/newsfirstlive-kannada/media/post_attachments/wp-content/uploads/2024/10/kiccha8.jpg)
ಬಿಗ್ಬಾಸ್ ಅಭಿಮಾನಿಗಳಿಗೆ ಇಂದು ಡಬಲ್ ಧಮಾಕ. ಒಂದು ವಿಜಯ ದಶಮಿ ಸಂಭ್ರಮವಾದರೆ, ಮತ್ತೊಂದು ರಾತ್ರಿ 9 ಗಂಟೆಗೆ ಕಿಚ್ಚ ಸುದೀಪ್ ಅವರ ಮಾತುಗಳನ್ನು ಆಲಿಸಿಕೊಳ್ಳುವ ಕೌತುಕ. ಬಿಗ್ಬಾಸ್ ಶುರುವಾಗಿ ಎರಡು ವಾರ ಕಳೆದು ಹೋಗಿದ್ದು, ಶನಿವಾರವಾದ ಇಂದು ರಾತ್ರಿ ಮತ್ತೆ ಸುದೀಪ್ ಪಂಚಾಯ್ತಿ ನಡೆಸಲಿದ್ದಾರೆ.
ಇದನ್ನೂ ಓದಿ:BBK11: ನಾವಿನ್ನು ಯಾವ ಆಟ ಆಡಲ್ಲ ಎಂದ ಗೋಲ್ಡ್ ಸುರೇಶ್! ಈ ಕೋಪಕ್ಕೆ ಕಾರಣವೇನು?
ಸ್ಪರ್ಧಿಗಳ ಕಿತ್ತಾಟ, ಬಿಗ್ಬಾಸ್ ಕೊಟ್ಟ ಟಾಸ್ಕ್, ಗೇಮ್ ಎಲ್ಲವನ್ನೂ ನೋಡಿ ಸರಿ ತಪ್ಪುಗಳ ಬಗ್ಗೆ ಮಾತಾಡಿಕೊಳ್ತಿದ್ದ ಅಭಿಮಾನಿಗಳು ಇಂದು ಸುದೀಪ್ ಪ್ರತಿಕ್ರಿಯೆ ಹೇಗಿರುತ್ತದೆ? ಸ್ಪರ್ಧಿಗಳ ಜೊತೆ ಹೇಗೆ ಮಾತುಕತೆ ನಡೆಸ್ತಾರೆ ಅನ್ನೋ ಕುತೂಹಲ ಹೆಚ್ಚಾಗಿದೆ. ಈಗಾಗಲೇ ಬಿಗ್ಬಾಸ್ ಕಿಚ್ಚ ಸುದೀಪ್ ಯಾವೆಲ್ಲ ವಿಚಾರಗಳ ಬಗ್ಗೆ ಚರ್ಚೆ ನಡೆಸ್ತಾರೆ ಅನ್ನೋದ್ರ ಬಗ್ಗೆ ಪ್ರೊಮೋದಲ್ಲಿ ಚಿಕ್ಕದಾಗಿ ರಿವೀಲ್ ಮಾಡಿದ್ದಾರೆ.
25 ಸೆಕೆಂಡ್ ಇರುವ ವಿಡಿಯೋದಲ್ಲಿ ದೊಡ್ಮನೆಯ ಸ್ವರ್ಗ, ನರಕ ಒಂದಾಗಿದೆ. ರೂಲ್ಸ್ ಬ್ರೇಕ್, ತಪ್ಪಿನ ಲೆಕ್ಕಾಚಾರಕ್ಕೆ ಕಿಚ್ಚನ ಪಂಚಾಯ್ತಿಯಲ್ಲಿ ಉತ್ತರ ಸಿಗಬೇಕು ಎಂಬ ಸಂದೇಶವನ್ನು ಬಿಗ್ಬಾಸ್ ನೀಡಿದ್ದಾರೆ. ಹೀಗಾಗಿ ಇಂದಿನ ವಾರದ ಕತೆ ಕಿಚ್ಚನ ಜೊತೆ ಎಪಿಸೋಡ್ ಕುತೂಹಲ ಹೆಚ್ಚಿಸಿದೆ.
ಇದನ್ನೂ ಓದಿ:BBK11:ನರಕದ ಮನೆ ಪೀಸ್ ಪೀಸ್ ಮಾಡಿದ ಬಿಗ್ಬಾಸ್; ಅಸಲಿಗೆ ಆಗಿದ್ದು ಏನು ಗೊತ್ತಾ?
ಒಂದ್ಕಡೆ ದೊಡ್ಮನೆ ಸೇರಿದ ಸಂಭ್ರಮ; ಪಂಚಾಯ್ತಿಯಲ್ಲಿ ನಡೆಯುತ್ತಾ ಹೈ ಡ್ರಾಮಾ?
ವಾರದ ಕತೆ ಕಿಚ್ಚನ ಜೊತೆ | ಇಂದು ರಾತ್ರಿ 9
#BiggBossKannada11#BBK11#HosaAdhyaya#ColorsKannada#BannaHosadaagideBandhaBigiyaagide#ಕಲರ್ಫುಲ್ಕತೆ#colorfulstory#Kicchasudeepapic.twitter.com/vR22yRiWB5— Colors Kannada (@ColorsKannada) October 12, 2024
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ