newsfirstkannada.com

ವಾರಣಾಸಿ ಸೇರಿ ಭಾರತದ 30 ವಿಮಾನ ನಿಲ್ದಾಣಗಳಿಗೆ ಬಾಂಬ್​ ಬೆದರಿಕೆ

Share :

Published April 30, 2024 at 1:02pm

    ಎಲ್ಲಾ ನಿಲ್ದಾಣಗಳಲ್ಲಿ ಬಾಂಬ್​ ಇಡಲಾಗಿದೆ ಎಂದು ಬೆದರಿಕೆ

    ಬಟನ್​ ಒತ್ತುವ ಮೂಲಕ ನಿಲ್ದಾಣವನ್ನು ಸ್ಫೋಟಿಸಲಾಗುವುದು

    ಬೆದರಿಕೆ ಇಮೇಲ್​ ಕುರಿತಾಗಿ ಚುರುಕುಗೊಂಡ ತನಿಖೆ.. ಕಳುಹಿಸಿದ್ಯಾರು?

ವಾರಾಣಾಸಿ ಸೇರಿದಂತೆ ಭಾರತದ 30 ವಿಮಾನ ನಿಲ್ದಾಣಗಳಿಗೆ ಇಮೇಲ್​​ ಮೂಲಕ ಬಾಂಬ್​ ಬೆದರಿಕೆ ಕರೆ ಬಂದಿದೆ. ಸದ್ಯ ಈ ಬಗ್ಗೆ ಏರ್​ಪೋರ್ಟ್​ ಸುತ್ತುಮುತ್ತ ಎಚ್ಚರಿಕೆ ವಹಿಸಲಾಗಿದ್ದು, ತೀವ್ರ ತಪಾಸಣೆ ನಡೆಯುತ್ತಿದೆ.

ನಿನ್ನೆ ಸಂಜೆ ಅಧಿಕೃತ ಇಮೇಲ್​ ವಿಳಾಸಕ್ಕೆ ಹಿಂದಿಯಲ್ಲಿ ಬರೆಯಲಾಗಿದ್ದ ಬೆದರಿಕೆ ಮೇಲ್​ ಬಂದಿದೆ. ಎಲ್ಲಾ ನಿಲ್ದಾಣಗಳಲ್ಲಿ ಬಾಂಬ್​ ಇಡಲಾಗಿದೆ. ಬಟನ್​ ಒತ್ತುವ ಮೂಲಕ ನಿಲ್ದಾಣವನ್ನು ಸ್ಫೋಟಿಸಲಾಗುವುದು ಎಂದು ಮೇಲ್​ನಲ್ಲಿ ತಿಳಿಸಲಾಗಿದೆ.

ಇಮೇಲ್​ ಪರಿಶೀಲಿಸಿದ ಅಧಿಕಾರಿಗಳು ಈ ವಿಚಾರವನ್ನು ಸಿಐಎಸ್​ಎಫ್​ ಮತ್ತು ಉತ್ತರ ಪ್ರದೇಶ ಭದ್ರತಾ ಅಧಿಕಾರಿಗಳಿಗೆ ತಿಳಿಸಿ  ತುರ್ತು ಸಭೆ ನಡೆಸಿದ್ದಾರೆ. ನಂತರ ನಿಲ್ದಾಣದ ಆವರಣದಲ್ಲಿ ಎಚ್ಚರ ವಹಿಸಿದ್ದು, ಪರಿಶೀಲಿಸಿದ್ದಾರೆ. ತಡರಾತ್ರಿವರೆಗೆ ತಪಾಸಣೆ ಮಾಡಿದ್ದಾರೆ.

ಇದನ್ನೂ ಓದಿ: ನಮ್ಮ ಬಳಿಯೂ ಕೆಲವು ವಿಡಿಯೋ ಇವೆ.. ಹೆಚ್​ ಡಿ ಕುಮಾರಸ್ವಾಮಿ​ ಹೊಸ ಬಾಂಬ್

ಸದ್ಯ ಬೆದರಿಕೆ ಇಮೇಲ್​ ಕುರಿತಾಗಿ ತನಿಖೆ ನಡೆಯುತ್ತಿದೆ. ಅದನ್ನು ಕಳುಹಿಸಿದವರು ಯಾರು? ಅವರ ಹಿನ್ನೆಲೆ, ಉದ್ದೇಶವೇನು? ಎಂಬುದರ ಬಗ್ಗೆ ತನಿಖೆ ನಡೆಯುತ್ತಿದೆ. ಸದ್ಯದ ಮಾಹಿತಿ ಪ್ರಕಾರ ಬೆದರಿಕೆ ಇಮೇಲ್​ ಕಳುಹಿಸಿದವರ ಕುರಿತು ಯಾವುದೇ ಮಾಹಿತಿ ಬಹಿರಂಗಗೊಂಡಿಲ್ಲ.

ವಿಮಾನ ನಿಲ್ದಾಣದ ಹಿರಿಯ ಸಿಐಎಸ್​ಎಫ್​ ಕಮಾಂಡೆಂಟ್​​ ಅಜಯ್​ ಕುಮಾರ್​​ ಮಾತನಾಡಿದ್ದು, ವಿಮಾನ ನಿಲ್ದಾಣ ನಿರ್ದೇಶಕರಿಗೆ ಸೋಮವಾರದಂದು ಅಪರಿಚಿತ ಇಮೇಲ್​ ಬಂದಿದೆ. ಅದರಲ್ಲಿ ದೇಶದ 30 ವಿಮಾನ ನಿಲ್ದಾಣಗಳನ್ನು ಸ್ಫೋಟಿಸುವ ಬೆದರಿಕೆ ಹಾಕಲಾಗಿದೆ. ಇದನ್ನು ಯಾರೋ ಮಾನಸಿಕ ಅಸ್ವಸ್ಥ ವ್ಯಕ್ತಿ ಮಾಡಿರಬೇಕು ಎಂದು ಮೇಲ್ನೋಟಕ್ಕೆ ಕಾಣುತ್ತಿದೆ ಎಂದು ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ವಾರಣಾಸಿ ಸೇರಿ ಭಾರತದ 30 ವಿಮಾನ ನಿಲ್ದಾಣಗಳಿಗೆ ಬಾಂಬ್​ ಬೆದರಿಕೆ

https://newsfirstlive.com/wp-content/uploads/2024/01/Flight-3.jpg

    ಎಲ್ಲಾ ನಿಲ್ದಾಣಗಳಲ್ಲಿ ಬಾಂಬ್​ ಇಡಲಾಗಿದೆ ಎಂದು ಬೆದರಿಕೆ

    ಬಟನ್​ ಒತ್ತುವ ಮೂಲಕ ನಿಲ್ದಾಣವನ್ನು ಸ್ಫೋಟಿಸಲಾಗುವುದು

    ಬೆದರಿಕೆ ಇಮೇಲ್​ ಕುರಿತಾಗಿ ಚುರುಕುಗೊಂಡ ತನಿಖೆ.. ಕಳುಹಿಸಿದ್ಯಾರು?

ವಾರಾಣಾಸಿ ಸೇರಿದಂತೆ ಭಾರತದ 30 ವಿಮಾನ ನಿಲ್ದಾಣಗಳಿಗೆ ಇಮೇಲ್​​ ಮೂಲಕ ಬಾಂಬ್​ ಬೆದರಿಕೆ ಕರೆ ಬಂದಿದೆ. ಸದ್ಯ ಈ ಬಗ್ಗೆ ಏರ್​ಪೋರ್ಟ್​ ಸುತ್ತುಮುತ್ತ ಎಚ್ಚರಿಕೆ ವಹಿಸಲಾಗಿದ್ದು, ತೀವ್ರ ತಪಾಸಣೆ ನಡೆಯುತ್ತಿದೆ.

ನಿನ್ನೆ ಸಂಜೆ ಅಧಿಕೃತ ಇಮೇಲ್​ ವಿಳಾಸಕ್ಕೆ ಹಿಂದಿಯಲ್ಲಿ ಬರೆಯಲಾಗಿದ್ದ ಬೆದರಿಕೆ ಮೇಲ್​ ಬಂದಿದೆ. ಎಲ್ಲಾ ನಿಲ್ದಾಣಗಳಲ್ಲಿ ಬಾಂಬ್​ ಇಡಲಾಗಿದೆ. ಬಟನ್​ ಒತ್ತುವ ಮೂಲಕ ನಿಲ್ದಾಣವನ್ನು ಸ್ಫೋಟಿಸಲಾಗುವುದು ಎಂದು ಮೇಲ್​ನಲ್ಲಿ ತಿಳಿಸಲಾಗಿದೆ.

ಇಮೇಲ್​ ಪರಿಶೀಲಿಸಿದ ಅಧಿಕಾರಿಗಳು ಈ ವಿಚಾರವನ್ನು ಸಿಐಎಸ್​ಎಫ್​ ಮತ್ತು ಉತ್ತರ ಪ್ರದೇಶ ಭದ್ರತಾ ಅಧಿಕಾರಿಗಳಿಗೆ ತಿಳಿಸಿ  ತುರ್ತು ಸಭೆ ನಡೆಸಿದ್ದಾರೆ. ನಂತರ ನಿಲ್ದಾಣದ ಆವರಣದಲ್ಲಿ ಎಚ್ಚರ ವಹಿಸಿದ್ದು, ಪರಿಶೀಲಿಸಿದ್ದಾರೆ. ತಡರಾತ್ರಿವರೆಗೆ ತಪಾಸಣೆ ಮಾಡಿದ್ದಾರೆ.

ಇದನ್ನೂ ಓದಿ: ನಮ್ಮ ಬಳಿಯೂ ಕೆಲವು ವಿಡಿಯೋ ಇವೆ.. ಹೆಚ್​ ಡಿ ಕುಮಾರಸ್ವಾಮಿ​ ಹೊಸ ಬಾಂಬ್

ಸದ್ಯ ಬೆದರಿಕೆ ಇಮೇಲ್​ ಕುರಿತಾಗಿ ತನಿಖೆ ನಡೆಯುತ್ತಿದೆ. ಅದನ್ನು ಕಳುಹಿಸಿದವರು ಯಾರು? ಅವರ ಹಿನ್ನೆಲೆ, ಉದ್ದೇಶವೇನು? ಎಂಬುದರ ಬಗ್ಗೆ ತನಿಖೆ ನಡೆಯುತ್ತಿದೆ. ಸದ್ಯದ ಮಾಹಿತಿ ಪ್ರಕಾರ ಬೆದರಿಕೆ ಇಮೇಲ್​ ಕಳುಹಿಸಿದವರ ಕುರಿತು ಯಾವುದೇ ಮಾಹಿತಿ ಬಹಿರಂಗಗೊಂಡಿಲ್ಲ.

ವಿಮಾನ ನಿಲ್ದಾಣದ ಹಿರಿಯ ಸಿಐಎಸ್​ಎಫ್​ ಕಮಾಂಡೆಂಟ್​​ ಅಜಯ್​ ಕುಮಾರ್​​ ಮಾತನಾಡಿದ್ದು, ವಿಮಾನ ನಿಲ್ದಾಣ ನಿರ್ದೇಶಕರಿಗೆ ಸೋಮವಾರದಂದು ಅಪರಿಚಿತ ಇಮೇಲ್​ ಬಂದಿದೆ. ಅದರಲ್ಲಿ ದೇಶದ 30 ವಿಮಾನ ನಿಲ್ದಾಣಗಳನ್ನು ಸ್ಫೋಟಿಸುವ ಬೆದರಿಕೆ ಹಾಕಲಾಗಿದೆ. ಇದನ್ನು ಯಾರೋ ಮಾನಸಿಕ ಅಸ್ವಸ್ಥ ವ್ಯಕ್ತಿ ಮಾಡಿರಬೇಕು ಎಂದು ಮೇಲ್ನೋಟಕ್ಕೆ ಕಾಣುತ್ತಿದೆ ಎಂದು ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Load More