newsfirstkannada.com

BBK11: ಬಿಗ್​​ಬಾಸ್​​ನ ಈ ಸ್ಪರ್ಧಿ ರಾಜ್ಯದ ಸಿಎಂ ಆಗಬೇಕಂತೆ; ಯಾರದು ಗೊತ್ತಾ?

Share :

Published September 30, 2024 at 9:15pm

    ಬಹುನಿರೀಕ್ಷಿತ ಕನ್ನಡದ ರಿಯಾಲಿಟಿ ಶೋ ಬಿಗ್​ ಬಾಸ್

    ಕಿಚ್ಚ ಸುದೀಪ್​​ ನೇತೃತ್ವದಲ್ಲೇ ಬಿಗ್​​ಬಾಸ್​ ಶೋ ಶುರು..!

    ಎಲ್ಲಾ ಸ್ಪರ್ಧಿಗಳು ಎಂಟ್ರಿ ನೀಡಿದ್ದು, ಅಸಲಿ ಆಟ ಸ್ಟಾರ್ಟ್​

ಬಹುನಿರೀಕ್ಷಿತ ಕನ್ನಡದ ರಿಯಾಲಿಟಿ ಶೋ ಬಿಗ್​ ಬಾಸ್ ಸೀಸನ್​​ 11 ಶುರುವಾಗಿದೆ. ದೊಡ್ಮನೆಯಲ್ಲಿ ಅಸಲಿ ಆಟ ಶುರುವಾಗಿದೆ. ಆದರೆ ಅದಕ್ಕೂ ಮುನ್ನ ಪ್ರೋಮೋ ಶೂಟ್​​ ವೇಳೆ ಕೆಲವು ಸ್ಪರ್ಧಿಗಳು ನೀಡಿರುವ ಹೇಳಿಕೆಗಳು ಈಗ ವೈರಲ್​ ಆಗುತ್ತಿದೆ. ಅದರಲ್ಲೂ ಸ್ವರ್ಧಿ ಲಾಯರ್​ ಜಗದೀಶ್ ಪ್ರೋಮೋದಲ್ಲಿ ನಾನು ಮುಂದೊಂದು ದಿನ ಸಿಎಂ ಆಗುತ್ತೇನೆ  ಎಂಬ ಮಾತಾಡಿದ್ದು, ಎಲ್ಲೆಡೆ ಹರಿದಾಡುತ್ತಿದೆ.​

ಲಾಯರ್​​ ವೃತ್ತಿ ಮಾಡುತ್ತಿದ್ದ ಜಗದೀಶ್​ ಬಿಗ್​​​ ಬಾಸ್​ ಮನೆಯೊಳಕ್ಕೆ ಎಂಟ್ರಿ ನೀಡಿದ್ದಾರೆ. ಸ್ವರ್ಗದ ಬಾಗಿಲು ಬಡಿದು ಒಳಹೊಕ್ಕಿದ್ದಾರೆ. ಅದಕ್ಕೂ ಮುನ್ನ ಪ್ರೋಮೋದಲ್ಲಿ ನ್ಯಾಯವನ್ನ ಯಾರಿಗೆ ಧ್ವನಿ ನೀಡಲ್ವೋ ಅವರಿಗೆ ಹುಡುಕಿಕೊಡೋದೆ ನನ್ನ ಕೆಲಸ, ​ಆತನ ಪಾಪದ ಕೊಡ ತುಂಬಿದೆ. ನನ್ನ ತಾಕತ್ತು ತೋರಿಸಿದ್ದೀನಿ. ಎಂಥದ್ದೇ ರಾಜಕಾರಣಿಗಳಾಗಿರಬಹುದು, ಎಂಥದ್ದೇ ಪುಢಾರಿ ಆಗಿರಬಹುದು. ಅವರ ಯೋಗ್ಯತೆ ತೋರಿಸಿಬಿಟ್ಟಿದ್ದೀನಿ. ನಾನು ಮುಂದೊಂದು ದಿನ ಎಂಎಲ್​ಎ, ಮಿನಿಸ್ಟರ್​​, ಸಿಎಂ ಆಗ್ತೀನಿ ಎಂದರು.

ಸದ್ಯ ಕಿಚ್ಚ ನಿರೂಪಣೆಯ ಬಿಗ್​ ಬಾಸ್​ ಮನೆಯೊಳಕ್ಕೆ ಹೊಕ್ಕಿರುವ ಜಗದೀಶ್​ ಸ್ವರ್ಗದ ವಿಭಾಗದಿಂದ ಸ್ಪರ್ಧಿಸುತ್ತಿದ್ದಾರೆ. ಕೋರ್ಟ್​​, ಹೋರಾಟ ಎಂದು ಯಾವಾಗಲೂ ಓಡಾಡುತ್ತಿದ್ದ ಜಗದೀಶ್​​ ದೊಡ್ಮನೆಯಲ್ಲಿ ಹೇಗೆ ತಮ್ಮ ಅಸಲಿ ಆಟ ಆಡಲಿದ್ದಾರೆ ಎಂದು ಕಾದು ನೋಡಬೇಕಿದೆ.

ಇದನ್ನೂ ಓದಿ: ಫ್ಯಾನ್ಸ್​​ಗೆ ಬಿಗ್​ ಅಪ್ಡೇಟ್​ ಕೊಟ್ಟ ಆರ್​​​ಸಿಬಿ; ಬೆಂಗಳೂರು ರೀಟೈನ್​ ಮಾಡಿಕೊಳ್ಳೋ ಆಟಗಾರರು ಇವರೇ!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

BBK11: ಬಿಗ್​​ಬಾಸ್​​ನ ಈ ಸ್ಪರ್ಧಿ ರಾಜ್ಯದ ಸಿಎಂ ಆಗಬೇಕಂತೆ; ಯಾರದು ಗೊತ್ತಾ?

https://newsfirstlive.com/wp-content/uploads/2024/09/Sudeep-BiggBoss-Kannada.jpg

    ಬಹುನಿರೀಕ್ಷಿತ ಕನ್ನಡದ ರಿಯಾಲಿಟಿ ಶೋ ಬಿಗ್​ ಬಾಸ್

    ಕಿಚ್ಚ ಸುದೀಪ್​​ ನೇತೃತ್ವದಲ್ಲೇ ಬಿಗ್​​ಬಾಸ್​ ಶೋ ಶುರು..!

    ಎಲ್ಲಾ ಸ್ಪರ್ಧಿಗಳು ಎಂಟ್ರಿ ನೀಡಿದ್ದು, ಅಸಲಿ ಆಟ ಸ್ಟಾರ್ಟ್​

ಬಹುನಿರೀಕ್ಷಿತ ಕನ್ನಡದ ರಿಯಾಲಿಟಿ ಶೋ ಬಿಗ್​ ಬಾಸ್ ಸೀಸನ್​​ 11 ಶುರುವಾಗಿದೆ. ದೊಡ್ಮನೆಯಲ್ಲಿ ಅಸಲಿ ಆಟ ಶುರುವಾಗಿದೆ. ಆದರೆ ಅದಕ್ಕೂ ಮುನ್ನ ಪ್ರೋಮೋ ಶೂಟ್​​ ವೇಳೆ ಕೆಲವು ಸ್ಪರ್ಧಿಗಳು ನೀಡಿರುವ ಹೇಳಿಕೆಗಳು ಈಗ ವೈರಲ್​ ಆಗುತ್ತಿದೆ. ಅದರಲ್ಲೂ ಸ್ವರ್ಧಿ ಲಾಯರ್​ ಜಗದೀಶ್ ಪ್ರೋಮೋದಲ್ಲಿ ನಾನು ಮುಂದೊಂದು ದಿನ ಸಿಎಂ ಆಗುತ್ತೇನೆ  ಎಂಬ ಮಾತಾಡಿದ್ದು, ಎಲ್ಲೆಡೆ ಹರಿದಾಡುತ್ತಿದೆ.​

ಲಾಯರ್​​ ವೃತ್ತಿ ಮಾಡುತ್ತಿದ್ದ ಜಗದೀಶ್​ ಬಿಗ್​​​ ಬಾಸ್​ ಮನೆಯೊಳಕ್ಕೆ ಎಂಟ್ರಿ ನೀಡಿದ್ದಾರೆ. ಸ್ವರ್ಗದ ಬಾಗಿಲು ಬಡಿದು ಒಳಹೊಕ್ಕಿದ್ದಾರೆ. ಅದಕ್ಕೂ ಮುನ್ನ ಪ್ರೋಮೋದಲ್ಲಿ ನ್ಯಾಯವನ್ನ ಯಾರಿಗೆ ಧ್ವನಿ ನೀಡಲ್ವೋ ಅವರಿಗೆ ಹುಡುಕಿಕೊಡೋದೆ ನನ್ನ ಕೆಲಸ, ​ಆತನ ಪಾಪದ ಕೊಡ ತುಂಬಿದೆ. ನನ್ನ ತಾಕತ್ತು ತೋರಿಸಿದ್ದೀನಿ. ಎಂಥದ್ದೇ ರಾಜಕಾರಣಿಗಳಾಗಿರಬಹುದು, ಎಂಥದ್ದೇ ಪುಢಾರಿ ಆಗಿರಬಹುದು. ಅವರ ಯೋಗ್ಯತೆ ತೋರಿಸಿಬಿಟ್ಟಿದ್ದೀನಿ. ನಾನು ಮುಂದೊಂದು ದಿನ ಎಂಎಲ್​ಎ, ಮಿನಿಸ್ಟರ್​​, ಸಿಎಂ ಆಗ್ತೀನಿ ಎಂದರು.

ಸದ್ಯ ಕಿಚ್ಚ ನಿರೂಪಣೆಯ ಬಿಗ್​ ಬಾಸ್​ ಮನೆಯೊಳಕ್ಕೆ ಹೊಕ್ಕಿರುವ ಜಗದೀಶ್​ ಸ್ವರ್ಗದ ವಿಭಾಗದಿಂದ ಸ್ಪರ್ಧಿಸುತ್ತಿದ್ದಾರೆ. ಕೋರ್ಟ್​​, ಹೋರಾಟ ಎಂದು ಯಾವಾಗಲೂ ಓಡಾಡುತ್ತಿದ್ದ ಜಗದೀಶ್​​ ದೊಡ್ಮನೆಯಲ್ಲಿ ಹೇಗೆ ತಮ್ಮ ಅಸಲಿ ಆಟ ಆಡಲಿದ್ದಾರೆ ಎಂದು ಕಾದು ನೋಡಬೇಕಿದೆ.

ಇದನ್ನೂ ಓದಿ: ಫ್ಯಾನ್ಸ್​​ಗೆ ಬಿಗ್​ ಅಪ್ಡೇಟ್​ ಕೊಟ್ಟ ಆರ್​​​ಸಿಬಿ; ಬೆಂಗಳೂರು ರೀಟೈನ್​ ಮಾಡಿಕೊಳ್ಳೋ ಆಟಗಾರರು ಇವರೇ!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Load More