ರಾಜ್ಯದಲ್ಲಿ ಮೋದಿ ಗ್ಯಾರಂಟಿನಾ.. ಸಿಎಂ ಸಿದ್ದರಾಮಯ್ಯ ಗ್ಯಾರಂಟಿನಾ?
ಪಕ್ಷಗಳ ಗೆಲುವು ಮತದಾರ ಪ್ರಭುವಿನ ಕೊನೆ ನಿರ್ಧಾರದ ಮೇಲೆ ನಿಂತಿದೆ
ಕಾಂಗ್ರೆಸ್ನ ಗ್ಯಾರಂಟಿ ಯೋಜನೆಗಳು ಕಾಂಗ್ರೆಸ್ಗೆ ವರದಾನವಾಗಲ್ವಾ?
ಕರ್ನಾಟಕದಲ್ಲಿ 2024 ಲೋಕಸಭಾ ಎಲೆಕ್ಷನ್ಗೆ ಬಿಜೆಪಿ-ಜೆಡಿಎಸ್ ಮೈತ್ರಿ ಮಾಡಿಕೊಂಡು ಹೊಸ ದಾಳ ಉರುಳಿಸಿವೆ. ಗ್ಯಾರಂಟಿ ಯೋಜನೆಗಳು ಕಾಂಗ್ರೆಸ್ನ ಕೈ ಹಿಡಿಯುತ್ತಾವಾ ಅಥವಾ ಎಲೆಕ್ಷನ್ನಲ್ಲಿ ದಳ-ಕಮಲದ ದೋಸ್ತಿ ಜಾದೂ ಮಾಡುತ್ತಾ ಎಂದು ಕಾದು ನೋಡಬೇಕಿದೆ. ಟಾರ್ಗೆಟ್- 20 ಮುಟ್ಟಲು ಕಾಂಗ್ರೆಸ್ ಯಶಸ್ವಿಯಾಗಬಹುದಾ? ಇದೆಲ್ಲದಕ್ಕೂ ಮತದಾರ ಪ್ರಭು ಅಂತಿಮ ನಿರ್ಧಾರದ ಮೇಲೆ ನಿಂತಿದೆ. ಸದ್ಯ ಚುನಾವಣಾ ಪೂರ್ವದಲ್ಲೇ ಟೈಮ್ಸ್ ನೌ ಮೆಗಾ ಸರ್ವೆ ಮಾಡಿದ್ದು ಆ 20 ಕ್ಷೇತ್ರಗಳು ಯಾರ ಪಾಲಾಗಲಿವೆ ಎಂದು ಹೇಳಿದೆ?
ಕರ್ನಾಟಕದಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ ಮ್ಯಾಜಿಕ್ ಮಾಡಲು ರೆಡಿಯಾಗಿದ್ದು 23 ಕ್ಷೇತ್ರಗಳಲ್ಲಿ ಮೈತ್ರಿ ಅಭ್ಯರ್ಥಿಗಳಿಗೆ ಗೆಲುವಿನ ಹಾರ ಹಾಕಿಕೊಳ್ಳಲಿದ್ದಾರೆ. ರಾಜ್ಯದಲ್ಲಿ ಆಡಳಿತದಲ್ಲಿರುವ ಕಾಂಗ್ರೆಸ್ಗೆ ಚುನಾವಣೆಯಲ್ಲಿ ಹಿನ್ನಡೆಯಾಗಲಿದ್ದು 5 ಕ್ಷೇತ್ರಗಳಲ್ಲಿ ಮಾತ್ರ ಗೆಲ್ಲಲಿದೆ. ಇದರಿಂದ ಗ್ಯಾರಂಟಿ ಯೋಜನೆಗಳು ಕಾಂಗ್ರೆಸ್ಗೆ ವರದಾನವಾಗಲ್ಲ ಎಂದು ಟೈಮ್ಸ್ ನೌ ಸಮೀಕ್ಷೆಯಲ್ಲಿ ತಿಳಿದು ಬಂದಿದೆ.
ಇದನ್ನೂ ಓದಿ: ರಾಮಮಂದಿರದ ಬಳಿಕ ದೇಶದಲ್ಲಿ ಮತದಾರನ ಒಲವು ಬದಲಾಯ್ತಾ? NDAಗೆ ಎಷ್ಟು? I.N.D.I.A ಗೆಲ್ಲೋದೆಷ್ಟು?
ಟೈಮ್ಸ್ ನೌ ಸಮೀಕ್ಷೆ ಪ್ರಕಾರ ರಾಜ್ಯದಲ್ಲಿ ಬಿಜೆಪಿ 21 ಸೀಟ್ಗಳಲ್ಲಿ ಗೆದ್ದರೇ, ಜೆಡಿಎಸ್ 02 ಸ್ಥಾನಗಳನ್ನು ಪಡೆದುಕೊಳ್ಳಲಿದೆ. ಆದರೆ ಆಡಳಿತರೂಢ ಕಾಂಗ್ರೆಸ್ ಕೇವಲ 05 ಸ್ಥಾನಗಳನ್ನು ಗೆದ್ದು ತೃಪ್ತಿಪಡಲಿದೆ. ಇದರಿಂದ ದಳ-ಕಮಲದ ಮೈತ್ರಿ ಮಣಿಸುವಲ್ಲಿ ಕಾಂಗ್ರೆಸ್ ವಿಫಲವಾಗಲಿದೆ ಎಂದು ಟೈಮ್ಸ್ ನೌ ಸಮೀಕ್ಷೆ ಮಾಹಿತಿ ಹೊರ ಹಾಕಿದೆ. ಇನ್ನು ರಾಜ್ಯದಲ್ಲಿ ಜೆಡಿಎಸ್- ಬಿಜೆಪಿ ಮೈತ್ರಿ ಪರಿಣಾಮ ಬೀರುತ್ತಾ ಎಂದು ಸಮೀಕ್ಷೆ ಮಾಡಲಾಗಿದೆ. ಇದರಲ್ಲಿ ಶೇಕಡಾ 41 ರಷ್ಟು ಜನರು ಮೈತ್ರಿ ಕಡೆಗೆ ಜನ ವಾಲಿದ್ದಾರೆ ಎನ್ನಲಾಗಿದೆ.
ಕರ್ನಾಟಕದಲ್ಲಿ ದೋಸ್ತಿ ಕಮಾಲ್ ಹೇಗಿದೆ..?
ಜೆಡಿಎಸ್-ಬಿಜೆಪಿ ಮೈತ್ರಿ ಪರಿಣಾಮ ಬೀರುತ್ತಾ..?
ಸಿದ್ದರಾಮಯ್ಯ ಆಡಳಿತ ತೃಪ್ತಿ ತಂದಿದೆಯಾ..?
ಸಿಎಂ ಸಿದ್ದರಾಮಯ್ಯನವರ ಆಡಳಿತ ತೃಪ್ತಿ ತಂದಿದೆಯಾ ಎಂದು ಸಮೀಕ್ಷೆ ಮಾಡಲಾಗಿತ್ತು. ಇದರಲ್ಲಿ ಶೇ. 18 ರಷ್ಟು ತುಂಬಾ ತೃಪ್ತಿದೆ ಎಂದಿದ್ದಾರೆ. 27ರಷ್ಟು ಶೇಕಡಾ ಸಮಾಧಾನಕರವಾಗಿದೆ ಎಂದರೆ, 34 ರಷ್ಟು ಜನ ಕೆಟ್ಟದಾಗಿದೆ ಎಂದಿದ್ದಾರೆ. ಶೇ.21 ರಷ್ಟು ಜನರು ಹೇಳಲು ಆಗಲ್ಲ ಎಂದು ಉತ್ತರಿಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ರಾಜ್ಯದಲ್ಲಿ ಮೋದಿ ಗ್ಯಾರಂಟಿನಾ.. ಸಿಎಂ ಸಿದ್ದರಾಮಯ್ಯ ಗ್ಯಾರಂಟಿನಾ?
ಪಕ್ಷಗಳ ಗೆಲುವು ಮತದಾರ ಪ್ರಭುವಿನ ಕೊನೆ ನಿರ್ಧಾರದ ಮೇಲೆ ನಿಂತಿದೆ
ಕಾಂಗ್ರೆಸ್ನ ಗ್ಯಾರಂಟಿ ಯೋಜನೆಗಳು ಕಾಂಗ್ರೆಸ್ಗೆ ವರದಾನವಾಗಲ್ವಾ?
ಕರ್ನಾಟಕದಲ್ಲಿ 2024 ಲೋಕಸಭಾ ಎಲೆಕ್ಷನ್ಗೆ ಬಿಜೆಪಿ-ಜೆಡಿಎಸ್ ಮೈತ್ರಿ ಮಾಡಿಕೊಂಡು ಹೊಸ ದಾಳ ಉರುಳಿಸಿವೆ. ಗ್ಯಾರಂಟಿ ಯೋಜನೆಗಳು ಕಾಂಗ್ರೆಸ್ನ ಕೈ ಹಿಡಿಯುತ್ತಾವಾ ಅಥವಾ ಎಲೆಕ್ಷನ್ನಲ್ಲಿ ದಳ-ಕಮಲದ ದೋಸ್ತಿ ಜಾದೂ ಮಾಡುತ್ತಾ ಎಂದು ಕಾದು ನೋಡಬೇಕಿದೆ. ಟಾರ್ಗೆಟ್- 20 ಮುಟ್ಟಲು ಕಾಂಗ್ರೆಸ್ ಯಶಸ್ವಿಯಾಗಬಹುದಾ? ಇದೆಲ್ಲದಕ್ಕೂ ಮತದಾರ ಪ್ರಭು ಅಂತಿಮ ನಿರ್ಧಾರದ ಮೇಲೆ ನಿಂತಿದೆ. ಸದ್ಯ ಚುನಾವಣಾ ಪೂರ್ವದಲ್ಲೇ ಟೈಮ್ಸ್ ನೌ ಮೆಗಾ ಸರ್ವೆ ಮಾಡಿದ್ದು ಆ 20 ಕ್ಷೇತ್ರಗಳು ಯಾರ ಪಾಲಾಗಲಿವೆ ಎಂದು ಹೇಳಿದೆ?
ಕರ್ನಾಟಕದಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ ಮ್ಯಾಜಿಕ್ ಮಾಡಲು ರೆಡಿಯಾಗಿದ್ದು 23 ಕ್ಷೇತ್ರಗಳಲ್ಲಿ ಮೈತ್ರಿ ಅಭ್ಯರ್ಥಿಗಳಿಗೆ ಗೆಲುವಿನ ಹಾರ ಹಾಕಿಕೊಳ್ಳಲಿದ್ದಾರೆ. ರಾಜ್ಯದಲ್ಲಿ ಆಡಳಿತದಲ್ಲಿರುವ ಕಾಂಗ್ರೆಸ್ಗೆ ಚುನಾವಣೆಯಲ್ಲಿ ಹಿನ್ನಡೆಯಾಗಲಿದ್ದು 5 ಕ್ಷೇತ್ರಗಳಲ್ಲಿ ಮಾತ್ರ ಗೆಲ್ಲಲಿದೆ. ಇದರಿಂದ ಗ್ಯಾರಂಟಿ ಯೋಜನೆಗಳು ಕಾಂಗ್ರೆಸ್ಗೆ ವರದಾನವಾಗಲ್ಲ ಎಂದು ಟೈಮ್ಸ್ ನೌ ಸಮೀಕ್ಷೆಯಲ್ಲಿ ತಿಳಿದು ಬಂದಿದೆ.
ಇದನ್ನೂ ಓದಿ: ರಾಮಮಂದಿರದ ಬಳಿಕ ದೇಶದಲ್ಲಿ ಮತದಾರನ ಒಲವು ಬದಲಾಯ್ತಾ? NDAಗೆ ಎಷ್ಟು? I.N.D.I.A ಗೆಲ್ಲೋದೆಷ್ಟು?
ಟೈಮ್ಸ್ ನೌ ಸಮೀಕ್ಷೆ ಪ್ರಕಾರ ರಾಜ್ಯದಲ್ಲಿ ಬಿಜೆಪಿ 21 ಸೀಟ್ಗಳಲ್ಲಿ ಗೆದ್ದರೇ, ಜೆಡಿಎಸ್ 02 ಸ್ಥಾನಗಳನ್ನು ಪಡೆದುಕೊಳ್ಳಲಿದೆ. ಆದರೆ ಆಡಳಿತರೂಢ ಕಾಂಗ್ರೆಸ್ ಕೇವಲ 05 ಸ್ಥಾನಗಳನ್ನು ಗೆದ್ದು ತೃಪ್ತಿಪಡಲಿದೆ. ಇದರಿಂದ ದಳ-ಕಮಲದ ಮೈತ್ರಿ ಮಣಿಸುವಲ್ಲಿ ಕಾಂಗ್ರೆಸ್ ವಿಫಲವಾಗಲಿದೆ ಎಂದು ಟೈಮ್ಸ್ ನೌ ಸಮೀಕ್ಷೆ ಮಾಹಿತಿ ಹೊರ ಹಾಕಿದೆ. ಇನ್ನು ರಾಜ್ಯದಲ್ಲಿ ಜೆಡಿಎಸ್- ಬಿಜೆಪಿ ಮೈತ್ರಿ ಪರಿಣಾಮ ಬೀರುತ್ತಾ ಎಂದು ಸಮೀಕ್ಷೆ ಮಾಡಲಾಗಿದೆ. ಇದರಲ್ಲಿ ಶೇಕಡಾ 41 ರಷ್ಟು ಜನರು ಮೈತ್ರಿ ಕಡೆಗೆ ಜನ ವಾಲಿದ್ದಾರೆ ಎನ್ನಲಾಗಿದೆ.
ಕರ್ನಾಟಕದಲ್ಲಿ ದೋಸ್ತಿ ಕಮಾಲ್ ಹೇಗಿದೆ..?
ಜೆಡಿಎಸ್-ಬಿಜೆಪಿ ಮೈತ್ರಿ ಪರಿಣಾಮ ಬೀರುತ್ತಾ..?
ಸಿದ್ದರಾಮಯ್ಯ ಆಡಳಿತ ತೃಪ್ತಿ ತಂದಿದೆಯಾ..?
ಸಿಎಂ ಸಿದ್ದರಾಮಯ್ಯನವರ ಆಡಳಿತ ತೃಪ್ತಿ ತಂದಿದೆಯಾ ಎಂದು ಸಮೀಕ್ಷೆ ಮಾಡಲಾಗಿತ್ತು. ಇದರಲ್ಲಿ ಶೇ. 18 ರಷ್ಟು ತುಂಬಾ ತೃಪ್ತಿದೆ ಎಂದಿದ್ದಾರೆ. 27ರಷ್ಟು ಶೇಕಡಾ ಸಮಾಧಾನಕರವಾಗಿದೆ ಎಂದರೆ, 34 ರಷ್ಟು ಜನ ಕೆಟ್ಟದಾಗಿದೆ ಎಂದಿದ್ದಾರೆ. ಶೇ.21 ರಷ್ಟು ಜನರು ಹೇಳಲು ಆಗಲ್ಲ ಎಂದು ಉತ್ತರಿಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ