ಚನ್ನಪಟ್ಟಣದಿಂದ ಸ್ಪರ್ಧೆಗೆ ನಿಖಿಲ್​ ಹಿಂದೇಟು; ಪ್ಲಾನ್​​​ ಬಿ ಸಿದ್ಧ ಮಾಡ್ಕೊಂಡ ದಳಪತಿ..!

author-image
Ganesh
Updated On
ಚನ್ನಪಟ್ಟಣದಲ್ಲಿ ಯಾರ್ ಗೆಲ್ತಾರೆ? ಯಾರು ಸೋಲ್ತಾರೆ?  ಕಾಂಗ್ರೆಸ್, ಬಿಜೆಪಿ-ಜೆಡಿಎಸ್‌ ಲೆಕ್ಕಾಚಾರವೇನು?
Advertisment
  • ಚನ್ನಪಟ್ಟಣ ಬೈಎಲೆಕ್ಷನ್​​​​ ಘೋಷಣೆ ಬೆನ್ನಲ್ಲೇ ರಣವ್ಯೂಹ
  • ಮೈತ್ರಿಗೆ ಸೆಡ್ಡು ಹೊಡೆದು ಸಿ.ಪಿ.ಯೋಗೇಶ್ವರ್ ಸ್ಪರ್ಧೆ ಖಚಿತ
  • ಇವತ್ತು ತಮ್ಮ ಬೆಂಬಲಿಗರ ಸಭೆ ಕರೆದ ಸಿ.ಪಿ.ಯೋಗೇಶ್ವರ್

ಕೊನೆಗೂ ರಾಜ್ಯದ ಉಪ ಸಮರಕ್ಕೆ ಮುಹೂರ್ತ ಫಿಕ್ಸ್​ ಆಗಿದೆ. ಸಂಡೂರು, ಶಿಗ್ಗಾಂವಿ, ಚನ್ನಪಟ್ಟಣದ ರಣಾಂಗಣಕ್ಕೆ ವೇದಿಕೆ ರೆಡಿ ಆಗಿದೆ. ನವೆಂಬರ್ 13ಕ್ಕೆ ಸತ್ವ ಪರೀಕ್ಷೆ ಎದುರಾಗಲಿದೆ. ಆದ್ರೆ ಚನ್ನಪಟ್ಟಣ ಅಭ್ಯರ್ಥಿ ಆಯ್ಕೆಯೇ ದೋಸ್ತಿಗೆ ತಲೆ ನೋವು ತರಿಸಿದೆ. ಇಡೀ ರಾಷ್ಟ್ರದಲ್ಲಿ ಕೇರಳದ ವಯನಾಡು ಹೈವೋಲ್ಟೇಜ್​ ಕ್ಷೇತ್ರವಾಗಿ ಗಮನ ಸೆಳೆಯುತ್ತಿದೆ.

ಹರಿಯಾಣ, ಜಮ್ಮು ಕಾಶ್ಮೀರ ಎಲೆಕ್ಷನ್​​ ಮುಗಿದ ಬೆನ್ನಲ್ಲೆ ಮತ್ತೆರಡು ರಾಜ್ಯಗಳ ಚುನಾವಣೆಗೆ ಮುಹೂರ್ತ ಫಿಕ್ಸ್​ ಆಗಿದೆ. ಮಹಾರಾಷ್ಟ್ರ ಮತ್ತು ಜಾರ್ಖಂಡ್​ ವಿಧಾನಸಭೆಗೆ ಎಲೆಕ್ಷನ್​​ ನಡೆಯಲಿದ್ದು, ಇಂಡಿಯಾ ಮತ್ತು ಎನ್​ಡಿಎ ನಡುವೆ ನೇರ ಸಮರ ನಡೆಯಲಿದೆ. ಇದರ ಜೊತೆಗೆ ಬೈಎಲೆಕ್ಷನ್​​ ಸಹ ಅನೌನ್ಸ್​ ಆಗಿದ್ದು, ಕೇರಳದ ವಯನಾಡು ಹೈವೋಲ್ಟೇಜ್​​ ಕ್ಷೇತ್ರವಾಗಿ ಮಾರ್ಪಟ್ಟಿದೆ.

ಇದನ್ನೂ ಓದಿ:ಚನ್ನಪಟ್ಟಣ ಬೈ ಎಲೆಕ್ಷನ್; ಮೈತ್ರಿ ಟಿಕೆಟ್​ ಯಾರ ಪಾಲಾಗುತ್ತೆ.. ಕಾಂಗ್ರೆಸ್​ಗೆ ಹೋಗ್ತಾರಾ ಸಿ.ಪಿ ಯೋಗೇಶ್ವರ್?

publive-image

ಪ್ರಿಯಾಂಕಾ ಗಾಂಧಿ ಎಲೆಕ್ಷನ್​​​ ಪಾಲಿಟಿಕ್ಸ್​​ಗೆ ಎಂಟ್ರಿ!
ಮೊದಲ ಬಾರಿಗೆ ಪ್ರಿಯಾಂಕಾ ಗಾಂಧಿ ಚುನಾವಣಾ ರಾಜಕೀಯಕ್ಕೆ ಧುಮುಕ್ತಿದ್ದಾರೆ.. ರಾಹುಲ್​​​ ರಾಜೀನಾಮೆ ಕಾರಣಕ್ಕೆ ತೆರವಾದ ವಯನಾಡನಿಂದ ಪ್ರಿಯಾಂಕಾ ಗಾಂಧಿ ಸ್ಪರ್ಧೆ ಖಚಿತವಾಗಿದೆ. ಬೈ ಎಲೆಕ್ಷನ್​​ ಡೇಟ್​​​ ಹೊರ ಬೀಳ್ತಿದ್ದಂತೆ ಪ್ರಿಯಾಂಕಾ ಗಾಂಧಿ ಹೆಸರನ್ನ ಕಾಂಗ್ರೆಸ್​​ ಘೋಷಣೆ ಮಾಡಿದೆ.. ಈ ಮೂಲಕ ಸಂಸತ್​ನಲ್ಲಿ ಅಣ್ಣ-ತಂಗಿ ಕಾಂಗ್ರೆಸ್​​ ಮುನ್ನಡೆಸುವ ಇರಾದೆ ಹೊಂದಿದ್ದಾರೆ.

publive-image

ಮೈತ್ರಿಗೆ ಸೆಡ್ಡು ಹೊಡೆದು ಸಿ.ಪಿ.ಯೋಗೇಶ್ವರ್ ಸ್ಪರ್ಧೆ ಖಚಿತ
ರಾಜ್ಯದ ಶಕ್ತಿ ಕ್ಷೇತ್ರವಾಗಿ ಚನ್ನಪಟ್ಟಣ ಮಾರ್ಪಟ್ಟಿದೆ. ಕೇಂದ್ರ ಸಚಿವ ಹೆಚ್​ಡಿಕೆ, ಡಿಸಿಎಂ ಡಿಕೆಶಿ, ಮಾಜಿ ಸಚಿವ ಸಿಪಿವೈ ನಡುವೆ ನೇರ ಯುದ್ಧಕ್ಕೆ ಸಜ್ಜಾಗಿದೆ. ಕಮಲ-ದಳ ಮೈತ್ರಿಗೆ ಸೆಡ್ಡು ಹೊಡೆದು ಪಕ್ಷೇತರವಾಗಿ ಕಣಕ್ಕಿಳಿಯಲು ಸಿ.ಪಿ.ಯೋಗೇಶ್ವರ್ ಪ್ಲಾನ್​ ಮಾಡಿದ್ದಾರೆ. ಇದಕ್ಕೆ ಟಕ್ಕರ್​​ ಕೊಡಲು ಜೆಡಿಎಸ್​ ಮತ್ತೊಂದು ಅಸ್ತ್ರ ಹೂಡ್ತಿದೆ. ಸ್ಪರ್ಧೆಗೆ ನಿಖಿಲ್​ ಹಿಂದೇಟು ಹಾಕ್ತಿರುವ ಕಾರಣ ಮತ್ತೆ ಅನಿತಾ ಕುಮಾರಸ್ವಾಮಿ ಕಣಕ್ಕಿಳಿಯುವ ಸಾಧ್ಯತೆ ಇದೆ. ಸೈನಿಕನ ಬಂಡಾಯದ ಬಗ್ಗೆ ಡಿಕೆಶಿ ಮತ್ತು ವಿಜಯೇಂದ್ರ ಮಾತ್ನಾಡಿದ್ದಾರೆ.

ಇದನ್ನೂ ಓದಿ:Wayanad: ಮೊದಲ ಬಾರಿ ಚುನಾವಣಾ ಅಖಾಡಕ್ಕೆ ಎಂಟ್ರಿಯಾದ ಪ್ರಿಯಾಂಕಾ ಗಾಂಧಿ; ಏನಿದರ ಪ್ಲಾನ್?

ಈವರೆಗೆ ಮುಡಾದಲ್ಲಿ ಮೂಡಿ ಆಗಿದ್ದ ನಾಯಕರಿಗೆ ಬೈಎಲೆಕ್ಷನ್​​​ ಅಗ್ನಿ ಪರೀಕ್ಷೆ ಒಡ್ಡಿದೆ. ಅದರಲ್ಲೂ ಸಿದ್ದು ವರ್ಚಸ್ಸು, ಬಿಜೆಪಿ ಸವಾಲು, ಹೆಚ್​ಡಿಕೆ-ಡಿಕೆಶಿಯ ಪ್ರತಿಷ್ಠೆ, ಯೋಗೇಶ್ವರ್​ರ ಅಸ್ತಿತ್ವದ ಹೋರಾಟಕ್ಕೆ ಈ ಮೂರು ಬೈ ಎಲೆಕ್ಷನ್​ಗಳು ಸಾಕ್ಷಿ ಆಗಲಿವೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment