ಎಲ್ಲಾ ನಿಲ್ದಾಣಗಳಲ್ಲಿ ಬಾಂಬ್ ಇಡಲಾಗಿದೆ ಎಂದು ಬೆದರಿಕೆ
ಬಟನ್ ಒತ್ತುವ ಮೂಲಕ ನಿಲ್ದಾಣವನ್ನು ಸ್ಫೋಟಿಸಲಾಗುವುದು
ಬೆದರಿಕೆ ಇಮೇಲ್ ಕುರಿತಾಗಿ ಚುರುಕುಗೊಂಡ ತನಿಖೆ.. ಕಳುಹಿಸಿದ್ಯಾರು?
ವಾರಾಣಾಸಿ ಸೇರಿದಂತೆ ಭಾರತದ 30 ವಿಮಾನ ನಿಲ್ದಾಣಗಳಿಗೆ ಇಮೇಲ್ ಮೂಲಕ ಬಾಂಬ್ ಬೆದರಿಕೆ ಕರೆ ಬಂದಿದೆ. ಸದ್ಯ ಈ ಬಗ್ಗೆ ಏರ್ಪೋರ್ಟ್ ಸುತ್ತುಮುತ್ತ ಎಚ್ಚರಿಕೆ ವಹಿಸಲಾಗಿದ್ದು, ತೀವ್ರ ತಪಾಸಣೆ ನಡೆಯುತ್ತಿದೆ.
ನಿನ್ನೆ ಸಂಜೆ ಅಧಿಕೃತ ಇಮೇಲ್ ವಿಳಾಸಕ್ಕೆ ಹಿಂದಿಯಲ್ಲಿ ಬರೆಯಲಾಗಿದ್ದ ಬೆದರಿಕೆ ಮೇಲ್ ಬಂದಿದೆ. ಎಲ್ಲಾ ನಿಲ್ದಾಣಗಳಲ್ಲಿ ಬಾಂಬ್ ಇಡಲಾಗಿದೆ. ಬಟನ್ ಒತ್ತುವ ಮೂಲಕ ನಿಲ್ದಾಣವನ್ನು ಸ್ಫೋಟಿಸಲಾಗುವುದು ಎಂದು ಮೇಲ್ನಲ್ಲಿ ತಿಳಿಸಲಾಗಿದೆ.
ಇಮೇಲ್ ಪರಿಶೀಲಿಸಿದ ಅಧಿಕಾರಿಗಳು ಈ ವಿಚಾರವನ್ನು ಸಿಐಎಸ್ಎಫ್ ಮತ್ತು ಉತ್ತರ ಪ್ರದೇಶ ಭದ್ರತಾ ಅಧಿಕಾರಿಗಳಿಗೆ ತಿಳಿಸಿ ತುರ್ತು ಸಭೆ ನಡೆಸಿದ್ದಾರೆ. ನಂತರ ನಿಲ್ದಾಣದ ಆವರಣದಲ್ಲಿ ಎಚ್ಚರ ವಹಿಸಿದ್ದು, ಪರಿಶೀಲಿಸಿದ್ದಾರೆ. ತಡರಾತ್ರಿವರೆಗೆ ತಪಾಸಣೆ ಮಾಡಿದ್ದಾರೆ.
ಇದನ್ನೂ ಓದಿ: ನಮ್ಮ ಬಳಿಯೂ ಕೆಲವು ವಿಡಿಯೋ ಇವೆ.. ಹೆಚ್ ಡಿ ಕುಮಾರಸ್ವಾಮಿ ಹೊಸ ಬಾಂಬ್
ಸದ್ಯ ಬೆದರಿಕೆ ಇಮೇಲ್ ಕುರಿತಾಗಿ ತನಿಖೆ ನಡೆಯುತ್ತಿದೆ. ಅದನ್ನು ಕಳುಹಿಸಿದವರು ಯಾರು? ಅವರ ಹಿನ್ನೆಲೆ, ಉದ್ದೇಶವೇನು? ಎಂಬುದರ ಬಗ್ಗೆ ತನಿಖೆ ನಡೆಯುತ್ತಿದೆ. ಸದ್ಯದ ಮಾಹಿತಿ ಪ್ರಕಾರ ಬೆದರಿಕೆ ಇಮೇಲ್ ಕಳುಹಿಸಿದವರ ಕುರಿತು ಯಾವುದೇ ಮಾಹಿತಿ ಬಹಿರಂಗಗೊಂಡಿಲ್ಲ.
ವಿಮಾನ ನಿಲ್ದಾಣದ ಹಿರಿಯ ಸಿಐಎಸ್ಎಫ್ ಕಮಾಂಡೆಂಟ್ ಅಜಯ್ ಕುಮಾರ್ ಮಾತನಾಡಿದ್ದು, ವಿಮಾನ ನಿಲ್ದಾಣ ನಿರ್ದೇಶಕರಿಗೆ ಸೋಮವಾರದಂದು ಅಪರಿಚಿತ ಇಮೇಲ್ ಬಂದಿದೆ. ಅದರಲ್ಲಿ ದೇಶದ 30 ವಿಮಾನ ನಿಲ್ದಾಣಗಳನ್ನು ಸ್ಫೋಟಿಸುವ ಬೆದರಿಕೆ ಹಾಕಲಾಗಿದೆ. ಇದನ್ನು ಯಾರೋ ಮಾನಸಿಕ ಅಸ್ವಸ್ಥ ವ್ಯಕ್ತಿ ಮಾಡಿರಬೇಕು ಎಂದು ಮೇಲ್ನೋಟಕ್ಕೆ ಕಾಣುತ್ತಿದೆ ಎಂದು ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ಎಲ್ಲಾ ನಿಲ್ದಾಣಗಳಲ್ಲಿ ಬಾಂಬ್ ಇಡಲಾಗಿದೆ ಎಂದು ಬೆದರಿಕೆ
ಬಟನ್ ಒತ್ತುವ ಮೂಲಕ ನಿಲ್ದಾಣವನ್ನು ಸ್ಫೋಟಿಸಲಾಗುವುದು
ಬೆದರಿಕೆ ಇಮೇಲ್ ಕುರಿತಾಗಿ ಚುರುಕುಗೊಂಡ ತನಿಖೆ.. ಕಳುಹಿಸಿದ್ಯಾರು?
ವಾರಾಣಾಸಿ ಸೇರಿದಂತೆ ಭಾರತದ 30 ವಿಮಾನ ನಿಲ್ದಾಣಗಳಿಗೆ ಇಮೇಲ್ ಮೂಲಕ ಬಾಂಬ್ ಬೆದರಿಕೆ ಕರೆ ಬಂದಿದೆ. ಸದ್ಯ ಈ ಬಗ್ಗೆ ಏರ್ಪೋರ್ಟ್ ಸುತ್ತುಮುತ್ತ ಎಚ್ಚರಿಕೆ ವಹಿಸಲಾಗಿದ್ದು, ತೀವ್ರ ತಪಾಸಣೆ ನಡೆಯುತ್ತಿದೆ.
ನಿನ್ನೆ ಸಂಜೆ ಅಧಿಕೃತ ಇಮೇಲ್ ವಿಳಾಸಕ್ಕೆ ಹಿಂದಿಯಲ್ಲಿ ಬರೆಯಲಾಗಿದ್ದ ಬೆದರಿಕೆ ಮೇಲ್ ಬಂದಿದೆ. ಎಲ್ಲಾ ನಿಲ್ದಾಣಗಳಲ್ಲಿ ಬಾಂಬ್ ಇಡಲಾಗಿದೆ. ಬಟನ್ ಒತ್ತುವ ಮೂಲಕ ನಿಲ್ದಾಣವನ್ನು ಸ್ಫೋಟಿಸಲಾಗುವುದು ಎಂದು ಮೇಲ್ನಲ್ಲಿ ತಿಳಿಸಲಾಗಿದೆ.
ಇಮೇಲ್ ಪರಿಶೀಲಿಸಿದ ಅಧಿಕಾರಿಗಳು ಈ ವಿಚಾರವನ್ನು ಸಿಐಎಸ್ಎಫ್ ಮತ್ತು ಉತ್ತರ ಪ್ರದೇಶ ಭದ್ರತಾ ಅಧಿಕಾರಿಗಳಿಗೆ ತಿಳಿಸಿ ತುರ್ತು ಸಭೆ ನಡೆಸಿದ್ದಾರೆ. ನಂತರ ನಿಲ್ದಾಣದ ಆವರಣದಲ್ಲಿ ಎಚ್ಚರ ವಹಿಸಿದ್ದು, ಪರಿಶೀಲಿಸಿದ್ದಾರೆ. ತಡರಾತ್ರಿವರೆಗೆ ತಪಾಸಣೆ ಮಾಡಿದ್ದಾರೆ.
ಇದನ್ನೂ ಓದಿ: ನಮ್ಮ ಬಳಿಯೂ ಕೆಲವು ವಿಡಿಯೋ ಇವೆ.. ಹೆಚ್ ಡಿ ಕುಮಾರಸ್ವಾಮಿ ಹೊಸ ಬಾಂಬ್
ಸದ್ಯ ಬೆದರಿಕೆ ಇಮೇಲ್ ಕುರಿತಾಗಿ ತನಿಖೆ ನಡೆಯುತ್ತಿದೆ. ಅದನ್ನು ಕಳುಹಿಸಿದವರು ಯಾರು? ಅವರ ಹಿನ್ನೆಲೆ, ಉದ್ದೇಶವೇನು? ಎಂಬುದರ ಬಗ್ಗೆ ತನಿಖೆ ನಡೆಯುತ್ತಿದೆ. ಸದ್ಯದ ಮಾಹಿತಿ ಪ್ರಕಾರ ಬೆದರಿಕೆ ಇಮೇಲ್ ಕಳುಹಿಸಿದವರ ಕುರಿತು ಯಾವುದೇ ಮಾಹಿತಿ ಬಹಿರಂಗಗೊಂಡಿಲ್ಲ.
ವಿಮಾನ ನಿಲ್ದಾಣದ ಹಿರಿಯ ಸಿಐಎಸ್ಎಫ್ ಕಮಾಂಡೆಂಟ್ ಅಜಯ್ ಕುಮಾರ್ ಮಾತನಾಡಿದ್ದು, ವಿಮಾನ ನಿಲ್ದಾಣ ನಿರ್ದೇಶಕರಿಗೆ ಸೋಮವಾರದಂದು ಅಪರಿಚಿತ ಇಮೇಲ್ ಬಂದಿದೆ. ಅದರಲ್ಲಿ ದೇಶದ 30 ವಿಮಾನ ನಿಲ್ದಾಣಗಳನ್ನು ಸ್ಫೋಟಿಸುವ ಬೆದರಿಕೆ ಹಾಕಲಾಗಿದೆ. ಇದನ್ನು ಯಾರೋ ಮಾನಸಿಕ ಅಸ್ವಸ್ಥ ವ್ಯಕ್ತಿ ಮಾಡಿರಬೇಕು ಎಂದು ಮೇಲ್ನೋಟಕ್ಕೆ ಕಾಣುತ್ತಿದೆ ಎಂದು ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ