/newsfirstlive-kannada/media/post_attachments/wp-content/uploads/2024/05/Swagath-babu.jpg)
ಸ್ಯಾಂಡಲ್​ವುಡ್​ನ ಖ್ಯಾತ ನಿರ್ಮಾಪಕ ಹಾಗೂ ವಿತರಕ ಸ್ವಾಗತ್​ ಬಾಬು ನಿಧನರಾಗಿದ್ದಾರೆ. ಕನ್ನಡ ಚಿತ್ರರಂಗದಲ್ಲಿ 35 ವರ್ಷಗಳ ಕಾಲ ಸುದೀರ್ಘ ಅನುಭವ ಹೊಂದಿದ್ದ ಇವರಿಂದು ಕೊನೆಯುಸಿರೆಳೆದಿದ್ದಾರೆ. ಇವರ ಸಾವಿಗೆ ಅನೇಕ ತಾರೆಯರು ಕಂಬನಿ ಸುರಿಸಿದ್ದಾರೆ.
ಸ್ವಾಗತ್​ ಬಾಬು ಕನ್ನಡದಲ್ಲಿ ಅನೇಕ ಹಿಟ್​ ಸಿನಿಮಾಗಳನ್ನು ನೀಡಿದ್ದಾರೆ. ನಿರ್ಮಾಪಕ ಮತ್ತು ವಿತರಕರಾಗಿಯು ಕೆಲಸ ಮಾಡಿದ್ದಾರೆ. ಆ ಮೂಲಕ ಕನ್ನಡ ಚಿತ್ರರಂಗಕ್ಕೆ ಕೊಡುಗೆ ನೀಡಿದ್ದಾರೆ.
ಇದನ್ನೂ ಓದಿ: ಮಗಳನ್ನು ಶಾಲೆಗೆ ಬಿಡುವ ವೇಳೆ ಭೀಕರ ಅಪಘಾತ.. ಇಬ್ಬರು ಸಾವು, ಮೂವರು ಗಂಭೀರ
ಇವರ ‘ಚಂದ್ರಮುಖಿ ಪ್ರಾಣ ಸಖಿ’, ‘ಶ್ರೀರಸ್ತು ಶುಭಮಸ್ತು’ ಸಿನಿಮಾಗಳು ಹಿಟ್​ ಕೊಟ್ಟಿದ್ದವು. ಗಲ್ಲಾ ಪೆಟ್ಟಿಗೆ ಬಾಚಿದ್ದವು. ಆದರೆ ವಿಧಿಯ ಕ್ರೂರ ಲೀಲೆಗೆ ಸ್ವಾಗತ್​ ಬಾಬು ನಿಧನರಾಗಿದ್ದಾರೆ. ಇವರ ಸಾವಿಗೆ ಅನೇಕ ಚಿತ್ರತಾರೆಯರು ಶೋಕ ವ್ಯಕ್ತಪಡಿಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us