ಚಿನ್ನಸ್ವಾಮಿಯಲ್ಲಿ ಆರ್ಸಿಬಿ ಚಿನ್ನದಂಥ ಗೆಲುವು
ರಣರೋಚಕವಾಗಿ ಗೆದ್ದು ಬೀಗಿದ ನಮ್ಮ ಆರ್ಸಿಬಿ
ಆರ್ಸಿಬಿ ಗೆಲುವಿನ ಹಿಂದಿನ ಸೀಕ್ರೆಟ್ ಏನು ಗೊತ್ತಾ?
ಪಂಜಾಬ್ ವಿರುದ್ಧದ ಕದನದಲ್ಲಿ ಆರ್ಸಿಬಿ ರಾಯಲ್ ಜಯ ಸಾಧಿಸಿದೆ. ಮೊದಲ ಪಂದ್ಯದಲ್ಲಿ ಸೋತ ಆರ್ಸಿಬಿ, ಬೆಂಗಳೂರಲ್ಲಿ ರೋಚಕ ರೀತಿಯಲ್ಲಿ ಕಮ್ಬ್ಯಾಕ್ ಮಾಡಿತು. ಅಷ್ಟಕ್ಕೂ ಡುಪ್ಲೆಸಿ ಪಡೆ ಹೋಮ್ಗ್ರೌಂಡ್ನಲ್ಲಿ ಗೆದ್ದಿದ್ದೇಗೆ? ಗೆಲುವಿಗೆ ಕಾರಣ ಏನು?
ಸೀಸನ್ 17ರ ಐಪಿಎಲ್ನಲ್ಲಿ ಆರ್ಸಿಬಿ ಗೆಲುವಿನ ಖಾತೆ ತೆರೆದಿದೆ. ತವರು ಚಿನ್ನಸ್ವಾಮಿ ಅಂಗಳದಲ್ಲಿ RCB ಪಡೆಯ ಘರ್ಜನೆಗೆ ಪಂಜಾಬ್ ಪತರುಗುಟ್ಟಿತು. ಆರಂಭದಿಂದ ಅಂತ್ಯದವರೆಗೆ ಆರ್ಸಿಬಿ ಸಖತ್ ಡಿಸಿಪ್ಲೀನ್ ಆಟವಾಡ್ತು. ಅದೇ ಗೆಲುವಿಗೆ ಕಾರಣವಾಯ್ತು.
ಕಾರಣ ನಂ.1: ಪವರ್ಪ್ಲೇನಲ್ಲಿ ಪವರ್ಫುಲ್ ಬೌಲಿಂಗ್
ಚಿಕ್ಕಗ್ರೌಂಡ್ ಚಿನ್ನಸ್ವಾಮಿಯಲ್ಲಿ ಆರ್ಸಿಬಿ ಬೌಲರ್ಸ್ ರನ್ ಕಂಟ್ರೋಲ್ ಮಾಡ್ತಾರಾ ಅನ್ನೋ ಪ್ರಶ್ನೆಗೆ ನಿನ್ನೆಯ ಆಟವೇ ಉತ್ತರ ನೀಡ್ತು. ಪವರ್ಪ್ಲೇನಲ್ಲಿ ಪವರ್ಫುಲ್ ಬೌಲಿಂಗ್ ಮಾಡಿದ ಆರ್ಸಿಬಿ ಬೌಲರ್ಸ್ 6 ಓವರ್ಗಳಲ್ಲಿ ಜಸ್ಟ್ 40 ರನ್ ನೀಡಿ 1 ವಿಕೆಟ್ ಕಬಳಿಸಿದ್ರು.
ಕಾರಣ ನಂ.2: ಅಲ್ಪ ಮೊತ್ತಕ್ಕೆ ಬಿಗ್ ಹಿಟ್ಟರ್ಸ್ ಬಲೆಗೆ
ಪಂಜಾಬ್ ಪಡೆಯ ಬಿಗ್ ಹಿಟ್ಟರ್ಗಳಾದ ಜಾನಿ ಬೇರ್ಸ್ಟೋ, ಲಯಾಮ್ ಲಿವಿಂಗ್ ಸ್ಟೋನ್ ಆರ್ಭಟಿಸಲು ಆರ್ಸಿಬಿ ಬೌಲರ್ಸ್ ಬಿಡ್ಲೇ ಇಲ್ಲ. ಸ್ಯಾಮ್ ಕರನ್ ಆಟವೂ ನಡೀಲಿಲ್ಲ.
ಕಾರಣ ನಂ.3: ಪಂಜಾಬ್ ಬ್ಯಾಟರ್ಸ್ ಸೆಟಲ್ ಆಗಲು ಚಾನ್ಸ್ ನೀಡಲಿಲ್ಲ
ಚಿನ್ನಸ್ವಾಮಿ ಮೈದಾನಕ್ಕಿಳಿದ ಪಂಜಾಬ್ ಬ್ಯಾಟ್ಸ್ಮನ್ಗಳನ್ನ ಆರ್ಸಿಬಿ ಬೌಲರ್ಸ್ ಕಾಡಿದ್ರು. ಸೆಟಲ್ ಆಗಲು ಚಾನ್ಸ್ ನೀಡದೆ ಬಿಗ್ ಪಾರ್ಟನರ್ಶಿಪ್ಗಳು ಬರದಂತೆ ನೋಡಿಕೊಂಡರು.
ಕಾರಣ ನಂ.4: ಮೈದಾನದಲ್ಲಿ ಮಿಂಚಿನ ಸಂಚಾರ, ಸಾಲಿಡ್ ಫೀಲ್ಡಿಂಗ್
ಚೆನ್ನೈ ವಿರುದ್ಧದ ಪಂದ್ಯದಲ್ಲಿ ಆರ್ಸಿಬಿ ಫೀಲ್ಡಿಂಗ್ನಲ್ಲಿ ಫ್ಲಾಪ್ ಆಗಿತ್ತು. ನಿನ್ನೆ ಆಟಗಾರರು ಚುರುಕಿನ ಫೀಲ್ಡಿಂಗ್ ನಡೆಸಿ ರನ್ ಸೇವ್ ಮಾಡಿದ್ರು. ಕೀಪರ್ ಅನುಜ್ ರಾವತ್ 4 ಕ್ಯಾಚ್ ಹಿಡಿದು ಗಮನ ಸೆಳೆದ್ರು.
ಕಾರಣ ನಂ.5: ಯಶ್ ದಯಾಳ್, ಮೊಹಮ್ಮದ್ ಸಿರಾಜ್ ಶಿಸ್ತಿನ ದಾಳಿ
ಆರ್ಸಿಬಿ ವೇಗಿಗಳಾದ ಯಶ್ ದಯಾಳ್, ಮೊಹಮ್ಮದ್ ಸಿರಾಜ್ ಶಿಸ್ತಿನ ಬೌಲಿಂಗ್ ಸಂಘಟಿಸಿದ್ರು. 4 ಓವರ್ ಬೌಲಿಂಗ್ ಮಾಡಿ 2 ವಿಕೆಟ್ ಕಬಳಿಸಿದ ಸಿರಾಜ್ 26 ರನ್ ಬಿಟ್ಟುಕೊಟ್ರು. ಯಶ್ ದಯಾಳ್ 4 ಓವರ್ಗಳಲ್ಲಿ 1 ವಿಕೆಟ್ ಬೇಟೆಯಾಡಿ ಕೇವಲ 23 ರನ್ ಬಿಟ್ಟು ಕೊಟ್ರು.
ಕಾರಣ ನಂ.6: ವಿರಾಟ್ ಕೊಹ್ಲಿ ಕೈ ಹಿಡಿದ ಅದೃಷ್ಟ
177 ರನ್ಗಳ ಬಿಗ್ ಟಾರ್ಗೆಟ್ ಬೆನ್ನತ್ತಿದ ಆರಂಭದಲ್ಲೇ ಆರ್ಸಿಬಿಗೆ ಆಘಾತ ಕಾದಿತ್ತು. 3ನೇ ಎಸೆತದಲ್ಲಿ ವಿರಾಟ್ ಕೊಹ್ಲಿ ಬ್ಯಾಟ್ಗೆ ಸವರಿದ ಚೆಂಡು ಸೀದಾ ಜಾನಿ ಬೇರ್ಸ್ಟೋ ಕೈಗೆ ಹೋಯ್ತು. ಆದ್ರೆ, ಬೇರ್ಸ್ಟೋ ಕ್ಯಾಚ್ ಡ್ರಾಪ್ ಮಾಡಿದ್ರು.
ಕಾರಣ ನಂ.7: ಅದೃಷ್ಟದ ಅವಕಾಶ, ಸರಿಯಾಗಿ ರುಬ್ಬಿದ ಕೊಹ್ಲಿ
ಅದೃಷ್ಟದ ಅವಕಾಶಗಿಟ್ಟಿಸಿಕೊಂಡ ಕೊಹ್ಲಿ ಪಂಜಾಬ್ ಬೌಲರ್ಗಳನ್ನ ರುಬ್ಬಿದ್ರು. 11 ಬೌಂಡರಿ, 2 ಸಿಕ್ಸರ್ ಸಹಿತ 49 ಎಸೆತಗಳಲ್ಲಿ 77 ರನ್ ಸಿಡಿಸಿದ್ರು.
ಕಾರಣ ನಂ.8: ಕಾರ್ತಿಕ್ – ಲೋಮ್ರೋರ್ ಬೊಂಬಾಟ್ ಆಟ
ಆರ್ಸಿಬಿಯನ್ನ ಗೆಲುವಿನ ದಡ ಸೇರಿಸಿದ್ದೇ ದಿನೇಶ್ ಕಾರ್ತಿಕ್ – ಮಹಿಪಾಲ್ ಲೋಮ್ರೋರ್.! ಕೊನೆಯ 3 ಓವರ್ಗಳಲ್ಲಿ 36 ರನ್ ಬೇಕಿದ್ದಾಗ ಈ ಜೋಡಿ ಬೊಂಬಾಟ್ ಆಟವಾಡಿತು. ಬೌಂಡರಿ, ಸಿಕ್ಸರ್ ಅಬ್ಬರಿಸಿದ ಈ ಜೋಡಿ ಗೆಲುವಿನ ರೂವಾರಿಯಾದ್ರು.
ಇದನ್ನೂ ಓದಿ: ಈ ಬಾರಿ ಮೋದಿ ಸ್ಟೇಡಿಯಂನಲ್ಲಿ IPL ಫೈನಲ್ ಪಂದ್ಯ ನಡೆಯಲ್ಲ; ಮತ್ತೆಲ್ಲಿ ನಡೆಯೋದು..?
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್
ಚಿನ್ನಸ್ವಾಮಿಯಲ್ಲಿ ಆರ್ಸಿಬಿ ಚಿನ್ನದಂಥ ಗೆಲುವು
ರಣರೋಚಕವಾಗಿ ಗೆದ್ದು ಬೀಗಿದ ನಮ್ಮ ಆರ್ಸಿಬಿ
ಆರ್ಸಿಬಿ ಗೆಲುವಿನ ಹಿಂದಿನ ಸೀಕ್ರೆಟ್ ಏನು ಗೊತ್ತಾ?
ಪಂಜಾಬ್ ವಿರುದ್ಧದ ಕದನದಲ್ಲಿ ಆರ್ಸಿಬಿ ರಾಯಲ್ ಜಯ ಸಾಧಿಸಿದೆ. ಮೊದಲ ಪಂದ್ಯದಲ್ಲಿ ಸೋತ ಆರ್ಸಿಬಿ, ಬೆಂಗಳೂರಲ್ಲಿ ರೋಚಕ ರೀತಿಯಲ್ಲಿ ಕಮ್ಬ್ಯಾಕ್ ಮಾಡಿತು. ಅಷ್ಟಕ್ಕೂ ಡುಪ್ಲೆಸಿ ಪಡೆ ಹೋಮ್ಗ್ರೌಂಡ್ನಲ್ಲಿ ಗೆದ್ದಿದ್ದೇಗೆ? ಗೆಲುವಿಗೆ ಕಾರಣ ಏನು?
ಸೀಸನ್ 17ರ ಐಪಿಎಲ್ನಲ್ಲಿ ಆರ್ಸಿಬಿ ಗೆಲುವಿನ ಖಾತೆ ತೆರೆದಿದೆ. ತವರು ಚಿನ್ನಸ್ವಾಮಿ ಅಂಗಳದಲ್ಲಿ RCB ಪಡೆಯ ಘರ್ಜನೆಗೆ ಪಂಜಾಬ್ ಪತರುಗುಟ್ಟಿತು. ಆರಂಭದಿಂದ ಅಂತ್ಯದವರೆಗೆ ಆರ್ಸಿಬಿ ಸಖತ್ ಡಿಸಿಪ್ಲೀನ್ ಆಟವಾಡ್ತು. ಅದೇ ಗೆಲುವಿಗೆ ಕಾರಣವಾಯ್ತು.
ಕಾರಣ ನಂ.1: ಪವರ್ಪ್ಲೇನಲ್ಲಿ ಪವರ್ಫುಲ್ ಬೌಲಿಂಗ್
ಚಿಕ್ಕಗ್ರೌಂಡ್ ಚಿನ್ನಸ್ವಾಮಿಯಲ್ಲಿ ಆರ್ಸಿಬಿ ಬೌಲರ್ಸ್ ರನ್ ಕಂಟ್ರೋಲ್ ಮಾಡ್ತಾರಾ ಅನ್ನೋ ಪ್ರಶ್ನೆಗೆ ನಿನ್ನೆಯ ಆಟವೇ ಉತ್ತರ ನೀಡ್ತು. ಪವರ್ಪ್ಲೇನಲ್ಲಿ ಪವರ್ಫುಲ್ ಬೌಲಿಂಗ್ ಮಾಡಿದ ಆರ್ಸಿಬಿ ಬೌಲರ್ಸ್ 6 ಓವರ್ಗಳಲ್ಲಿ ಜಸ್ಟ್ 40 ರನ್ ನೀಡಿ 1 ವಿಕೆಟ್ ಕಬಳಿಸಿದ್ರು.
ಕಾರಣ ನಂ.2: ಅಲ್ಪ ಮೊತ್ತಕ್ಕೆ ಬಿಗ್ ಹಿಟ್ಟರ್ಸ್ ಬಲೆಗೆ
ಪಂಜಾಬ್ ಪಡೆಯ ಬಿಗ್ ಹಿಟ್ಟರ್ಗಳಾದ ಜಾನಿ ಬೇರ್ಸ್ಟೋ, ಲಯಾಮ್ ಲಿವಿಂಗ್ ಸ್ಟೋನ್ ಆರ್ಭಟಿಸಲು ಆರ್ಸಿಬಿ ಬೌಲರ್ಸ್ ಬಿಡ್ಲೇ ಇಲ್ಲ. ಸ್ಯಾಮ್ ಕರನ್ ಆಟವೂ ನಡೀಲಿಲ್ಲ.
ಕಾರಣ ನಂ.3: ಪಂಜಾಬ್ ಬ್ಯಾಟರ್ಸ್ ಸೆಟಲ್ ಆಗಲು ಚಾನ್ಸ್ ನೀಡಲಿಲ್ಲ
ಚಿನ್ನಸ್ವಾಮಿ ಮೈದಾನಕ್ಕಿಳಿದ ಪಂಜಾಬ್ ಬ್ಯಾಟ್ಸ್ಮನ್ಗಳನ್ನ ಆರ್ಸಿಬಿ ಬೌಲರ್ಸ್ ಕಾಡಿದ್ರು. ಸೆಟಲ್ ಆಗಲು ಚಾನ್ಸ್ ನೀಡದೆ ಬಿಗ್ ಪಾರ್ಟನರ್ಶಿಪ್ಗಳು ಬರದಂತೆ ನೋಡಿಕೊಂಡರು.
ಕಾರಣ ನಂ.4: ಮೈದಾನದಲ್ಲಿ ಮಿಂಚಿನ ಸಂಚಾರ, ಸಾಲಿಡ್ ಫೀಲ್ಡಿಂಗ್
ಚೆನ್ನೈ ವಿರುದ್ಧದ ಪಂದ್ಯದಲ್ಲಿ ಆರ್ಸಿಬಿ ಫೀಲ್ಡಿಂಗ್ನಲ್ಲಿ ಫ್ಲಾಪ್ ಆಗಿತ್ತು. ನಿನ್ನೆ ಆಟಗಾರರು ಚುರುಕಿನ ಫೀಲ್ಡಿಂಗ್ ನಡೆಸಿ ರನ್ ಸೇವ್ ಮಾಡಿದ್ರು. ಕೀಪರ್ ಅನುಜ್ ರಾವತ್ 4 ಕ್ಯಾಚ್ ಹಿಡಿದು ಗಮನ ಸೆಳೆದ್ರು.
ಕಾರಣ ನಂ.5: ಯಶ್ ದಯಾಳ್, ಮೊಹಮ್ಮದ್ ಸಿರಾಜ್ ಶಿಸ್ತಿನ ದಾಳಿ
ಆರ್ಸಿಬಿ ವೇಗಿಗಳಾದ ಯಶ್ ದಯಾಳ್, ಮೊಹಮ್ಮದ್ ಸಿರಾಜ್ ಶಿಸ್ತಿನ ಬೌಲಿಂಗ್ ಸಂಘಟಿಸಿದ್ರು. 4 ಓವರ್ ಬೌಲಿಂಗ್ ಮಾಡಿ 2 ವಿಕೆಟ್ ಕಬಳಿಸಿದ ಸಿರಾಜ್ 26 ರನ್ ಬಿಟ್ಟುಕೊಟ್ರು. ಯಶ್ ದಯಾಳ್ 4 ಓವರ್ಗಳಲ್ಲಿ 1 ವಿಕೆಟ್ ಬೇಟೆಯಾಡಿ ಕೇವಲ 23 ರನ್ ಬಿಟ್ಟು ಕೊಟ್ರು.
ಕಾರಣ ನಂ.6: ವಿರಾಟ್ ಕೊಹ್ಲಿ ಕೈ ಹಿಡಿದ ಅದೃಷ್ಟ
177 ರನ್ಗಳ ಬಿಗ್ ಟಾರ್ಗೆಟ್ ಬೆನ್ನತ್ತಿದ ಆರಂಭದಲ್ಲೇ ಆರ್ಸಿಬಿಗೆ ಆಘಾತ ಕಾದಿತ್ತು. 3ನೇ ಎಸೆತದಲ್ಲಿ ವಿರಾಟ್ ಕೊಹ್ಲಿ ಬ್ಯಾಟ್ಗೆ ಸವರಿದ ಚೆಂಡು ಸೀದಾ ಜಾನಿ ಬೇರ್ಸ್ಟೋ ಕೈಗೆ ಹೋಯ್ತು. ಆದ್ರೆ, ಬೇರ್ಸ್ಟೋ ಕ್ಯಾಚ್ ಡ್ರಾಪ್ ಮಾಡಿದ್ರು.
ಕಾರಣ ನಂ.7: ಅದೃಷ್ಟದ ಅವಕಾಶ, ಸರಿಯಾಗಿ ರುಬ್ಬಿದ ಕೊಹ್ಲಿ
ಅದೃಷ್ಟದ ಅವಕಾಶಗಿಟ್ಟಿಸಿಕೊಂಡ ಕೊಹ್ಲಿ ಪಂಜಾಬ್ ಬೌಲರ್ಗಳನ್ನ ರುಬ್ಬಿದ್ರು. 11 ಬೌಂಡರಿ, 2 ಸಿಕ್ಸರ್ ಸಹಿತ 49 ಎಸೆತಗಳಲ್ಲಿ 77 ರನ್ ಸಿಡಿಸಿದ್ರು.
ಕಾರಣ ನಂ.8: ಕಾರ್ತಿಕ್ – ಲೋಮ್ರೋರ್ ಬೊಂಬಾಟ್ ಆಟ
ಆರ್ಸಿಬಿಯನ್ನ ಗೆಲುವಿನ ದಡ ಸೇರಿಸಿದ್ದೇ ದಿನೇಶ್ ಕಾರ್ತಿಕ್ – ಮಹಿಪಾಲ್ ಲೋಮ್ರೋರ್.! ಕೊನೆಯ 3 ಓವರ್ಗಳಲ್ಲಿ 36 ರನ್ ಬೇಕಿದ್ದಾಗ ಈ ಜೋಡಿ ಬೊಂಬಾಟ್ ಆಟವಾಡಿತು. ಬೌಂಡರಿ, ಸಿಕ್ಸರ್ ಅಬ್ಬರಿಸಿದ ಈ ಜೋಡಿ ಗೆಲುವಿನ ರೂವಾರಿಯಾದ್ರು.
ಇದನ್ನೂ ಓದಿ: ಈ ಬಾರಿ ಮೋದಿ ಸ್ಟೇಡಿಯಂನಲ್ಲಿ IPL ಫೈನಲ್ ಪಂದ್ಯ ನಡೆಯಲ್ಲ; ಮತ್ತೆಲ್ಲಿ ನಡೆಯೋದು..?
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್