ಹೊರಗಡೆ ಓಡಾಡಲು ಅನಾನುಕೂಲ ಇರುವುದರಿಂದ ಬೇಸರವಾಗಬಹುದು
ಸಂತೋಷದ ವಾತಾವರಣವು ಅನಾರೋಗ್ಯದಿಂದ ಹಾಳಾಗುವ ಸಾಧ್ಯತೆ
ನಿಮ್ಮ ಪ್ರತಿಭೆಗೆ ತಕ್ಕಂತೆ ಗೌರವ ಸಿಗಬೇಕೆಂದರೆ ನೀವು ಚುರುಕಾಗಿರಬೇಕು
ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.
ಶ್ರೀ ಕ್ರೋಧಿನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ಚೈತ್ರ ಮಾಸ, ಶುಕ್ಲಪಕ್ಷ, ತೃತೀಯಾ ತಿಥಿ, ಕೃತಿಕಾ ನಕ್ಷತ್ರ, ರಾಹುಕಾಲ ಭಾನುವಾರ ಸಂಜೆ 4.30 ರಿಂದ 6.00 ರವರೆಗೆ ಇರಲಿದೆ.
ಮೇಷ ರಾಶಿ
- ಆಧ್ಯಾತ್ಮಿಕ ವಿಚಾರದಲ್ಲಿ ಆಸಕ್ತಿಯಿದ್ದರೂ ಪ್ರಾಯೋಗಿಕವಾಗಿ ನಿಮ್ಮ ಅನುಭವಕ್ಕೆ ತಂದುಕೊಳ್ಳಬೇಕು
- ಹಣ ಖರ್ಚು ಮಾಡಿದ್ದರೂ ಕೂಡ ಮತ್ತೆ ಸಂಗ್ರಹವಾಗಲಿದೆ
- ಇಂದು ಮಕ್ಕಳಿಂದ ಬೇಸರವಾಗಬಹುದು
- ಮಕ್ಕಳನ್ನ ಪ್ರೀತಿಯಿಂದ ಗೆಲ್ಲಬೇಕು
- ಮನೋರಂಜನೆಗಾಗಿ ಸಮಯವನ್ನು ಹಾಳು ಮಾಡಿಕೊಳ್ಳುತ್ತೀರಿ
- ಮನೆಯಲ್ಲಿ ಆಶ್ವರ್ಯ ಅನ್ನುವ ರೀತಿಯಲ್ಲಿ ಒಳ್ಳೆಯ ಘಟನೆ ನಡೆಯಲಿದೆ
- ಕುಲದೇವತಾ ಆರಾಧನೆಯನ್ನು ಮಾಡಿ
ವೃಷಭ
- ಯೋಗ ಮತ್ತು ಧ್ಯಾನದ ಮೊರೆ ಹೋದರೆ ನಿಮ್ಮ ಜೀವನಕ್ಕೆ ಉಪಯುಕ್ತವಾಗಲಿದೆ
- ಆರೋಗ್ಯವಂತರಾಗಿ ಸಾಧನೆಯನ್ನು ಮಾಡಿ
- ಹಣದ ವೃದ್ಧಿಯಿದೆ ಆದರೆ ದೇಹಾಲಸ್ಯ
- ಆಲಸ್ಯ ಮತ್ತು ಸೋಮಾರಿತನದಿಂದ ಹಲವಾರು ಅವಕಾಶಗಳನ್ನು ಕಳೆದುಕೊಳ್ಳುತ್ತೀರಿ
- ಏಕಾಂಗಿ ಅಥವಾ ಒಂಟಿತನ ನಿಮ್ಮನ್ನು ಕಾಡುವಂತಹದ್ದು
- ನಿಮ್ಮ ಪ್ರತಿಭೆಗೆ ತಕ್ಕಂತೆ ಗೌರವ ಸಿಗಬೇಕೆಂದರೆ ನೀವು ಚುರುಕಾಗಿರಬೇಕು
- ದಕ್ಷಿಣಾ ಮೂರ್ತಿಯನ್ನು ಪ್ರಾರ್ಥನೆ ಮಾಡಿ
ಮಿಥುನ
- ಸಂತಾನಾಪೇಕ್ಷಿಗಳಿಗೆ ಉತ್ತಮವಾದ ಸಮಯ
- ಹಳೆಯ ನೋವು ಅಥವಾ ಅನಾರೋಗ್ಯ ಮತ್ತೆ ಮರುಕಳಿಸಬಹುದು
- ಆಸ್ಪತ್ರೆಗೆ ಹಣವನ್ನು ಖರ್ಚು ಮಾಡಬೇಕಾಗಬಹುದು
- ಪ್ರೀತಿ ಪಾತ್ರರ ಅನೇಕ ಬೇಡಿಕೆಗಳನ್ನು ಒಪ್ಪಿಕೊಳ್ಳಬಾರದು
- ಸಂತೋಷದ ವಾತಾವರಣವು ಅನಾರೋಗ್ಯದಿಂದ ಹಾಳಾಗಬಹುದು
- ಕುಟುಂಬದ ಜನರ ಸಹಕಾರ ಪರಿಪೂರ್ಣವಾಗಿರುತ್ತದೆ
- ಗೋಪಾಲ ಕೃಷ್ಣನನ್ನು ಪ್ರಾರ್ಥನೆ ಮಾಡಿ
ಕಟಕ
- ಜೀವನದ ಉಜ್ವಲ ಭವಿಷ್ಯ ನಿಮ್ಮ ಕಣ್ಮುಂದೆ ಕಾಣಲಿದೆ
- ಆತ್ಮ ವಿಶ್ವಾಸ ಮತ್ತು ಭರವಸೆಗಳು ನಿಮ್ಮ ಕೆಲಸಕ್ಕೆ ಸ್ಫೂರ್ತಿದಾಯಕ
- ಹೆಚ್ಚು ಬೆಲೆ ಬಾಳುವ ವಸ್ತುವನ್ನು ಖರೀದಿ ಮಾಡುತ್ತೀರಿ
- ತಂದೆಗೆ ಅನಾರೋಗ್ಯ, ಶಸ್ತ್ರಚಿಕಿತ್ಸೆಯಾಗಬಹುದು
- ಅಕ್ಕಪಕ್ಕದವರ ಜೊತೆಯಲ್ಲಿ ಜಗಳವಾಗುವಂತಹ ಸಾಧ್ಯತೆಯಿದೆ
- ನಿಮ್ಮ ಒಳ್ಳೆಯತನ ಬೇರೆಯವರಿಗೆ ದೌರ್ಬಲ್ಯವಾಗಬಹುದು
- ಸೂರ್ಯನಾರಾಯಣನನ್ನು ಪ್ರಾರ್ಥನೆ ಮಾಡಿ
ಸಿಂಹ
- ಮನೆಯಲ್ಲಿ ಶಾಂತವಾಗಿ ವರ್ತಿಸಿದರೆ ಮನೆಗೂ, ನಿಮ್ಮ ಮನಸ್ಸಿಗೂ ಒಳ್ಳೆಯದು
- ನಿಮ್ಮ ಬುದ್ಧಿವಂತಿಕೆ, ಜಾಣ್ಮೆ ನಿಮಗೆ ಕೆಲಸಕ್ಕೆ ಬರಲಿದೆ
- ಹೊರಗಡೆ ಓಡಾಡಲು ಅನಾನುಕೂಲ ಇರುವುದರಿಂದ ಬೇಸರವಾಗಬಹುದು
- ವಿದ್ಯಾರ್ಥಿಗಳಿಗೆ ಓದುವುದಕ್ಕೆ ನಿರಾಸಕ್ತಿ
- ಹೊಸ ಆಲೋಚನೆಗಳು ಅಧೈರ್ಯವನ್ನುಂಟು ಮಾಡಲಿದೆ
- ಶಾಂತಿದುರ್ಗೆಯನ್ನು ಪ್ರಾರ್ಥನೆ ಮಾಡಿ
ಕನ್ಯಾ
- ಗ್ರಹಗತಿಯ ದೃಷ್ಟಿಯಿಂದ ಲಾಭದ ದಿನ
- ಮಧ್ಯಾಹ್ನದ ನಂತರ ಉಸಿರಾಟದ ಸಮಸ್ಯೆ ಕಾಣಬಹುದು
- ಗಂಡ-ಹೆಂಡತಿ ಮಧ್ಯದಲ್ಲಿ ಜಗಳವಾಗಬಹುದು
- ಬಟ್ಟೆ ವ್ಯಾಪಾರಿಗಳಿಗೆ ನಷ್ಟವಾಗಬಹುದು
- ನಿಮ್ಮ ಸ್ವಂತಕ್ಕೆ ಸಮಯವನ್ನು ಕೊಡಿ
- ಮನೆ, ಮಕ್ಕಳು, ಸಂಸಾರ ಚೆನ್ನಾಗಿದ್ದರೆ ಮಾತ್ರ ವ್ಯವಹಾರ
- ಶನಿ ಗ್ರಹವನ್ನು ಪ್ರಾರ್ಥನೆ ಮಾಡಿ
ತುಲಾ
- ಬೇರೆಯವರನನ್ನು ಹೊಗಳುತ್ತಾ ನೀವು ಒಳ್ಳೆಯವರಾಗುತ್ತೀರಿ
- ತಪ್ಪು ಸಂದೇಶದಿಂದ ನಿಮಗೆ ಹಿನ್ನಡೆಯಾಗಲಿದೆ
- ಸಹೋದ್ಯೋಗಿಗಳ, ಸ್ನೇಹಿತರ ಸಹಾಯ ನಿಮಗೆ ಸಿಗದೆ ಇರುವ ದಿನ
- ಶಾರೀರಿಕವಾಗಿ ನೋವು ಕಾಣಲಿದೆ
- ಪತಿ-ಪತ್ನಿಯರ ನಡುವೆ ಜಗಳಕ್ಕೆ ಅವಕಾಶವಿದೆ
- ಚೆನ್ನಾಗಿರುವ ಮನಸ್ಸಿನ ಮೇಲೆ ಪರಿಣಾಮ ಬೀರಲಿದೆ
- ಐಕ್ಯಮತ್ಯ ಮಂತ್ರವನ್ನು ಪಠನೆ ಮಾಡಿ
ವೃಶ್ಚಿಕ
- ಅನಾವಶ್ಯಕವಾಗಿ ಒತ್ತಡಗಳಿಗೆ ಸಿಲುಕಿಕೊಂಡು ಕಷ್ಟ ಅನುಭವಿಸುತ್ತೀರಿ
- ಕಾಲು ನೋವು ಅಥವಾ ಸ್ನಾಯು ನೋವು ನಿಮಗೆ ಕಾಣಬಹುದು
- ಹಣ ಹೂಡಿಕೆ ಆಸೆಯನ್ನು ಹುಟ್ಟಿಸುತ್ತದೆ ಆದರೆ ನಷ್ಟವಾಗಬಹುದು
- ನಿಮ್ಮ ಅಭಿಪ್ರಾಯ ಸಲಹೆಯನ್ನು ಸ್ವಷ್ಟವಾಗಿ ಹೇಳಬೇಕು
- ಮನೆಯವರ ಜೊತೆಯಲ್ಲಿ ಸ್ಪಂದಿಸಲು ಮನಸ್ಸು ಒಪ್ಪುವುದಿಲ್ಲ
- ಸಂಬಂಧಿಕರ, ಸ್ನೇಹಿತರ ಆಗಮನದಿಂದ ಕೆಲಹೊತ್ತು ವಾತಾವರಣ ಬದಲಾಗಬಹುದು
- ಆಂಜನೇಯನ ದೇವಸ್ಥಾನಕ್ಕೆ ಹೋಗಿ ಎಳ್ಳೆಣ್ಣೆಯನ್ನು ದಾನ ಮಾಡಿ
ಧನುಸ್ಸು
- ಬೆಳಗ್ಗೆಯಿಂದ ಕಿರಿಕಿರಿ ಉಂಟಾಗಬಹುದು ತಾಳ್ಮೆಯಿರಲಿ
- ಮನೋರಂಜನೆಗಾಗಿ ಹಣವನ್ನು ಖರ್ಚು ಮಾಡಬೇಕಾಗಬಹುದು
- ಯಾವುದೇ ಕೆಲಸವನ್ನು ಮಾಡಬೇಕಾದರೆ ಯೋಚನೆ ಮಾಡಿ
- ಸಮಯವನ್ನು ಮಾಡಿಕೊಂಡು ಅನುಭವಿಗಳ ಅಥವಾ ಹಿರಿಯರ ಸಂಪರ್ಕವನ್ನು ಬೆಳೆಸಿಕೊಳ್ಳಿ
- ಈ ದಿನ ಉತ್ತಮವರ ಭೇಟಿ ಮಾಡಿ
- ನಿಮ್ಮ ಒತ್ತಡವನ್ನು ಮನೆಯವರ ಮೇಲೆ ಹೇರಬೇಡಿ
- ಪ್ರೇಮಿಗಳು ಮನೆಯವರ ವಿರುದ್ಧವಾಗಿ ತೀರ್ಮಾನವನ್ನು ತೆಗೆದುಕೊಳ್ಳುತ್ತೀರಿ
- ಪೋಷಕರ ಸಹಾಯ ಬಹಳ ಮುಖ್ಯ
- ಹಸುವಿಗೆ ಅನ್ನ ಮತ್ತು ಬೆಲ್ಲವನ್ನು ನೀಡಿ
ಮಕರ
- ತುಂಬಾ ಆತಂಕ, ಚಿಂತೆಯಿರುವ ದಿನ
- ತಾತ್ಕಾಲಿಕವಾದ ಸಾಲ ನಿಮಗೆ ತೊಂದರೆಯನ್ನುಂಟು ಮಾಡಬಹುದು
- ವೈಯಕ್ತಿಕವಾಗಿ ವೃತ್ತಿಯಲ್ಲಿ ಬೆಳವಣಿಗೆಯನ್ನು ಕಾಣುತ್ತೀರಿ
- ಸ್ವಾಭಿಮಾನಕ್ಕೆ ಧಕ್ಕೆ ಬರಬಹುದು ಎಚ್ಚರಿಕೆವಹಿಸಿ
- ನಿಮ್ಮ ಖ್ಯಾತಿಗೆ, ಅಪಕೀರ್ತಿ ಬರಬಹುದು ಗಮನಿಸಿಕೊಳ್ಳಿ
- ಕುಟುಂಬದ ಸಾಮರಸ್ಯ ಚೆನ್ನಾಗಿರುತ್ತದೆ, ಹಾಗೆ ಉಳಿಸಿಕೊಳ್ಳಿ
- ಶೂಲಿನಿ ದುರ್ಗೆಯನ್ನು ಪ್ರಾರ್ಥನೆ ಮಾಡಿ
ಕುಂಭ
- ನಿವೃತ್ತಿ ಜೀವನ ನಡೆಸುತ್ತಿರುವವರಿಗೆ ಆರ್ಥಿಕವಾಗಿ ಸಹಾಯವಾಗಲಿದೆ
- ಹಣದ ಹಿಡಿತ ಕೆಲವು ಸಂದರ್ಭಗಳಲ್ಲಿ ನಿಮಗೆ ಅವಮಾನವನ್ನು ಮಾಡಬಹುದು
- ಲಾಭದಾಯಕವಾದ ದಿನ ಆದರೂ ನಿರಾಸೆಯಾಗಬಹುದು
- ಹಳೆಯ ಸ್ನೇಹಿತರು ಅಥವಾ ಬಂಧುಗಳು ನಿಮ್ಮ ಭೇಟಿ ಮಾಡಬೇಕೆಂದರೆ ಅವಕಾಶವಾಗುವುದಿಲ್ಲ
- ಜೀವನಕ್ಕೆ ತೊಂದರೆಯಿಲ್ಲ ಆದರೆ ಜೀವಕ್ಕೆ ಭದ್ರತೆಯಿಲ್ಲ
- ಇಂದು ನೀವು ಸ್ಥಿರ ಮನಸ್ಕರಾಗಿರಿ
- ಪ್ರತ್ಯಂಗಿರಾ ದೇವಿಯನ್ನು ಪ್ರಾರ್ಥನೆ ಮಾಡಿ
ಮೀನ
- ಶಾರೀರಿಕವಾಗಿ ಮಾನಸಿಕವಾಗಿ ತುಂಬಾ ಅಶಕ್ತರಾಗಿರುತ್ತೀರಿ
- ಸಾಮರ್ಥ್ಯದ ಕೊರತೆಯಿಲ್ಲ ಅಂದ್ರೂ ಮಾನಸಿಕ ದೌರ್ಬಲ್ಯ ನಿಮ್ಮನ್ನು ಕಾಡಬಹುದು
- ಹಣದ ವಿಚಾರಕ್ಕೆ ಸ್ವಲ್ಪ ಗೊಂದಲವಾಗಬಹುದು ಸರಿಯಾದ ನಿರ್ಧಾರ ಮಾಡಿ
- ನಿಮ್ಮನ್ನು ನೀವು ಪರೀಕ್ಷೆ ಮಾಡಿಕೊಳ್ಳಲು ಉತ್ತಮವಾದ ದಿನ
- ಸ್ವಲ್ಪ ಚಟುವಟಿಕೆಯನ್ನು ತೋರಿಸಿ ಆಲಸ್ಯ ಬೇಡ
- ಜೀವನಕ್ಕೆ ಆಧ್ಯಾತ್ಮಿಕವಾದ ವಿಚಾರದ ಕ್ಷೇತ್ರಕ್ಕೆ ಅವಕಾಶವಿದೆ
- ಆಂಜನೇಯ ಸ್ವಾಮಿಗೆ ವೀಳೆದೆಲೆಯನ್ನು ಸಮರ್ಪಿಸಿ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ