/newsfirstlive-kannada/media/post_attachments/wp-content/uploads/2024/09/BIHAR_NEWS_20.jpg)
ಪಾಟ್ನಾ: ಕ್ರಿಮಿನಲ್ ಎಷ್ಟೇ ಬುದ್ಧಿವಂತನಾಗಿದ್ದರೂ ಕಾನೂನಿನ ಕುಣಿಕೆಯಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎನ್ನುವುದಕ್ಕೆ ಈ ಘಟನೆ ಉದಾಹರಣೆ ಆಗಿದೆ. 34 ವರ್ಷಗಳ ಹಿಂದೆ ತರಕಾರಿ ಮಾರುವ ಮಹಿಳೆಯಿಂದ 20 ರೂಪಾಯಿ ಲಂಚ ಪಡೆದಿದ್ದ ಕಾನ್ಸ್ಟೇಬಲ್ನನ್ನ ಅರೆಸ್ಟ್ ಮಾಡಿ ನ್ಯಾಯಾಲಯದ ಮುಂದೆ ಹಾಜರು ಪಡಿಸುವಂತೆ ಕೋರ್ಟ್ ಆದೇಶ ಹೊರಡಿಸಿದೆ.
ಇದನ್ನೂ ಓದಿ: ಗಣಪತಿಗೆ 20 ಕೆ.ಜಿ ಬಂಗಾರದ ಕಿರೀಟ ದಾನ.. ಅನಂತ್ ಅಂಬಾನಿ ಖರ್ಚು ಮಾಡಿದ್ದು ಎಷ್ಟು ಕೋಟಿ ರೂಪಾಯಿ?
ಸುರೇಶ್ ಪ್ರಸಾದ್ ಸಿಂಗ್ ಎನ್ನುವರು ಬರಹಿಯಾ ನಗರದ ಠಾಣೆಯಲ್ಲಿ ಕಾನ್ಸ್ಟೇಬಲ್ ಆಗಿದ್ದರು. 1990, ಮೇ 6 ರಂದು ಕಾನ್ಸ್ಟೇಬಲ್ ಸಹರ್ಸಾ ರೈಲು ನಿಲ್ದಾಣದಲ್ಲಿ ಕರ್ತವ್ಯದಲ್ಲಿದ್ದರು. ಈ ವೇಳೆ ಮಹೇಶಖುಂಟ್ ಪ್ರದೇಶದ ಮಹಿಳೆ ಸೀತಾದೇವಿ ಎನ್ನುವ ತರಕಾರಿ ಮಾರಾಟ ಮಾಡುವ ಮಹಿಳೆ ರೈಲು ನಿಲ್ದಾಣಕ್ಕೆ ತರಕಾರಿ ತೆಗೆದುಕೊಂಡು ಬರುತ್ತಿದ್ದರು. ಆಗ ಕಾನ್ಸ್ಟೇಬಲ್ ಮಹಿಳೆಯ ಬಳಿ 20 ರೂಪಾಯಿಗಳ ಲಂಚ ಪಡೆಯುತ್ತಾನೆ. ಆಗ ಎಲ್ಲವನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದ ಅಂದಿನ ರೈಲ್ವೆ ಸ್ಟೇಷನ್ ಇನ್ ಚಾರ್ಜ್ ಕಾನ್ಸ್ಟೇಬಲ್ರನ್ನ ರೆಡ್ ಹ್ಯಾಂಡ್ ಆಗಿ ಹಿಡಿದು ಲಂಚಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲು ಮಾಡುತ್ತಾರೆ.
ಕೋರ್ಟ್ಗೆ ಕೇಸ್ ಹೋದ ಮೇಲೆ ಕಾನ್ಸ್ಟೇಬಲ್ ಲಖಿಸರಾಯ್ ಜಿಲ್ಲೆಯ ಬರ್ಹಿಯಾದ ಬಿಜೋಯ್ ಗ್ರಾಮದಲ್ಲಿ ವಾಸಿಸುತ್ತಿದ್ರೂ ಸಹರ್ಸಾದಲ್ಲಿ ಮಹೇಶ್ಖುಂಟ್ನಲ್ಲಿ ಇದ್ದೇನೆ ಎಂದು ತರಕಾರಿ ಮಾರುವ ಮಹಿಳೆ ಊರಿನ ಸುಳ್ಳು ವಿಳಾಸ ನೀಡಿರುತ್ತಾನೆ. ಹೀಗಾಗಿ ಕೋರ್ಟ್ಗೆ ಹಾಜರಾಗುತ್ತಿರಲಿಲ್ಲ. ವಿಚಾರಣೆ ಹಾಗೇ ಮುಂದುವರೆದಿದ್ದರಿಂದ 1999ರಲ್ಲಿ ಅವರ ಜಾಮೀನು ಅನ್ನು ಕೋರ್ಟ್ ರದ್ದು ಮಾಡಿ ಬಂಧನ ವಾರೆಂಟ್ ಹೊರಡಿಸಿತ್ತು. ಆವಾಗಿನಿಂದ ಕಾನ್ಸ್ಟೇಬಲ್ ತಲೆಮರೆಸಿಕೊಂಡಿದ್ದರು. ಅವರು ಈ ಹಿಂದೆ ಹುದ್ದೆಯಿಂದ ನಿವೃತ್ತಿ ಹೊಂದಿದ್ದರು.
ಇದನ್ನೂ ಓದಿ:ಕಿಂಗ್ ಕೊಹ್ಲಿ ಸೆಂಚುರಿ ಸಿಡಿಸಿ ಎಷ್ಟು ತಿಂಗಳಾಯಿತು.. ಶತಕ ಸಿಡಿಸುವಲ್ಲಿ ವಿರಾಟ್ ಫೇಲ್; ಯಾಕೆ?
ಇದೀಗ ಸಹರ್ಸಾದಲ್ಲಿರುವ ವಿಶೇಷ ವಿಜಿಲೆನ್ಸ್ ನ್ಯಾಯಾಧೀಶ ಸುದೇಶ್ ಶ್ರೀವಾಸ್ತವ ಅವರ ಹೊಸ ನಿರ್ದೇಶನ ಜಾರಿಗೊಂಡಿದೆ. ನಿರ್ದೇಶನದಂತೆ ನಿವೃತ್ತ ಕಾನ್ಸ್ಟೇಬಲ್ನನ್ನ ಬಂಧಿಸಿ ನ್ಯಾಯಾಲಯದ ಮುಂದೆ ಹಾಜರು ಪಡಿಸಬೇಕೆಂದು ಬಿಹಾರ ಪೊಲೀಸ್ ಡಿಜಿಪಿಗೆ ಸೂಚನೆ ನೀಡಲಾಗಿದೆ. ಪೊಲೀಸ್ ಇಲಾಖೆಯಲ್ಲಿನ ಭ್ರಷ್ಟಾಚಾರ, ದುರ್ನಡತೆ ಬಗೆಹರಿಯದ ಬಾಕಿ ಉಳಿದ ಕೇಸ್ಗಳನ್ನು ವಿಚಾರಣೆ ಮಾಡುವಾಗ ಈ ಪ್ರಕರಣ ಬೆಳಕಿಗೆ ಬಂದಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ