/newsfirstlive-kannada/media/post_attachments/wp-content/uploads/2024/06/DARSHAN_PAVITRA_GOWDA.jpg)
ಬೆಂಗಳೂರು: ರೇಣುಕಾಸ್ವಾಮಿ ಪ್ರಕರಣದಲ್ಲಿ ಎ1 ಆರೋಪಿ ಆಗಿರುವ ಪವಿತ್ರಾ ಗೌಡ ಅವರನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಸುಪ್ರೀಂ ಕೋರ್ಟ್ ಜಾಮೀನು ರದ್ದು ಮಾಡಿ ಆದೇಶ ಹೊರಡಿಸಿದ ಬೆನ್ನಲ್ಲೇ ಇದೀಗ ಪೊಲೀಸರು ಪವಿತ್ರಾ ಗೌಡರನ್ನು ಬಂಧಿಸಿದ್ದಾರೆ.
ಎ1 ಆರೋಪಿ ಆಗಿರುವ ಪವಿತ್ರಾ ಗೌಡ ಅವರು ಬೆಳಗ್ಗೆ ಇಂದ ಬೆಂಗಳೂರಿನ ಆರ್.ಆರ್ ನಗರದ ನಿವಾಸದಲ್ಲೇ ಇದ್ದರು. ಸುಪ್ರೀಂ ಕೋರ್ಟ್ ತೀರ್ಪು ಹಿನ್ನೆಲೆಯಲ್ಲಿ ರಾಜಾರಾಜೇಶ್ವರಿ ದೇವಾಲಯಕ್ಕೆ ತೆರಳಿ ಪೂಜೆ ಸಲ್ಲಿಕೆ ಮಾಡಿ ವಾಪಸ್ ಮನೆಗೆ ಬಂದಿದ್ದರು.ನ್ಯಾಯಾಲಯ ತಕ್ಷಣವೇ ಬಂಧಿಸುವಂತೆ ತೀರ್ಪು ನೀಡಿದ್ದರಿಂದ ಇದೀಗ ಪೊಲೀಸರು ಪವಿತ್ರಾ ಗೌಡರನ್ನು ಅರೆಸ್ಟ್ ಮಾಡಿದ್ದಾರೆ.
ಇದನ್ನೂ ಓದಿ:ದರ್ಶನ್, ಪವಿತ್ರಾ ಗೌಡ ಸೇರಿ ಮತ್ತೆ ಜೈಲು ಪಾಲಾಗುವ 7 ಆರೋಪಿಗಳು ಇವರೇ..
ಆರ್.ಆರ್ ನಗರದ ಪೊಲೀಸರು ಕೋರ್ಟ್ನಿಂದ ಆದೇಶ ಬರುತ್ತಿದ್ದಂತೆ ಆರೋಪಿಗಳ ಮೇಲೆ ನಿಗಾ ವಹಿಸಿತ್ತು. ಅದರಂತೆ ಸದ್ಯ ಇದೀಗ ಪವಿತ್ರಾ ಗೌಡರನ್ನು ಬಂಧಿಸಿದ್ದಾರೆ. ಇದರ ಬೆನ್ನಲ್ಲೇ 14ನೇ ಆರೋಪಿ ಆಗಿರುವ ಪ್ರದೂಶ್ನನ್ನು ಈಗಾಗಲೇ ಅರೆಸ್ಟ್ ಮಾಡಿದ್ದಾರೆ. ಒಬ್ಬೊಬ್ಬ ಆರೋಪಿಗಳನ್ನು ಪೊಲೀಸರು ಅರೆಸ್ಟ್ ಮಾಡುತ್ತಿದ್ದಾರೆ. ದರ್ಶನ್ ಅವರು ಬಂದು ಶರಣಾಗುತ್ತಾರಾ ಇಲ್ವಾ, ಅರೆಸ್ಟ್ ಆಗುತ್ತಾರಾ ಎಂದು ಕಾದು ನೋಡಬೇಕಿದೆ.
ಈಗ ಪವಿತ್ರಾ ಗೌಡ, ಪ್ರದೂಶ್ ಅರೆಸ್ಟ್ ಆಗಿದ್ದು ದರ್ಶನ್ ಸೇರಿ ಜಗದೀಶ್, ಅನುಕುಮಾರ್, ನಾಗರಾಜ್, ಲಕ್ಷ್ಮಣ್ ಅವರನ್ನು ಬಂಧಿಸಬೇಕಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ