ಬಿಗ್ಬಾಸ್ ಸೀಸನ್ 6ರ ವಿನ್ನರ್ ಆಗಿದ್ದ ಶಶಿಕುಮಾರ್
ಸಿನಿಮಾ ಟೀಸರ್ ಲಾಂಚಿಂಗ್ ವೇಳೆ ಕಣ್ಣೀರಿಟ್ಟ ನಟ
ನೀನು ಯಾವ ಸೀಮೆ ರೈತ ಅಂತಾ ಹೇಳಿದ್ರು!
ಕನ್ನಡದ ಬಿಗ್ ರಿಯಾಲಿಟಿ ಶೋ ಬಿಗ್ಬಾಸ್ ಸೀಸನ್ 6ರ ವಿನ್ನರ್ ಆಗಿ ಹೊರಹೊಮ್ಮಿದ ಶಶಿಕುಮಾರ್ ಅವರು ಕಣ್ಣೀರಿಟ್ಟಿದ್ದಾರೆ. ಬಿಗ್ಬಾಸ್ ವಿನ್ನರ್ ಆಗಿರೋ ನಟ ಶಶಿ ಕುಮಾರ್ ಅವರು ಅಭಿನಯಿಸಿರೋ ಸಿನಿಮಾ ಮೆಹಬೂಬಾ. ಈಗಾಗಲೇ ಈ ಸಿನಿಮಾ ಸಾಕಷ್ಟು ಸುದ್ದಿಯಾಗುತ್ತಿದೆ.
ಇದನ್ನು ಓದಿ: VIDEO: ಮೆಹಬೂಬಾ ಶೂಟಿಂಗ್ ವೇಳೆ ಅವಘಡ; ಬಿಲ್ಡಿಂಗ್ ಮೇಲಿಂದ ಬಿದ್ದ ಬಿಗ್ಬಾಸ್ ವಿನ್ನರ್ ನಟ ಶಶಿಕುಮಾರ್
ಇದೀಗ ಶಶಿ ನಟನೆಯ ಮೆಹಬೂಬ ಸಿನಿಮಾದ ಟೀಸರ್ ಲಾಂಚ್ ಮಾಡಲಾಗಿದೆ. ಮೆಹಬೂಬ ಟೀಸರ್ ಲಾಂಚ್ ಕಾರ್ಯಕ್ರಮದಲ್ಲಿ ಬಿಗ್ಬಾಸ್ ಸೀಸನ್ 10ರ ಸ್ಪರ್ಧಿಗಳು ಕೂಡಾ ಆಗಮಿಸಿದ್ದರು. ಸೀಸನ್ 10 ವಿನ್ನರ್ ಕಾರ್ತಿಕ್ ಮಹೇಶ್ ಅವರಿಂದಲೇ ಮೆಹಬೂಬ ಟೀಸರ್ ಲಾಂಚ್ ಮಾಡಿಸಿದ್ದಾರೆ. ಇನ್ನೂ ಇದೇ ವೇಳೆ ವೇದಿಕೆ ಮೇಲೆ ಮಾತಾಡುತ್ತಿದ್ದಾಗ ನಟ ಶಶಿ ಕುಮಾರ್ ಅವರು ಭಾವುಕರಾಗಿದ್ದರು.
ಈ ವೇಳೆ ಸಿನಿಮಾವನ್ನು ತುಂಬಾ ಕಷ್ಟಪಟ್ಟು ಮಾಡಿದ್ದೇವೆ. ನಮ್ಮ ತಾಯಣೆಗೂ ಇದು ಪಬ್ಲಿಸಿಟಿ ಗಿಮಿಕ್ ಅಲ್ಲ. ಈ ಸಿನಿಮಾ ಬಗ್ಗೆ ಮಾತಾನಾಡಬೇಕು ಅಂದಾಗ ನೋವಾಗುತ್ತದೆ. ಬಿಗ್ಬಾಸ್ನಿಂದ ಆಚೆ ಬಂದಾಗ ಎಲ್ಲರೂ ನನ್ನನ್ನು ನೀನು ಯಾವ ಸೀಮೆ ರೈತ ಅಂತಾ ಹೇಳುತ್ತಿದ್ದರು. ರೈತ ಅಂತೀರಾ, ಈ ರೀತಿ ಬಟ್ಟೆ ಹಾಕ್ತಿಯಾ ಅಂತ ಕೇಳಿದ್ದರು. ನಮ್ಮ ತಾಯಾಣೆ ನಾನು ಯಾವತ್ತು ಸೋಲನ್ನು ಒಪ್ಪಿಕೊಂಡವನಲ್ಲ. ನಾನು ರೈತನ ಮಗ ಅಲ್ಲ ನಾನೇ ರೈತ. ನಾನು 40 ಪ್ರಾಡಕ್ಟ್ಗಳ ಡೆವಲಪ್ ಮಾಡಿದ್ದೀನಿ. ನಾನು ಶೋಕಿಗಾಗಿ ನಿರ್ಮಾಪಕ ಆದವನಲ್ಲ. ಕಳೆದ ಒಂದು ತಿಂಗಳಿನಿಂದ ಸರಿಯಾಗಿ ನಿದ್ದೆ ಮಾಡ್ತಿಲ್ಲ. ನಾನು ಇಡೀ ತಂಡದ ಜೊತೆ ಕಿತ್ತಾಡಿದ್ದೀನಿ ಅಂತ ಶಶಿ ಕಣ್ಣೀರಿಟ್ಟರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ಬಿಗ್ಬಾಸ್ ಸೀಸನ್ 6ರ ವಿನ್ನರ್ ಆಗಿದ್ದ ಶಶಿಕುಮಾರ್
ಸಿನಿಮಾ ಟೀಸರ್ ಲಾಂಚಿಂಗ್ ವೇಳೆ ಕಣ್ಣೀರಿಟ್ಟ ನಟ
ನೀನು ಯಾವ ಸೀಮೆ ರೈತ ಅಂತಾ ಹೇಳಿದ್ರು!
ಕನ್ನಡದ ಬಿಗ್ ರಿಯಾಲಿಟಿ ಶೋ ಬಿಗ್ಬಾಸ್ ಸೀಸನ್ 6ರ ವಿನ್ನರ್ ಆಗಿ ಹೊರಹೊಮ್ಮಿದ ಶಶಿಕುಮಾರ್ ಅವರು ಕಣ್ಣೀರಿಟ್ಟಿದ್ದಾರೆ. ಬಿಗ್ಬಾಸ್ ವಿನ್ನರ್ ಆಗಿರೋ ನಟ ಶಶಿ ಕುಮಾರ್ ಅವರು ಅಭಿನಯಿಸಿರೋ ಸಿನಿಮಾ ಮೆಹಬೂಬಾ. ಈಗಾಗಲೇ ಈ ಸಿನಿಮಾ ಸಾಕಷ್ಟು ಸುದ್ದಿಯಾಗುತ್ತಿದೆ.
ಇದನ್ನು ಓದಿ: VIDEO: ಮೆಹಬೂಬಾ ಶೂಟಿಂಗ್ ವೇಳೆ ಅವಘಡ; ಬಿಲ್ಡಿಂಗ್ ಮೇಲಿಂದ ಬಿದ್ದ ಬಿಗ್ಬಾಸ್ ವಿನ್ನರ್ ನಟ ಶಶಿಕುಮಾರ್
ಇದೀಗ ಶಶಿ ನಟನೆಯ ಮೆಹಬೂಬ ಸಿನಿಮಾದ ಟೀಸರ್ ಲಾಂಚ್ ಮಾಡಲಾಗಿದೆ. ಮೆಹಬೂಬ ಟೀಸರ್ ಲಾಂಚ್ ಕಾರ್ಯಕ್ರಮದಲ್ಲಿ ಬಿಗ್ಬಾಸ್ ಸೀಸನ್ 10ರ ಸ್ಪರ್ಧಿಗಳು ಕೂಡಾ ಆಗಮಿಸಿದ್ದರು. ಸೀಸನ್ 10 ವಿನ್ನರ್ ಕಾರ್ತಿಕ್ ಮಹೇಶ್ ಅವರಿಂದಲೇ ಮೆಹಬೂಬ ಟೀಸರ್ ಲಾಂಚ್ ಮಾಡಿಸಿದ್ದಾರೆ. ಇನ್ನೂ ಇದೇ ವೇಳೆ ವೇದಿಕೆ ಮೇಲೆ ಮಾತಾಡುತ್ತಿದ್ದಾಗ ನಟ ಶಶಿ ಕುಮಾರ್ ಅವರು ಭಾವುಕರಾಗಿದ್ದರು.
ಈ ವೇಳೆ ಸಿನಿಮಾವನ್ನು ತುಂಬಾ ಕಷ್ಟಪಟ್ಟು ಮಾಡಿದ್ದೇವೆ. ನಮ್ಮ ತಾಯಣೆಗೂ ಇದು ಪಬ್ಲಿಸಿಟಿ ಗಿಮಿಕ್ ಅಲ್ಲ. ಈ ಸಿನಿಮಾ ಬಗ್ಗೆ ಮಾತಾನಾಡಬೇಕು ಅಂದಾಗ ನೋವಾಗುತ್ತದೆ. ಬಿಗ್ಬಾಸ್ನಿಂದ ಆಚೆ ಬಂದಾಗ ಎಲ್ಲರೂ ನನ್ನನ್ನು ನೀನು ಯಾವ ಸೀಮೆ ರೈತ ಅಂತಾ ಹೇಳುತ್ತಿದ್ದರು. ರೈತ ಅಂತೀರಾ, ಈ ರೀತಿ ಬಟ್ಟೆ ಹಾಕ್ತಿಯಾ ಅಂತ ಕೇಳಿದ್ದರು. ನಮ್ಮ ತಾಯಾಣೆ ನಾನು ಯಾವತ್ತು ಸೋಲನ್ನು ಒಪ್ಪಿಕೊಂಡವನಲ್ಲ. ನಾನು ರೈತನ ಮಗ ಅಲ್ಲ ನಾನೇ ರೈತ. ನಾನು 40 ಪ್ರಾಡಕ್ಟ್ಗಳ ಡೆವಲಪ್ ಮಾಡಿದ್ದೀನಿ. ನಾನು ಶೋಕಿಗಾಗಿ ನಿರ್ಮಾಪಕ ಆದವನಲ್ಲ. ಕಳೆದ ಒಂದು ತಿಂಗಳಿನಿಂದ ಸರಿಯಾಗಿ ನಿದ್ದೆ ಮಾಡ್ತಿಲ್ಲ. ನಾನು ಇಡೀ ತಂಡದ ಜೊತೆ ಕಿತ್ತಾಡಿದ್ದೀನಿ ಅಂತ ಶಶಿ ಕಣ್ಣೀರಿಟ್ಟರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ