/newsfirstlive-kannada/media/post_attachments/wp-content/uploads/2025/04/dhruva-sarja.jpg)
ಬೆಂಗಳೂರು: ಸ್ಯಾಂಡಲ್​ವುಡ್​ನ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ವಿರುದ್ಧ ನಗರ ಬನಶಂಕರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಯಾಕೆ ದೂರು..?
ಧ್ರುವ ಸರ್ಜಾ ನಿವಾಸದ ಬಳಿ ವಾಸವಾಗಿರುವ ಮನೋಜ್ ಅನ್ನೋರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಧ್ರುವ ಹಾಗೂ ಮನೋಜ್ ಮನೆ ಒಂದೇ ಕಡೆ ಇದೆ. ನೆಚ್ಚಿನ ನಟನ ನೋಡಲು ನಿತ್ಯ ನೂರಾರು ಅಭಿಮಾನಿಗಳು ಬರುತ್ತಾರೆ. ಅಲ್ಲಿಗೆ ಬಂದ ಧ್ರುವ ಅಭಿಮಾನಿಗಳು ಮನೋಜ್ ಮನೆಯ ಎದುರಿಗೆ ವಾಹನಗಳನ್ನು ಪಾರ್ಕ್​ ಮಾಡ್ತಿರೋದು ದೂರಿಗೆ ಕಾರಣವಾಗಿದೆ.
ಇದನ್ನೂ ಓದಿ: ಅಶ್ವಿನಿ ಗೌಡಗೆ ಹಿಗ್ಗಾಮುಗ್ಗಾ ಜಾಡಿಸಿದ ಕಾವ್ಯ ಶೈವ.. VIDEO
/filters:format(webp)/newsfirstlive-kannada/media/post_attachments/wp-content/uploads/2023/08/DHRUVA_SARJA_2.jpg)
ಆರೋಪ ಏನು?
ಮನೆ ಮುಂದೆ ದಿನ ನಿತ್ಯವು ಧ್ರುವ ಸರ್ಜಾ ಅಭಿಮಾನಿಗಳು ಬರುತ್ತಾರೆ. ಬಂದವರು ಮನೆಯ ಎದುರಿಗೆ ಬೈಕ್​ಗಳನ್ನು ಪಾರ್ಕ್​ ಮಾಡುತ್ತಾರೆ. ಅಷ್ಟೇ ಅಲ್ಲದೇ ಅಲ್ಲೇ ಧೂಮಪಾನ ಮಾಡುತ್ತಾರೆ. ಜೊತೆಗೆ ಮನೆಯ ಗೋಡೆಯ ಮೇಲೆ ಉಗಿಯುವುದನ್ನ ಮಾಡುತ್ತಿದ್ದಾರೆ. ಇದರಿಂದ ಸ್ಥಳೀಯ ನಿವಾಸಿಗಳಿಗೆ ಕಿರಿ-ಕಿರಿ ಉಂಟಾಗುತ್ತಿದೆ ಎಂದು ಮನೋಜ್ ಆರೋಪಿಸಿದ್ದಾರೆ.
ಧ್ರುವ ಸರ್ಜಾ ಹಾಗೂ ಅವರ ಫ್ಯಾನ್ಸ್ ವಿರುದ್ಧ ಮಾತ್ರ ದೂರು ನೀಡಿಲ್ಲ. ಬದಲಾಗಿ, ಧ್ರುವ ಸರ್ಜಾರ ಮ್ಯಾನೇಜರ್ ವಿರುದ್ಧವೂ ಪೊಲೀಸರಿಗೆ ಕಂಪ್ಲೆಂಟ್ ಮಾಡಿದ್ದಾರೆ. ಸದ್ಯ ಬನಶಂಕರಿ ಪೊಲೀಸರು ಎನ್​ಸಿಆರ್ (Non-Cognizable Report) ದಾಖಲಿಸಿಕೊಂಡಿದ್ದಾರೆ.
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್ಫಸ್ಟ್ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us