/newsfirstlive-kannada/media/media_files/2025/09/01/ss_devid-2025-09-01-08-59-21.jpg)
ಬೆಂಗಳೂರು: ಪೊಲೀಸ್ ಸ್ಟೋರಿ, ಅಗ್ನಿ ಐಪಿಎಸ್, ಜೈಹಿಂದ್ ಸೇರಿದಂತೆ ಸ್ಯಾಂಡಲ್​ವುಡ್​ನ ಹಲವು ಸಿನಿಮಾಗಳ ಬರಹಗಾರ ಎಸ್.ಎಸ್ ಡೇವಿಡ್ ಅವರು ನಿಧನರಾಗಿದ್ದಾರೆ.
ಸ್ಯಾಂಡಲ್​ವುಡ್​ನಲ್ಲಿ ರೈಟರ್​ ಆಗಿದ್ದ ಎಸ್.ಎಸ್ ಡೇವಿಡ್ ಅವರು ಆರ್​ಆರ್​ ನಗರದ ಎಸ್​ಎಸ್ ಆಸ್ಪತ್ರೆಯಲ್ಲಿ ನಿಧನ ಹೊಂದಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದ ಡೇವಿಡ್ ಅವರು ಹೃದಯಘಾತದಿಂದ ಕೊನೆಯುಸಿರೆಳೆದಿದ್ದಾರೆ. ಸಿನಿಮಾಗಳಿಗೆ ಕಥೆ ಬರೆಯುವುದು ಅಲ್ಲದೇ ಹಾಯ್ ಬೆಂಗಳೂರು ಹಾಗೂ ಧೈರ್ಯ ಸಿನಿಮಾವನ್ನು ನಿರ್ದೇಶನ ಮಾಡಿದ್ದರು.
/filters:format(webp)/newsfirstlive-kannada/media/media_files/2025/09/01/agni_ips-2025-09-01-08-59-33.jpg)
ಎಸ್.ಎಸ್ ಡೇವಿಡ್ ಅವರು ಮೆಡಿಕಲ್ ಶಾಪ್​ಗೆ ಹೋಗಿದ್ದಾಗ ಪ್ರಜ್ಞೆ ತಪ್ಪಿ ಬಿದ್ದಿದ್ದರು. ಈ ವೇಳೆ ಅವರನ್ನು ಕೂಡಲೇ ಆಸ್ಪತ್ರೆಗೆ ದಾಖಲು ಮಾಡಲು ಕರೆದುಕೊಂಡು ಹೋಗಲಾಗುತ್ತಿತ್ತು. ಆದರೆ ಆಸ್ಪತ್ರೆಗೆ ತಲುಪುವ ಮೊದಲೇ ಮಾರ್ಗ ಮಧ್ಯೆಯೇ ಪಲ್ಸ್ ರೇಟ್ ಕಡಿಮೆ ಆಗಿದ್ದರಿಂದ ಎಸ್.ಎಸ್ ಡೇವಿಡ್ ಅವರು ಉಸಿರು ಚೆಲ್ಲಿದರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us