ಬೇರೆಯವರಿಗೆ ಸಹಾಯ ಮಾಡಿದ ದಿನಗಳನ್ನ ಜ್ಞಾಪಿಸಿಕೊಳ್ಳಬಹುದು
ಆರೋಗ್ಯದ ಬಗ್ಗೆ ಅಥವಾ ಹಳೆಯ ನೋವಿನ ಬಗ್ಗೆ ಹೆಚ್ಚು ಗಮನಿಸಿ
ಉನ್ನತ ಶಿಕ್ಷಣ ಪಡೆಯಬೇಕಾದವರಿಗೆ ಮಾಹಿತಿಯ ಕೊರತೆ ಇರಬಹುದು
ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.
ಶ್ರೀ ಕ್ರೋಧಿನಾಮ ಸಂವತ್ಸರ, ದಕ್ಷಿಣಾಯನ, ಗ್ರೀಷ್ಮ ಋತು, ಆಷಾಢ ಮಾಸ, ಕೃಷ್ಣ ಪಕ್ಷ, ದ್ವಾದಶಿ ತಿಥಿ, ಮೃಗಶಿರಾ ನಕ್ಷತ್ರ, ರಾಹುಕಾಲ ಗುರುವಾರ ಮಧ್ಯಾಹ್ನ 1.30 ರಿಂದ 3.00 ರವರೆಗೆ ಇರಲಿದೆ.
ಮೇಷ ರಾಶಿ
- ಶಾಂತ ಮನಸ್ಥಿತಿಯಲ್ಲಿರಬೇಕೆಂದು ಯೋಚಿಸಿದರು ಆಗುವುದಿಲ್ಲ
- ವ್ಯಾಪಾರ ವ್ಯವಹಾರದಲ್ಲಿ ಲಾಭವಿದೆ
- ದಾಂಪತ್ಯ ಜೀವನದಲ್ಲಿ ಕೋಪ ಬೇಡ
- ಮನೆಯವರ ಸಲಹೆ ಉಪಯುಕ್ತ ಎಂಬುದನ್ನು ಅರಿಯಬೇಕಾಗುತ್ತದೆ
- ವ್ಯವಹಾರದಲ್ಲಿ ಪಾರದರ್ಶಕತೆಯಿರಲಿ
- ನಿಮ್ಮ ಕಿರಿಯರು ಭಯದಿಂದ ನಿಮ್ಮನ್ನು ಗೌರವಿಸಬಹುದು
- ಇಂದು ಜ್ಞಾನದ ಮೊರೆ ಹೋಗಿ
- ಗುರು ದಕ್ಷಿಣಾಮೂರ್ತಿಯನ್ನು ಪ್ರಾರ್ಥನೆ ಮಾಡಿ
ವೃಷಭ
- ಆರೋಗ್ಯದ ಬಗ್ಗೆ ಗಮನಹರಿಸಿ
- ಹಳೆಯ ಕಾಲು ನೋವು ಇಂದು ತೊಂದರೆಯಾಗಬಹುದು
- ಹೊಸ ವಾಹನ ಖರೀದಿ ಮಾಡಬಹುದು
- ಸಣ್ಣ ಪುಟ್ಟ ವಿಚಾರಗಳಿಗೆ ಮನೆಯಲ್ಲಿ ಕಲಹ ಉಂಟಾಗಬಹುದು
- ಆತುರದ ಕೆಲಸದಿಂದ ವಸ್ತು ನಷ್ಟವಾಗಲಿದೆ
- ನಿಮ್ಮ ಕೋಪ ಮಕ್ಕಳ ಮೇಲೆ ಬೇಡ ತೊಂದರೆಯಾಗಬಹುದು
- ಇಂದ್ರಾಕ್ಷಿ ಸ್ತೋತ್ರ ಪಠಿಸಿ
ಮಿಥುನ
- ಬೇರೆಯವರ ಬೇಡದ ವಿಚಾರದಿಂದ ನಿಮಗೆ ಸಂತೋಷ
- ಮಕ್ಕಳೊಂದಿಗೆ ಕುಟುಂಬದ ಸದಸ್ಯರೊಂದಿಗೆ ಅನಗತ್ಯ ವಿಚಾರ ಚರ್ಚೆಯಾಗಬಹುದು
- ಮನೆಯಲ್ಲಿಯ ವಾತಾವರಣ ಹಾಸ್ಯಾಸ್ಪದವಾಗಬಹುದು
- ಉನ್ನತ ಶಿಕ್ಷಣ ವಿದ್ಯಾರ್ಥಿಗಳಿಗೆ ಶುಭವಿದೆ
- ಆಧ್ಯಾತ್ಮಿಕ ಅಥವಾ ಧಾರ್ಮಿಕ ವಿಚಾರಗಳು ಬಂದಾಗ ತಾತ್ಸಾರವಾಗಿ ನೋಡಬಹುದು
- ನಿಮ್ಮ ಆಲೋಚನೆ ಬೇರೆಯಾಗಿರುವುದರಿಂದ ಬೇಸರವಾಗಬಹುದು
- ಪುಣ್ಯಕ್ಷೇತ್ರಗಳ ದರ್ಶನ ಮಾಡಿ
ಕಟಕ
- ಭಾವನಾತ್ಮಕ ವಿಷಯ ಅಥವಾ ವಾತಾವರಣ ಬೇಡ
- ಸಹೋದ್ಯೋಗಿಗಳನ್ನು ಪೂರ್ಣವಾಗಿ ಅವಲಂಬಿಸಬೇಡಿ
- ಬೇರೆ ದಿನದಕ್ಕಿಂತ ನಿಮ್ಮ ವೃತ್ತಿಯಲ್ಲಿ ಪ್ರಗತಿ ಹೊಂದುತ್ತೀರಿ
- ನಿಮ್ಮ ಆಸಕ್ತಿ ಹೆಚ್ಚಾದಷ್ಟು ಕೆಲಸದಿಂದ ಆದಾಯವಿದೆ
- ಮನೆಯವರ ಪ್ರೀತಿ ಸ್ವಾಭಿಮಾನಕ್ಕೆ ಪ್ರಯತ್ನಿಸಿ ವಿಫಲರಾಗುತ್ತೀರಿ
- ಮಾರುತಿಯನ್ನು ಪ್ರಾರ್ಥನೆ ಮಾಡಿ
ಸಿಂಹ
- ಧಾರ್ಮಿಕ ಕ್ಷೇತ್ರಗಳಿಗೆ ಹೋಗಲು ಮನಸ್ಸಿರುವುದಿಲ್ಲ ಅನಿವಾರ್ಯವಾಗಿರುತ್ತದೆ
- ಪ್ರಯಾಣದಲ್ಲಿ ವ್ಯತ್ಯಯ ಆಗಬಹುದು
- ಪರೀಕ್ಷಾ ದೃಷ್ಟಿಯಿಂದ ಅಧ್ಯಯನ ಮಾಡಿದವರಿಗೆ ಹಿನ್ನಡೆಯಾಗಬಹುದು
- ವಿದ್ಯಾರ್ಥಿಗಳ ಪರಿಶ್ರಮಕ್ಕೆ ತಕ್ಕ ಬೆಲೆ ಎಂಬುದನ್ನು ಅರಿಯಬೇಕು
- ಬೇರೆ ಮಾರ್ಗದಲ್ಲಿ ಆಲೋಚಿಸುವವರಿಗೆ ತುಂಬಾ ಹಿನ್ನಡೆ ಕಾಣಬಹುದು
- ಪಾರಿಜಾತ ಸರಸ್ವತಿಯನ್ನು ಆರಾಧನೆ ಮಾಡಿ
ಕನ್ಯಾ
- ಅಹಂಕಾರದ ಭಾವನೆ ತ್ಯಜಿಸಿ
- ಕುಟುಂಬ ಕಲಹ ಮಿತಿಮೀರಬಹುದು
- ಯಾವುದೇ ವಿಚಾರದಲ್ಲಿ ಅನುಮಾನ ಬೇಡ ಪರಾಮರ್ಶಿಸಿ
- ನಿಮ್ಮ ತಪ್ಪು ಗ್ರಹಿಕೆಯಿಂದ ಜನರ ಕೋಪಕ್ಕೆ ಗುರಿಯಾಗುತ್ತೀರಿ
- ನಿಮ್ಮ ಮಾತು ಕೆಟ್ಟ ಪರಿಣಾಮ ಬೀರಬಹುದು
- ಅಗತ್ಯವಾಗಿ ಜಾತಕ ಪರೀಕ್ಷಿಸಿಕೊಳ್ಳುವುದು ಉತ್ತಮ
ತುಲಾ
- ಮನೆಯ ಹೊಸ ವಸ್ತು ತಂದು ನಷ್ಟವಾಗಬಹುದು
- ಬೇರೆ ಉಪಯುಕ್ತ ಯೋಜನೆಗಳ ಬಗ್ಗೆ ಚಿಂತೆ
- ಇಂದು ಮಾನಸಿಕ ಸಮಾಧಾನವಿಲ್ಲದಿರುವುದು
- ಏನು ಮಾಡಿದರು, ಎಷ್ಟು ಗಳಿಸಿದರು ತೃಪ್ತಿಯಿರದ ದಿನ
- ಮನೆಗೆ ಬಂಧುಗಳ ಆಗಮನ ಆಗಬಹುದು
- ಪ್ರೇಮ ವಿವಾಹದ ವಿಚಾರದಿಂದ ಮನೆಯಲ್ಲಿ ಅಲ್ಲೋಲ ಕಲ್ಲೋಲ ಜಗಳವಾಗಬಹುದು
- ಶ್ರೀ ಸೂಕ್ತದ 16 ಮಂತ್ರಗಳನ್ನು ಶ್ರವಣ ಅಥವಾ ಪಠಣೆ ಮಾಡಿ
ವೃಶ್ಚಿಕ
- ಆನೇಕ ಕೆಲಸಗಳಲ್ಲಿ ತುಂಬಾ ಗಮನ ಕೊಟ್ಟು ವ್ಯವಹರಿಸಬೇಕು
- ಎದುರಾಳಿಗಳ ಅಥವಾ ಶತ್ರುಗಳ ಬಲ ತಿಳಿದು ವ್ಯವಹರಿಸಿ
- ಬೇರೆಯವರ ತಪ್ಪನ್ನು ಹೇಳಬೇಡಿ
- ನಾಟಕೀಯ ಬುದ್ಧಿಯಿಂದ ನಿಮಗೆ ಹಿನ್ನಡೆಯಾಗಬಹುದು
- ವೈಯಕ್ತಿಕ ವಿಚಾರದಲ್ಲಿ ಕೆಲವು ಸುಧಾರಣೆಯ ಅಗತ್ಯ ಕಾಣಬಹುದು
- ಮನಸ್ಸಿನ ಗೊಂದಲ ಗೊಂದಲಗಳು ದೂರವಾದರೆ ನಿಂತ ಕೆಲಸ ಚಾಲನೆ ಪಡೆಯುತ್ತವೆ
- ನವಗ್ರಹರನ್ನು ವಿಶೇಷವಾಗಿ ಚಂದ್ರಗ್ರಹನನ್ನು ಪ್ರಾರ್ಥಿಸಿ
ಧನುಸ್ಸು
- ಅನಗತ್ಯ ಸಲಹೆ ಮಾತಿನಿಂದ ಅವಮಾನಿತರಾಗಬಹುದು
- ಸಂಬಂಧಿಕರ ಮನೆಯ ಮದುವೆ ವಿಚಾರಕ್ಕೆ ಮಾತಾಡಬಾರದು
- ಉನ್ನತ ಶಿಕ್ಷಣ ಪಡೆಯಬೇಕಾದವರಿಗೆ ಮಾಹಿತಿಯ ಕೊರತೆ ಇರಬಹುದು
- ಕುಟುಂಬದ ಜವಾಬ್ದಾರಿಯನ್ನು ನಿಷ್ಠೆಯಿಂದ ಪೂರೈಸಬೇಕು
- ಋಣಾತ್ಮಕ ವಿಷಯಗಳಿಂದ ದುಃಖ ಬರಬಹುದು
- ನರಸಿಂಹ ಸ್ವಾಮಿಯನ್ನು ಪ್ರಾರ್ಥನೆ ಮಾಡಿ
ಮಕರ
- ನಿಮ್ಮ ತಪ್ಪುಗಳು ನಿಮಗೆ ಶತ್ರುಗಳಾಗಬಹುದು
- ಸ್ವಂತಿಕೆಯಿಂದ ಯೋಚಿಸಿ ನಿರ್ಧಾರ ಮಾಡಿ ಯಶಸ್ವಿದೆ
- ಬೇರೆಯವರನ್ನು ಅನುಸರಿಸಿ ಅನುಕರಿಸಬೇಡಿ
- ನಿಮ್ಮ ಪ್ರಾಮಾಣಿಕತೆ ದಕ್ಷತೆ ಗಟ್ಟಿಯಾಗಬೇಕು
- ವೃತ್ತಿ ಜೀವನದಲ್ಲಿ ತುಂಬಾ ಉತ್ಸುಕರಾಗಿರುವ ನಿಮಗೆ ಹಿನ್ನಡೆಯ ಭಯವಿರಬಹುದು
- ಕೆಲವು ವಿಚಾರಗಳಲ್ಲಿ ಹಿಂಜರಿಕೆಯ ಭಾವನೆ ಕಾಡಬಹುದು
- ತಾಪಸ ಮನ್ಯುವನ್ನು ಉಪಾಸನೆ ಮಾಡಿ
ಕುಂಭ
- ಹೊಸ ಆಲೋಚನೆಗಳಲ್ಲಿ ಯಶಸ್ವಿದೆ
- ವ್ಯಾವಹಾರಿಕ ಫಲಿತಾಂಶ ಉತ್ತಮವಾಗಿರುತ್ತದೆ
- ದೂರದ ಪ್ರಯಾಣಕ್ಕೆ ತೊಂದರೆಯಾಗಬಹುದು
- ಆರೋಗ್ಯದ ಬಗ್ಗೆ ಅಥವಾ ಹಳೆಯ ನೋವಿನ ಬಗ್ಗೆ ಹೆಚ್ಚು ಗಮನಿಸಿ
- ನಿಮ್ಮ ಬಂಧುಗಳಲ್ಲಿ ಆತ್ಮೀಯತೆ ಬೆಳೆಸಿಕೊಳ್ಳಬೇಕು
- ಆತ್ಮವಿಶ್ವಾಸ ಶಕ್ತಿಯಿಂದ ನಿಮ್ಮ ಇರುವಿಕೆ ಎಂದೇ ಹೇಳಬೇಕು
- ಆಂಜನೇಯ ಸ್ವಾಮಿಯನ್ನು ಪೂಜಿಸಿ
ಮೀನ
- ಬೇರೆಯವರ ವಿಚಾರಕ್ಕೆ ಹೋಗಬಾರದು
- ನಿಮ್ಮ ದಿನಚರಿಯಲ್ಲಿ ಬದಲಾವಣೆ ಬೇಸರ ತರಬಹುದು
- ಬೇರೆಯವರಿಗೆ ಸಹಾಯ ಮಾಡಿದ ದಿನಗಳನ್ನು ಜ್ಞಾಪಿಸಿಕೊಳ್ಳಬಹುದು
- ಯಾವುದೇ ಒತ್ತಡಗಳಿಲ್ಲದ ಮನಸ್ಸು ನಿಮಗೆ ಶಾಂತತೆ ನೀಡಲಿ
- ಮಹಿಳೆಯರಿಗೆ ಆರೋಗ್ಯದ ಸಮಸ್ಯೆ ಕಾಡಬಹುದು ಎಚ್ಚರಿಕೆಯಿರಲಿ
- ವೈವಾಹಿಕ ವಿಚಾರದಲ್ಲಿ ಗೊಂದಲ ಇರುವವರಿಗೆ ಸಮಸ್ಯೆ ತಿಳಿಯಾಗುವ ದಿನ
- ಇಂದು ದಂಪತಿಗಳಲ್ಲಿ ಜಗಳ ಬೇಡ
- ಸ್ವಯಂವರ ಪಾರ್ವತಿಯನ್ನು ಜಪ ಮಾಡಿ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ