/newsfirstlive-kannada/media/media_files/2025/08/15/darshan5-2025-08-15-16-50-19.jpg)
ಸುಪ್ರೀಂ ಕೋರ್ಟ್​ ಮಹತ್ವದ ತೀರ್ಪು ನೀಡಿದ್ದು ನಟ ದರ್ಶನ್ ಹಾಗೂ ಪವಿತ್ರಾ ಗೌಡ ಸೇರಿದಂತೆ 7 ಆರೋಪಿಗಳ ಬೇಲ್ ರದ್ದು ಮಾಡಿದೆ. ಆರೋಪಿಗಳನ್ನು ಆ ಕೂಡಲೇ ಬಂಧಿಸುವಂತೆ ನ್ಯಾಯಾಲಯ ಆದೇಶ ನೀಡಿತ್ತು. ಹೀಗಾಗಿ ಪೊಲೀಸರು ಆರೋಪಿಗಳನ್ನು ಅರೆಸ್ಟ್​ ಮಾಡಲು ಮುಂದಾಗಿದ್ದರು.
ಇದನ್ನೂ ಓದಿ: ಬೆಂಗಳೂರಲ್ಲಿ ಸ್ವಾತಂತ್ರ್ಯ ದಿನಾಚರಣೆಯಂದೇ ಭಾರೀ ಸ್ಫೋಟ; ಜೀವ ಬಿಟ್ಟ ಬಾಲಕ, 9 ಮಂದಿ ಗಂಭೀರ
/filters:format(webp)/newsfirstlive-kannada/media/media_files/2025/08/14/darshan_pavitra-2025-08-14-13-36-18.jpg)
ಆದರೆ ಆ ಸಮಯದಲ್ಲಿ ದರ್ಶನ್ ಅವರು ಮನೆಯಲ್ಲಿ ಇರಲಿಲ್ಲ. ನಟ ದರ್ಶನ್​ ಮೊನ್ನೆಯ ರಾತ್ರಿವರೆಗೂ ಪತ್ನಿ ವಿಜಯಲಕ್ಷ್ಮಿ ಅವರ ಜೊತೆ ಬೆಂಗಳೂರಿನಲ್ಲೇ ಇದ್ದರು. ಆದರೆ ನಂತರ ಎಲ್ಲಿಗೆ ಹೋಗಿದ್ದರು ಎಂಬ ಮಾಹಿತಿ ಲಭ್ಯವಾಗಿದೆ.
/filters:format(webp)/newsfirstlive-kannada/media/media_files/2025/08/14/darshan-pavitra-gowda-2-2025-08-14-16-52-19.jpg)
ಹೌದು, ಸುಪ್ರೀಂ ಕೋರ್ಟ್​ನಿಂದ ತೀರ್ಪು ಆಚೆ ಬರುತ್ತಿದ್ದಂತೆ ನಟ ದರ್ಶನ್ ಅವರು ಹೋಗಿದ್ದೆ ಮಗನನ್ನು ನೋಡಲು. ಜೈಲಿಗೆ ಹೋಗೋ ಮೊದಲು ಮಗ ವಿನೀಶ್​ನನ್ನು ನೋಡಲು ಹೋಗಿದ್ದರು. ಹೀಗಾಗಿ ದರ್ಶನ್​ರನ್ನ ನಟ ಧನ್ವೀರ್ ಕಾರಿನಲ್ಲಿ ಕರೆದುಕೊಂಡು ಹೋಗಿದ್ದರು. ಏಕೆಂದರೆ, ತಾನು ಜೈಲಿನಲ್ಲಿ ಇದ್ದಾಗ ಮಗ ನನ್ನ ನೋಡಬಾರದು. ಬದಲಾಗಿ ನಾನೇ ಅವನನ್ನು ಮೊದಲೇ ಭೇಟಿಯಾಗಿ ಬಂದೆ ಎಂದು ಅಧಿಕಾರಿಗಳಿಗೆ ಹೇಳಿದ್ದಾರಂತೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us