newsfirstkannada.com

ರಾಜ್ಯ ರಾಜಕಾರಣದಲ್ಲಿ ಮಹತ್ವದ ಬೆಳವಣಿಗೆ; ಮುನಿಸು ಮರೆತು ಮತ್ತೆ ಚಿಗುರಿದ ಸ್ನೇಹ..!

Share :

Published April 13, 2024 at 12:47pm

    ಬಿಜೆಪಿ ಸಂಸದ ಶ್ರೀನಿವಾಸ ಪ್ರಸಾದ್ ಮನೆಗೆ ಸಿದ್ದರಾಮಯ್ಯ ಭೇಟಿ

    ಸಿದ್ದರಾಮಯ್ಯ-ಶ್ರೀನಿವಾಸ ಪ್ರಸಾದ್ ಭೇಟಿಗೆ ಇವೆ ಕಾರಣಗಳು

    ಹಳೆಯ ದೋಸ್ತಿ ಮುಂದುವರಿಸುವ ಇಂಗಿತ ವ್ಯಕ್ತಪಡಿಸಿದ ನಾಯಕರು

ಮೈಸೂರು: ರಾಜ್ಯ ರಾಜಕಾರಣದಲ್ಲಿ ಮಹತ್ತರ ಬೆಳವಣಿಗೆ ನಡೆದಿದೆ. ಬಿಜೆಪಿ ಸಂಸದ ಶ್ರೀನಿವಾಸ ಪ್ರಸಾದ್ ಮನೆಗೆ ಸಿಎಂ‌ ಸಿದ್ದರಾಮಯ್ಯ ಭೇಟಿ ನೀಡಿದ್ದಾರೆ.

ಕಳೆದ ಹಲವು ವರ್ಷಗಳಿಂದ ಸಿದ್ದರಾಮಯ್ಯರಿಂದ ದೂರ ಉಳಿದಿದ್ದ ಶ್ರೀನಿವಾಸ ಪ್ರಸಾದ್ ಅವರ ಜಯಲಕ್ಷ್ಮಿ ಪುರಂ ನಿವಾಸಕ್ಕೆ ಭೇಟಿ ನೀಡಿದ ಸಿಎಂ 6 ವರ್ಷದ ಮುನಿಸು ಮರೆತು ಒಂದಾಗಿ ನಿಂತು ಚುನಾವಣೆಗೆ ಬೆಂಬಲಿಸುವಂತೆ ಮನವಿ ಮಾಡಿದ್ದಾರೆ. ಈ ಮೂಲಕ ಶ್ರೀನಿವಾಸ್​ ಪ್ರಸಾದ್​ ಸಪೋರ್ಟ್​ ಯಾರಿಗೆ ಅನ್ನೋ ಪ್ರಶ್ನೆ ಶುರುವಾಗಿದ್ದು, ಬಿಜೆಪಿ ನಾಯಕರಿಗೆ ಮತ್ತೆ ಟೆನ್ಷನ್​ ಶುರುವಾಗಿದೆ.

ಸಿದ್ದರಾಮಯ್ಯ- ಪ್ರಸಾದ್ ಭೇಟಿಗೆ ಕಾರಣಗಳು

  1. ಲೋಕಸಭಾ ಚುನಾವಣೆಗೆ ಸುನೀಲ್ ಬೋಸ್ ಸ್ಪರ್ಧಿಸಿರುವುದು
  2. ಈಗಾಗಲೇ ಡಾ.ಎಚ್.ಸಿ.ಮಹದೇವಪ್ಪ, ಪುತ್ರ ಸುನೀಲ್ ಬೋಸ್, ಡಾ.ಯತೀಂದ್ರ ಸಿದ್ದರಾಮಯ್ಯ ಮೂಲಕ ಭೇಟಿ ಮಾಡಿರುವುದು
  3. ಕಳೆದ ಏಳೆಂಟು ವರ್ಷಗಳ ರಾಜಕೀಯ ವೈಷಮ್ಯ ಮರೆಯುವಂತೆ ಮನವಿ ಮಾಡಿರುವುದು
  4. ಶ್ರೀನಿವಾಸ ಪ್ರಸಾದ್ ರಾಜಕೀಯ ನಿವೃತ್ತ ಸಂದರ್ಭದಲ್ಲಿ ಅವರನ್ನ ಗೌರವಿಸುವ ನೆಪ
  5. ಶ್ರೀನಿವಾಸ ಪ್ರಸಾದ್ ಕುಟುಂಬಕ್ಕೆ ಟಿಕೆಟ್ ಕೈತಪ್ಪಿರುವುದು
  6. ಬಿಜೆಪಿ ಪಕ್ಷದಲ್ಲಿ ಮೂಲೆಗುಂಪು ಮಾಡಿದ್ದಾರೆ. ಮುಂದೆ ಅಳಿಯಂದಿರು, ಮೊಮ್ಮಕ್ಕಳ ರಾಜಕಾರಣಕ್ಕೆ ತೊಂದರೆ ಆಗುತ್ತದೆ ಎಂಬ ಮನವರಿಕೆ ಮಾಡಲು
  7. ಕಾಂಗ್ರೆಸ್ ಅಭ್ಯರ್ಥಿ ಸುನೀಲ್ ಬೋಸ್ ಗೆಲ್ಲಿಸಿಕೊಳ್ಳಲು
  8. ಮೈಸೂರು-ಚಾಮರಾಜನಗರ ಭಾಗದಲ್ಲಿ ಪ್ರಸಾದ್ ಅಭಿಮಾನಿಗಳ ಕಾಂಗ್ರೆಸ್ ನತ್ತ ಸೆಳೆಯಲು
  9. ಕಾಂಗ್ರೆಸ್ ಪಕ್ಷದಲ್ಲಿ ಮುಂಬರುವ ದಿನಗಳಲ್ಲಿ ಪ್ರಸಾದ್ ಅಳಿಯಂದಿರು ಹಾಗು ಕುಟುಂಬದವರಿಗೆ ಅವಕಾಶ ಕಲ್ಪಿಸುವ ಭರವಸೆ
  10. ಹಳೆಯ ದೋಸ್ತಿ ಮುಂದುವರಿಸುವ ಇಂಗಿತ

ಇದನ್ನೂ ಓದಿ:ಆರ್​​ಸಿಬಿ ರುಬ್ಬಿದ ಟ್ರೋಲರ್ಸ್; ಇದು ​ಕಥೆಯಲ್ಲ ವ್ಯಥೆ.. ಹೇಳೋಕೂ ಆಗ್ತಿಲ್ಲ, ಅನುಭವಿಸೋಕೂ ಆಗ್ತಿಲ್ಲ..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ರಾಜ್ಯ ರಾಜಕಾರಣದಲ್ಲಿ ಮಹತ್ವದ ಬೆಳವಣಿಗೆ; ಮುನಿಸು ಮರೆತು ಮತ್ತೆ ಚಿಗುರಿದ ಸ್ನೇಹ..!

https://newsfirstlive.com/wp-content/uploads/2024/04/Siddu-prasad.jpg

    ಬಿಜೆಪಿ ಸಂಸದ ಶ್ರೀನಿವಾಸ ಪ್ರಸಾದ್ ಮನೆಗೆ ಸಿದ್ದರಾಮಯ್ಯ ಭೇಟಿ

    ಸಿದ್ದರಾಮಯ್ಯ-ಶ್ರೀನಿವಾಸ ಪ್ರಸಾದ್ ಭೇಟಿಗೆ ಇವೆ ಕಾರಣಗಳು

    ಹಳೆಯ ದೋಸ್ತಿ ಮುಂದುವರಿಸುವ ಇಂಗಿತ ವ್ಯಕ್ತಪಡಿಸಿದ ನಾಯಕರು

ಮೈಸೂರು: ರಾಜ್ಯ ರಾಜಕಾರಣದಲ್ಲಿ ಮಹತ್ತರ ಬೆಳವಣಿಗೆ ನಡೆದಿದೆ. ಬಿಜೆಪಿ ಸಂಸದ ಶ್ರೀನಿವಾಸ ಪ್ರಸಾದ್ ಮನೆಗೆ ಸಿಎಂ‌ ಸಿದ್ದರಾಮಯ್ಯ ಭೇಟಿ ನೀಡಿದ್ದಾರೆ.

ಕಳೆದ ಹಲವು ವರ್ಷಗಳಿಂದ ಸಿದ್ದರಾಮಯ್ಯರಿಂದ ದೂರ ಉಳಿದಿದ್ದ ಶ್ರೀನಿವಾಸ ಪ್ರಸಾದ್ ಅವರ ಜಯಲಕ್ಷ್ಮಿ ಪುರಂ ನಿವಾಸಕ್ಕೆ ಭೇಟಿ ನೀಡಿದ ಸಿಎಂ 6 ವರ್ಷದ ಮುನಿಸು ಮರೆತು ಒಂದಾಗಿ ನಿಂತು ಚುನಾವಣೆಗೆ ಬೆಂಬಲಿಸುವಂತೆ ಮನವಿ ಮಾಡಿದ್ದಾರೆ. ಈ ಮೂಲಕ ಶ್ರೀನಿವಾಸ್​ ಪ್ರಸಾದ್​ ಸಪೋರ್ಟ್​ ಯಾರಿಗೆ ಅನ್ನೋ ಪ್ರಶ್ನೆ ಶುರುವಾಗಿದ್ದು, ಬಿಜೆಪಿ ನಾಯಕರಿಗೆ ಮತ್ತೆ ಟೆನ್ಷನ್​ ಶುರುವಾಗಿದೆ.

ಸಿದ್ದರಾಮಯ್ಯ- ಪ್ರಸಾದ್ ಭೇಟಿಗೆ ಕಾರಣಗಳು

  1. ಲೋಕಸಭಾ ಚುನಾವಣೆಗೆ ಸುನೀಲ್ ಬೋಸ್ ಸ್ಪರ್ಧಿಸಿರುವುದು
  2. ಈಗಾಗಲೇ ಡಾ.ಎಚ್.ಸಿ.ಮಹದೇವಪ್ಪ, ಪುತ್ರ ಸುನೀಲ್ ಬೋಸ್, ಡಾ.ಯತೀಂದ್ರ ಸಿದ್ದರಾಮಯ್ಯ ಮೂಲಕ ಭೇಟಿ ಮಾಡಿರುವುದು
  3. ಕಳೆದ ಏಳೆಂಟು ವರ್ಷಗಳ ರಾಜಕೀಯ ವೈಷಮ್ಯ ಮರೆಯುವಂತೆ ಮನವಿ ಮಾಡಿರುವುದು
  4. ಶ್ರೀನಿವಾಸ ಪ್ರಸಾದ್ ರಾಜಕೀಯ ನಿವೃತ್ತ ಸಂದರ್ಭದಲ್ಲಿ ಅವರನ್ನ ಗೌರವಿಸುವ ನೆಪ
  5. ಶ್ರೀನಿವಾಸ ಪ್ರಸಾದ್ ಕುಟುಂಬಕ್ಕೆ ಟಿಕೆಟ್ ಕೈತಪ್ಪಿರುವುದು
  6. ಬಿಜೆಪಿ ಪಕ್ಷದಲ್ಲಿ ಮೂಲೆಗುಂಪು ಮಾಡಿದ್ದಾರೆ. ಮುಂದೆ ಅಳಿಯಂದಿರು, ಮೊಮ್ಮಕ್ಕಳ ರಾಜಕಾರಣಕ್ಕೆ ತೊಂದರೆ ಆಗುತ್ತದೆ ಎಂಬ ಮನವರಿಕೆ ಮಾಡಲು
  7. ಕಾಂಗ್ರೆಸ್ ಅಭ್ಯರ್ಥಿ ಸುನೀಲ್ ಬೋಸ್ ಗೆಲ್ಲಿಸಿಕೊಳ್ಳಲು
  8. ಮೈಸೂರು-ಚಾಮರಾಜನಗರ ಭಾಗದಲ್ಲಿ ಪ್ರಸಾದ್ ಅಭಿಮಾನಿಗಳ ಕಾಂಗ್ರೆಸ್ ನತ್ತ ಸೆಳೆಯಲು
  9. ಕಾಂಗ್ರೆಸ್ ಪಕ್ಷದಲ್ಲಿ ಮುಂಬರುವ ದಿನಗಳಲ್ಲಿ ಪ್ರಸಾದ್ ಅಳಿಯಂದಿರು ಹಾಗು ಕುಟುಂಬದವರಿಗೆ ಅವಕಾಶ ಕಲ್ಪಿಸುವ ಭರವಸೆ
  10. ಹಳೆಯ ದೋಸ್ತಿ ಮುಂದುವರಿಸುವ ಇಂಗಿತ

ಇದನ್ನೂ ಓದಿ:ಆರ್​​ಸಿಬಿ ರುಬ್ಬಿದ ಟ್ರೋಲರ್ಸ್; ಇದು ​ಕಥೆಯಲ್ಲ ವ್ಯಥೆ.. ಹೇಳೋಕೂ ಆಗ್ತಿಲ್ಲ, ಅನುಭವಿಸೋಕೂ ಆಗ್ತಿಲ್ಲ..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Load More