ದೈವದ ಮೊರೆ ಹೋದ ಸಿಂಪಲ್​ ಸ್ಟಾರ್​ .. ಹೊಸ ಸಿನಿಮಾ ಮಾಡ್ತಾರಂತೆ ಶೆಟ್ರು!

777 ಚಾರ್ಲಿ, ಸಪ್ತ ಸಾಗರದಾಚೆ ಎಲ್ಲೋ ಸಿನಿಮಾದ ನಂತರ ಕಾಣೆಯಾಗಿದ್ದ ಸಿಂಪಲ್​ ಸ್ಟಾರ್​ ರಕ್ಷಿತ್​ ಶೆಟ್ಟಿ ನೇಮೋತ್ಸವದಲ್ಲಿ ಕಾಣಿಸಿಕೊಂಡಿದ್ದಾರೆ. ಇಷ್ಟರಲ್ಲೇ ರಕ್ಷಿತ್​ ಶೆಟ್ಟಿ ಹೊಸ ಸಿನಿಮಾ ಅನೌನ್ಸ್​ ಮಾಡಲಿದ್ದು, ಬಬ್ಬುಸ್ವಾಮಿ ದೈವದ ಸಿರಿ ಸಿಂಗಾರ ನೇಮೋತ್ಸವದಲ್ಲಿ ಭಾಗಿಯಾಗಿ ಅಭಯ ಪಡೆದಿದ್ದಾರೆ.

author-image
Ganesh Kerekuli
rakshith shetty 1
Advertisment

ಸಿಂಪಲ್​ ಸ್ಟಾರ್​ ರಕ್ಷಿತ್​ ಶೆಟ್ಟಿ 777 ಚಾರ್ಲಿ, ಸಪ್ತ ಸಾಗರದಾಚೆ ಎಲ್ಲೋ ಸಿನಿಮಾದ ಯಶಸ್ಸಿನ ಬಳಿಕ ಅಭಿಮಾನಿಗಳಿಂದ ಅಂತರ ಕಾಯ್ದು ಕೊಂಡಿದ್ದರು. ಇತ್ತ ರಕ್ಷಿತ್​ ಶೆಟ್ಟಿಯನ್ನ ಮತ್ತೆ ಪರದೆ ಮೇಲೆ ನೋಡಲು ಅಭಿಮಾನಿಗಳು ಕಾಯುತ್ತಿದ್ದು, ರಿಚರ್ಡ್ ಆಂಟನಿ ಸಿನಿಮಾಗಾಗಿ ಕಾದು ನೋಡುತ್ತಿದ್ದಾರೆ. ಇಷ್ಟರಲ್ಲೇ ರಕ್ಷಿತ್​ ಹೊಸ ಸಿನಿಮಾ ಕೂಡ ಅನೌನ್ಸ್ ಮಾಡಲಿದ್ದಾರೆ ಅಂತ ಹೇಳಲಾಗ್ತಿದೆ. ಹೊಸ ಸಿನಿಮಾಗೂ ಮುನ್ನ ರಕ್ಷಿತ್​ ಶೆಟ್ಟಿ ದೈವದ ಮೊರೆ ಹೋಗಿದ್ದಾರೆ.

ಕರಾವಳಿಯಲ್ಲಿ ದೈವರಾಜ ಬಬ್ಬುಸ್ವಾಮಿ ಕಾರ್ಣಿಕ ದೈವ ಅಂತಾನೇ ಪ್ರಸಿದ್ಧಿ. ನಟ ರಕ್ಷಿತ್​ ಶೆಟ್ಟಿ ಉಡುಪಿಯ ಅಲೆವೂರು ಬಬ್ಬುಸ್ವಾಮಿ ದೈವದ ಸಿರಿ ಸಿಂಗಾರ ನೇಮೋತ್ಸವದಲ್ಲಿ ಭಾಗಿಯಾಗಿದ್ದರು. ಇಷ್ಟರಲ್ಲೇ ರಕ್ಷಿತ್​ ಶೆಟ್ಟಿ ಹೊಸ ಸಿನಿಮಾ ಅನೌನ್ಸ್ ಮಾಡಲಿದ್ದು, ನೇಮೋತ್ಸವದಲ್ಲಿ ಭಾಗಿಯಾಗಿ ಬಬ್ಬುಸ್ವಾಮಿ ದೈವದ ಅಭಯ ಪಡೆದುಕೊಂಡರು.ನಟ ರಕ್ಷಿತ್​ ಸ್ಪರ್ಶ್ ಮಸಾಲಾ ಮಾಲೀಕ ಶಿವಕುಮಾರಯ್ಯ ಬಯೋಪಿಕ್‌ನಲ್ಲಿ​ ನಟಿಸಲಿದ್ದಾರೆ ಅನ್ನೋ ಮಾತು ಕೇಳಿಬಂದಿದೆ. 

rakshith shetty 2

ಅಲೆವೂರು ಮನೆತನದ ಕುಡಿ ‘ಸಿಂಪಲ್‌ ಸ್ಟಾರ್’

ಹೌದು, ನಟ ರಕ್ಷಿತ್​ ಶೆಟ್ಟಿ ಅಲೆವೂರು ಮನೆತನದ ಕುಡಿ. ಅಲೆವೂರು ದೊಡ್ಡಮನೆ ಕರ್ನಾಟಕ ಕರಾವಳಿಯ ಪ್ರಸಿದ್ಧ ಗುತ್ತು ಮನೆತನ. ಬಂಟ ಜಾತಿಗೆ ಸೇರಿದ ರಕ್ಷಿತ್‌ ಶೆಟ್ಟಿ ಈ ಕುಟುಂಬದ ಕುಡಿ. ಈ ನಡುವೆ ರಕ್ಷಿತ್​ ಶೆಟ್ಟಿ ಕಾಣೆಯಾಗಿದ್ದರು.ಸಡನ್‌ ಆಗಿ ಏನಾಯ್ತು? ಎಲ್ಲಿ ಹೋದ್ರು ರಕ್ಷಿತ್‌ ಎಂದು ಸಿಂಪಲ್‌ ಸ್ಟಾರ್‌ ಅಭಿಮಾನಿಗಳು ತುಂಬಾ ದಿನದಿಂದ ತಲೆ ಕೆಡಿಸಿಕೊಂಡಿದ್ದರು. ಈಗ ಅವರೆಲ್ಲರ ಪ್ರಶ್ನೆಗೆ ಉತ್ತರ ಸಿಕ್ಕಿದೆ. ರಕ್ಷಿತ್​ ಶೆಟ್ಟಿ ನೇಮೋತ್ಸವದಲ್ಲಿ ಭಾಗಿಯಾಗುವ ಮೂಲಕ ಅಭಿಮಾನಿಗಳಲ್ಲಿ ಹೊಸ ಸಿನಿಮಾದ ಭರವಸೆಯನ್ನ ಹುಟ್ಟು ಹಾಕಿದ್ದಾರೆ.

ಇದನ್ನೂ ಓದಿ: ಸೀರಿಯಲ್‌ಗೆ ಎಂಟ್ರಿ ಕೊಟ್ಟ ಬಿಗ್ ಬಾಸ್ ಸ್ಪರ್ಧಿ ಸೂರಜ್ ಸಿಂಗ್..! Video

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ. 

where is Rakshith shetty Udupi nemotsava
Advertisment