newsfirstkannada.com

ಅಧಿಕಾರಿಗಳ ಕಿರುಕುಳ ಆರೋಪ.. KSRTC ಬಸ್‌ನಲ್ಲೇ ವಿಷ ಕುಡಿದು ಒದ್ದಾಡಿದ ಕಂಡಕ್ಟರ್; ಆಗಿದ್ದೇನು?

Share :

Published March 24, 2024 at 12:48pm

    KSRTC ಬಸ್‌ನಲ್ಲೇ ವಿಷ ಕುಡಿದು ಒದ್ದಾಡಿದ ಡ್ರೈವರ್ ಕಂ ಕಂಡಕ್ಟರ್!

    ಹೊನ್ನಾಳಿ ಡಿಪೋದಲ್ಲಿ ಡ್ರೈವರ್ ಕಂ ಕಂಡಕ್ಟರ್ ಆಗಿದ್ದ ಬಸವರಾಜ್

    ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲು ಮಾಡಿದ KSRTC ಸಿಬ್ಬಂದಿ

ಶಿವಮೊಗ್ಗ: ತನ್ನ ವಿರುದ್ಧ ದಾಖಲಾಗಿದ್ದ ಕೇಸ್​ನಿಂದ ಮನನೊಂದ ಕಂಡಕ್ಟರ್‌ KSRTC ಬಸ್‌ನಲ್ಲೇ ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದಿದೆ. ಕಳೆದ ಮಾರ್ಚ್ 23ರ ಮಧ್ಯಾಹ್ನ 2 ಗಂಟೆ ವೇಳೆಗೆ ಬಸ್‌ನಲ್ಲಿ ವಿಷ ಸೇವಿಸಿದ ಡ್ರೈವರ್ ಕಂ ಕಂಡಕ್ಟರ್ ಒದ್ದಾಡಿದ್ದಾರೆ. ಸಹೋದ್ಯೋಗಿಗಳು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ.

ಹೊನ್ನಾಳಿ ಡಿಪೋದಲ್ಲಿ ಡ್ರೈವರ್ ಕಂ ಕಂಡಕ್ಟರ್ ಆಗಿದ್ದ ಬಸವರಾಜ್ ಅವರು ಬಸ್​ನಲ್ಲಿ ವಿಷ ಕುಡಿದು ಒದ್ದಾಡಿದ್ದಾರೆ. 38 ವರ್ಷದ ಬಸವರಾಜ್, ಕಳೆದ 10 ವರ್ಷದಿಂದ KSRTCಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಇವರ ಅನುಚಿತ ವರ್ತನೆ ಹಿನ್ನೆಲೆಯಲ್ಲಿ ಬಸವರಾಜ್​ ವಿರುದ್ಧ ಕೇಸ್​ ದಾಖಲಾಗಿತ್ತು. ಕೇಸ್​ಗೆ ಸಂಬಂಧಿಸಿದಂತೆ ನಿನ್ನೆ ಬಸವರಾಜ್ ಅವರು ವಿಚಾರಣೆಗೆ ಹಾಜರಾಗಿದ್ದರು.

ಇದನ್ನೂ ಓದಿ: VIDEO: ಯುವತಿಗೆ 8 ಬಾರಿ ಚಾಕುವಿನಿಂದ ಚುಚ್ಚಿದ ಯುವಕ.. ಇಷ್ಟಕ್ಕೆಲ್ಲ ಕಾರಣ ಏನು ಗೊತ್ತಾ?

ಶಿವಮೊಗ್ಗ ಕೆಎಸ್‌ಆರ್‌ಟಿಸಿ ಕಚೇರಿಗೆ ಬಂದು ಬಸವರಾಜ್ ವಿಚಾರಣೆಗೆ ಹಾಜರಾಗಿದ್ದಾರೆ. ವಿಚಾರಣೆ ಬಳಿಕ ಶಿವಮೊಗ್ಗ-ಭದ್ರಾವತಿ KSRTC ಬಸ್​ನಲ್ಲೇ ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ತನ್ನ ವಿರುದ್ಧ ದಾಖಲಾಗಿದ್ದ ಕೇಸ್​ನಿಂದ ಮನ ನೊಂದು ವಿಷ ಸೇವನೆ ಮಾಡಿದ್ದು, ಬಸ್​ನಲ್ಲಿ ಒದ್ದಾಡಿದ್ದಾರೆ. ಶಿವಮೊಗ್ಗ ಕೆಎಸ್ಆರ್​ಟಿಸಿ ಬಸ್ ನಿಲ್ದಾಣದಲ್ಲಿ ಈ ಘಟನೆ ನಡೆದಿದೆ. ಅಧಿಕಾರಿಗಳ ಕಿರುಕುಳಕ್ಕೆ ಬೇಸತ್ತು ಆತ್ಮಹತ್ಯೆಗೆ ಯತ್ನಿಸಿದ್ರಾ ಬಸವರಾಜ್ ಅನ್ನೋ ಅನುಮಾನವಿದ್ದು, ತನಿಖೆಯಿಂದ ಸತ್ಯ ಗೊತ್ತಾಗಬೇಕಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಅಧಿಕಾರಿಗಳ ಕಿರುಕುಳ ಆರೋಪ.. KSRTC ಬಸ್‌ನಲ್ಲೇ ವಿಷ ಕುಡಿದು ಒದ್ದಾಡಿದ ಕಂಡಕ್ಟರ್; ಆಗಿದ್ದೇನು?

https://newsfirstlive.com/wp-content/uploads/2024/03/Shivamogga-KSRTC-1.jpg

    KSRTC ಬಸ್‌ನಲ್ಲೇ ವಿಷ ಕುಡಿದು ಒದ್ದಾಡಿದ ಡ್ರೈವರ್ ಕಂ ಕಂಡಕ್ಟರ್!

    ಹೊನ್ನಾಳಿ ಡಿಪೋದಲ್ಲಿ ಡ್ರೈವರ್ ಕಂ ಕಂಡಕ್ಟರ್ ಆಗಿದ್ದ ಬಸವರಾಜ್

    ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲು ಮಾಡಿದ KSRTC ಸಿಬ್ಬಂದಿ

ಶಿವಮೊಗ್ಗ: ತನ್ನ ವಿರುದ್ಧ ದಾಖಲಾಗಿದ್ದ ಕೇಸ್​ನಿಂದ ಮನನೊಂದ ಕಂಡಕ್ಟರ್‌ KSRTC ಬಸ್‌ನಲ್ಲೇ ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದಿದೆ. ಕಳೆದ ಮಾರ್ಚ್ 23ರ ಮಧ್ಯಾಹ್ನ 2 ಗಂಟೆ ವೇಳೆಗೆ ಬಸ್‌ನಲ್ಲಿ ವಿಷ ಸೇವಿಸಿದ ಡ್ರೈವರ್ ಕಂ ಕಂಡಕ್ಟರ್ ಒದ್ದಾಡಿದ್ದಾರೆ. ಸಹೋದ್ಯೋಗಿಗಳು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ.

ಹೊನ್ನಾಳಿ ಡಿಪೋದಲ್ಲಿ ಡ್ರೈವರ್ ಕಂ ಕಂಡಕ್ಟರ್ ಆಗಿದ್ದ ಬಸವರಾಜ್ ಅವರು ಬಸ್​ನಲ್ಲಿ ವಿಷ ಕುಡಿದು ಒದ್ದಾಡಿದ್ದಾರೆ. 38 ವರ್ಷದ ಬಸವರಾಜ್, ಕಳೆದ 10 ವರ್ಷದಿಂದ KSRTCಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಇವರ ಅನುಚಿತ ವರ್ತನೆ ಹಿನ್ನೆಲೆಯಲ್ಲಿ ಬಸವರಾಜ್​ ವಿರುದ್ಧ ಕೇಸ್​ ದಾಖಲಾಗಿತ್ತು. ಕೇಸ್​ಗೆ ಸಂಬಂಧಿಸಿದಂತೆ ನಿನ್ನೆ ಬಸವರಾಜ್ ಅವರು ವಿಚಾರಣೆಗೆ ಹಾಜರಾಗಿದ್ದರು.

ಇದನ್ನೂ ಓದಿ: VIDEO: ಯುವತಿಗೆ 8 ಬಾರಿ ಚಾಕುವಿನಿಂದ ಚುಚ್ಚಿದ ಯುವಕ.. ಇಷ್ಟಕ್ಕೆಲ್ಲ ಕಾರಣ ಏನು ಗೊತ್ತಾ?

ಶಿವಮೊಗ್ಗ ಕೆಎಸ್‌ಆರ್‌ಟಿಸಿ ಕಚೇರಿಗೆ ಬಂದು ಬಸವರಾಜ್ ವಿಚಾರಣೆಗೆ ಹಾಜರಾಗಿದ್ದಾರೆ. ವಿಚಾರಣೆ ಬಳಿಕ ಶಿವಮೊಗ್ಗ-ಭದ್ರಾವತಿ KSRTC ಬಸ್​ನಲ್ಲೇ ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ತನ್ನ ವಿರುದ್ಧ ದಾಖಲಾಗಿದ್ದ ಕೇಸ್​ನಿಂದ ಮನ ನೊಂದು ವಿಷ ಸೇವನೆ ಮಾಡಿದ್ದು, ಬಸ್​ನಲ್ಲಿ ಒದ್ದಾಡಿದ್ದಾರೆ. ಶಿವಮೊಗ್ಗ ಕೆಎಸ್ಆರ್​ಟಿಸಿ ಬಸ್ ನಿಲ್ದಾಣದಲ್ಲಿ ಈ ಘಟನೆ ನಡೆದಿದೆ. ಅಧಿಕಾರಿಗಳ ಕಿರುಕುಳಕ್ಕೆ ಬೇಸತ್ತು ಆತ್ಮಹತ್ಯೆಗೆ ಯತ್ನಿಸಿದ್ರಾ ಬಸವರಾಜ್ ಅನ್ನೋ ಅನುಮಾನವಿದ್ದು, ತನಿಖೆಯಿಂದ ಸತ್ಯ ಗೊತ್ತಾಗಬೇಕಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Load More