/newsfirstlive-kannada/media/post_attachments/wp-content/uploads/2024/08/RANA_SAMANTHA.jpg)
ಟಾಲಿವುಡ್​ನ ನಟಿ ಸಮಂತಾ ಹಾಗೂ ಆಕ್ಟರ್ ನಾಗ ಚೈತನ್ಯ ದಾಂಪತ್ಯ ಜೀವನದಿಂದ ಹೊರ ಬಂದು ಈಗಾಗಲೇ ವರ್ಷಗಳೆ ಕಳೆದಿವೆ. ಇದಾದ ಮೇಲೆ ಮೊನ್ನೆ ಮೊನ್ನೆಯಷ್ಟೇ ನಾಗ ಚೈತನ್ಯ, ನಟಿ ಶೋಭಿತಾ ಧೂಳಿಪಾಲ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಆದರೆ ಇನ್​ಸ್ಟಾದಲ್ಲಿ ದಗ್ಗುಬಾಟಿ ಫ್ಯಾಮಿಲಿ ಈವರೆಗೂ ಸಮಂತಾರನ್ನೇ ಫಾಲೋ ಮಾಡುತ್ತಿದ್ದು ನಾಗಚೈತನ್ಯ ಭಾವಿ ಪತ್ನಿ ಶೋಭಿತಾ ಧೂಳಿಪಾಲರನ್ನ ಕಡೆಗಣಿಸಿದ್ರಾ ಎನ್ನುವ ಅಂಶ ಅಭಿಮಾನಿಗಳನ್ನ ಕಾಡುತ್ತಿದೆ.
ಹೈದರಾಬಾದ್​ನಲ್ಲಿ ನಾಗ ಚೈತನ್ಯ ಹಾಗೂ ಶೋಭಿತಾ ಧೂಳಿಪಾಲ ಸರಳವಾಗಿಯೇ ಎಂಗೇಜ್​ಮೆಂಟ್ ಮಾಡಿಕೊಂಡರು. ಇದಕ್ಕೆ ಕೆಲ ಅತಿಥಿಗಳು, ಸ್ನೇಹಿತರು ಭಾಗಿಯಾಗಿದ್ದರು. ಆದರೆ ಅಕ್ಕಿನೇನಿ ನಾಗರ್ಜುನ್​ ಫ್ಯಾಮಿಲಿಗೆ ಸಂಬಂಧಿಕರಾಗುವ ದಗ್ಗುಬಾಟಿ ಕುಟುಂಬದವರು ಯಾರು ಕೂಡ ಇದರಲ್ಲಿ ಭಾಗಿಯಾಗಿಲ್ಲ. ನಿಶ್ಚಿತಾರ್ಥದಲ್ಲಿ ಹಾಜರಿದ್ದ ದಗ್ಗುಬಾಟಿ ಕುಟುಂಬದ ಏಕೈಕ ಸದಸ್ಯ ಎಂದರೆ ನಾಗ ಚೈತನ್ಯ ಅವರ ತಾಯಿ ಲಕ್ಷ್ಮಿ ಅವರ 2ನೇ ಗಂಡ ಶರತ್ ವಿಜಯರಾಘವನ್ ಮಾತ್ರ. ಈ ಬಗ್ಗೆ ಫೋಟೋಗಳೆ ಸಾಕ್ಷಿ ಹೇಳುತ್ತಿವೆ. ಇದರಿಂದ ನಾಗರ್ಜುನ್​ ಫ್ಯಾಮಿಲಿ ಹಾಗೂ ವೆಂಕಟೇಶ್ ದಗ್ಗುಬಾಟಿ ಕುಟುಂಬದ ನಡುವೆ ಭಿನ್ನಾಭಿಪ್ರಾಯಗಳು ಈಗಲೂ ಮುಂದುವರೆದಿವೆ ಎನ್ನಲಾಗುತ್ತಿದೆ.
ಇದನ್ನೂ ಓದಿ: ಸರ್ಕಾರ​ ಅಲುಗಾಡಿಸಲು ಹೋಗಿ ಕಷ್ಟಕ್ಕೆ ಸಿಲುಕಿತಾ ಮೈತ್ರಿ.. ಗವರ್ನರ್ ತಾರತಮ್ಯ ಮಾಡ್ತಿದ್ದಾರಾ?
ಇದು ಅಲ್ಲದೇ ದಗ್ಗುಬಾಟಿ ಕುಟುಂಬದವರೆಲ್ಲ ಇನ್​ಸ್ಟಾದಲ್ಲಿ ನಾಗ ಚೈತನ್ಯ ಮಾಜಿ ಪತ್ನಿ ಸಮಂತಾರನ್ನೇ ಫಾಲೋ ಮಾಡುತ್ತಿದ್ದಾರೆ. ನಾಗ ಚೈತನ್ಯ ಭಾವಿ ಪತ್ನಿ ಶೋಭಿತಾರನ್ನ ಆ ಕುಟುಂಬದ ಒಬ್ಬರು ಕೂಡ ಫಾಲೋ ಮಾಡುತ್ತಿಲ್ಲ. ಬಾಹುಬಲಿ ಖ್ಯಾತಿಯ ರಾಣಾ ದಗ್ಗುಬಾಟಿ ಕೂಡ ಸಮಂತಾರನ್ನ ಹಿಂಬಾಲಿಸುತ್ತಿದ್ದಾರೆ. ಹೀಗಾಗಿ ಒಂದು ವೇಳೆ ಸಮಂತಾ ಮತ್ತೊಂದು ಮದುವೆಗಾಗಿ ನಿಶ್ವಿತಾರ್ಥ ಮಾಡಿಕೊಂಡರೇ ಯಾರು ಯಾರು ಭಾಗವಹಿಸಬಹುದು ಎಂದು ಫ್ಯಾನ್ಸ್​ ಕೂತುಹಲದ ಪ್ರಶ್ನೆಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಕೇಳುತ್ತಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ