newsfirstkannada.com

ರೇಸ್‌ಕೋರ್ಸ್‌ ಮೇಲೆ ಸಿಸಿಬಿ ದಾಳಿ; ಬರೋಬ್ಬರಿ 3 ಕೋಟಿ 45 ಲಕ್ಷ ಹಣ ಪತ್ತೆ!

Share :

Published January 13, 2024 at 8:40pm

Update January 13, 2024 at 8:31pm

    ಅಕ್ರಮ‌ ಬೆಟ್ಟಿಂಗ್​​ನಿಂದ ಅಂದಾಜು 28% ಜಿಎಸ್​ಟಿ ವಂಚನೆ

    ಸಿಸಿಬಿ ಪೊಲೀಸರ ದಾಳಿ ವೇಳೆ 3 ಕೋಟಿ 45 ಲಕ್ಷ ಹಣ ಪತ್ತೆ

    66 ಜನರನ್ನು ಠಾಣೆಗೆ ಕರೆಸಿ ಮಾಹಿತಿ ಪಡೆದು ನೊಟೀಸ್ ಜಾರಿ

ಬೆಂಗಳೂರು: ಸಿಸಿಬಿ ಪೊಲೀಸರಿಂದ ರೇಸ್ ಕೋರ್ಸ್ ಮೇಲೆ ದಾಳಿ ಕೇಸ್​ಗೆ ಸಂಬಂಧಿಸಿದಂತೆ ನಗರ ಪೊಲೀಸ್ ಆಯುಕ್ತ ಬಿ ದಯಾನಂದ ಮಹತ್ವದ ಹೇಳಿಕೆಯೊಂದನ್ನು ನೀಡಿದ್ದಾರೆ. ದಾಳಿ ವೇಳೆ 3 ಕೋಟಿ 45 ಲಕ್ಷ ಹಣ ಸಿಕ್ಕಿದ್ದು ಅದನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದಿದ್ದಾರೆ.

ಇದನ್ನು ಓದಿ: ರೇಸ್​ ಕೋರ್ಸ್​ ಮೇಲೆ ಸಿಸಿಬಿ ಪೊಲೀಸರ ದಾಳಿ; 3 ಕೋಟಿ 47 ಲಕ್ಷ ರೂಪಾಯಿ ಪತ್ತೆ

ಇನ್ನು, ಈ ಸಂಬಂಧ ಸುದ್ದಿಗಾರರೊಂದಿಗೆ ಮಾತಾಡಿದ ಸಂಬಂಧಿಸಿದಂತೆ ನಗರ ಪೊಲೀಸ್ ಆಯುಕ್ತ ಬಿ ದಯಾನಂದ, ಸಿಸಿಬಿ ತಂಡದ ವಿಶೇಷ ವಿಚಾರಣೆ ದಳದವರು ದಾಳಿ ಮಾಡಿದ್ದರು. ಅಧಿಕೃತವಾಗಿ ಬೆಟ್ಟಿಂಗ್ ಆಡ್ತಾರೆ. ಆದ್ರೆ ಜೊತೆಗೆ ಅನಧಿಕೃತವಾಗಿ ಕೂಡ ಬೆಟ್ಟಿಂಗ್ ನಡೆಸಲಾಗ್ತಿತ್ತು. ಯಾವುದೇ ಡಾಕ್ಯುಮೆಂಟ್, ರಷೀದಿ ಇಟ್ಟುಕೊಳ್ಳದೇ ಹಣದ ವ್ಯವಹಾರ ನಡೆಸಲಾಗಿತ್ತು. ಈ ಹಿನ್ನಲೆ ದಾಳಿ‌ ಮಾಡಿ 3 ಕೋಟಿ 45 ಲಕ್ಷ ನಗದು ಹಣ ವಶಪಡೆಸಿಕೊಳ್ಳಲಾಗಿದೆ. 66 ಜನರನ್ನು ಠಾಣೆಗೆ ಕರೆಸಿ ಮಾಹಿತಿ ಪಡೆದು ನೊಟೀಸ್ ನೀಡಲಾಗಿದೆ. Crpc 41ಅಡಿ ನೊಟೀಸ್ ನೀಡಲಾಗಿದೆ.

ಸದ್ಯ ಈ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗ್ತಿದೆ. ಇದರ ಲಾಭ ಯಾರು ಪಡೆದುಕೊಳ್ತಿದ್ದಾರೆ? ಇದರ ಹಿಂದೆ ಯಾರಿದಾರೆ ಅನ್ನೋದ್ರ ಬಗ್ಗೆ ಮಾಹಿತಿ ಕಲೆ ಹಾಕಲಾಗ್ತಿದೆ. ಈ ರೀತಿ ಅಕ್ರಮ‌ ಬೆಟ್ಟಿಂಗ್​​ನಿಂದ ಜಿಎಸ್​ಟಿ ವಂಚನೆ ಆಗಿದೆ. 28% ಜಿಎಸ್​ಟಿ ಕಟ್ಟಬೇಕು. ಆದ್ರೆ ಜಿಎಸ್​ಟಿ ತೆರಿಗೆ ವಂಚನೆ ಮಾಡಲಾಗಿದೆ. ಅನಧಿಕೃತ ವ್ಯಕ್ತಿಗಳು ಕೌಂಟರ್ ನಡೆಸುತ್ತಿದ್ದ ಮಾಹಿತಿ ಸಿಕ್ಕಿದೆ. ಈ ಸಂಬಂಧ ಹೆಚ್ಚಿನ ಮಾಹಿತಿ ಪಡೆದು ತನಿಖೆ ನಡೆಸಲಾಗುತ್ತೆ ಎಂದಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ರೇಸ್‌ಕೋರ್ಸ್‌ ಮೇಲೆ ಸಿಸಿಬಿ ದಾಳಿ; ಬರೋಬ್ಬರಿ 3 ಕೋಟಿ 45 ಲಕ್ಷ ಹಣ ಪತ್ತೆ!

https://newsfirstlive.com/wp-content/uploads/2024/01/ccb-bng.jpg

    ಅಕ್ರಮ‌ ಬೆಟ್ಟಿಂಗ್​​ನಿಂದ ಅಂದಾಜು 28% ಜಿಎಸ್​ಟಿ ವಂಚನೆ

    ಸಿಸಿಬಿ ಪೊಲೀಸರ ದಾಳಿ ವೇಳೆ 3 ಕೋಟಿ 45 ಲಕ್ಷ ಹಣ ಪತ್ತೆ

    66 ಜನರನ್ನು ಠಾಣೆಗೆ ಕರೆಸಿ ಮಾಹಿತಿ ಪಡೆದು ನೊಟೀಸ್ ಜಾರಿ

ಬೆಂಗಳೂರು: ಸಿಸಿಬಿ ಪೊಲೀಸರಿಂದ ರೇಸ್ ಕೋರ್ಸ್ ಮೇಲೆ ದಾಳಿ ಕೇಸ್​ಗೆ ಸಂಬಂಧಿಸಿದಂತೆ ನಗರ ಪೊಲೀಸ್ ಆಯುಕ್ತ ಬಿ ದಯಾನಂದ ಮಹತ್ವದ ಹೇಳಿಕೆಯೊಂದನ್ನು ನೀಡಿದ್ದಾರೆ. ದಾಳಿ ವೇಳೆ 3 ಕೋಟಿ 45 ಲಕ್ಷ ಹಣ ಸಿಕ್ಕಿದ್ದು ಅದನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದಿದ್ದಾರೆ.

ಇದನ್ನು ಓದಿ: ರೇಸ್​ ಕೋರ್ಸ್​ ಮೇಲೆ ಸಿಸಿಬಿ ಪೊಲೀಸರ ದಾಳಿ; 3 ಕೋಟಿ 47 ಲಕ್ಷ ರೂಪಾಯಿ ಪತ್ತೆ

ಇನ್ನು, ಈ ಸಂಬಂಧ ಸುದ್ದಿಗಾರರೊಂದಿಗೆ ಮಾತಾಡಿದ ಸಂಬಂಧಿಸಿದಂತೆ ನಗರ ಪೊಲೀಸ್ ಆಯುಕ್ತ ಬಿ ದಯಾನಂದ, ಸಿಸಿಬಿ ತಂಡದ ವಿಶೇಷ ವಿಚಾರಣೆ ದಳದವರು ದಾಳಿ ಮಾಡಿದ್ದರು. ಅಧಿಕೃತವಾಗಿ ಬೆಟ್ಟಿಂಗ್ ಆಡ್ತಾರೆ. ಆದ್ರೆ ಜೊತೆಗೆ ಅನಧಿಕೃತವಾಗಿ ಕೂಡ ಬೆಟ್ಟಿಂಗ್ ನಡೆಸಲಾಗ್ತಿತ್ತು. ಯಾವುದೇ ಡಾಕ್ಯುಮೆಂಟ್, ರಷೀದಿ ಇಟ್ಟುಕೊಳ್ಳದೇ ಹಣದ ವ್ಯವಹಾರ ನಡೆಸಲಾಗಿತ್ತು. ಈ ಹಿನ್ನಲೆ ದಾಳಿ‌ ಮಾಡಿ 3 ಕೋಟಿ 45 ಲಕ್ಷ ನಗದು ಹಣ ವಶಪಡೆಸಿಕೊಳ್ಳಲಾಗಿದೆ. 66 ಜನರನ್ನು ಠಾಣೆಗೆ ಕರೆಸಿ ಮಾಹಿತಿ ಪಡೆದು ನೊಟೀಸ್ ನೀಡಲಾಗಿದೆ. Crpc 41ಅಡಿ ನೊಟೀಸ್ ನೀಡಲಾಗಿದೆ.

ಸದ್ಯ ಈ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗ್ತಿದೆ. ಇದರ ಲಾಭ ಯಾರು ಪಡೆದುಕೊಳ್ತಿದ್ದಾರೆ? ಇದರ ಹಿಂದೆ ಯಾರಿದಾರೆ ಅನ್ನೋದ್ರ ಬಗ್ಗೆ ಮಾಹಿತಿ ಕಲೆ ಹಾಕಲಾಗ್ತಿದೆ. ಈ ರೀತಿ ಅಕ್ರಮ‌ ಬೆಟ್ಟಿಂಗ್​​ನಿಂದ ಜಿಎಸ್​ಟಿ ವಂಚನೆ ಆಗಿದೆ. 28% ಜಿಎಸ್​ಟಿ ಕಟ್ಟಬೇಕು. ಆದ್ರೆ ಜಿಎಸ್​ಟಿ ತೆರಿಗೆ ವಂಚನೆ ಮಾಡಲಾಗಿದೆ. ಅನಧಿಕೃತ ವ್ಯಕ್ತಿಗಳು ಕೌಂಟರ್ ನಡೆಸುತ್ತಿದ್ದ ಮಾಹಿತಿ ಸಿಕ್ಕಿದೆ. ಈ ಸಂಬಂಧ ಹೆಚ್ಚಿನ ಮಾಹಿತಿ ಪಡೆದು ತನಿಖೆ ನಡೆಸಲಾಗುತ್ತೆ ಎಂದಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Load More