ಕ್ರಿಕೆಟ್ ಲೋಕದ ಸೂಪರ್ ಸುದ್ದಿಗಳು ಇಲ್ಲಿವೆ
ಭಾರತ ಏಷ್ಯಾಕಪ್ ತಂಡ ಪ್ರಕಟ ಮತ್ತಷ್ಟು ವಿಳಂಬ
ಸಿಲ್ಲಿಯಾಗಿ ರನೌಟಾದ ರಕೀಮ್ ಕಾರ್ನ್ವಾಲ್
ಭಾರತ ಏಷ್ಯಾಕಪ್ ತಂಡ ಪ್ರಕಟ ಮತ್ತಷ್ಟು ವಿಳಂಬ?
ಆಗಸ್ಟ್ 30 ರಿಂದ ಏಷ್ಯಾಕಪ್ ಟೂರ್ನಿ ಆರಂಭಗೊಳ್ಳಲಿದೆ. ಪಂದ್ಯಾವಳಿಗೆ ಶುರುವಿಗೆ ಇನ್ನೂ ಹತ್ತು ದಿನಗಳು ಬಾಕಿ ಇದ್ದು, ಟೀಮ್ ಇಂಡಿಯಾ ಪ್ರಕಟಗೊಂಡಿಲ್ಲ. ಭಾನುವಾರ ಬಿಸಿಸಿಐ ಆಯ್ಕೆ ಸಮಿತಿ ತಂಡವನ್ನು ಅನೌನ್ಸ್ ಮಾಡಲಿದೆ ಎಂದು ವರದಿಯಾಗಿತ್ತು. ಆದರೆ ಆಗಸ್ಟ್ 20 ರಂದು ಭಾರತ-ಐರ್ಲೆಂಡ್ ನಡುವೆ 2ನೇ ಟಿ20 ಪಂದ್ಯ ನಡೆಯಲಿದೆ. ಹೀಗಾಗಿ ಮರುದಿನ ಆಯ್ಕೆ ಸಮಿತಿ ಸಭೆ ಸೇರಲಿದ್ದು ತಂಡ ಪ್ರಕಟಗೊಳ್ಳುವುದು ವಿಳಂಬವಾಗಲಿದೆ. ಸಭೆಯಲ್ಲಿ ಕೆ.ಎಲ್.ರಾಹುಲ್ ಹಾಗೂ ಶ್ರೇಯಸ್ ಅಯ್ಯರ್ ಆಯ್ಕೆ, ಶ್ರೇಯಸ್ ಅಲಭ್ಯವಾದಲ್ಲಿ ಸೂರ್ಯ ಆಯ್ಕೆಗೆ ಒಲವು ಹಾಗೂ ತಿಲಕ್ ವರ್ಮಾರನ್ನು ತಂಡಕ್ಕೆ ಪರಿಗಣಿಸುವ ಬಗ್ಗೆ ಚರ್ಚೆ ನಡೆಯಲಿದೆ ಎಂದು ಹೇಳಲಾಗ್ತಿದೆ.
‘ವೆಂಕಿ’ ಟೆಕ್ನಿಕ್ಗೆ ದಂಗಾದ ಬೌಲರ್..!
ಟೀಮ್ ಇಂಡಿಯಾ ಯುವ ಕ್ರಿಕೆಟಿಗ ವೆಂಕಟೇಶ್ ಅಯ್ಯರ್ ಇನ್ಡೋರ್ನಲ್ಲಿ ಕ್ರಿಕೆಟ್ ಆಡುತ್ತಿರುವ ವಿಡಿಯೋ ಸಖತ್ ಸದ್ದು ಮಾಡ್ತಿದೆ. ಈ ವಿಡಿಯೋದಲ್ಲಿ ನಾನ್ಸ್ಟ್ರೈಕರ್ನಲ್ಲಿ ವೆಂಕಟೇಶ್ ಅಯ್ಯರ್ ಬೌಲರ್ ಬೌಲಿಂಗ್ ಮಾಡುವ ಮುನ್ನವೇ ಕ್ರೀಸ್ ಬಿಟ್ಟು ಓಡಿ ಬರುತ್ತಾರೆ. ಆಗ ಬೌಲರ್ ರನೌಟ್ ಮಾಡಲು ಮುಂದಾಗ್ತಾರೆ. ಇದು ಗೊತ್ತಾಗುತ್ತಿದ್ದಂತೆ ವೆಂಕಿ ಸ್ಟ್ರೈಕ್ ಬ್ಯಾಟ್ಸ್ಮನ್ ಬಳಿ ಓಡಿ ಬಂದು ಏನೋ ಟಿಪ್ಸ್ ನೀಡುತ್ತಾರೆ. ಆಗ ಬೌಲರ್ ವೆಂಕಟೇಶ್ ಅಯ್ಯರ್ ಟೆಕ್ನಿಕ್ ನೋಡಿ ಏನೂ ಮಾತನಾಡದೇ ಮತ್ತೆ ಬೌಲಿಂಗ್ ಮಾಡಲು ಮುಂದಾಗ್ತಾರೆ.
ಸುನೀಲ್ ಶೆಟ್ಟಿ ಭೇಟಿಯಾದ ಶಾಹಿದ್ ಅಫ್ರಿದಿ..!
ಯುಎಸ್ಎನಲ್ಲಿ ಖ್ಯಾತ ಬಾಲಿವುಡ್ ನಟ ಮತ್ತು ಪಾಕಿಸ್ತಾನ ಕ್ರಿಕೆಟ್ ತಂಡದ ಸ್ಟಾರ್ ಆಟಗಾರರ ಸಂಗಮವಾಗಿದೆ. ಬಿಟೌನ್ನ ಹೆಸರಾಂತ ಸುನೀಲ್ ಶೆಟ್ಟಿ ಅವರನ್ನ ಪಾಕ್ ಮಾಜಿ ಕ್ರಿಕೆಟಿಗ ಶಾಹಿದ್ ಅಫ್ರಿದಿ ಭೇಟಿಯಾಗಿದ್ದಾರೆ. ಸುನೀಲ್ ಶೆಟ್ಟಿ ಅವರನ್ನ ಅಫ್ರಿದಿ ಆತ್ಮೀಯತೆಯಿಂದ ಮಾತನಾಡಿಸಿದ್ದಾರೆ. ಇದೇ ವೇಳೆ ಸ್ಟಾರ್ ಆಲ್ರೌಂಡರ್ ಅಫ್ರಿದಿ ತಮ್ಮ ಇಬ್ಬರು ಹೆಣ್ಣು ಮಕ್ಕಳನ್ನ ಸುನೀಲ್ ಶೆಟ್ಟಿ ಅವರಿಗೆ ಪರಿಚಯಿಸಿದ್ದಾರೆ.
ಸಿಲ್ಲಿಯಾಗಿ ರನೌಟಾದ ರಕೀಮ್ ಕಾರ್ನ್ವಾಲ್
ಕ್ರಿಕೆಟ್ನಲ್ಲಿ ಆಟಗಾರರು ಸಿಲ್ಲಿಯಾಗಿ ವಿಕೆಟ್ ಒಪ್ಪಿಸೋದು ಹೊಸತೇನಲ್ಲ. ಆದರೆ ವೆಸ್ಟ್ಇಂಡೀಸ್ ಕ್ರಿಕೆಟ್ ತಂಡದ ದೈತ್ಯ ಆಟಗಾರ ರಕೀಮ್ ಕಾರ್ನ್ವಾಲ್ ಎಷ್ಟು ಸಿಲ್ಲಿಯಾಗಿ ವಿಕೆಟ್ ಒಪ್ಪಿಸಬೇಕೋ ಅಷ್ಟು ಸಿಲ್ಲಿಯಾಗಿ ವಿಕೆಟ್ ಒಪ್ಪಿಸಿದ್ದಾರೆ. ಕೆರಿಬಿಯನ್ ಪ್ರೀಮಿಯರ್ ಲೀಗ್ನಲ್ಲಿ ಕಾರ್ನ್ವಾಲಾ ಆದ ರನೌಟ್ ವಿಡಿಯೋ ಸಾಕಷ್ಟು ವೈರಲ್ ಆಗುತ್ತಿದೆ. ಬಾರ್ಬಡೋಸ್ ರಾಯಲ್ಸ್ ತಂಡದ ಕಾರ್ನ್ವಾಲ್ ಅವರಿಗೆ ಸುಲಭವಾಗಿ 1 ರನ್ ಕದಿಯುವ ಅವಕಾಶವಿತ್ತು. ವಿಂಡೀಸ್ ಬ್ಯಾಟರ್ ಅರ್ಧ ಪಿಚ್ಗೆ ಓಡುವಷ್ಟರಲ್ಲಿ ಸುಸ್ತಾಗಿ ಹೋದ್ರು. ಎದುರಾಳಿ ತಂಡ ಸುಲಭವಾಗಿ ರನೌಟ್ ಬಲೆಗೆ ಬೀಳಿಸಿತು.
A Rahkeem Cornwall runout in the CPL. pic.twitter.com/HUfc5Nybhd
— Mufaddal Vohra (@mufaddal_vohra) August 18, 2023
ಯಂಗ್ ಕ್ರಿಕೆಟ್ ಫ್ಯಾನ್ ಮಾತನಾಡಿಸಿದ ಗಿಲ್
ಟೀಮ್ ಇಂಡಿಯಾ ಆರಂಭಿಕ ಆಟಗಾರ ಶುಭ್ಮನ್ ಗಿಲ್ ಕ್ರೇಜ್ ದಿನೇ ದಿನೇ ಹೆಚ್ಚುತ್ತಿದೆ. ಪುಟ್ಟ ಬಾಲಕನೊಬ್ಬ ಗಿಲ್ರನ್ನ ಭೇಟಿಯಾಗಿದ್ದಾರೆ. ಈ ವೇಳೆ ಶುಭ್ಮನ್ ಗಿಲ್ ಯಂಗ್ ಫ್ಯಾನ್ ಹೆಗಲ ಮೇಲೆ ಕೈ ಹಾಕಿ ಮಾತನಾಡಿಸಿದ್ದಾರೆ. ಕೆನ್ನೆ ಸವರಿ ಕೆಲ ನಿಮಿಷಗಳ ಕಾಲ ಮಾತನಾಡಿಸಿದ್ದು, ಶುಭ್ಮನ್ ಗಿಲ್ಗೆ ಗೆಶ್ಚರ್ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ನಿನ್ನೆಯಿಂದ ಆರಂಭಗೊಂಡಿರುವ ಐರ್ಲೆಂಡ್ ಟಿ20 ಸರಣಿಯಿಂದ ಗಿಲ್ಗೆ ವಿಶ್ರಾಂತಿ ನೀಡಲಾಗಿದೆ. ವರ್ಕ್ಲೋಡ್ ಕಮ್ಮಿ ಮಾಡುವ ದೃಷ್ಟಿಯಿಂದ ಬಿಸಿಸಿಐ ಆಯ್ಕೆ ಸಮಿತಿ ಯುವ ಆಟಗಾರರನಿಗೆ ರೆಸ್ಟ್ ನೀಡಿದೆ.
Shubman Gill with a cute little fan. pic.twitter.com/NB4k4DWOWi
— Mufaddal Vohra (@mufaddal_vohra) August 17, 2023
‘ಎಂದೆಂದಿಗೂ ಕೃತಜ್ಞನಾಗಿರುತ್ತೇನೆ’
ವಿರಾಟ್ ಕೊಹ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಪದಾರ್ಪಣೆ ಮಾಡಿ 15 ವರ್ಷ ಪೂರೈಸಿದ್ದಾರೆ. ಕ್ರಿಕೆಟ್ ದಿಗ್ಗಜನಿಗೆ ಅನೇಕರು ಅಭಿನಂದನೆ ಸಲ್ಲಿಸುತ್ತಿದ್ದಾರೆ. ತಮ್ಮ 15 ವರ್ಷಗಳ ಕ್ರಿಕೆಟ್ ಪಯಣವನ್ನ ವಿರಾಟ್ ಕೊಹ್ಲಿ ಕೇವಲ ಎರಡು ಪದಗಳಲ್ಲಿ ಬಣ್ಣಿಸಿದ್ದು, ಎಂದೆಂದಿಗೂ ಕೃತಜ್ಞನಾಗಿರುತ್ತೇನೆ ಎಂದು ಟ್ವಿಟರ್ನಲ್ಲಿ ಬರೆದುಕೊಂಡಿದ್ದಾರೆ. ಪಾಕಿಸ್ತಾನ ವಿರುದ್ಧ 2022ರ ಟಿ20 ವಿಶ್ವಕಪ್ ಪಂದ್ಯದ ಗೆಲುವಿನ ಬಳಿಕದ ಫೋಟೋವನ್ನ ಪೋಸ್ ಮಾಡಿದ್ದಾರೆ. ವಿರಾಟ್ ಕೊಹ್ಲಿ ಆಗಸ್ಟ್ 18, 2008 ರಂದು ಏಕದಿನ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಡೆಬ್ಯು ಮಾಡಿದ್ದರು.
Forever grateful 🙏 pic.twitter.com/cpxoUNS0uG
— Virat Kohli (@imVkohli) August 18, 2023
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್
ಕ್ರಿಕೆಟ್ ಲೋಕದ ಸೂಪರ್ ಸುದ್ದಿಗಳು ಇಲ್ಲಿವೆ
ಭಾರತ ಏಷ್ಯಾಕಪ್ ತಂಡ ಪ್ರಕಟ ಮತ್ತಷ್ಟು ವಿಳಂಬ
ಸಿಲ್ಲಿಯಾಗಿ ರನೌಟಾದ ರಕೀಮ್ ಕಾರ್ನ್ವಾಲ್
ಭಾರತ ಏಷ್ಯಾಕಪ್ ತಂಡ ಪ್ರಕಟ ಮತ್ತಷ್ಟು ವಿಳಂಬ?
ಆಗಸ್ಟ್ 30 ರಿಂದ ಏಷ್ಯಾಕಪ್ ಟೂರ್ನಿ ಆರಂಭಗೊಳ್ಳಲಿದೆ. ಪಂದ್ಯಾವಳಿಗೆ ಶುರುವಿಗೆ ಇನ್ನೂ ಹತ್ತು ದಿನಗಳು ಬಾಕಿ ಇದ್ದು, ಟೀಮ್ ಇಂಡಿಯಾ ಪ್ರಕಟಗೊಂಡಿಲ್ಲ. ಭಾನುವಾರ ಬಿಸಿಸಿಐ ಆಯ್ಕೆ ಸಮಿತಿ ತಂಡವನ್ನು ಅನೌನ್ಸ್ ಮಾಡಲಿದೆ ಎಂದು ವರದಿಯಾಗಿತ್ತು. ಆದರೆ ಆಗಸ್ಟ್ 20 ರಂದು ಭಾರತ-ಐರ್ಲೆಂಡ್ ನಡುವೆ 2ನೇ ಟಿ20 ಪಂದ್ಯ ನಡೆಯಲಿದೆ. ಹೀಗಾಗಿ ಮರುದಿನ ಆಯ್ಕೆ ಸಮಿತಿ ಸಭೆ ಸೇರಲಿದ್ದು ತಂಡ ಪ್ರಕಟಗೊಳ್ಳುವುದು ವಿಳಂಬವಾಗಲಿದೆ. ಸಭೆಯಲ್ಲಿ ಕೆ.ಎಲ್.ರಾಹುಲ್ ಹಾಗೂ ಶ್ರೇಯಸ್ ಅಯ್ಯರ್ ಆಯ್ಕೆ, ಶ್ರೇಯಸ್ ಅಲಭ್ಯವಾದಲ್ಲಿ ಸೂರ್ಯ ಆಯ್ಕೆಗೆ ಒಲವು ಹಾಗೂ ತಿಲಕ್ ವರ್ಮಾರನ್ನು ತಂಡಕ್ಕೆ ಪರಿಗಣಿಸುವ ಬಗ್ಗೆ ಚರ್ಚೆ ನಡೆಯಲಿದೆ ಎಂದು ಹೇಳಲಾಗ್ತಿದೆ.
‘ವೆಂಕಿ’ ಟೆಕ್ನಿಕ್ಗೆ ದಂಗಾದ ಬೌಲರ್..!
ಟೀಮ್ ಇಂಡಿಯಾ ಯುವ ಕ್ರಿಕೆಟಿಗ ವೆಂಕಟೇಶ್ ಅಯ್ಯರ್ ಇನ್ಡೋರ್ನಲ್ಲಿ ಕ್ರಿಕೆಟ್ ಆಡುತ್ತಿರುವ ವಿಡಿಯೋ ಸಖತ್ ಸದ್ದು ಮಾಡ್ತಿದೆ. ಈ ವಿಡಿಯೋದಲ್ಲಿ ನಾನ್ಸ್ಟ್ರೈಕರ್ನಲ್ಲಿ ವೆಂಕಟೇಶ್ ಅಯ್ಯರ್ ಬೌಲರ್ ಬೌಲಿಂಗ್ ಮಾಡುವ ಮುನ್ನವೇ ಕ್ರೀಸ್ ಬಿಟ್ಟು ಓಡಿ ಬರುತ್ತಾರೆ. ಆಗ ಬೌಲರ್ ರನೌಟ್ ಮಾಡಲು ಮುಂದಾಗ್ತಾರೆ. ಇದು ಗೊತ್ತಾಗುತ್ತಿದ್ದಂತೆ ವೆಂಕಿ ಸ್ಟ್ರೈಕ್ ಬ್ಯಾಟ್ಸ್ಮನ್ ಬಳಿ ಓಡಿ ಬಂದು ಏನೋ ಟಿಪ್ಸ್ ನೀಡುತ್ತಾರೆ. ಆಗ ಬೌಲರ್ ವೆಂಕಟೇಶ್ ಅಯ್ಯರ್ ಟೆಕ್ನಿಕ್ ನೋಡಿ ಏನೂ ಮಾತನಾಡದೇ ಮತ್ತೆ ಬೌಲಿಂಗ್ ಮಾಡಲು ಮುಂದಾಗ್ತಾರೆ.
ಸುನೀಲ್ ಶೆಟ್ಟಿ ಭೇಟಿಯಾದ ಶಾಹಿದ್ ಅಫ್ರಿದಿ..!
ಯುಎಸ್ಎನಲ್ಲಿ ಖ್ಯಾತ ಬಾಲಿವುಡ್ ನಟ ಮತ್ತು ಪಾಕಿಸ್ತಾನ ಕ್ರಿಕೆಟ್ ತಂಡದ ಸ್ಟಾರ್ ಆಟಗಾರರ ಸಂಗಮವಾಗಿದೆ. ಬಿಟೌನ್ನ ಹೆಸರಾಂತ ಸುನೀಲ್ ಶೆಟ್ಟಿ ಅವರನ್ನ ಪಾಕ್ ಮಾಜಿ ಕ್ರಿಕೆಟಿಗ ಶಾಹಿದ್ ಅಫ್ರಿದಿ ಭೇಟಿಯಾಗಿದ್ದಾರೆ. ಸುನೀಲ್ ಶೆಟ್ಟಿ ಅವರನ್ನ ಅಫ್ರಿದಿ ಆತ್ಮೀಯತೆಯಿಂದ ಮಾತನಾಡಿಸಿದ್ದಾರೆ. ಇದೇ ವೇಳೆ ಸ್ಟಾರ್ ಆಲ್ರೌಂಡರ್ ಅಫ್ರಿದಿ ತಮ್ಮ ಇಬ್ಬರು ಹೆಣ್ಣು ಮಕ್ಕಳನ್ನ ಸುನೀಲ್ ಶೆಟ್ಟಿ ಅವರಿಗೆ ಪರಿಚಯಿಸಿದ್ದಾರೆ.
ಸಿಲ್ಲಿಯಾಗಿ ರನೌಟಾದ ರಕೀಮ್ ಕಾರ್ನ್ವಾಲ್
ಕ್ರಿಕೆಟ್ನಲ್ಲಿ ಆಟಗಾರರು ಸಿಲ್ಲಿಯಾಗಿ ವಿಕೆಟ್ ಒಪ್ಪಿಸೋದು ಹೊಸತೇನಲ್ಲ. ಆದರೆ ವೆಸ್ಟ್ಇಂಡೀಸ್ ಕ್ರಿಕೆಟ್ ತಂಡದ ದೈತ್ಯ ಆಟಗಾರ ರಕೀಮ್ ಕಾರ್ನ್ವಾಲ್ ಎಷ್ಟು ಸಿಲ್ಲಿಯಾಗಿ ವಿಕೆಟ್ ಒಪ್ಪಿಸಬೇಕೋ ಅಷ್ಟು ಸಿಲ್ಲಿಯಾಗಿ ವಿಕೆಟ್ ಒಪ್ಪಿಸಿದ್ದಾರೆ. ಕೆರಿಬಿಯನ್ ಪ್ರೀಮಿಯರ್ ಲೀಗ್ನಲ್ಲಿ ಕಾರ್ನ್ವಾಲಾ ಆದ ರನೌಟ್ ವಿಡಿಯೋ ಸಾಕಷ್ಟು ವೈರಲ್ ಆಗುತ್ತಿದೆ. ಬಾರ್ಬಡೋಸ್ ರಾಯಲ್ಸ್ ತಂಡದ ಕಾರ್ನ್ವಾಲ್ ಅವರಿಗೆ ಸುಲಭವಾಗಿ 1 ರನ್ ಕದಿಯುವ ಅವಕಾಶವಿತ್ತು. ವಿಂಡೀಸ್ ಬ್ಯಾಟರ್ ಅರ್ಧ ಪಿಚ್ಗೆ ಓಡುವಷ್ಟರಲ್ಲಿ ಸುಸ್ತಾಗಿ ಹೋದ್ರು. ಎದುರಾಳಿ ತಂಡ ಸುಲಭವಾಗಿ ರನೌಟ್ ಬಲೆಗೆ ಬೀಳಿಸಿತು.
A Rahkeem Cornwall runout in the CPL. pic.twitter.com/HUfc5Nybhd
— Mufaddal Vohra (@mufaddal_vohra) August 18, 2023
ಯಂಗ್ ಕ್ರಿಕೆಟ್ ಫ್ಯಾನ್ ಮಾತನಾಡಿಸಿದ ಗಿಲ್
ಟೀಮ್ ಇಂಡಿಯಾ ಆರಂಭಿಕ ಆಟಗಾರ ಶುಭ್ಮನ್ ಗಿಲ್ ಕ್ರೇಜ್ ದಿನೇ ದಿನೇ ಹೆಚ್ಚುತ್ತಿದೆ. ಪುಟ್ಟ ಬಾಲಕನೊಬ್ಬ ಗಿಲ್ರನ್ನ ಭೇಟಿಯಾಗಿದ್ದಾರೆ. ಈ ವೇಳೆ ಶುಭ್ಮನ್ ಗಿಲ್ ಯಂಗ್ ಫ್ಯಾನ್ ಹೆಗಲ ಮೇಲೆ ಕೈ ಹಾಕಿ ಮಾತನಾಡಿಸಿದ್ದಾರೆ. ಕೆನ್ನೆ ಸವರಿ ಕೆಲ ನಿಮಿಷಗಳ ಕಾಲ ಮಾತನಾಡಿಸಿದ್ದು, ಶುಭ್ಮನ್ ಗಿಲ್ಗೆ ಗೆಶ್ಚರ್ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ನಿನ್ನೆಯಿಂದ ಆರಂಭಗೊಂಡಿರುವ ಐರ್ಲೆಂಡ್ ಟಿ20 ಸರಣಿಯಿಂದ ಗಿಲ್ಗೆ ವಿಶ್ರಾಂತಿ ನೀಡಲಾಗಿದೆ. ವರ್ಕ್ಲೋಡ್ ಕಮ್ಮಿ ಮಾಡುವ ದೃಷ್ಟಿಯಿಂದ ಬಿಸಿಸಿಐ ಆಯ್ಕೆ ಸಮಿತಿ ಯುವ ಆಟಗಾರರನಿಗೆ ರೆಸ್ಟ್ ನೀಡಿದೆ.
Shubman Gill with a cute little fan. pic.twitter.com/NB4k4DWOWi
— Mufaddal Vohra (@mufaddal_vohra) August 17, 2023
‘ಎಂದೆಂದಿಗೂ ಕೃತಜ್ಞನಾಗಿರುತ್ತೇನೆ’
ವಿರಾಟ್ ಕೊಹ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಪದಾರ್ಪಣೆ ಮಾಡಿ 15 ವರ್ಷ ಪೂರೈಸಿದ್ದಾರೆ. ಕ್ರಿಕೆಟ್ ದಿಗ್ಗಜನಿಗೆ ಅನೇಕರು ಅಭಿನಂದನೆ ಸಲ್ಲಿಸುತ್ತಿದ್ದಾರೆ. ತಮ್ಮ 15 ವರ್ಷಗಳ ಕ್ರಿಕೆಟ್ ಪಯಣವನ್ನ ವಿರಾಟ್ ಕೊಹ್ಲಿ ಕೇವಲ ಎರಡು ಪದಗಳಲ್ಲಿ ಬಣ್ಣಿಸಿದ್ದು, ಎಂದೆಂದಿಗೂ ಕೃತಜ್ಞನಾಗಿರುತ್ತೇನೆ ಎಂದು ಟ್ವಿಟರ್ನಲ್ಲಿ ಬರೆದುಕೊಂಡಿದ್ದಾರೆ. ಪಾಕಿಸ್ತಾನ ವಿರುದ್ಧ 2022ರ ಟಿ20 ವಿಶ್ವಕಪ್ ಪಂದ್ಯದ ಗೆಲುವಿನ ಬಳಿಕದ ಫೋಟೋವನ್ನ ಪೋಸ್ ಮಾಡಿದ್ದಾರೆ. ವಿರಾಟ್ ಕೊಹ್ಲಿ ಆಗಸ್ಟ್ 18, 2008 ರಂದು ಏಕದಿನ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಡೆಬ್ಯು ಮಾಡಿದ್ದರು.
Forever grateful 🙏 pic.twitter.com/cpxoUNS0uG
— Virat Kohli (@imVkohli) August 18, 2023
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್