newsfirstkannada.com

ಮೋದಿ ಸರ್ಕಾರದ ಶ್ವೇತಪತ್ರಕ್ಕೆ ಕೌಂಟರ್‌.. ಮಲ್ಲಿಕಾರ್ಜುನ ಖರ್ಗೆ ರಿಲೀಸ್ ಮಾಡಿದ ಬ್ಲ್ಯಾಕ್ ಪೇಪರ್‌ನಲ್ಲಿ ಏನಿದೆ?

Share :

Published February 8, 2024 at 12:27pm

Update February 8, 2024 at 12:33pm

    ಕೇಂದ್ರ ಸರ್ಕಾರದ ಶ್ವೇತಪತ್ರಕ್ಕೆ ಕಾಂಗ್ರೆಸ್ ಬ್ಲ್ಯಾಕ್ ಪೇಪರ್‌ ರಿಲೀಸ್

    ಮೋದಿ ಆಡಳಿತದ ‘10 ವರ್ಷದ ಅನ್ಯಾಯ ಕಾಲ’ ಕಪ್ಪು ಪತ್ರ ಬಿಡುಗಡೆ

    ಎಲ್ಲಿ ಬಿಜೆಪಿ ಸರ್ಕಾರ ಇಲ್ಲ ಆ ರಾಜ್ಯಕ್ಕೆ ಅನುದಾನ ನೀಡುವುದಿಲ್ಲ

ನವದೆಹಲಿ: ಕೇಂದ್ರ ಸರ್ಕಾರದ ಶ್ವೇತಪತ್ರಕ್ಕೆ ಕಾಂಗ್ರೆಸ್ ಬ್ಲ್ಯಾಕ್ ಪೇಪರ್‌ನ ಅಸ್ತ್ರ ಪ್ರಯೋಗಿಸಿದೆ. ಲೋಕಸಭೆಯಲ್ಲಿ ನರೇಂದ್ರ ಮೋದಿ ಸರ್ಕಾರ ಯುಪಿಎ ಸರ್ಕಾರದ ಅವಧಿಯ ಹಣಕಾಸು ನಿರ್ವಹಣೆಯ ಲೋಪಗಳ ಬಗ್ಗೆ ಶ್ವೇತಪತ್ರ ಮಂಡಿಸಲು ಸಿದ್ಧತೆ ನಡೆಸಿದೆ. ಇದಕ್ಕೆ ಪ್ರತಿಯಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಬ್ಲ್ಯಾಕ್ ಪೇಪರ್‌ ರಿಲೀಸ್ ಮಾಡಿ ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.
ದೆಹಲಿಯ ತಮ್ಮ ನಿವಾಸದಲ್ಲಿ ಸುದ್ದಿಗೋಷ್ಟಿ ನಡೆಸಿದ ಮಲ್ಲಿಕಾರ್ಜುನ ಖರ್ಗೆ ಅವರು 10 ವರ್ಷದ ಅನ್ಯಾಯ ಕಾಲ ಅನ್ನೋ ಬ್ಲ್ಯಾಕ್ ಪೇಪರ್ ಅನ್ನು ಬಿಡುಗಡೆ ಮಾಡಿದರು. ಬಳಿಕ ಮಾತನಾಡಿದ ಅವರು 2014ರಿಂದ 2024ರವರೆಗೆ ಮೋದಿ ಸರ್ಕಾರದ ಅವಧಿಯ ಲೋಪಗಳ ಬಗ್ಗೆ ಮಾಹಿತಿ ನೀಡಿದರು.

ಬಿಜೆಪಿ ಅವರು ಆಡಳಿತ ವೈಫಲ್ಯಗಳನ್ನು ಮುಚ್ಚಿಕೊಳ್ತಾರೆ. ನಾವು ಇದನ್ನು ಪ್ರಶ್ನಿಸಿದಾಗ ಅದಕ್ಕೆ ಮಹತ್ವ ನೀಡಲ್ಲ. ಹೀಗಾಗಿ ಮೋದಿ ಸರ್ಕಾರದ ವಿರುದ್ಧ ಕಪ್ಪು ಪತ್ರ ಬಿಡುಗಡೆ ಮಾಡುತ್ತಿದ್ದೇವೆ. ದೇಶದಲ್ಲಿ ನಿರುದ್ಯೋಗ ಅತಿದೊಡ್ಡ ಸಮಸ್ಯೆಯಾಗಿದೆ. ಇದರ ಬಗ್ಗೆ ಬಿಜೆಪಿ ಸರ್ಕಾರ ಮಾತನಾಡಲ್ಲ. ನೆಹರು ಕಾಲದಲ್ಲಿ ಹಲವು ಸಂಸ್ಥೆಗಳನ್ನು ನಿರ್ಮಿಸಲಾಯಿತು. ಮೋದಿ ಸರ್ಕಾರದಲ್ಲಿ ಸ್ಥಾಪನೆಯಾದ ಸಂಸ್ಥೆಗಳು, ಅಥಾವ ಉದ್ಯೋಗ ಸೃಷ್ಟಿ ಮಾಡಿಲ್ಲ. ಹಲವು ರಾಜ್ಯಗಳಿಗೆ ಅನ್ಯಾಯವಾಗುತ್ತಿದೆ. ಎಲ್ಲಿ ಬಿಜೆಪಿ ಸರ್ಕಾರ ಇಲ್ಲ ಆ ರಾಜ್ಯಕ್ಕೆ ಅನುದಾನ ನೀಡುವುದಿಲ್ಲ. ಆಮೇಲೆ ನಾವು ಹಣ ಕೊಟ್ಟಿದ್ದೇವೆ ಅವರು ಖರ್ಚು ಮಾಡಿಲ್ಲ ಎಂದು ಆರೋಪಿಸುತ್ತಾರೆ. ಉದ್ದೇಶ ಪೂರ್ವಕವಾಗಿ ಅವರು ಹಣ ಕೊಡಬಾರದು ಎಂದು ನಿರ್ಧರಿಸಿದ್ದಾರೆ ಎಂದು ಖರ್ಗೆ ಹೇಳಿದರು.

ದೇಶದಲ್ಲಿ ಬೆಲೆ ಏರಿಕೆ ಅತಿದೊಡ್ಡ ಸಮಸ್ಯೆಯಾಗಿದೆ. ನೆಹರು, ಇಂದಿರಾ ಗಾಂಧಿ ಕಾಲಕ್ಕೆ ಹೋಲಿಕೆ ಮಾಡುತ್ತಿದ್ದಾರೆ. ನೀವು ಈಗ ಆಡಳಿತ ನಡೆಸುತ್ತಿದ್ದೀರಿ. ಈಗ ಏನ್ ಮಾಡುತ್ತಿದ್ದೀರಿ ಹೇಳಬೇಕು. ಅದನ್ನು ಬಿಟ್ಟು ಬರೀ ಹೋಲಿಕೆ ಮಾಡುತ್ತಿದ್ದಾರೆ. ಅಗತ್ಯ ವಸ್ತುಗಳ ಮೇಲೆ ಬೆಲೆ ನಿಯಂತ್ರಣ ಮಾಡಬೇಕು ಎನ್ನುವ ಕಾನೂನು ಇದೆ. ಆದರೆ ಸರ್ಕಾರದ ಕೆಲವು ಜನರು ಉದ್ದೇಶ ಪೂರ್ವಕವಾಗಿ ಬೆಲೆ ಏರಿಕೆ ಮಾಡ್ತಿದ್ದಾರೆ. ರೈತರು ಧರಣಿ ಕೂತಿದ್ದರು, ಒಂದು ವರ್ಷ ಪ್ರತಿಭಟನೆ ನಡೆಸಿದರು. ಮೂರು ಕಾನೂನು ತಂದು ಮತ್ತೆ ವಾಪಸ್ ಪಡೆದರು. ರೈತರನ್ನು ಸಿಲುಕಿಸುವ ಪ್ರಯತ್ನ ಮಾಡುತ್ತಿದ್ದಾರೆ. ಬೆಂಬಲ ಬೆಲೆ ಹೆಚ್ಚಿಸುವುದಾಗಿ, ರೈತರ ಆದಾಯ ದ್ವಿಗುಣ ಮಾಡುವುದಾಗಿ ಹೇಳಿದರು. ಈವರೆಗೂ ಅದು ಆಗಿಲ್ಲ ಸಂಸತ್‌ನಲ್ಲಿ ಮಾತೂ ಆಡಲ್ಲ. ಅವರ ಎಲ್ಲ ಭರವಸೆ ಸುಳ್ಳಾಗಿದೆ.

ಇದನ್ನೂ ಓದಿ: ರಾಮಮಂದಿರದ ಬಳಿಕ ದೇಶದಲ್ಲಿ ಮತದಾರನ ಒಲವು ಬದಲಾಯ್ತಾ? NDAಗೆ ಎಷ್ಟು? I.N.D.I.A ಗೆಲ್ಲೋದೆಷ್ಟು?

ಇನ್ನು, ಕೃಷಿ ಬಳಕೆ ವಸ್ತುಗಳ ಮೇಲೆ‌ ಜಿಎಸ್‌ಟಿ ಹಾಕಲಾಗಿದೆ. ಪ್ರತಿ ವರ್ಷ ಎರಡು ಕೋಟಿ ಉದ್ಯೋಗ ನೀಡಬೇಕಿತ್ತು ನೀಡಿಲ್ಲ. ಸಾಮಾಜಿಕ ನ್ಯಾಯ ನೀಡುವಲ್ಲಿ ಸರ್ಕಾರ ವಿಫಲವಾಗಿದೆ. ಮೋದಿ ಸರ್ಕಾರದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ಅಪಾಯದಲ್ಲಿದೆ. ಚುನಾವಣೆ ಬಾಂಡ್‌ಗಳ ಮೂಲಕ ಹಣ ವಸೂಲಿ ಮಾಡಲಾಗುತ್ತಿದೆ. ಇಡಿ ಸಿಬಿಐ ಬಿಟ್ಟು ಹೆದರಿಸಲಾಗುತ್ತಿದೆ, ಒತ್ತಡ ಹೇರಲಾಗುತ್ತಿದೆ. ಮೊದಲು ಯಾಕೆ ಇಷ್ಟು ಪ್ರಮಾಣದ ಹಣ ಬರ್ತಿರಲಿಲ್ಲ. ಈಗ್ಯಾಕೆ ಹಣ ಹೆಚ್ಚು ಬಿಜೆಪಿಗೆ ಬರ್ತಿದೆ. ಕೋಟ್ಯಾಂತರ ಹಣ ನೀಡಿ ಶಾಸಕರನ್ನು ಖರೀದಿ ಮಾಡಲಾಗುತ್ತಿದೆ. ಕಾಂಗ್ರೆಸ್ ಶಾಸಕರನ್ನು ಬಿಜೆಪಿ ಸೇರ್ಪಡೆ ಮಾಡಿಕೊಳ್ಳಲಾಗುತ್ತಿದೆ. ನನ್ನ ವಿರುದ್ಧ ದೂರು ದಾಖಲಿಸುವ ಕೆಲಸ ಮಾಡಲಾಗುತ್ತಿದೆ. ನನಗೂ ಅವಹೇಳನ ಮಾಡುವುದು, ಬೆದರಿಸುವ ಪ್ರಯತ್ನ ನಡೆಯುತ್ತಿದೆ ಎಂದು ಕಿಡಿಕಾರಿದ್ದಾರೆ.

ಕಾಂಗ್ರೆಸ್ ‘ಕಪ್ಪು’ ಪತ್ರದಲ್ಲಿ ಏನಿದೆ?
ಕೊಟ್ಟ ಭರವಸೆಯಂತೆ ಉದ್ಯೋಗ ಸೃಷ್ಟಿಸಲು ಮೋದಿ ಸರ್ಕಾರ ವಿಫಲ
MSMEಗಳಿಗೆ ಸೂಕ್ತ ಬೆಂಬಲ, ಪೋತ್ಸಾಹ ನೀಡಿಲ್ಲ
ಎಲ್ಲಿ ಬಿಜೆಪಿ ಸರ್ಕಾರ ಇಲ್ಲ ಆ ರಾಜ್ಯಕ್ಕೆ ಅನುದಾನ ನೀಡುವುದಿಲ್ಲ
ನಾವು ಹಣ ಕೊಟ್ಟಿದ್ದೇವೆ ಅವರು ಖರ್ಚು ಮಾಡಿಲ್ಲ ಎಂದು ಆರೋಪ
ಮೋದಿ ಕಾಲದಲ್ಲಿ ಬ್ಯಾಂಕ್ ಸಾಲ ಪಡೆದ ಉದ್ಯಮಿಗಳು ವಿದೇಶಕ್ಕೆ ಪರಾರಿ
ಆರ್ಥಿಕ ಅಪರಾಧಿಗಳನ್ನು ದೇಶಕ್ಕೆ ವಾಪಸ್ ಕರೆತಂದು ಹಣ ವಸೂಲಿಯಲ್ಲಿ ವಿಫಲ
ದೇಶದಲ್ಲಿ ಕೋಮು‌ ಸೌಹಾರ್ದತೆ ಕಾಪಾಡಲು ಮೋದಿ ಸರ್ಕಾರ ವಿಫಲ
ಕೇಂದ್ರ ಸರ್ಕಾರದಿಂದ ರಾಜ್ಯಗಳಿಗೆ ತೆರಿಗೆ ಪಾಲು ಸರಿಯಾಗಿ ನೀಡುತ್ತಿಲ್ಲ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಮೋದಿ ಸರ್ಕಾರದ ಶ್ವೇತಪತ್ರಕ್ಕೆ ಕೌಂಟರ್‌.. ಮಲ್ಲಿಕಾರ್ಜುನ ಖರ್ಗೆ ರಿಲೀಸ್ ಮಾಡಿದ ಬ್ಲ್ಯಾಕ್ ಪೇಪರ್‌ನಲ್ಲಿ ಏನಿದೆ?

https://newsfirstlive.com/wp-content/uploads/2024/02/Kharge-Black-Board.jpg

    ಕೇಂದ್ರ ಸರ್ಕಾರದ ಶ್ವೇತಪತ್ರಕ್ಕೆ ಕಾಂಗ್ರೆಸ್ ಬ್ಲ್ಯಾಕ್ ಪೇಪರ್‌ ರಿಲೀಸ್

    ಮೋದಿ ಆಡಳಿತದ ‘10 ವರ್ಷದ ಅನ್ಯಾಯ ಕಾಲ’ ಕಪ್ಪು ಪತ್ರ ಬಿಡುಗಡೆ

    ಎಲ್ಲಿ ಬಿಜೆಪಿ ಸರ್ಕಾರ ಇಲ್ಲ ಆ ರಾಜ್ಯಕ್ಕೆ ಅನುದಾನ ನೀಡುವುದಿಲ್ಲ

ನವದೆಹಲಿ: ಕೇಂದ್ರ ಸರ್ಕಾರದ ಶ್ವೇತಪತ್ರಕ್ಕೆ ಕಾಂಗ್ರೆಸ್ ಬ್ಲ್ಯಾಕ್ ಪೇಪರ್‌ನ ಅಸ್ತ್ರ ಪ್ರಯೋಗಿಸಿದೆ. ಲೋಕಸಭೆಯಲ್ಲಿ ನರೇಂದ್ರ ಮೋದಿ ಸರ್ಕಾರ ಯುಪಿಎ ಸರ್ಕಾರದ ಅವಧಿಯ ಹಣಕಾಸು ನಿರ್ವಹಣೆಯ ಲೋಪಗಳ ಬಗ್ಗೆ ಶ್ವೇತಪತ್ರ ಮಂಡಿಸಲು ಸಿದ್ಧತೆ ನಡೆಸಿದೆ. ಇದಕ್ಕೆ ಪ್ರತಿಯಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಬ್ಲ್ಯಾಕ್ ಪೇಪರ್‌ ರಿಲೀಸ್ ಮಾಡಿ ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.
ದೆಹಲಿಯ ತಮ್ಮ ನಿವಾಸದಲ್ಲಿ ಸುದ್ದಿಗೋಷ್ಟಿ ನಡೆಸಿದ ಮಲ್ಲಿಕಾರ್ಜುನ ಖರ್ಗೆ ಅವರು 10 ವರ್ಷದ ಅನ್ಯಾಯ ಕಾಲ ಅನ್ನೋ ಬ್ಲ್ಯಾಕ್ ಪೇಪರ್ ಅನ್ನು ಬಿಡುಗಡೆ ಮಾಡಿದರು. ಬಳಿಕ ಮಾತನಾಡಿದ ಅವರು 2014ರಿಂದ 2024ರವರೆಗೆ ಮೋದಿ ಸರ್ಕಾರದ ಅವಧಿಯ ಲೋಪಗಳ ಬಗ್ಗೆ ಮಾಹಿತಿ ನೀಡಿದರು.

ಬಿಜೆಪಿ ಅವರು ಆಡಳಿತ ವೈಫಲ್ಯಗಳನ್ನು ಮುಚ್ಚಿಕೊಳ್ತಾರೆ. ನಾವು ಇದನ್ನು ಪ್ರಶ್ನಿಸಿದಾಗ ಅದಕ್ಕೆ ಮಹತ್ವ ನೀಡಲ್ಲ. ಹೀಗಾಗಿ ಮೋದಿ ಸರ್ಕಾರದ ವಿರುದ್ಧ ಕಪ್ಪು ಪತ್ರ ಬಿಡುಗಡೆ ಮಾಡುತ್ತಿದ್ದೇವೆ. ದೇಶದಲ್ಲಿ ನಿರುದ್ಯೋಗ ಅತಿದೊಡ್ಡ ಸಮಸ್ಯೆಯಾಗಿದೆ. ಇದರ ಬಗ್ಗೆ ಬಿಜೆಪಿ ಸರ್ಕಾರ ಮಾತನಾಡಲ್ಲ. ನೆಹರು ಕಾಲದಲ್ಲಿ ಹಲವು ಸಂಸ್ಥೆಗಳನ್ನು ನಿರ್ಮಿಸಲಾಯಿತು. ಮೋದಿ ಸರ್ಕಾರದಲ್ಲಿ ಸ್ಥಾಪನೆಯಾದ ಸಂಸ್ಥೆಗಳು, ಅಥಾವ ಉದ್ಯೋಗ ಸೃಷ್ಟಿ ಮಾಡಿಲ್ಲ. ಹಲವು ರಾಜ್ಯಗಳಿಗೆ ಅನ್ಯಾಯವಾಗುತ್ತಿದೆ. ಎಲ್ಲಿ ಬಿಜೆಪಿ ಸರ್ಕಾರ ಇಲ್ಲ ಆ ರಾಜ್ಯಕ್ಕೆ ಅನುದಾನ ನೀಡುವುದಿಲ್ಲ. ಆಮೇಲೆ ನಾವು ಹಣ ಕೊಟ್ಟಿದ್ದೇವೆ ಅವರು ಖರ್ಚು ಮಾಡಿಲ್ಲ ಎಂದು ಆರೋಪಿಸುತ್ತಾರೆ. ಉದ್ದೇಶ ಪೂರ್ವಕವಾಗಿ ಅವರು ಹಣ ಕೊಡಬಾರದು ಎಂದು ನಿರ್ಧರಿಸಿದ್ದಾರೆ ಎಂದು ಖರ್ಗೆ ಹೇಳಿದರು.

ದೇಶದಲ್ಲಿ ಬೆಲೆ ಏರಿಕೆ ಅತಿದೊಡ್ಡ ಸಮಸ್ಯೆಯಾಗಿದೆ. ನೆಹರು, ಇಂದಿರಾ ಗಾಂಧಿ ಕಾಲಕ್ಕೆ ಹೋಲಿಕೆ ಮಾಡುತ್ತಿದ್ದಾರೆ. ನೀವು ಈಗ ಆಡಳಿತ ನಡೆಸುತ್ತಿದ್ದೀರಿ. ಈಗ ಏನ್ ಮಾಡುತ್ತಿದ್ದೀರಿ ಹೇಳಬೇಕು. ಅದನ್ನು ಬಿಟ್ಟು ಬರೀ ಹೋಲಿಕೆ ಮಾಡುತ್ತಿದ್ದಾರೆ. ಅಗತ್ಯ ವಸ್ತುಗಳ ಮೇಲೆ ಬೆಲೆ ನಿಯಂತ್ರಣ ಮಾಡಬೇಕು ಎನ್ನುವ ಕಾನೂನು ಇದೆ. ಆದರೆ ಸರ್ಕಾರದ ಕೆಲವು ಜನರು ಉದ್ದೇಶ ಪೂರ್ವಕವಾಗಿ ಬೆಲೆ ಏರಿಕೆ ಮಾಡ್ತಿದ್ದಾರೆ. ರೈತರು ಧರಣಿ ಕೂತಿದ್ದರು, ಒಂದು ವರ್ಷ ಪ್ರತಿಭಟನೆ ನಡೆಸಿದರು. ಮೂರು ಕಾನೂನು ತಂದು ಮತ್ತೆ ವಾಪಸ್ ಪಡೆದರು. ರೈತರನ್ನು ಸಿಲುಕಿಸುವ ಪ್ರಯತ್ನ ಮಾಡುತ್ತಿದ್ದಾರೆ. ಬೆಂಬಲ ಬೆಲೆ ಹೆಚ್ಚಿಸುವುದಾಗಿ, ರೈತರ ಆದಾಯ ದ್ವಿಗುಣ ಮಾಡುವುದಾಗಿ ಹೇಳಿದರು. ಈವರೆಗೂ ಅದು ಆಗಿಲ್ಲ ಸಂಸತ್‌ನಲ್ಲಿ ಮಾತೂ ಆಡಲ್ಲ. ಅವರ ಎಲ್ಲ ಭರವಸೆ ಸುಳ್ಳಾಗಿದೆ.

ಇದನ್ನೂ ಓದಿ: ರಾಮಮಂದಿರದ ಬಳಿಕ ದೇಶದಲ್ಲಿ ಮತದಾರನ ಒಲವು ಬದಲಾಯ್ತಾ? NDAಗೆ ಎಷ್ಟು? I.N.D.I.A ಗೆಲ್ಲೋದೆಷ್ಟು?

ಇನ್ನು, ಕೃಷಿ ಬಳಕೆ ವಸ್ತುಗಳ ಮೇಲೆ‌ ಜಿಎಸ್‌ಟಿ ಹಾಕಲಾಗಿದೆ. ಪ್ರತಿ ವರ್ಷ ಎರಡು ಕೋಟಿ ಉದ್ಯೋಗ ನೀಡಬೇಕಿತ್ತು ನೀಡಿಲ್ಲ. ಸಾಮಾಜಿಕ ನ್ಯಾಯ ನೀಡುವಲ್ಲಿ ಸರ್ಕಾರ ವಿಫಲವಾಗಿದೆ. ಮೋದಿ ಸರ್ಕಾರದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ಅಪಾಯದಲ್ಲಿದೆ. ಚುನಾವಣೆ ಬಾಂಡ್‌ಗಳ ಮೂಲಕ ಹಣ ವಸೂಲಿ ಮಾಡಲಾಗುತ್ತಿದೆ. ಇಡಿ ಸಿಬಿಐ ಬಿಟ್ಟು ಹೆದರಿಸಲಾಗುತ್ತಿದೆ, ಒತ್ತಡ ಹೇರಲಾಗುತ್ತಿದೆ. ಮೊದಲು ಯಾಕೆ ಇಷ್ಟು ಪ್ರಮಾಣದ ಹಣ ಬರ್ತಿರಲಿಲ್ಲ. ಈಗ್ಯಾಕೆ ಹಣ ಹೆಚ್ಚು ಬಿಜೆಪಿಗೆ ಬರ್ತಿದೆ. ಕೋಟ್ಯಾಂತರ ಹಣ ನೀಡಿ ಶಾಸಕರನ್ನು ಖರೀದಿ ಮಾಡಲಾಗುತ್ತಿದೆ. ಕಾಂಗ್ರೆಸ್ ಶಾಸಕರನ್ನು ಬಿಜೆಪಿ ಸೇರ್ಪಡೆ ಮಾಡಿಕೊಳ್ಳಲಾಗುತ್ತಿದೆ. ನನ್ನ ವಿರುದ್ಧ ದೂರು ದಾಖಲಿಸುವ ಕೆಲಸ ಮಾಡಲಾಗುತ್ತಿದೆ. ನನಗೂ ಅವಹೇಳನ ಮಾಡುವುದು, ಬೆದರಿಸುವ ಪ್ರಯತ್ನ ನಡೆಯುತ್ತಿದೆ ಎಂದು ಕಿಡಿಕಾರಿದ್ದಾರೆ.

ಕಾಂಗ್ರೆಸ್ ‘ಕಪ್ಪು’ ಪತ್ರದಲ್ಲಿ ಏನಿದೆ?
ಕೊಟ್ಟ ಭರವಸೆಯಂತೆ ಉದ್ಯೋಗ ಸೃಷ್ಟಿಸಲು ಮೋದಿ ಸರ್ಕಾರ ವಿಫಲ
MSMEಗಳಿಗೆ ಸೂಕ್ತ ಬೆಂಬಲ, ಪೋತ್ಸಾಹ ನೀಡಿಲ್ಲ
ಎಲ್ಲಿ ಬಿಜೆಪಿ ಸರ್ಕಾರ ಇಲ್ಲ ಆ ರಾಜ್ಯಕ್ಕೆ ಅನುದಾನ ನೀಡುವುದಿಲ್ಲ
ನಾವು ಹಣ ಕೊಟ್ಟಿದ್ದೇವೆ ಅವರು ಖರ್ಚು ಮಾಡಿಲ್ಲ ಎಂದು ಆರೋಪ
ಮೋದಿ ಕಾಲದಲ್ಲಿ ಬ್ಯಾಂಕ್ ಸಾಲ ಪಡೆದ ಉದ್ಯಮಿಗಳು ವಿದೇಶಕ್ಕೆ ಪರಾರಿ
ಆರ್ಥಿಕ ಅಪರಾಧಿಗಳನ್ನು ದೇಶಕ್ಕೆ ವಾಪಸ್ ಕರೆತಂದು ಹಣ ವಸೂಲಿಯಲ್ಲಿ ವಿಫಲ
ದೇಶದಲ್ಲಿ ಕೋಮು‌ ಸೌಹಾರ್ದತೆ ಕಾಪಾಡಲು ಮೋದಿ ಸರ್ಕಾರ ವಿಫಲ
ಕೇಂದ್ರ ಸರ್ಕಾರದಿಂದ ರಾಜ್ಯಗಳಿಗೆ ತೆರಿಗೆ ಪಾಲು ಸರಿಯಾಗಿ ನೀಡುತ್ತಿಲ್ಲ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Load More