newsfirstkannada.com

ವೇದಿಕೆ ಮೇಲೆ ಗಳಗಳನೆ ಕಣ್ಣೀರಿಟ್ಟ ಬಿಗ್​ಬಾಸ್​ ವಿನ್ನರ್​ ಶಶಿ ಕುಮಾರ್​; ಕಾರಣ?

Share :

Published February 24, 2024 at 7:43pm

    ಬಿಗ್​ಬಾಸ್​ ಸೀಸನ್​ 6ರ ವಿನ್ನರ್​ ಆಗಿದ್ದ ಶಶಿಕುಮಾರ್

    ಸಿನಿಮಾ ಟೀಸರ್ ಲಾಂಚಿಂಗ್ ವೇಳೆ ಕಣ್ಣೀರಿಟ್ಟ ನಟ

    ನೀನು ಯಾವ ಸೀಮೆ ರೈತ ಅಂತಾ ಹೇಳಿದ್ರು!

ಕನ್ನಡದ ಬಿಗ್​ ರಿಯಾಲಿಟಿ ಶೋ ಬಿಗ್​ಬಾಸ್​ ಸೀಸನ್​ 6ರ ವಿನ್ನರ್​ ಆಗಿ ಹೊರಹೊಮ್ಮಿದ ಶಶಿಕುಮಾರ್ ಅವರು ಕಣ್ಣೀರಿಟ್ಟಿದ್ದಾರೆ. ಬಿಗ್​ಬಾಸ್​ ವಿನ್ನರ್​ ಆಗಿರೋ ನಟ ಶಶಿ ಕುಮಾರ್​ ಅವರು ಅಭಿನಯಿಸಿರೋ ಸಿನಿಮಾ ಮೆಹಬೂಬಾ. ಈಗಾಗಲೇ ಈ ಸಿನಿಮಾ ಸಾಕಷ್ಟು ಸುದ್ದಿಯಾಗುತ್ತಿದೆ.

ಇದನ್ನು ಓದಿ: VIDEO: ಮೆಹಬೂಬಾ ಶೂಟಿಂಗ್ ವೇಳೆ ಅವಘಡ; ಬಿಲ್ಡಿಂಗ್​ ಮೇಲಿಂದ ಬಿದ್ದ ಬಿಗ್​ಬಾಸ್​ ವಿನ್ನರ್​ ನಟ ಶಶಿಕುಮಾರ್

ಇದೀಗ ಶಶಿ ನಟನೆಯ ಮೆಹಬೂಬ ಸಿನಿಮಾದ ಟೀಸರ್ ಲಾಂಚ್ ಮಾಡಲಾಗಿದೆ. ಮೆಹಬೂಬ ಟೀಸರ್ ಲಾಂಚ್ ಕಾರ್ಯಕ್ರಮದಲ್ಲಿ ಬಿಗ್​ಬಾಸ್ ಸೀಸನ್​ 10ರ ಸ್ಪರ್ಧಿಗಳು ಕೂಡಾ ಆಗಮಿಸಿದ್ದರು. ಸೀಸನ್ 10 ವಿನ್ನರ್ ಕಾರ್ತಿಕ್ ಮಹೇಶ್ ಅವರಿಂದಲೇ ಮೆಹಬೂಬ ಟೀಸರ್ ಲಾಂಚ್ ಮಾಡಿಸಿದ್ದಾರೆ. ಇನ್ನೂ ಇದೇ ವೇಳೆ ವೇದಿಕೆ ಮೇಲೆ ಮಾತಾಡುತ್ತಿದ್ದಾಗ ನಟ ಶಶಿ ಕುಮಾರ್​ ಅವರು ಭಾವುಕರಾಗಿದ್ದರು.

ಈ ವೇಳೆ ಸಿನಿಮಾವನ್ನು ತುಂಬಾ ಕಷ್ಟಪಟ್ಟು ಮಾಡಿದ್ದೇವೆ. ನಮ್ಮ ತಾಯಣೆಗೂ ಇದು ಪಬ್ಲಿಸಿಟಿ ಗಿಮಿಕ್ ಅಲ್ಲ. ಈ ಸಿನಿಮಾ ಬಗ್ಗೆ ಮಾತಾನಾಡಬೇಕು ಅಂದಾಗ ನೋವಾಗುತ್ತದೆ. ಬಿಗ್​ಬಾಸ್​ನಿಂದ ಆಚೆ ಬಂದಾಗ ಎಲ್ಲರೂ ನನ್ನನ್ನು ನೀನು ಯಾವ ಸೀಮೆ ರೈತ ಅಂತಾ ಹೇಳುತ್ತಿದ್ದರು. ರೈತ ಅಂತೀರಾ, ಈ‌ ರೀತಿ ಬಟ್ಟೆ ಹಾಕ್ತಿಯಾ ಅಂತ ಕೇಳಿದ್ದರು. ನಮ್ಮ ತಾಯಾಣೆ ನಾನು ಯಾವತ್ತು ಸೋಲನ್ನು ಒಪ್ಪಿಕೊಂಡವನಲ್ಲ. ನಾನು ರೈತನ ಮಗ ಅಲ್ಲ ನಾನೇ ರೈತ. ನಾನು 40 ಪ್ರಾಡಕ್ಟ್​ಗಳ ಡೆವಲಪ್ ಮಾಡಿದ್ದೀನಿ. ನಾನು ಶೋಕಿಗಾಗಿ ನಿರ್ಮಾಪಕ ಆದವನಲ್ಲ. ಕಳೆದ ಒಂದು ತಿಂಗಳಿನಿಂದ ಸರಿಯಾಗಿ ನಿದ್ದೆ ಮಾಡ್ತಿಲ್ಲ. ನಾನು ಇಡೀ ತಂಡದ ಜೊತೆ ಕಿತ್ತಾಡಿದ್ದೀನಿ ಅಂತ ಶಶಿ ಕಣ್ಣೀರಿಟ್ಟರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ವೇದಿಕೆ ಮೇಲೆ ಗಳಗಳನೆ ಕಣ್ಣೀರಿಟ್ಟ ಬಿಗ್​ಬಾಸ್​ ವಿನ್ನರ್​ ಶಶಿ ಕುಮಾರ್​; ಕಾರಣ?

https://newsfirstlive.com/wp-content/uploads/2024/02/shashi.jpg

    ಬಿಗ್​ಬಾಸ್​ ಸೀಸನ್​ 6ರ ವಿನ್ನರ್​ ಆಗಿದ್ದ ಶಶಿಕುಮಾರ್

    ಸಿನಿಮಾ ಟೀಸರ್ ಲಾಂಚಿಂಗ್ ವೇಳೆ ಕಣ್ಣೀರಿಟ್ಟ ನಟ

    ನೀನು ಯಾವ ಸೀಮೆ ರೈತ ಅಂತಾ ಹೇಳಿದ್ರು!

ಕನ್ನಡದ ಬಿಗ್​ ರಿಯಾಲಿಟಿ ಶೋ ಬಿಗ್​ಬಾಸ್​ ಸೀಸನ್​ 6ರ ವಿನ್ನರ್​ ಆಗಿ ಹೊರಹೊಮ್ಮಿದ ಶಶಿಕುಮಾರ್ ಅವರು ಕಣ್ಣೀರಿಟ್ಟಿದ್ದಾರೆ. ಬಿಗ್​ಬಾಸ್​ ವಿನ್ನರ್​ ಆಗಿರೋ ನಟ ಶಶಿ ಕುಮಾರ್​ ಅವರು ಅಭಿನಯಿಸಿರೋ ಸಿನಿಮಾ ಮೆಹಬೂಬಾ. ಈಗಾಗಲೇ ಈ ಸಿನಿಮಾ ಸಾಕಷ್ಟು ಸುದ್ದಿಯಾಗುತ್ತಿದೆ.

ಇದನ್ನು ಓದಿ: VIDEO: ಮೆಹಬೂಬಾ ಶೂಟಿಂಗ್ ವೇಳೆ ಅವಘಡ; ಬಿಲ್ಡಿಂಗ್​ ಮೇಲಿಂದ ಬಿದ್ದ ಬಿಗ್​ಬಾಸ್​ ವಿನ್ನರ್​ ನಟ ಶಶಿಕುಮಾರ್

ಇದೀಗ ಶಶಿ ನಟನೆಯ ಮೆಹಬೂಬ ಸಿನಿಮಾದ ಟೀಸರ್ ಲಾಂಚ್ ಮಾಡಲಾಗಿದೆ. ಮೆಹಬೂಬ ಟೀಸರ್ ಲಾಂಚ್ ಕಾರ್ಯಕ್ರಮದಲ್ಲಿ ಬಿಗ್​ಬಾಸ್ ಸೀಸನ್​ 10ರ ಸ್ಪರ್ಧಿಗಳು ಕೂಡಾ ಆಗಮಿಸಿದ್ದರು. ಸೀಸನ್ 10 ವಿನ್ನರ್ ಕಾರ್ತಿಕ್ ಮಹೇಶ್ ಅವರಿಂದಲೇ ಮೆಹಬೂಬ ಟೀಸರ್ ಲಾಂಚ್ ಮಾಡಿಸಿದ್ದಾರೆ. ಇನ್ನೂ ಇದೇ ವೇಳೆ ವೇದಿಕೆ ಮೇಲೆ ಮಾತಾಡುತ್ತಿದ್ದಾಗ ನಟ ಶಶಿ ಕುಮಾರ್​ ಅವರು ಭಾವುಕರಾಗಿದ್ದರು.

ಈ ವೇಳೆ ಸಿನಿಮಾವನ್ನು ತುಂಬಾ ಕಷ್ಟಪಟ್ಟು ಮಾಡಿದ್ದೇವೆ. ನಮ್ಮ ತಾಯಣೆಗೂ ಇದು ಪಬ್ಲಿಸಿಟಿ ಗಿಮಿಕ್ ಅಲ್ಲ. ಈ ಸಿನಿಮಾ ಬಗ್ಗೆ ಮಾತಾನಾಡಬೇಕು ಅಂದಾಗ ನೋವಾಗುತ್ತದೆ. ಬಿಗ್​ಬಾಸ್​ನಿಂದ ಆಚೆ ಬಂದಾಗ ಎಲ್ಲರೂ ನನ್ನನ್ನು ನೀನು ಯಾವ ಸೀಮೆ ರೈತ ಅಂತಾ ಹೇಳುತ್ತಿದ್ದರು. ರೈತ ಅಂತೀರಾ, ಈ‌ ರೀತಿ ಬಟ್ಟೆ ಹಾಕ್ತಿಯಾ ಅಂತ ಕೇಳಿದ್ದರು. ನಮ್ಮ ತಾಯಾಣೆ ನಾನು ಯಾವತ್ತು ಸೋಲನ್ನು ಒಪ್ಪಿಕೊಂಡವನಲ್ಲ. ನಾನು ರೈತನ ಮಗ ಅಲ್ಲ ನಾನೇ ರೈತ. ನಾನು 40 ಪ್ರಾಡಕ್ಟ್​ಗಳ ಡೆವಲಪ್ ಮಾಡಿದ್ದೀನಿ. ನಾನು ಶೋಕಿಗಾಗಿ ನಿರ್ಮಾಪಕ ಆದವನಲ್ಲ. ಕಳೆದ ಒಂದು ತಿಂಗಳಿನಿಂದ ಸರಿಯಾಗಿ ನಿದ್ದೆ ಮಾಡ್ತಿಲ್ಲ. ನಾನು ಇಡೀ ತಂಡದ ಜೊತೆ ಕಿತ್ತಾಡಿದ್ದೀನಿ ಅಂತ ಶಶಿ ಕಣ್ಣೀರಿಟ್ಟರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Load More