/newsfirstlive-kannada/media/post_attachments/wp-content/uploads/2024/09/Sudeep-BiggBoss-Kannada.jpg)
ಬಹುನಿರೀಕ್ಷಿತ ಕನ್ನಡದ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ 11 ಶುರುವಾಗಿದೆ. ದೊಡ್ಮನೆಯಲ್ಲಿ ಅಸಲಿ ಆಟ ಶುರುವಾಗಿದೆ. ಆದರೆ ಅದಕ್ಕೂ ಮುನ್ನ ಪ್ರೋಮೋ ಶೂಟ್ ವೇಳೆ ಕೆಲವು ಸ್ಪರ್ಧಿಗಳು ನೀಡಿರುವ ಹೇಳಿಕೆಗಳು ಈಗ ವೈರಲ್ ಆಗುತ್ತಿದೆ. ಅದರಲ್ಲೂ ಸ್ವರ್ಧಿ ಲಾಯರ್ ಜಗದೀಶ್ ಪ್ರೋಮೋದಲ್ಲಿ ನಾನು ಮುಂದೊಂದು ದಿನ ಸಿಎಂ ಆಗುತ್ತೇನೆ ಎಂಬ ಮಾತಾಡಿದ್ದು, ಎಲ್ಲೆಡೆ ಹರಿದಾಡುತ್ತಿದೆ.
ಲಾಯರ್ ವೃತ್ತಿ ಮಾಡುತ್ತಿದ್ದ ಜಗದೀಶ್ ಬಿಗ್ ಬಾಸ್ ಮನೆಯೊಳಕ್ಕೆ ಎಂಟ್ರಿ ನೀಡಿದ್ದಾರೆ. ಸ್ವರ್ಗದ ಬಾಗಿಲು ಬಡಿದು ಒಳಹೊಕ್ಕಿದ್ದಾರೆ. ಅದಕ್ಕೂ ಮುನ್ನ ಪ್ರೋಮೋದಲ್ಲಿ ನ್ಯಾಯವನ್ನ ಯಾರಿಗೆ ಧ್ವನಿ ನೀಡಲ್ವೋ ಅವರಿಗೆ ಹುಡುಕಿಕೊಡೋದೆ ನನ್ನ ಕೆಲಸ, ಆತನ ಪಾಪದ ಕೊಡ ತುಂಬಿದೆ. ನನ್ನ ತಾಕತ್ತು ತೋರಿಸಿದ್ದೀನಿ. ಎಂಥದ್ದೇ ರಾಜಕಾರಣಿಗಳಾಗಿರಬಹುದು, ಎಂಥದ್ದೇ ಪುಢಾರಿ ಆಗಿರಬಹುದು. ಅವರ ಯೋಗ್ಯತೆ ತೋರಿಸಿಬಿಟ್ಟಿದ್ದೀನಿ. ನಾನು ಮುಂದೊಂದು ದಿನ ಎಂಎಲ್ಎ, ಮಿನಿಸ್ಟರ್, ಸಿಎಂ ಆಗ್ತೀನಿ ಎಂದರು.
ಬದಲಾವಣೆಯ ಧ್ಯೇಯ ಇಟ್ಕೊಂಡು ಲಾಯರ್ ಜಗದೀಶ್ ಬಿಗ್ ಬಾಸ್ ಮನೆಯೊಳಗೆ ಎಂಟ್ರಿ
ಬಿಗ್ ಬಾಸ್ ಕನ್ನಡ ಸೀಸನ್ 11 | GRAND OPENING ಇಂದು ಸಂಜೆ 6, ಪ್ರತಿರಾತ್ರಿ 9:30 #BiggBossKannada11#BBK11#HosaAdhyaya#ColorsKannada#ಕಲರ್ಫುಲ್ಕತೆ#colorfulstory#Kicchasudeepapic.twitter.com/k1afSswBas
— Colors Kannada (@ColorsKannada)
ಬದಲಾವಣೆಯ ಧ್ಯೇಯ ಇಟ್ಕೊಂಡು ಲಾಯರ್ ಜಗದೀಶ್ ಬಿಗ್ ಬಾಸ್ ಮನೆಯೊಳಗೆ ಎಂಟ್ರಿ
ಬಿಗ್ ಬಾಸ್ ಕನ್ನಡ ಸೀಸನ್ 11 | GRAND OPENING ಇಂದು ಸಂಜೆ 6, ಪ್ರತಿರಾತ್ರಿ 9:30 #BiggBossKannada11#BBK11#HosaAdhyaya#ColorsKannada#ಕಲರ್ಫುಲ್ಕತೆ#colorfulstory#Kicchasudeepapic.twitter.com/k1afSswBas— Colors Kannada (@ColorsKannada) September 29, 2024
">September 29, 2024
ಸದ್ಯ ಕಿಚ್ಚ ನಿರೂಪಣೆಯ ಬಿಗ್ ಬಾಸ್ ಮನೆಯೊಳಕ್ಕೆ ಹೊಕ್ಕಿರುವ ಜಗದೀಶ್ ಸ್ವರ್ಗದ ವಿಭಾಗದಿಂದ ಸ್ಪರ್ಧಿಸುತ್ತಿದ್ದಾರೆ. ಕೋರ್ಟ್, ಹೋರಾಟ ಎಂದು ಯಾವಾಗಲೂ ಓಡಾಡುತ್ತಿದ್ದ ಜಗದೀಶ್ ದೊಡ್ಮನೆಯಲ್ಲಿ ಹೇಗೆ ತಮ್ಮ ಅಸಲಿ ಆಟ ಆಡಲಿದ್ದಾರೆ ಎಂದು ಕಾದು ನೋಡಬೇಕಿದೆ.
ಇದನ್ನೂ ಓದಿ: ಫ್ಯಾನ್ಸ್ಗೆ ಬಿಗ್ ಅಪ್ಡೇಟ್ ಕೊಟ್ಟ ಆರ್ಸಿಬಿ; ಬೆಂಗಳೂರು ರೀಟೈನ್ ಮಾಡಿಕೊಳ್ಳೋ ಆಟಗಾರರು ಇವರೇ!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ