂತೋಷ್ಗೆ ಚೆನ್ನಾಗಿ ಆಡಿ ಗೆದ್ದುಕೊಂಡು ಬಾ ಎಂದು ಹೇಳಿದ್ದಾರೆ. ಅತ್ತ ವರ್ತೂರ್ ಆತನ ಗೆಲುವನ್ನು ನಾನು ನೋಡಬೇಕು ಎಂದು ತುಕಾಲಿಗೆ ಹಾರೈಸಿದ್ದಾರೆ.
ಇವರಿಬ್ಬರ ಸ್ನೇಹ, ಕಣ್ಣೀರನ್ನು ಕಂಡ ಕಿಚ್ಚ ಸುದೀಪ್ ಅವರು ಯಾರಲ್ಲಿ ನೋಡದೆ ಇರುವ ಬಾಂಧವ್ಯ ನಾನು ನಿಮ್ಮಿಬ್ಬರ್ರಲ್ಲಿ ನೋಡಿದ್ದೇನೆ. ನಿಷ್ಕಳಂಕವಾದ ಫ್ರೆಂಡ್ಶಿಪ್ ಎಂದು ಹೇಳಿದ್ದಾರೆ.
ಸಂತು-ಪಂತು ದೂರವಾಗುವ ಸಮಯ ಬಂದೇಬಿಟ್ಟಿದೆ!
Super Sunday with ಸುದೀಪ | ಇಂದು ರಾತ್ರಿ 9#BBK10 #HappyBiggBoss #KichchaSudeep #ColorsKannada #ಬಣ್ಣಹೊಸದಾಗಿದೆ #ಬಂಧಬಿಗಿಯಾಗಿದೆ pic.twitter.com/YXyFsq4URW
— Colors Kannada (@ColorsKannada) January 14, 2024
ಒಟ್ಟಿನಲ್ಲಿ ಇಂದಿನ ಎಪಿಸೋಡ್ ಭಾರೀ ಕುತೂಹಲ ಕೆರಳಿಸಿದೆ. ಅತ್ತ ವರ್ತೂರ್ ಹೋಗ್ತಾರಾ? ತುಕಾಲಿ ಹೋಗ್ತಾರಾ? ಎಂಬ ಪ್ರಶ್ನೆ ಎಲ್ಲರನ್ನು ಕಾಡಿದೆ. ಅದರಲ್ಲಿ ಇಬ್ಬರ ನಡುವಿನ ಸ್ನೇಹದ ಕಣ್ಣೀರು ಮಾತ್ರ ಪ್ರೇಕ್ಷಕರ ಕಣ್ಣಾಲಿಯನ್ನು ಒದ್ದೆ ಮಾಡೋದಂತು ನಿಜ
ವರ್ತೂರು ಸಂತೋಷ್ ಮತ್ತು ತುಕಾಲಿ ಸಂತೋಷ್ ಕಣ್ಣೀರು
ಬಿಗ್ ಬಾಸ್ನಲ್ಲಿ ಚೆನ್ನಾಗಿ ಆಡಿ ಗೆದ್ದುಕೊಂಡು ಬಾ ಎಂದ ಕುಚಿಕು
ನಿಮ್ಮಿಬ್ಬರದ್ದು ನಿಷ್ಕಳಂಕವಾದ ಫ್ರೆಂಡ್ಶಿಪ್ ಎಂದ ಕಿಚ್ಚ ಸುದೀಪ್
ಬಹು ಪ್ರೇಕ್ಷಕರ ಮನ ಗೆದ್ದಿರುವ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ 10 ಕಾರ್ಯಕ್ರಮ 14ನೇ ವಾರಾಂತ್ಯದತ್ತ ಬಂದು ನಿಂತಿದೆ. ಇಂದು ದೊಡ್ಮನೆಯಲ್ಲಿ ಎಲಿಮಿನೇಷನ್ ನಡೆಯಲಿಕ್ಕಿದೆ. ವರ್ತೂರು ಸಂತೋಷ್ ಅಥವಾ ತುಕಾಲಿ ಸಂತೋಷ್ ಇಬ್ಬರಲ್ಲಿ ಒಬ್ಬರು ಇಂದು ಮನೆಯಿಂದ ಹೊರ ಹೋಗೋದು ಪಕ್ಕಾ ಅನ್ನೋದನ್ನ ಕಿಚ್ಚ ಸುದೀಪ್ ಅವರೇ ಹೇಳಿದ್ದಾರೆ.
ಸಂತು-ಪಂತು ಕಣ್ಣಂಚಲ್ಲಿ ನೀರು
ಬಿಗ್ ಬಾಸ್ ಮನೆಗೆ ಕಾಲಿಟ್ಟ ಬಳಿಕ ತುಕಾಲಿ ಮತ್ತು ವರ್ತೂರು ಸ್ನೇಹ ಗಟ್ಟಿಯಾಗಿದೆ. ಆದರೀಗ ಎಲಿಮಿನೇಷನ್ ಪ್ರಕ್ರಿಯೆ ಬಂದಾಗ ಇಬ್ಬರು ಕಣ್ಣೀರು ಸುರಿಸಿದ್ದಾರೆ. ಸ್ನೇಹವನ್ನು ಬಿಟ್ಟಿರಲಾಗದ ಇಬ್ಬರು ಅತ್ತಿದ್ದಾರೆ. ಇವರ ಸ್ನೇಹವನ್ನು ಕಿಚ್ಚ ಸುದೀಪ್ ಕೊಂಡಾಡಿದ್ದಾರೆ.
ಚೆನ್ನಾಗಿ ಆಡಿ ಗೆದ್ದುಕೊಂಡು ಬಾ
ತುಕಾಲಿ ತನ್ನ ಬೆಸ್ಟ್ ಫ್ರೆಂಡ್ ವರ್ತೂರ್ ಸಂತೋಷ್ಗೆ ಚೆನ್ನಾಗಿ ಆಡಿ ಗೆದ್ದುಕೊಂಡು ಬಾ ಎಂದು ಹೇಳಿದ್ದಾರೆ. ಅತ್ತ ವರ್ತೂರ್ ಆತನ ಗೆಲುವನ್ನು ನಾನು ನೋಡಬೇಕು ಎಂದು ತುಕಾಲಿಗೆ ಹಾರೈಸಿದ್ದಾರೆ.
ಇವರಿಬ್ಬರ ಸ್ನೇಹ, ಕಣ್ಣೀರನ್ನು ಕಂಡ ಕಿಚ್ಚ ಸುದೀಪ್ ಅವರು ಯಾರಲ್ಲಿ ನೋಡದೆ ಇರುವ ಬಾಂಧವ್ಯ ನಾನು ನಿಮ್ಮಿಬ್ಬರ್ರಲ್ಲಿ ನೋಡಿದ್ದೇನೆ. ನಿಷ್ಕಳಂಕವಾದ ಫ್ರೆಂಡ್ಶಿಪ್ ಎಂದು ಹೇಳಿದ್ದಾರೆ.
ಸಂತು-ಪಂತು ದೂರವಾಗುವ ಸಮಯ ಬಂದೇಬಿಟ್ಟಿದೆ!
Super Sunday with ಸುದೀಪ | ಇಂದು ರಾತ್ರಿ 9#BBK10 #HappyBiggBoss #KichchaSudeep #ColorsKannada #ಬಣ್ಣಹೊಸದಾಗಿದೆ #ಬಂಧಬಿಗಿಯಾಗಿದೆ pic.twitter.com/YXyFsq4URW
— Colors Kannada (@ColorsKannada) January 14, 2024
ಒಟ್ಟಿನಲ್ಲಿ ಇಂದಿನ ಎಪಿಸೋಡ್ ಭಾರೀ ಕುತೂಹಲ ಕೆರಳಿಸಿದೆ. ಅತ್ತ ವರ್ತೂರ್ ಹೋಗ್ತಾರಾ? ತುಕಾಲಿ ಹೋಗ್ತಾರಾ? ಎಂಬ ಪ್ರಶ್ನೆ ಎಲ್ಲರನ್ನು ಕಾಡಿದೆ. ಅದರಲ್ಲಿ ಇಬ್ಬರ ನಡುವಿನ ಸ್ನೇಹದ ಕಣ್ಣೀರು ಮಾತ್ರ ಪ್ರೇಕ್ಷಕರ ಕಣ್ಣಾಲಿಯನ್ನು ಒದ್ದೆ ಮಾಡೋದಂತು ನಿಜ