ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವಾಗ ಡೇನಿಯಲ್ ಬಾಲಾಜಿ ನಿಧನ
ಕಿರಾತಕ, ಶಿವಾಜಿನಗರ ಸೇರಿ ಕನ್ನಡದ ಚಿತ್ರಗಳಲ್ಲಿ ನಟಿಸಿದ್ದ ನಟ
ಇನ್ಮುಂದೆ ಅವರ ಜೊತೆ ಕೆಲಸ ಮಾಡಲಾಗಲ್ಲವೆಂದ ನಿರ್ದೇಶಕ
ಚೆನ್ನೈ: ತಮಿಳು ನಟ ಡೇನಿಯಲ್ ಬಾಲಾಜಿ ಅವರು ಹೃದಯಾಘಾತದಿಂದ ನಿಧನರಾಗಿದ್ದಾರೆ. ನಿನ್ನೆ ಡೇನಿಯಲ್ ಅವರಿಗೆ ಎದೆನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವಾಗಲೇ ಡೇನಿಯಲ್ ಬಾಲಾಜಿ ನಿಧನ ಹೊಂದಿದ್ದಾರೆ. ಇವರ ನಿಧನದ ಹಿನ್ನೆಲೆಯಲ್ಲಿ ಸದ್ಯ ಚಿತ್ರರಂಗದ ಗಣ್ಯರು, ನಟ-ನಟಿಯರು ಸೇರಿದಂತೆ ನಿರ್ದೇಶಕರು, ನಿರ್ಮಾಪಕರು ಸಂತಾಪ ಸೂಚಿಸುತ್ತಿದ್ದಾರೆ.
ತಮಿಳು ನಿರ್ದೇಶಕ ಮೋಹನ್ ರಾಜ್ ಅವರು ಎಕ್ಸ್ ಮೂಲಕ ಅಂತಾಪ ಸೂಚಿಸಿದ್ದಾರೆ. ಇದೊಂದು ನಿಜವಾಗ್ಲೂ ಆಘಾತಕಾರಿ ಸುದ್ದಿಯಾಗಿದೆ. ನಾನು ಸಿನಿಮಾ ಇನ್ಸ್ಟಿಟ್ಯೂಟ್ಗೆ ಸೇರಬೇಕು ಅಂದರೆ ಡೇನಿಯಲ್ ಬಾಲಾಜಿ ಅವರೇ ಕಾರಣ. ಅವರ ಈ ಸುದ್ದಿ ಕೇಳಿ ನನಗೆ ತುಂಬಾ ದುಃಖವಾಗುತ್ತಿದೆ. ಇನ್ಮುಂದೆ ಅವರ ಜೊತೆ ಕೆಲಸ ಮಾಡುವುದನ್ನು ಮಿಸ್ ಮಾಡಿಕೊಳ್ಳುತ್ತಿದ್ದೇನೆ ಎಂದು ಬರೆದು ಪೋಸ್ಟ್ ಶೇರ್ ಮಾಡಿದ್ದಾರೆ.
💔💔💔💔💔💔💔
Such a Sad news
He Was an inspiration for me to join film institute
A very good friend
Miss working with him
May his soul rest in peace #RipDanielbalaji https://t.co/TV348BiUNJ— Mohan Raja (@jayam_mohanraja) March 29, 2024
ಬಹುಭಾಷಾ ನಟ ಹಾಗೂ ತಮಿಳು ಹೀರೋ ವಿಜಯ್ ಸೇತುಪತಿ ಅವರು ಡೇನಿಯಲ್ ಬಾಲಾಜಿ ಅವರ ಅಂತಿಮ ದರ್ಶನ ಪಡೆದುಕೊಂಡಿದ್ದಾರೆ. ಅವರನ್ನು ಆ ಸ್ಥಿತಿಯಲ್ಲಿ ನೋಡಿ ಅವರ ಕಣ್ಣಾಲಿಗಳು ಒದ್ದೆಯಾದವು.
ಇವರಷ್ಟೇ ಅಲ್ಲದೇ ಸಿನಿಮಾಗಳಲ್ಲಿ ಕೆಲಸ ಮಾಡಿದಂತ ಸಾಕಷ್ಟು ಸಿಬ್ಬಂದಿ ಸೋಷಿಯಲ್ ಮೀಡಿಯಾ ಮೂಲಕ ಸಂತಾಪ ಸೂಚಿಸುತ್ತಿದ್ದಾರೆ. ಟಿವಿ ಚಾನೆಲ್ಗಳು, ಸಿನಿಮಾ ನಿರ್ಮಾಣದ ಸಂಸ್ಥೆಗಳು ಸೇರಿ ಸಹ ಕಲಾವಿದರು ನಟ ಡೇನಿಯಲ್ ಬಾಲಾಜಿ ಅವರಿಗೆ ಸಂತಾಪ ಸೂಚಿಸುತ್ತಿರುತ್ತಾರೆ.
ತಮಿಳಿನ ಸ್ಟಾರ್ ಡೈರೆಕ್ಟರ್ ವೆಟ್ರಿ ಮಾರನ್ ಅವರ ‘ವೆಟ್ಟೈಯಾಡು ವಿಲೈಯಾಡು’ ಸಿನಿಮಾದಲ್ಲಿಯೂ ಬಾಲಾಜಿ ನಟಿಸಿದ್ದರು. ದಳಪತಿ ವಿಜಯ್, ಅಜಿತ್, ಸಿಂಬು ಅವರ ಸಿನಿಮಾದಲ್ಲಿಯೂ ಬಾಲಾಜಿ ಅಭಿನಯ ನಿರಾಳವಾಗಿ ಮಾಡಿದ್ದರು. ಕೊನೆಯದಾಗಿ ಅವರು ‘ಅರಿಯಾವನ್’ ಮೂವಿಯಲ್ಲಿ ಕಾಣಿಸಿಕೊಂಡಿದ್ದರು. ಇವಷ್ಟೇ ಅಲ್ಲ ಬೇರೆ ಬೇರೆ ಭಾಷೆಗಳ ಸಿನಿಮಾದಲ್ಲಿಯೂ ಅಭಿನಯ ಮಾಡಿದ್ದಾರೆ.
Throwback video: Actor Daniel Balaji about #ThalapathyVijay. #DanielBalaji #ripdanielbalaji
pic.twitter.com/Zc3DNeHQwm— Actor Vijay FC (@ActorVijayFC) March 29, 2024
ಹೃದಯಾಘಾತದಿಂದ ನಿಧನರಾದ ಡೇನಿಯಲ್ ಬಾಲಾಜಿ ಅವರ ಕಣ್ಣುಗಳನ್ನು ಸದ್ಯ ದಾನ ಮಾಡಲಾಗಿದೆ. ನೇತ್ರದಾನ ಮಾಡುವ ಮೂಲಕ ನಟ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ. ಇವರ ಕಣ್ಣುಗಳಿಂದ ಇಬ್ಬರು ವ್ಯಕ್ತಿಗಳಿಗೆ ಬಾಳು ಬೆಳಕಾಗಿದೆ ಎನ್ನಲಾಗಿದೆ. ಸದ್ಯ ನಟನ ಹಠಾತ್ ನಿಧನವನ್ನು ಒಪ್ಪಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಗಣ್ಯರು ಸಂತಾಪ ಸೂಚಿಸುತ್ತಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವಾಗ ಡೇನಿಯಲ್ ಬಾಲಾಜಿ ನಿಧನ
ಕಿರಾತಕ, ಶಿವಾಜಿನಗರ ಸೇರಿ ಕನ್ನಡದ ಚಿತ್ರಗಳಲ್ಲಿ ನಟಿಸಿದ್ದ ನಟ
ಇನ್ಮುಂದೆ ಅವರ ಜೊತೆ ಕೆಲಸ ಮಾಡಲಾಗಲ್ಲವೆಂದ ನಿರ್ದೇಶಕ
ಚೆನ್ನೈ: ತಮಿಳು ನಟ ಡೇನಿಯಲ್ ಬಾಲಾಜಿ ಅವರು ಹೃದಯಾಘಾತದಿಂದ ನಿಧನರಾಗಿದ್ದಾರೆ. ನಿನ್ನೆ ಡೇನಿಯಲ್ ಅವರಿಗೆ ಎದೆನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವಾಗಲೇ ಡೇನಿಯಲ್ ಬಾಲಾಜಿ ನಿಧನ ಹೊಂದಿದ್ದಾರೆ. ಇವರ ನಿಧನದ ಹಿನ್ನೆಲೆಯಲ್ಲಿ ಸದ್ಯ ಚಿತ್ರರಂಗದ ಗಣ್ಯರು, ನಟ-ನಟಿಯರು ಸೇರಿದಂತೆ ನಿರ್ದೇಶಕರು, ನಿರ್ಮಾಪಕರು ಸಂತಾಪ ಸೂಚಿಸುತ್ತಿದ್ದಾರೆ.
ತಮಿಳು ನಿರ್ದೇಶಕ ಮೋಹನ್ ರಾಜ್ ಅವರು ಎಕ್ಸ್ ಮೂಲಕ ಅಂತಾಪ ಸೂಚಿಸಿದ್ದಾರೆ. ಇದೊಂದು ನಿಜವಾಗ್ಲೂ ಆಘಾತಕಾರಿ ಸುದ್ದಿಯಾಗಿದೆ. ನಾನು ಸಿನಿಮಾ ಇನ್ಸ್ಟಿಟ್ಯೂಟ್ಗೆ ಸೇರಬೇಕು ಅಂದರೆ ಡೇನಿಯಲ್ ಬಾಲಾಜಿ ಅವರೇ ಕಾರಣ. ಅವರ ಈ ಸುದ್ದಿ ಕೇಳಿ ನನಗೆ ತುಂಬಾ ದುಃಖವಾಗುತ್ತಿದೆ. ಇನ್ಮುಂದೆ ಅವರ ಜೊತೆ ಕೆಲಸ ಮಾಡುವುದನ್ನು ಮಿಸ್ ಮಾಡಿಕೊಳ್ಳುತ್ತಿದ್ದೇನೆ ಎಂದು ಬರೆದು ಪೋಸ್ಟ್ ಶೇರ್ ಮಾಡಿದ್ದಾರೆ.
💔💔💔💔💔💔💔
Such a Sad news
He Was an inspiration for me to join film institute
A very good friend
Miss working with him
May his soul rest in peace #RipDanielbalaji https://t.co/TV348BiUNJ— Mohan Raja (@jayam_mohanraja) March 29, 2024
ಬಹುಭಾಷಾ ನಟ ಹಾಗೂ ತಮಿಳು ಹೀರೋ ವಿಜಯ್ ಸೇತುಪತಿ ಅವರು ಡೇನಿಯಲ್ ಬಾಲಾಜಿ ಅವರ ಅಂತಿಮ ದರ್ಶನ ಪಡೆದುಕೊಂಡಿದ್ದಾರೆ. ಅವರನ್ನು ಆ ಸ್ಥಿತಿಯಲ್ಲಿ ನೋಡಿ ಅವರ ಕಣ್ಣಾಲಿಗಳು ಒದ್ದೆಯಾದವು.
ಇವರಷ್ಟೇ ಅಲ್ಲದೇ ಸಿನಿಮಾಗಳಲ್ಲಿ ಕೆಲಸ ಮಾಡಿದಂತ ಸಾಕಷ್ಟು ಸಿಬ್ಬಂದಿ ಸೋಷಿಯಲ್ ಮೀಡಿಯಾ ಮೂಲಕ ಸಂತಾಪ ಸೂಚಿಸುತ್ತಿದ್ದಾರೆ. ಟಿವಿ ಚಾನೆಲ್ಗಳು, ಸಿನಿಮಾ ನಿರ್ಮಾಣದ ಸಂಸ್ಥೆಗಳು ಸೇರಿ ಸಹ ಕಲಾವಿದರು ನಟ ಡೇನಿಯಲ್ ಬಾಲಾಜಿ ಅವರಿಗೆ ಸಂತಾಪ ಸೂಚಿಸುತ್ತಿರುತ್ತಾರೆ.
ತಮಿಳಿನ ಸ್ಟಾರ್ ಡೈರೆಕ್ಟರ್ ವೆಟ್ರಿ ಮಾರನ್ ಅವರ ‘ವೆಟ್ಟೈಯಾಡು ವಿಲೈಯಾಡು’ ಸಿನಿಮಾದಲ್ಲಿಯೂ ಬಾಲಾಜಿ ನಟಿಸಿದ್ದರು. ದಳಪತಿ ವಿಜಯ್, ಅಜಿತ್, ಸಿಂಬು ಅವರ ಸಿನಿಮಾದಲ್ಲಿಯೂ ಬಾಲಾಜಿ ಅಭಿನಯ ನಿರಾಳವಾಗಿ ಮಾಡಿದ್ದರು. ಕೊನೆಯದಾಗಿ ಅವರು ‘ಅರಿಯಾವನ್’ ಮೂವಿಯಲ್ಲಿ ಕಾಣಿಸಿಕೊಂಡಿದ್ದರು. ಇವಷ್ಟೇ ಅಲ್ಲ ಬೇರೆ ಬೇರೆ ಭಾಷೆಗಳ ಸಿನಿಮಾದಲ್ಲಿಯೂ ಅಭಿನಯ ಮಾಡಿದ್ದಾರೆ.
Throwback video: Actor Daniel Balaji about #ThalapathyVijay. #DanielBalaji #ripdanielbalaji
pic.twitter.com/Zc3DNeHQwm— Actor Vijay FC (@ActorVijayFC) March 29, 2024
ಹೃದಯಾಘಾತದಿಂದ ನಿಧನರಾದ ಡೇನಿಯಲ್ ಬಾಲಾಜಿ ಅವರ ಕಣ್ಣುಗಳನ್ನು ಸದ್ಯ ದಾನ ಮಾಡಲಾಗಿದೆ. ನೇತ್ರದಾನ ಮಾಡುವ ಮೂಲಕ ನಟ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ. ಇವರ ಕಣ್ಣುಗಳಿಂದ ಇಬ್ಬರು ವ್ಯಕ್ತಿಗಳಿಗೆ ಬಾಳು ಬೆಳಕಾಗಿದೆ ಎನ್ನಲಾಗಿದೆ. ಸದ್ಯ ನಟನ ಹಠಾತ್ ನಿಧನವನ್ನು ಒಪ್ಪಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಗಣ್ಯರು ಸಂತಾಪ ಸೂಚಿಸುತ್ತಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ