ಆತುರದಿಂದ ಮಾಡಿದ ನಿರ್ಧಾರ ನಿಮಗೆ ತೊಂದರೆ ಮಾಡಬಹುದು
ಕೆಲಸದ ಹಾಗೂ ವಿದ್ಯಾಭ್ಯಾಸದ ನಿಮಿತ್ತ ಸಂದರ್ಶನ ಶುಭವಾಗಲಿದೆ
ಆಸ್ತಿ ಖರೀದಿ ಮಾಡುವ ವಿಚಾರ ಅಥವಾ ಸಹಾಯದ ಹಣ ಸ್ವಲ್ಪವಿರಲಿದೆ
ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.
ಶ್ರೀ ಕ್ರೋಧಿನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ವೈಶಾಖ ಮಾಸ, ಕೃಷ್ಣ ಪಕ್ಷ, ನವಮಿ ತಿಥಿ, ಉತ್ತರಾಬಾದ್ರ ನಕ್ಷತ್ರ, ರಾಹುಕಾಲ ಬುಧವಾರ ಮಧ್ಯಾಹ್ನ 12.00 ರಿಂದ 1.30 ರವರೆಗೆ ಇರಲಿದೆ.
ಮೇಷ ರಾಶಿ
- ನಿಮ್ಮ ಕಾರ್ಯಕ್ಷೇತ್ರದಲ್ಲಿ, ಉದ್ಯೋಗದಲ್ಲಿ, ವ್ಯವಹಾರದಲ್ಲಿ ಗುರಿ ಸಾಧನೆ ಮಾಡುವುದರಿಂದ ಮನಸ್ಸಿಗೆ ಸಂತೋಷವಾಗಲಿದೆ
- ವ್ಯಾಪಾರ ವ್ಯವಹಾರದಲ್ಲಿ ಸ್ವಲ್ಪ ಮಟ್ಟಿನ ಲಾಭ ಕಾಣುತ್ತೀರಿ
- ಕೆಲಸ ಕಾರ್ಯಗಳಲ್ಲಿ ಉತ್ಸಾಹವಿರುತ್ತದೆ
- ಹಿರಿಯ ಸಹೋದರರಲ್ಲಿ, ಬಂಧುಗಳಲ್ಲಿ ವೈಮನಸ್ಯ ಇರಲಿದೆ
- ಜನರಿಗೆ ನಿಮ್ಮ ಬಗ್ಗೆ ಉತ್ತಮವಾದ ಅಭಿಪ್ರಾಯವಿರುತ್ತದೆ
- ನಿಮ್ಮ ಖುಷಿಗೋಸ್ಕರಕ್ಕಾಗಿ, ನಿಮ್ಮ ಸಮಾಧಾನಕ್ಕಾಗಿ ಹಣವನ್ನು ಖರ್ಚು ಮಾಡುತ್ತೀರಿ
- ಕುಲದೇವತಾ ಆರಾಧನೆ ಮಾಡಿ
ವೃಷಭ
- ಕೆಲಸದ ನಿಮಿತ್ತ ಪ್ರಯಾಣ ಮಾಡುತ್ತೀರಿ
- ಸಹೋದ್ಯೋಗಿಗಳ ಜೊತೆಗೆ ಸೌಹಾರ್ದಯುತವಾಗಿ ಒಳ್ಳೆಯ ಮನಸ್ಸಿನಿಂದ ವರ್ತಿಸಿ
- ನಿಮ್ಮ ತತ್ವ ಸಿದ್ದಾಂತದಿಂದ ಪ್ರಭಾವಿತರಾಗುತ್ತೀರಿ
- ವ್ಯವಹಾರದಲ್ಲಿ ಬದಲಾವಣೆ ಕಾಣುತ್ತೀರಿ
- ಆಸ್ತಿ ವಿವಾದಕ್ಕೆ ಸಮಸ್ಯೆಯಿದ್ದರೆ ಬಗೆಹರಿಯಲಿದೆ
- ಕೃತ್ತಿಕಾ ನಕ್ಷತ್ರದವರಿಗೆ ಸಮಸ್ಯೆಯಾಗಬಹುದು
- ವಿಶೇಷವಾಗಿ ಅಗ್ನಿಯನ್ನು ಪ್ರಾರ್ಥನೆ ಮಾಡಿ
ಮಿಥುನ
- ನಿಮ್ಮ ವ್ಯವಹಾರದಲ್ಲಿ ವ್ಯಾಪಾರದಲ್ಲಿ ಪರಿಶ್ರಮ ಪಡಬೇಕಾದ ದಿನ
- ಪ್ರತಿಸ್ಪರ್ಧಿಗಳ ಜೊತೆಯಲ್ಲಿ ನಿಮ್ಮ ಪ್ರಯತ್ನ ಬಹಳ ಕಡಿಮೆಯಾಗಿರುತ್ತದೆ
- ಖರ್ಚು ಹೆಚ್ಚಾಗಿ ವಿನಾಕಾರಣ ಹಣ ಕಳೆದುಕೊಳ್ಳುತ್ತೀರಿ
- ಸ್ವಲ್ಪ ಮಟ್ಟಿಗೆ ದುರಾಸೆಯನ್ನು ದೂರ ಮಾಡಿಕೊಳ್ಳಿ
- ಸಂಬಂಧಗಳು ಚೆನ್ನಾಗಿದ್ದರೂ ಬೆಂಬಲ ಸಿಗುವುದು ಕಷ್ಟ
- ಪ್ರೇಮಿಗಳಿಗೆ ಉತ್ತಮವಾದ ದಿನ
- ನಿಮ್ಮ ಕುಟುಂಬದಲ್ಲಿ ತೊಂದರೆಯಾದರೆ ಸಮಸ್ಯೆಯನ್ನು ನಿವಾರಣೆ ಮಾಡಿ
- ದುರ್ಗಾ ಪರಮೇಶ್ವರಿಯನ್ನು ಪ್ರಾರ್ಥನೆ ಮಾಡಿ
ಕಟಕ
- ನಿಮಗೆ ಇರುವ ಸ್ಥಾನಮಾನ, ಮರ್ಯಾದೆ, ಗೌರವ ದುರುಪಯೋಗ ವಾಗುವ ಸಾಧ್ಯತೆ
- ಪ್ರಮುಖವಾದ ತೀರ್ಮಾನಗಳನ್ನು ಮಾಡಬೇಕೆಂದರೆ ಹಿಂಜರಿಕೆಯಾಗಬಹುದು
- ಬೆಲೆ ಬಾಳುವ ಪದಾರ್ಥಗಳನ್ನು ಕಳೆದುಕೊಳ್ಳುತ್ತೀರಿ
- ಮಾತೆಯರು ಸಮಾಜದಲ್ಲಿ, ವ್ಯಾವಹಾರಿಕವಾಗಿ,ಉದ್ಯೋಗದ ಸ್ಥಳದಲ್ಲಿ ಸಭ್ಯವಾಗಿ ವರ್ತಿಸಬೇಕಾಗುತ್ತದೆ
- ದೀರ್ಘಕಾಲದ ಅನಾರೋಗ್ಯದ ಸೂಚನೆ ಇದೆ
- ದೇವಿಯನ್ನು ಪ್ರಾರ್ಥನೆ ಮಾಡಿ
ಸಿಂಹ
- ಭೂ ಸಂಬಂಧವಾದ ವ್ಯವಹಾರವಿದ್ದರೆ ಅನುಕೂಲವಿದೆ
- ಮನಸ್ಸಿಗೆ, ವ್ಯಾವಹಾರಿಕವಾದ ವಿಚಾರಕ್ಕೆ ಖುಷಿ ಸಿಗಲಿದೆ
- ಸ್ನೇಹಿತರ ಸಂಬಂಧಗಳು ಹೆಚ್ಚಾಗಲಿದೆ
- ನಿಮ್ಮ ಕಾರ್ಯಕ್ಷೇತ್ರದಲ್ಲಿ ನಿಮ್ಮ ಬಗ್ಗೆ ಒಳ್ಳೆಯ ಅಭಿಪ್ರಯಾವಿರುತ್ತದೆ
- ಅತಿಯಾದ ಉತ್ಸಾಹ, ಆಲಸ್ಯ ಒಳ್ಳೆಯದಲ್ಲ
- ಸಾಯಂಕಾಲದ ಹೊತ್ತಿಗೆ ನಿಮಗೆ ಕುಟುಂಬದಲ್ಲಿ, ಜನರ ಮಧ್ಯೆ ಕಿರಿಕಿರಿ ಉಂಟಾಗುತ್ತದೆ
- ಬೇಸರವಾಗಲಿದೆ ಆದರೆ ಮೌನಕ್ಕೆ ಶರಣು ಹೋದರೆ ಸಮಾಧಾನಕರ ಫಲಿತಾಂಶಕ್ಕೆ ಅವಕಾಶವಾಗಲಿದೆ
- ಗಣಪತಿಯನ್ನು ಪ್ರಾರ್ಥನೆ ಮಾಡಿ
ಕನ್ಯಾ
- ಹಣವನ್ನು ಸಂಪಾದನೆ ಮಾಡಬೇಕೆಂಬ ಭಾವನೆ ಹೆಚ್ಚಾಗಲಿದೆ
- ನಿಮ್ಮ ವಿರೋಧಿಗಳು ನಿಮ್ಮ ಶತ್ರುಗಳು ತೇಜೊವಧೆ ಮಾಡಲು ಖಂಡಿಸುತ್ತಿರುತ್ತಾರೆ
- ಗಮನವಿಲ್ಲದೆ ಕೆಲಸಗಳಿಂದ ತಪ್ಪುಗಳನ್ನು ಮಾಡುತ್ತೀರಿ
- ಆಕಾಶ ಮಾರ್ಗದ ಪ್ರಯಾಣಕ್ಕೆ ಅಡ್ಡಿಯಾಗಲಿದೆ
- ಸಹೋದದರಿಗೆ ತೊಂದರೆಯಾಗುವ ಸೂಚನೆ ಇದೆ
- ಮಹಾವಿಷ್ಣುವನ್ನು ಪ್ರಾರ್ಥನೆ ಮಾಡಿ
ತುಲಾ
- ಖಾಸಗಿ ಕ್ಷೇತ್ರದಲ್ಲಿ ನೌಕರರಿಗೆ ಆತಂಕ ವಿರಲಿದೆ
- ಹೊಟ್ಟೆಗೆ ಸಂಬಂಧಪಟ್ಟ ಸಮಸ್ಯೆಗಳನ್ನು ಎದುರಿಸುತ್ತೀರಿ
- ಕೆಟ್ಟ ಅಭ್ಯಾಸಗಳನ್ನು ದೂರ ಮಾಡಿ
- ರಹಸ್ಯ ಶತ್ರಗಳ ಬಗ್ಗೆ ಎಚ್ಚರಿಕೆವಹಿಸಿ
- ಕಂಟಕದ ಸೂಚನೆ ಸೂಕ್ಷ್ಮವಾಗಿ ಕಾಣಲಿದೆ
- ವಾಹನ ಚಾಲನೆ, ದೂರದ ಪ್ರಯಾಣ ಬೇಡ, ಮೋಜು-ಮಸ್ತಿ ಸ್ನೇಹಿತರ ಜೊತೆ ಹೋಗುವುದು ಬೇಡ
- ಮೃತ್ಯುಂಜಯನನ್ನು ಪ್ರಾರ್ಥನೆ ಮಾಡಿ
ವೃಶ್ಚಿಕ
- ಮನಸ್ಸಿಲ್ಲದ ಮನಸ್ಸಿನಿಂದ ನಿಮ್ಮ ಕಾರ್ಯವನ್ನು ಮಾಡುತ್ತೀರಿ
- ನಿಮ್ಮ ಕೆಲಸದ ಗುಣಮಟ್ಟ ಕುಸಿದು ಹೋಗಬಹುದು
- ಆಡಳಿತ ವರ್ಗ ಪ್ರಬಲವಾದ ವ್ಯಕ್ತಿಗಳ ಮಾತು ನಿಮ್ಮ ಮೇಲೆ ವಿಶೇಷವಾದ ಪರಿಣಾಮ ಬೀರಲಿದೆ
- ಜೊತೆಯಲ್ಲಿ ಕೆಲಸ ಮಾಡುವಂತವರ ಸಹಕಾರ ಸಿಗಲಿದೆ ಮನಸ್ಸಿಗೆ ಆದ ಗಾಯ ಅಳಿಸಲಾಗುವುದಿಲ್ಲ
- ಆಹಾರದ ಬಗ್ಗೆ ಗಮನವಿರಲಿ
- ಶೀತ ಸಂಬಂಧವಾದ ಸಮಸ್ಯೆ ಎದುರಿಸುತ್ತೀರಿ
- ಕೋಪ ಅನರ್ಥಕ್ಕೆ ಕಾರಣವಾಗಬಹುದು
- ಸ್ನೇಹಿತನ ಜೊತೆ ಜಗಳವಾಗಲಬಹುದು
- ಶರಬೇಶ್ವರನನ್ನು ಪ್ರಾರ್ಥನೆ ಮಾಡಿ
ಧನುಸ್ಸು
- ಸರ್ಕಾರಿ ನೌಕರರಿಗೆ ಒಳ್ಳೆಯ ಸುದ್ದಿ ಬರುವ ಸೂಚನೆ ಇದೆ
- ನ್ಯಾಯಾಲಯಕ್ಕೆ ಸಂಬಂಧಪಟ್ಟಂತಹ ವಿಷಯದಲ್ಲಿ ಜಯ ಸಿಗಲಿದೆ
- ಸಕಾಲಕ್ಕೆ ಅನುಗುಣವಾಗಿ ಮಾಡಬೇಕಾದದ್ದು ಮುಖ್ಯವಾದದ್ದು
- ಪರಿಶ್ರಮಕ್ಕೆ ತಕ್ಕ ಪ್ರತಿಫಲ ಇದೆ ಆದರೆ ವಿವೇಕವು ಜೊತೆಗೆ ಕೆಲಸ ಮಾಡಬೇಕಾಗುತ್ತದೆ
- ಹಳದಿ ಬಣ್ಣದ ವಸ್ತ್ರವನ್ನು ಧಾರಣೆ ಮಾಡಿ ಪ್ರಯಾಣ ಮಾಡಿ
- ಮಕ್ಕಳಿಗೆ ಮಧ್ಯಾಹ್ನದ ನಂತರ ಕಿರಿಕಿರಿಯಾಗಬಹುದು
- ವಿಶೇಷವಾಗಿ ದೇವಿಯ ಪ್ರಾರ್ಥನೆ ಮಾಡಿ
ಮಕರ
- ಬಂಧುಗಳ ಜೊತೆ ಜಗಳ ಮಾಡಿಕೊಳ್ಳುತ್ತೀರಿ
- ರಾಜಕಾರಣಿಗಳಿಗೆ ಹಿನ್ನಡೆಯಾಗಬಹುದು
- ಮಾನಸಿಕ ಉದ್ವೇಗ ನಿಮ್ಮೆಲ್ಲ ಕೆಲಸಗಳನ್ನು ಹಾಳು ಮಾಡುತ್ತದೆ
- ಮಹಿಳೆಯರಿಗೆ ಸಿಹಿ ಸುದ್ದಿ ಸಿಗಲಿದೆ
- ಮರಣದ ವಾರ್ತೆ ಮನಸ್ಸಿನ ಮೇಲೆ ಪರಿಣಾಮ ಬೀರಲಿದೆ
- ಮಹಾವಿಷ್ಣುವನ್ನು ಪ್ರಾರ್ಥನೆ ಮಾಡಿ
ಕುಂಭ
- ರಾಜಕಾರಣಿಗಳು ವಿಶೇಷವಾಗಿ ಸಂತೋಷವನ್ನು ಹೊಂದುವ ದಿನ
- ಶಿಕ್ಷಕರು ಮಾತ್ರ ಅಪರಾಧವನ್ನು ಮಾಡಿ ತಪ್ಪಿತಸ್ಥರು ಅನ್ನುವ ಹಣೆ ಪಟ್ಟಿಗೆ ಒಳಗಾಗಬೇಕಾಗುತ್ತದೆ
- ಮನಸ್ಸಿಗೆ ಕಿರಿಕಿರಿಯಾಗಬಹುದು ಆದರೆ ತಾಳ್ಮೆ ಮುಖ್ಯ
- ರಸ್ತೆ ಬದಿಯಲ್ಲಿ ವ್ಯಾಪಾರ ಮಾಡುವವರಿಗೆ ಲಾಭ ಸಿಗಲಿದೆ
- ಮನೆಯ ಹೊರಗೆ ಮತ್ತು ಮನೆ ಒಳಗೆ ನೆಮ್ಮದಿ ಇಲ್ಲದೆ ಇರುವ ದಿನ
- ಮೌನಕ್ಕೆ ಶರಣು ಹೋಗಿ
- ಕಾರ್ತಿಕೇಯನನ್ನು ಪ್ರಾರ್ಥನೆ ಮಾಡಿ
ಮೀನ
- ಇಂದು ಉತ್ತಮವಾದ ದಿನ ಸ್ವಯಂಕೃತ ಅಪರಾಧದಿಂದ ಸಮಯವನ್ನು ಹಾಳು ಮಾಡಿಕೊಳ್ಳುತ್ತೀರಿ
- ಕಾರ್ಯಕ್ಷೇತ್ರದಲ್ಲಿ ಅತಿಯಾದ ಒತ್ತಡ ನಿಮ್ಮ ತಾಳ್ಮೆಯನ್ನು ಕಳೆದುಕೊಳ್ಳುವ ಹಾಗಿರುತ್ತದೆ
- ಮಾತಿನಿಂದ ನಿಮ್ಮ ಬಗ್ಗೆ ನಂಬಿಕೆ ಹಾಳಾಗುತ್ತದೆ
- ಮಕ್ಕಳನ್ನು ಬಯಸುವವರಿಗೆ ಸಂತಾನಾಪೇಕ್ಷಿಗಳಿಗೆ ಈ ದಿನ ದೈವಾನುಗ್ರಹ ವಿರಲಿದೆ
- ಮಗುವಿನ ಭವಿಷ್ಯವನ್ನು ಗಮನಿಸಿ
- ಗುರು ದತ್ತಾತ್ರೇಯರನ್ನು ಪ್ರಾರ್ಥನೆ ಮಾಡಿ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ