ಸಾರಿಗೆ ನೌಕರರ ಮುಷ್ಕರ: ಕನ್ನಡ ಹಿರಿಯ ನಟ ಹೊನ್ನವಳ್ಳಿ ಕೃಷ್ಣಗೂ ತಟ್ಟಿದ ಬಸ್​ ಬಂದ್​ ಬಿಸಿ

ಸಾರಿಗೆ ನೌಕರರ ಬಂದ್ ಎಪೆಕ್ಟ್ ಬರೀ ಜನ ಸಾಮಾನ್ಯರಿಗಷ್ಟೇ ಅಲ್ಲದೇ ಸ್ಟಾರ್​ ನಟನಿಗೂ ತಟ್ಟಿದೆ. ವೈಟ್ ಪಿಲ್ಡ್​​ನಿಂದ ಮೆಟ್ರೋ ಮೂಲಕ ಮೆಜೆಸ್ಟಿಕ್​ಗೆ ಕನ್ನಡ ಹಿರಿಯ ನಟ ಹೊನ್ನವಳ್ಳಿ ಕೃಷ್ಣ ದಂಪತಿ ಬಂದಿದ್ದರು. ಆದ್ರೆ, ಮೆಜೆಸ್ಟಿಕ್‌ನಿಂದ ಮಾದನಾಯಕಹಳ್ಳಿ ಹೋಗಲು ಬಸ್​ಗಾಗಿ ಕಾಯುತ್ತಿದ್ದರು.

author-image
Veenashree Gangani
Honnavalli Krishna
Advertisment

ಬೆಂಗಳೂರು: ವೇತನ ಪರಿಷ್ಕರಣೆ ಹಾಗೂ 20 ತಿಂಗಳ ಹಿಂಬಾಕಿ ವೇತನ ಬಿಡುಗಡೆ ಸೇರಿದಂತೆ ಹಲವು ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಬಿಎಂಟಿಸಿ, ಕೆಎಸ್​ಆರ್​ಟಿಸಿ ಸೇರಿದಂತೆ 4 ವಿಭಾಗಗಳ ಸಾರಿಗೆ ನೌಕರರು ಮುಷ್ಕರಕ್ಕೆ ಮುಂದಾಗಿದ್ದರು. 

ಇದನ್ನೂ ಓದಿ: ಸಾರಿಗೆ ನೌಕರರ ಮುಷ್ಕರ; ಈ ಕುರಿತು ಸಭೆ ಬಳಿಕ ಸಚಿವ ರಾಮಲಿಂಗಾರೆಡ್ಡಿ ಏನೇನು ಹೇಳಿದರು?

namma metro(3)

ಸಾರಿಗೆ ನೌಕರರ ಮುಷ್ಕರ ಮಾಡಿದ್ದರಿಂದ ಇತ್ತೀಚಿಗೆ ನೇಮಕವಾದ ಚಾಲಕರು ಇಂದು ಬಸ್ ಚಲಾಯಿಸುತ್ತಿದ್ದರು. ಆದ್ರೆ ಬಹುತೇಕ ಬಸ್​ಗಳು ರಸ್ತೆಗೆ ಇಳಿದಿಲ್ಲ. ಹೀಗಾಗಿ ತಮ್ಮ ತಮ್ಮ ಊರಿಗೆ ಹೋಗಲು ಪ್ರಯಾಣಿಕರು ಪರದಾಡುವ ಸ್ಥಿತಿ ನಿರ್ಮಾಣಗೊಂಡಿತ್ತು.

Honnavalli Krishna(1)

ಆದ್ರೆ, ಸಾರಿಗೆ ನೌಕರರ ಬಂದ್ ಎಪೆಕ್ಟ್ ಬರೀ ಜನ ಸಾಮಾನ್ಯರಿಗಷ್ಟೇ ಅಲ್ಲದೇ ಸ್ಟಾರ್​ ನಟನಿಗೂ ತಟ್ಟಿದೆ. ವೈಟ್ ಪಿಲ್ಡ್​​ನಿಂದ ಮೆಟ್ರೋ ಮೂಲಕ ಮೆಜೆಸ್ಟಿಕ್​ಗೆ ಕನ್ನಡ ಹಿರಿಯ ನಟ ಹೊನ್ನವಳ್ಳಿ ಕೃಷ್ಣ ದಂಪತಿ ಬಂದಿದ್ದರು. ಆದ್ರೆ, ಮೆಜೆಸ್ಟಿಕ್‌ನಿಂದ ಮಾದನಾಯಕನಹಳ್ಳಿಗೆ ಹೋಗಲು ಬಸ್​ಗಾಗಿ ಕಾಯುತ್ತಿದ್ದರು. ಆದರೆ ಬಸ್​ಗಳು ರಸ್ತೆಗಿಳಿಯದ ಕಾರಣ ಕ್ಯಾಬ್ ಮೂಲಕ ತೆರಳಿದ್ದಾರೆ.

ಈ ಬಗ್ಗೆ ಮಾತಾಡಿದ ನಟ ಹೊನ್ನವಳ್ಳಿ ಕೃಷ್ಣ, ಈ ತರ ಬಂದ್​ ಆಗಬಾರದಾಗಿತ್ತು. ಈಗ ತಾನೇ ಊರಿಗೆ ಹೋಗಿ ಬರ್ತಾ ಇದ್ವಿ. ಹೀಗೆ ಆಗಿದಕ್ಕೆ ಜನರಿಗೆ ತುಂಬಾ ತೊಂದರೆ ಆಗಿದೆ. ನಿಲ್ದಾಣದಲ್ಲಿ ಬಸ್​ಗಾಗಿ ಕಾದು ಕುಳಿತಿದ್ದಾರೆ. ಇನ್ನೊಂದು ಸಾರಿ ಹೀಗೆ ಆಗದಿರೋ ಹಾಗೇ ನೋಡಿಕೊಳ್ಳಬೇಕು ಎಂದರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Honnavalli Krishna
Advertisment