ಅನುಜ್ ರಾವತ್- ದಿನೇಶ್ ಕಾರ್ತಿಕ್ ಬ್ಯಾಟಿಂಗ್ನಿಂದ RCB ಚೇತರಿಕೆ
ಮುಸ್ತಫಿಜುರ್ ರೆಹ್ಮಾನ್ ಕೊಟ್ಟ ಬೌಲಿಂಗ್ ಶಾಕ್ಗೆ ಆರ್ಸಿಬಿ ಕಂಗಾಲು
ರವೀಂದ್ರ ಜಡೇಜಾ-ಶಿವಂ ದುಬೆ ಬೊಂಬಾಟ್ ಆಟದಿಂದ ಚೆನ್ನೈ ಜಯ
ಸೀಸನ್ ಬದಲಾಯ್ತು.. ಹೆಸರು, ಲೋಗೋ, ಆಟಗಾರರು ಎಲ್ಲ ಬದಲಾಯಿಸಲಾಯಿತು. ಆದರೂ ಅದೇ ರಾಗ, ಅದೇ ಹಾಡು. ಈ ಸೀಸನ್ನಲ್ಲೂ ಆರ್ಸಿಬಿ ಮೊದಲ ಪಂದ್ಯವನ್ನ ದೇವರಿಗೆ ಕೊಟ್ಟಿದೆ. ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಅನ್ನೋ ಮಾತಿದ್ಯಲ್ಲ.. ಚೆನ್ನೈನಲ್ಲಿ ಆರ್ಸಿಬಿಗೆ ಆಗಿದ್ದೂ ಅದೇ.
ಸ್ಲೋ & ಸ್ಟಡಿ ಆರಂಭ.. ದಿಢೀರ್ ಕುಸಿತ..!
ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ಗಿಳಿದ ಆರ್ಸಿಬಿ ನಿಧಾನಗತಿಯ ಆರಂಭ ಪಡೆದುಕೊಳ್ತು. ಕ್ಯಾಪ್ಟನ್ ಫಾಫ್ ಡುಪ್ಲೆಸಿ, ವಿರಾಟ್ ಕೊಹ್ಲಿ ಪವರ್ ಪ್ಲೇನಲ್ಲಿ ಅಬ್ಬರಿಸಲಿಲ್ಲ. 4 ಓವರ್ಗಳಲ್ಲಿ ಕೇವಲ 37 ರನ್ ಸಿಡಿಸಿದರು.
ಇದನ್ನು ಓದಿ: ಮಾಸ್ಕೋದಲ್ಲಿ ನರಮೇಧ; ಭೂತಾನ್ನಿಂದಲೇ ರಷ್ಯಾದ ಮೇಲಿನ ದಾಳಿ ಖಂಡಿಸಿದ ಪ್ರಧಾನಿ ಮೋದಿ
ಮುಸ್ತಫಿಜುರ್ ಕೊಟ್ಟ ಶಾಕ್ಗೆ ಆರ್ಸಿಬಿ ಕಂಗಾಲ್.!
5ನೇ ಓವರ್ನಲ್ಲಿ ದಾಳಿಗಿಳಿದ ಮುಸ್ತಫಿಜುರ್ ರೆಹಮಾನ್ ಒಂದೇ ಓವರ್ನಲ್ಲಿ ಡಬಲ್ ಶಾಕ್ ಕೊಟ್ರು. ಫಾಫ್ ಡುಪ್ಲೆಸಿ, ರಜತ್ ಪಟಿದಾರ್ಗೆ ಪೆವಿಲಿಯನ್ ದಾರಿ ತೋರಿಸಿದರು. 4ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಗ್ಲೆನ್ ಮ್ಯಾಕ್ಸ್ವೆಲ್ ಡಕೌಟ್ ಆಗಿ ನಿರ್ಗಮಿಸಿದರು. ಅದರ ಬೆನ್ನಲ್ಲೇ, ವಿರಾಟ್ ಕೊಹ್ಲಿ, ಕ್ಯಾಮರೂನ್ ಗ್ರೀನ್ ಆಟಕ್ಕೆ ಮತ್ತೆ ಮುಸ್ತಫಿಜುರ್ ಬ್ರೇಕ್ ಹಾಕಿದರು.
RCBಗೆ ಜೀವ ತುಂಬಿದ ಅನುಜ್ ರಾವತ್ -ಕಾರ್ತಿಕ್.!
6ನೇ ವಿಕೆಟ್ಗೆ ಜೊತೆಯಾದ ದಿನೇಶ್ ಕಾರ್ತಿಕ್, ಅನುಜ್ ರಾವತ್ ತಂಡಕ್ಕೆ ಚೇತರಿಕೆ ನೀಡಿದರು. 95 ರನ್ಗಳ ಸಾಲಿಡ್ ಜೊತೆಯಾಟವಾಡಿದ ಈ ಜೋಡಿ ಆರ್ಸಿಬಿ ಬಿಗ್ಸ್ಕೋರ್ ಕಲೆ ಹಾಕುವಲ್ಲಿ ನೆರವಾದರು. 20 ಓವರ್ಗಳ ಅಂತ್ಯಕ್ಕೆ ಆರ್ಸಿಬಿ 6 ವಿಕೆಟ್ ಕಳೆದುಕೊಂಡು 173 ರನ್ಗಳಿಸ್ತು.
174 ರನ್ಗಳ ಬಿಗ್ ಟಾರ್ಗೆಟ್ ಬೆನ್ನತ್ತಿದ ಚೆನ್ನೈ ಅಬ್ಬರದ ಆರಂಭದ ಸೂಚನೆ ನೀಡಿತು. ಆದ್ರೆ, ಇಂಪ್ಯಾಕ್ಟ್ ಪ್ಲೇಯರ್ ಯಶ್ ದಯಾಳ್, ಋತುರಾಜ್ ಗಾಜ್ವಾಡ್ಗೆ ಪೆವಿಲಿಯನ್ ದಾರಿ ತೋರಿಸುವಲ್ಲಿ ಯಶಸ್ವಿಯಾದರು. ವಿಕೆಟ್ ಕಳೆದರು ಅಬ್ಬರದ ಆಟವಾಡ್ತಿದ್ದ ರಚಿನ್ ರವೀಂದ್ರ, ಕರನ್ ಶರ್ಮಾ ಸ್ಪಿನ್ ಬಲೆಗೆ ಬಿದ್ದರು.
Fizz! 😮#IPL #CSK #RCB pic.twitter.com/s2Ldi9Zxol
— Cricbuzz (@cricbuzz) March 22, 2024
ಚೆನ್ನೈಗೆ ಡಬಲ್ ಶಾಕ್ ಕೊಟ್ಟ ಕ್ಯಾಮರೂನ್ ಗ್ರೀನ್.!
ಬಳಿಕ ಜೊತೆಯಾದ ಡೇರಿಲ್ ಮಿಚೆಲ್, ಅಜಿಂಕ್ಯಾ ರಹಾನೆ ಸ್ಟಡಿ ಇನ್ನಿಂಗ್ಸ್ ಕಟ್ಟೋ ಯುತ್ನದಲ್ಲಿದ್ದರು. ಆದ್ರೆ, ಇವರ ಜೊತೆಯಾಟಕ್ಕೆ ಕ್ಯಾಮರೂನ್ ಗ್ರೀನ್ ಬ್ರೇಕ್ ಹಾಕಿದರು.
ಜಡ್ಡು -ದುಬೆ ಬೊಂಬಾಟ್ ಆಟ.. ಚೆನ್ನೈಗೆ ಜಯ.!
ಆರ್ಸಿಬಿ ಸುಲಭಕ್ಕೆ ಗೆಲ್ಲೋ ಸಿಚ್ಯುವೇಶನ್ ನಿರ್ಮಾಣವಾಗಿತ್ತು. ಆದ್ರೆ, 5ನೇ ವಿಕೆಟ್ಗೆ ಜೊತೆಯಾದ ಶಿವಮ್ ದುಬೆ, ರವಿಂದ್ರ ಜಡೇಜಾ ಎಚ್ಚರಿಕೆಯ ಆಟ ಗೆಲುವಿನ್ನ ಕಸಿದುಕೊಂಡರು. ಆರ್ಸಿಬಿ ಶಾರ್ಟ್ಬಾಲ್ ತಂತ್ರ, ಬೈಸ್, ಓವರ್ ಥ್ರೋ ರೂಪದಲ್ಲಿ ನೀಡಿದ ಬಿಟ್ಟಿ ರನ್ಗಳು ಗೆಲುವಿಗೆ ಮುಳುವಾದವು. 18.4 ಓವರ್ಗಳಲ್ಲಿ ಗುರಿ ಮುಟ್ಟಿದ ಚೆನ್ನೈ 6 ವಿಕೆಟ್ಗಳ ಜಯ ಸಾಧಿಸಿ ಟೂರ್ನಿಯಲ್ಲಿ ಶುಭಾರಂಭ ಮಾಡಿತು.
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ
ಅನುಜ್ ರಾವತ್- ದಿನೇಶ್ ಕಾರ್ತಿಕ್ ಬ್ಯಾಟಿಂಗ್ನಿಂದ RCB ಚೇತರಿಕೆ
ಮುಸ್ತಫಿಜುರ್ ರೆಹ್ಮಾನ್ ಕೊಟ್ಟ ಬೌಲಿಂಗ್ ಶಾಕ್ಗೆ ಆರ್ಸಿಬಿ ಕಂಗಾಲು
ರವೀಂದ್ರ ಜಡೇಜಾ-ಶಿವಂ ದುಬೆ ಬೊಂಬಾಟ್ ಆಟದಿಂದ ಚೆನ್ನೈ ಜಯ
ಸೀಸನ್ ಬದಲಾಯ್ತು.. ಹೆಸರು, ಲೋಗೋ, ಆಟಗಾರರು ಎಲ್ಲ ಬದಲಾಯಿಸಲಾಯಿತು. ಆದರೂ ಅದೇ ರಾಗ, ಅದೇ ಹಾಡು. ಈ ಸೀಸನ್ನಲ್ಲೂ ಆರ್ಸಿಬಿ ಮೊದಲ ಪಂದ್ಯವನ್ನ ದೇವರಿಗೆ ಕೊಟ್ಟಿದೆ. ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಅನ್ನೋ ಮಾತಿದ್ಯಲ್ಲ.. ಚೆನ್ನೈನಲ್ಲಿ ಆರ್ಸಿಬಿಗೆ ಆಗಿದ್ದೂ ಅದೇ.
ಸ್ಲೋ & ಸ್ಟಡಿ ಆರಂಭ.. ದಿಢೀರ್ ಕುಸಿತ..!
ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ಗಿಳಿದ ಆರ್ಸಿಬಿ ನಿಧಾನಗತಿಯ ಆರಂಭ ಪಡೆದುಕೊಳ್ತು. ಕ್ಯಾಪ್ಟನ್ ಫಾಫ್ ಡುಪ್ಲೆಸಿ, ವಿರಾಟ್ ಕೊಹ್ಲಿ ಪವರ್ ಪ್ಲೇನಲ್ಲಿ ಅಬ್ಬರಿಸಲಿಲ್ಲ. 4 ಓವರ್ಗಳಲ್ಲಿ ಕೇವಲ 37 ರನ್ ಸಿಡಿಸಿದರು.
ಇದನ್ನು ಓದಿ: ಮಾಸ್ಕೋದಲ್ಲಿ ನರಮೇಧ; ಭೂತಾನ್ನಿಂದಲೇ ರಷ್ಯಾದ ಮೇಲಿನ ದಾಳಿ ಖಂಡಿಸಿದ ಪ್ರಧಾನಿ ಮೋದಿ
ಮುಸ್ತಫಿಜುರ್ ಕೊಟ್ಟ ಶಾಕ್ಗೆ ಆರ್ಸಿಬಿ ಕಂಗಾಲ್.!
5ನೇ ಓವರ್ನಲ್ಲಿ ದಾಳಿಗಿಳಿದ ಮುಸ್ತಫಿಜುರ್ ರೆಹಮಾನ್ ಒಂದೇ ಓವರ್ನಲ್ಲಿ ಡಬಲ್ ಶಾಕ್ ಕೊಟ್ರು. ಫಾಫ್ ಡುಪ್ಲೆಸಿ, ರಜತ್ ಪಟಿದಾರ್ಗೆ ಪೆವಿಲಿಯನ್ ದಾರಿ ತೋರಿಸಿದರು. 4ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಗ್ಲೆನ್ ಮ್ಯಾಕ್ಸ್ವೆಲ್ ಡಕೌಟ್ ಆಗಿ ನಿರ್ಗಮಿಸಿದರು. ಅದರ ಬೆನ್ನಲ್ಲೇ, ವಿರಾಟ್ ಕೊಹ್ಲಿ, ಕ್ಯಾಮರೂನ್ ಗ್ರೀನ್ ಆಟಕ್ಕೆ ಮತ್ತೆ ಮುಸ್ತಫಿಜುರ್ ಬ್ರೇಕ್ ಹಾಕಿದರು.
RCBಗೆ ಜೀವ ತುಂಬಿದ ಅನುಜ್ ರಾವತ್ -ಕಾರ್ತಿಕ್.!
6ನೇ ವಿಕೆಟ್ಗೆ ಜೊತೆಯಾದ ದಿನೇಶ್ ಕಾರ್ತಿಕ್, ಅನುಜ್ ರಾವತ್ ತಂಡಕ್ಕೆ ಚೇತರಿಕೆ ನೀಡಿದರು. 95 ರನ್ಗಳ ಸಾಲಿಡ್ ಜೊತೆಯಾಟವಾಡಿದ ಈ ಜೋಡಿ ಆರ್ಸಿಬಿ ಬಿಗ್ಸ್ಕೋರ್ ಕಲೆ ಹಾಕುವಲ್ಲಿ ನೆರವಾದರು. 20 ಓವರ್ಗಳ ಅಂತ್ಯಕ್ಕೆ ಆರ್ಸಿಬಿ 6 ವಿಕೆಟ್ ಕಳೆದುಕೊಂಡು 173 ರನ್ಗಳಿಸ್ತು.
174 ರನ್ಗಳ ಬಿಗ್ ಟಾರ್ಗೆಟ್ ಬೆನ್ನತ್ತಿದ ಚೆನ್ನೈ ಅಬ್ಬರದ ಆರಂಭದ ಸೂಚನೆ ನೀಡಿತು. ಆದ್ರೆ, ಇಂಪ್ಯಾಕ್ಟ್ ಪ್ಲೇಯರ್ ಯಶ್ ದಯಾಳ್, ಋತುರಾಜ್ ಗಾಜ್ವಾಡ್ಗೆ ಪೆವಿಲಿಯನ್ ದಾರಿ ತೋರಿಸುವಲ್ಲಿ ಯಶಸ್ವಿಯಾದರು. ವಿಕೆಟ್ ಕಳೆದರು ಅಬ್ಬರದ ಆಟವಾಡ್ತಿದ್ದ ರಚಿನ್ ರವೀಂದ್ರ, ಕರನ್ ಶರ್ಮಾ ಸ್ಪಿನ್ ಬಲೆಗೆ ಬಿದ್ದರು.
Fizz! 😮#IPL #CSK #RCB pic.twitter.com/s2Ldi9Zxol
— Cricbuzz (@cricbuzz) March 22, 2024
ಚೆನ್ನೈಗೆ ಡಬಲ್ ಶಾಕ್ ಕೊಟ್ಟ ಕ್ಯಾಮರೂನ್ ಗ್ರೀನ್.!
ಬಳಿಕ ಜೊತೆಯಾದ ಡೇರಿಲ್ ಮಿಚೆಲ್, ಅಜಿಂಕ್ಯಾ ರಹಾನೆ ಸ್ಟಡಿ ಇನ್ನಿಂಗ್ಸ್ ಕಟ್ಟೋ ಯುತ್ನದಲ್ಲಿದ್ದರು. ಆದ್ರೆ, ಇವರ ಜೊತೆಯಾಟಕ್ಕೆ ಕ್ಯಾಮರೂನ್ ಗ್ರೀನ್ ಬ್ರೇಕ್ ಹಾಕಿದರು.
ಜಡ್ಡು -ದುಬೆ ಬೊಂಬಾಟ್ ಆಟ.. ಚೆನ್ನೈಗೆ ಜಯ.!
ಆರ್ಸಿಬಿ ಸುಲಭಕ್ಕೆ ಗೆಲ್ಲೋ ಸಿಚ್ಯುವೇಶನ್ ನಿರ್ಮಾಣವಾಗಿತ್ತು. ಆದ್ರೆ, 5ನೇ ವಿಕೆಟ್ಗೆ ಜೊತೆಯಾದ ಶಿವಮ್ ದುಬೆ, ರವಿಂದ್ರ ಜಡೇಜಾ ಎಚ್ಚರಿಕೆಯ ಆಟ ಗೆಲುವಿನ್ನ ಕಸಿದುಕೊಂಡರು. ಆರ್ಸಿಬಿ ಶಾರ್ಟ್ಬಾಲ್ ತಂತ್ರ, ಬೈಸ್, ಓವರ್ ಥ್ರೋ ರೂಪದಲ್ಲಿ ನೀಡಿದ ಬಿಟ್ಟಿ ರನ್ಗಳು ಗೆಲುವಿಗೆ ಮುಳುವಾದವು. 18.4 ಓವರ್ಗಳಲ್ಲಿ ಗುರಿ ಮುಟ್ಟಿದ ಚೆನ್ನೈ 6 ವಿಕೆಟ್ಗಳ ಜಯ ಸಾಧಿಸಿ ಟೂರ್ನಿಯಲ್ಲಿ ಶುಭಾರಂಭ ಮಾಡಿತು.
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ