newsfirstkannada.com

ಮದುವೆ ಆಗಲು ನಿರಾಕರಿಸಿದ ಪ್ರಿಯಕರ.. ಮನನೊಂದು ನೇಣಿಗೆ ಶರಣಾದ ಯುವತಿ

Share :

Published May 11, 2024 at 9:22am

    UPSC ಪರೀಕ್ಷೆಗೆ ಸಿದ್ದತೆ ನಡೆಸುತ್ತಿದ್ದ 26 ವರ್ಷದ ಯುವತಿ

    ನಾಲ್ಕು ವರ್ಷದಿಂದ ಯುವಕನ ಜೊತೆಗೆ ಪ್ರೀತಿಗೆ ಬಿದ್ದಿದ್ದಳು

    ಅನ್ಯ ಜಾತಿ ಎಂದು ಯುವತಿಯನ್ನು ನಿರಾಕರಿಸಿದ ಯುವಕನ ಪೋಷಕರು

ಕಲಬುರಗಿ: ಪ್ರಿಯಕರ ಮದುವೆ ಆಗಲು ನಿರಾಕರಿಸಿದನೆಂದು ಯುವತಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಕಲಬುರಗಿ ನಗರ ಹೊರವಲಯದ ಯಲ್ಲಾಲಿಂಗ್ ಕಾಲೋನಿಯಲ್ಲಿ ನಡೆದಿದೆ. ಆಳಂದ ತಾಲೂಕಿನ ಕೌಲಗಾ ಗ್ರಾಮದ ಪುಷ್ಪಾ (26) ಆತ್ಮಹತ್ಯೆ ಮಾಡಿಕೊಂಡ ಯುವತಿ.

ಪುಷ್ಪಾ ಯಲ್ಲಾಲಿಂಗ ಕಾಲೋನಿಯಲ್ಲಿ ಬಾಡಿಗೆ ರೂಂನಲ್ಲಿ ವಾಸವಾಗಿದ್ದಳು. UPSC ಪರೀಕ್ಷೆಗೆ ಸಿದ್ದತೆ ನಡೆಸುತ್ತಿದ್ದಳು. ನಾಲ್ಕು ವರ್ಷಗಳಿಂದ ಗಾಂಧಿನಗರ ನಿವಾಸಿ ಕಿರಣ್ ಎಂಬಾತನನ್ನು ಇಷ್ಟಪಟ್ಟು ಪ್ರೀತಿ ಮಾಡುತ್ತಿದ್ದಳು.

ಕೆಲ ದಿನಗಳಿಂದ ಪುಷ್ಪಾ ಮದುವೆ ಮಾಡಿಕೋ ಎಂದು ಕಿರಣ್‌ಗೆ ಒತ್ತಾಯ ಮಾಡಿದ್ದಾಳೆ. ಆದರೆ ಕಿರಣ್​ ಮನೆಯವರು ಅನ್ಯ ಜಾತಿ ಯುವತಿ ಎಂದು ಮದುವೆ ನಿರಾಕರಿಸಿದ್ದಾರೆ.

ಇದನ್ನೂ ಓದಿ: ಕೊಡಗು: ಆತ್ಮಹತ್ಯೆ ಸುಳ್ಳು.. ಬಾಲಕಿಯ ರುಂಡ ಕಡಿದವನು ಕೊನೆಗೂ ಜೀವಂತ ಸಿಕ್ಕಿದ​.. ‘ಇವನೇ ಅವನು’

ಇತ್ತ ಈಗಲೇ ಮದುವೆ ಬೇಡವೆಂದು ಕಿರಣ್ ಪುಷ್ಪಾಗೆ ಸಮಜಾಯಿಸಿದ್ದನು. ಇದರಿಂದ ಮನನೊಂದು ಪುಷ್ಪಾ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಆರೋಪಿಸಲಾಗಿದೆ. ಈ ಪ್ರಕರಣ ಗುಲ್ಬರ್ಗಾ ವಿಶ್ವವಿದ್ಯಾಲಯ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.

ಇದನ್ನೂ ಓದಿ: ಮತ್ತೊಂದು ಆಡಿಯೋ ಬಿಡುಗಡೆ ಮಾಡಿದ ದೇವರಾಜೇಗೌಡ.. ಅಶ್ಲೀಲ ವಿಡಿಯೋ ಕೇಸ್​ಗೆ ಟ್ವಿಸ್ಟ್​ ಮೇಲೆ ಟ್ವಿಸ್ಟ್..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಮದುವೆ ಆಗಲು ನಿರಾಕರಿಸಿದ ಪ್ರಿಯಕರ.. ಮನನೊಂದು ನೇಣಿಗೆ ಶರಣಾದ ಯುವತಿ

https://newsfirstlive.com/wp-content/uploads/2024/05/kalburgi.jpg

    UPSC ಪರೀಕ್ಷೆಗೆ ಸಿದ್ದತೆ ನಡೆಸುತ್ತಿದ್ದ 26 ವರ್ಷದ ಯುವತಿ

    ನಾಲ್ಕು ವರ್ಷದಿಂದ ಯುವಕನ ಜೊತೆಗೆ ಪ್ರೀತಿಗೆ ಬಿದ್ದಿದ್ದಳು

    ಅನ್ಯ ಜಾತಿ ಎಂದು ಯುವತಿಯನ್ನು ನಿರಾಕರಿಸಿದ ಯುವಕನ ಪೋಷಕರು

ಕಲಬುರಗಿ: ಪ್ರಿಯಕರ ಮದುವೆ ಆಗಲು ನಿರಾಕರಿಸಿದನೆಂದು ಯುವತಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಕಲಬುರಗಿ ನಗರ ಹೊರವಲಯದ ಯಲ್ಲಾಲಿಂಗ್ ಕಾಲೋನಿಯಲ್ಲಿ ನಡೆದಿದೆ. ಆಳಂದ ತಾಲೂಕಿನ ಕೌಲಗಾ ಗ್ರಾಮದ ಪುಷ್ಪಾ (26) ಆತ್ಮಹತ್ಯೆ ಮಾಡಿಕೊಂಡ ಯುವತಿ.

ಪುಷ್ಪಾ ಯಲ್ಲಾಲಿಂಗ ಕಾಲೋನಿಯಲ್ಲಿ ಬಾಡಿಗೆ ರೂಂನಲ್ಲಿ ವಾಸವಾಗಿದ್ದಳು. UPSC ಪರೀಕ್ಷೆಗೆ ಸಿದ್ದತೆ ನಡೆಸುತ್ತಿದ್ದಳು. ನಾಲ್ಕು ವರ್ಷಗಳಿಂದ ಗಾಂಧಿನಗರ ನಿವಾಸಿ ಕಿರಣ್ ಎಂಬಾತನನ್ನು ಇಷ್ಟಪಟ್ಟು ಪ್ರೀತಿ ಮಾಡುತ್ತಿದ್ದಳು.

ಕೆಲ ದಿನಗಳಿಂದ ಪುಷ್ಪಾ ಮದುವೆ ಮಾಡಿಕೋ ಎಂದು ಕಿರಣ್‌ಗೆ ಒತ್ತಾಯ ಮಾಡಿದ್ದಾಳೆ. ಆದರೆ ಕಿರಣ್​ ಮನೆಯವರು ಅನ್ಯ ಜಾತಿ ಯುವತಿ ಎಂದು ಮದುವೆ ನಿರಾಕರಿಸಿದ್ದಾರೆ.

ಇದನ್ನೂ ಓದಿ: ಕೊಡಗು: ಆತ್ಮಹತ್ಯೆ ಸುಳ್ಳು.. ಬಾಲಕಿಯ ರುಂಡ ಕಡಿದವನು ಕೊನೆಗೂ ಜೀವಂತ ಸಿಕ್ಕಿದ​.. ‘ಇವನೇ ಅವನು’

ಇತ್ತ ಈಗಲೇ ಮದುವೆ ಬೇಡವೆಂದು ಕಿರಣ್ ಪುಷ್ಪಾಗೆ ಸಮಜಾಯಿಸಿದ್ದನು. ಇದರಿಂದ ಮನನೊಂದು ಪುಷ್ಪಾ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಆರೋಪಿಸಲಾಗಿದೆ. ಈ ಪ್ರಕರಣ ಗುಲ್ಬರ್ಗಾ ವಿಶ್ವವಿದ್ಯಾಲಯ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.

ಇದನ್ನೂ ಓದಿ: ಮತ್ತೊಂದು ಆಡಿಯೋ ಬಿಡುಗಡೆ ಮಾಡಿದ ದೇವರಾಜೇಗೌಡ.. ಅಶ್ಲೀಲ ವಿಡಿಯೋ ಕೇಸ್​ಗೆ ಟ್ವಿಸ್ಟ್​ ಮೇಲೆ ಟ್ವಿಸ್ಟ್..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Load More