ಕಾರ್ಯ ನಿಮಿತ್ತ ಹೆಚ್ಚು ಓಡಾಟ, ಆಯಾಸವಾದರೂ ಮನಸ್ಸಿಗೆ ತೃಪ್ತಿ
ಬುದ್ಧಿ, ಪರಿಶ್ರಮಕ್ಕೆ ತಕ್ಕ ಪ್ರತಿಫಲ ಸಿಗದೇ ಆಂತರಿಕ ನೋವು ಕಾಡುತ್ತದೆ
ಮಂದಗತಿ ನಡೆಯುವ ಕೆಲಸಗಳನ್ನ ಕೈಬಿಡುವ ನಿರ್ಧಾರ ಮಾಡುತ್ತೀರಿ
ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.
ಶ್ರೀ ಶೋಭಕೃತು ನಾಮಸಂವತ್ಸರ, ಉತ್ತರಾಯಣ, ಶಿಶಿರ ಋತು, ಫಾಲ್ಗುಣ ಮಾಸ, ಶುಕ್ಲ ಪಕ್ಷ, ದ್ವಾದಶಿ ತಿಥಿ, ಆಶ್ಲೇಷ ನಕ್ಷತ್ರ, ರಾಹುಕಾಲ ಗುರುವಾರ ಮಧ್ಯಾಹ್ನ 1.30 ರಿಂದ 3.00 ರವರೆಗೆ ಇರಲಿದೆ.
ಮೇಷ ರಾಶಿ
- ಪ್ರಭಾವಿ ವ್ಯಕ್ತಿಗಳ ಜೊತೆಯಲ್ಲಿ ಹೆಚ್ಚು ಸಮಯ ಕಳೆಯಬಹುದಾದ ದಿನ
- ಸಾಮಾಜಿಕ ಗೌರವವನ್ನು ಕಾಪಾಡಿಕೊಳ್ಳಬೇಕಾಗುತ್ತದೆ
- ಉದ್ಯೋಗ ಸ್ಥಳದಲ್ಲಿ ಶತ್ರುಗಳ ಕಾಟ ಇರುತ್ತದೆ
- ಬಟ್ಟೆ ವ್ಯಾಪಾರಿಗಳಿಗೆ ಆದಾಯದ ಮೂಲ ಹೆಚ್ಚಾಗಬಹುದು
- ಮನೋವ್ಯಾಧಿಗೆ ಮದ್ದಿಲ್ಲ ಅನ್ನೋ ಹಾಗೆ ಮಾನಸಿಕವಾಗಿ ಕುಂಠಿತವಾಗುವ ಶರೀರ ಯಾವುದೇ ರೀತಿ ಬದಲಾವಣೆ ಹೊಂದುವುದಿಲ್ಲ
- ಮಾತಿನಿಂದ ಕಲಹ ಉಂಟಾಗಬಹುದು
- ದೇವಿಯನ್ನು ಆರಾಧಿಸಿ
ವೃಷಭ
- ಕಲಾವಿದರಿಗೆ ಅಲ್ಪ ಗೌರವ ಇದರಿಂದ ಅಸಮಾಧಾನವಿರುತ್ತದೆ
- ಕುಟುಂಬದ ಉನ್ನತಿ ಬಗ್ಗೆ ಚಿಂತನೆ ನಡೆಸುತ್ತೀರಿ
- ಮೇಲ್ದರ್ಜೆಗೆ ಏರಬೇಕೆಂದರೆ ಪ್ರಯತ್ನ ಪಡಬೇಕು
- ಬಂಧುಗಳಿಂದ ಸಲಹೆ ಸಹಕಾರ ದೊರೆಯುತ್ತದೆ
- ಸಾಧಕರಿಗೆ ತಮ್ಮ ತಮ್ಮ ಕ್ಷೇತ್ರದಲ್ಲಿ ಮನ್ನಣೆ ಸಿಗಲಿದೆ
- ಸೋದರ ಮಾವನ ಆರೋಗ್ಯದಲ್ಲಿ ವ್ಯತ್ಯಾಸವಾಗಬಹುದು ಗಮನಿಸಿ
- ಧನ್ವಂತರಿ ಮಹಾ ವಿಷ್ಣುವನ್ನು ಪ್ರಾರ್ಥನೆ ಮಾಡಿ
ಮಿಥುನ
- ವಾದ-ವಿವಾದಗಳನ್ನು ನೀವೆ ಸೃಷ್ಠಿ ಮಾಡಿಕೊಂಡು ಜಯಶೀಲರಾಗುವಂತೆ ಮಾಡಿಕೊಳ್ಳುತ್ತೀರಿ
- ಕುಟುಂಬದ ವಾತಾವರಣವು ಸಮಾಧಾನವಾಗಿರುವುದಿಲ್ಲ
- ಅನಾರೋಗ್ಯ ಪೀಡಿತರಿಗೆ ಭಯ ಹೆಚ್ಚಾಗಲಿದೆ ಜಾಗ್ರತೆಯಿರಲಿ
- ಕೆಲಸ ಮಾತು ಯಾವುದರಲ್ಲೂ ಸ್ವಾತಂತ್ರ್ಯವಿರದೆ ಹಿಂಸೆ ಪಡಬೇಕಾಗತ್ತೆ
- ಸರ್ಕಾರಿ ಕೆಲಸದವರಿಗೆ ಅನುಕೂಲಕರ ದಿನ
- ಈಶ್ವರನನ್ನು ಪ್ರಾರ್ಥಿಸಿ
ಕಟಕ
- ಗೃಹ ನಿರ್ಮಾಣದ ಆಲೋಚನೆ ಇರುವವರಿಗೆ ಉತ್ತಮವಾದ ದಿನ
- ಸಂಗೀತಾ ಅಭ್ಯಾಸಿಗಳಿಗೆ ಸಂಗೀತ ತಜ್ಞರಿಗೆ ಯಶಸ್ಸು ಸಿಗುವ ದಿನ
- ಪುರಸ್ಕಾರ, ಮರ್ಯಾದೆಗಳು ನಿಮ್ಮ ಮಡಿಲಿಗೆ ಬಂದು ಬೀಳುವ ದಿನ
- ತಾತ್ಕಾಲಿಕ ಹುದ್ದೆಗಳಲ್ಲಿರುವವರಿಗೆ ತಕ್ಷಣ ಬದಲಾವಣೆ ಸೂಚನೆ ಬರಬಹುದು
- ಯಾವುದೇ ಗೌರವಯುತ ಕೆಲಸಗಳ ಮೇಲೆ ತಾತ್ಸಾರ ಭಾವ ತೋರಿಸಬಾರದು
- ಹಿರಿಯ ಅಧಿಕಾರಿಗಳಿಂದ ತಿರಸ್ಕಾರ ಆಗಬಹುದು ಅದಕ್ಕೆ ಬೇಸರ ಮಾಡಿಕೊಳ್ಳಬೇಡಿ
- ಇಷ್ಟ ದೇವತೆಯನ್ನು ಪ್ರಾರ್ಥಿಸಿ
ಸಿಂಹ
- ನಿರಂತರ ಪ್ರಯತ್ನ ಅತಿ ಉತ್ಸಾಹದಿಂದ ಜೀವನದಲ್ಲಿ ಹೊಸ ತಿರುವು ಕಾಣಬಹುದು
- ಬಂಧುಗಳ ಭಿನ್ನಾಭಿಪ್ರಾಯ ದೂರವಾಗಬಹುದು
- ಲೇವಾದೇವಿ ಬಡ್ಡಿ ವ್ಯವಹಾರ ಮಾಡುವವರಿಗೆ ನಷ್ಟವಾಗುವ ಸಾಧ್ಯತೆ
- ತಮ್ಮ ವ್ಯವಹಾರ ಮುಂದುವರಿಸಲು ಹಾಗೆ ರೂಢಿಸಿಕೊಳ್ಳಲು ಹೆಚ್ಚು ಹಣ ಖರ್ಚು ಮಾಡಬೇಕಾಗುತ್ತದೆ
- ಧಾರ್ಮಿಕ ಮಾರ್ಗದರ್ಶನದಿಂದ ಸ್ವಲ್ಪ ನೆಮ್ಮದಿ ಸಿಗಬಹುದು
- ಮಹಾಗಣಪತಿಯನ್ನು ಆರಾಧನೆ ಮಾಡಿ
ಕನ್ಯಾ
- ಕೈಗಾರಿಕಾ ಉದ್ಯಮಿಗಳಿಗೆ ಸಂತಸದ ದಿನ
- ಮಹಿಳಾ ಪ್ರತಿಭೆಗಳಿಗೆ ವಿಶೇಷವಾದ ಯಶಸ್ಸು ಸಮಾಧಾನ ತರುತ್ತದೆ
- ನಿತ್ಯ,ಜೀವನ, ವ್ಯವಹಾರಗಳನ್ನು ಮರೆತು ಸಾಧನೆಗೆ ಮುಂದಾಗಬಹುದು
- ಸ್ವಂತ ನಿರ್ಧಾರಗಳು ಮಾತ್ರ ಕೆಲಸಕ್ಕೆ ಬರುವಂತಹದ್ದು
- ನಿಮ್ಮ ಜೀವನದ ಮಹತ್ತರ ಕನಸಿನ ಸಹಕಾರಕ್ಕೆ ತುಂಬಾ ಪರಿಶ್ರಮಬೇಕು
- ಬೇರೆಯವರ ಬೆಂಬಲ ನಿಮಗೆ ಸ್ಫೂರ್ತಿಯಾಗತ್ತೆ, ಗುರಿಯತ್ತ ಪಯಣ ಬೆಳೆಸಬೇಕಾಗುತ್ತದೆ
- ಇಷ್ಟ ದೇವತೆಯನ್ನು ಪ್ರಾರ್ಥಿಸಿ
ತುಲಾ
- ಪದಾರ್ಥಗಳನ್ನು ಖರೀದಿಸಿ ಬೇರೆಯವರಿಗೆ ಮಾರಾಟ ಮಾಡುವವರಿಗೆ ಲಾಭ ಇರುವುದಿಲ್ಲ
- ಉದ್ಯೋಗಕಾಂಕ್ಷಿಗಳಿಗೆ ಶುಭವಿದ್ದರೂ ಅನೇಕ ವಿಧವಾದ ತೊಡಕುಗಳು ಎದುರಾಗಬಹುದು
- ಹೆಣ್ಣು ಮಕ್ಕಳಿಗೆ ವಾಹನದಿಂದ ತೊಂದರೆಯಾಗುವ ಸಾಧ್ಯತೆ ಎಚ್ಚರಿಕೆವಹಿಸಿ
- ವಿದ್ಯಾರ್ಥಿಗಳಿಗೆ ಆಕಸ್ಮಿಕ ಅವಕಾಶಗಳು, ಲಾಭಗಳು ಸಿಗಬಹುದು
- ಹಲವು ದಿನದ ಸಮಸ್ಯೆಗಳಿಗೆ ಇಂದು ಪರಿಹಾರ ಮಾರ್ಗ ಸಿಗಬಹುದು
- ಉತ್ತಮ ಅವಕಾಶಗಳು ಸದ್ವಿನಿಯೋಗವಾಗಲಿ
- ಪಾಂಡುರಂಗನನ್ನು ಪ್ರಾರ್ಥಿಸಿ
ವೃಶ್ಚಿಕ
- ಹಿಂದೆ ಆದಂತಹ ನಷ್ಟವನ್ನು ಸರಿದೂಗಿಸಲು ಆಗದೆ ಮನಸ್ಸಿಗೆ ಬೇಸರವಾಗುತ್ತದೆ
- ಹಣದ ವ್ಯವಹಾರದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡವರಿಗೆ ಹಿನ್ನಡೆಯಾಗುತ್ತದೆ
- ಮಿತ್ರರಿಂದ ನಿರೀಕ್ಷಿತ ಸಹಾಯ ದೊರಕದೆ ಅವರ ಬಗ್ಗೆ ತುಂಬಾ ಬೇಸರ ಉಂಟಾಗಲಿದೆ
- ಹಿಂದೆ ಮಾಡಿದ ತಪ್ಪಿನ ಫಲವನ್ನು ಈ ದಿನ ಅನುಭವಿಸಬೇಕಾಗಬಹುದು
- ಯಂತ್ರೋಪಕರಣ, ವಾಹನಗಳನ್ನು ಮಾರಾಟ ಮಾಡುವವರಿಗೆ ಶುಭವಿದೆ
- ಕೆಲಸದ ಒತ್ತಡ ಹೆಚ್ಚಾಗಬಹುದು ಮತ್ತು ಪೋಷಕರ ಬಗ್ಗೆ ಗಮನಹರಿಸಿ
- ಆಂಜನೇಯನನ್ನು ಪ್ರಾರ್ಥನೆ ಮಾಡಿ
ಧನುಸ್ಸು
- ಕಾರ್ಯಕ್ರಮದಲ್ಲಿ ಭಾಗಿಯಾಗಿರುತ್ತೀರಿ ಆದರೆ ಗೌರವ ಸಿಗಲಿಲ್ಲವೆಂದು ಮನಸ್ಸಿಗೆ ಬೇಸರವಾಗುತ್ತದೆ
- ಮಹಿಳೆಯರು ಹಟ ಸಾಧಿಸುವ ಸಂದರ್ಭ, ಸಣ್ಣ ಜಗಳ ಆಗುವ ಸಾಧ್ಯತೆ ಇದೆ
- ಕುಟುಂಬ ನಿರ್ವಹಣೆಯ ಬಗ್ಗೆ ಯಶಸ್ಸಿನ ಮಾತು ಕೇಳಿ ಬರುತ್ತದೆ
- ಕಲಹದಿಂದಲೇ ಮನಸ್ಸಿಗೆ ಸಾಧಿಸಿದ ಸಮಾಧಾನ ಸಿಗಬಹುದು
- ಎಲ್ಲರೊಂದಿಗೆ ಹೆಚ್ಚಾಗಿ ಬೆರೆತರೆ ನಿಮ್ಮ ಕಾರ್ಯಗಳಿಗೆ ಶುಭವಿರುತ್ತದೆ
- ಸರಸ್ವತಿಯನ್ನು ಆರಾಧಿಸಿ
ಮಕರ
- ಈ ರಾಶಿಯ ವಕೀಲರಿಗೆ ಲಾಭದ ದಿನ
- ನಿಮ್ಮ ಕಿರಿಯರಿಗೆ ಆತ್ಮಸ್ಥೈರ್ಯ ಹಾಗೆ ಈ ಕಾರ್ಯದ ಬಗ್ಗೆ ಇರುವ ಗೌರವ ಹೆಚ್ಚಾಗಲಿದೆ
- ಸಾಮಾಜಿಕ ಚರ್ಚೆಗಳಲ್ಲಿ ಭಾಗಿಗಳಾಗುತ್ತೀರಿ
- ಮಂದಗತಿಯಲ್ಲಿ ನಡೆಯುವ ಕೆಲಸಗಳನ್ನು ಕೈಬಿಡುವ ನಿರ್ಧಾರ ಮಾಡುತ್ತೀರಿ
- ವಿದ್ಯುತ್ ಉಪಕರಣ ಮಾರಾಟ ಮಾಡುವವರಿಗೆ ಶುಭಸೂಚನೆ ಇದೆ
- ಅಷ್ಟಲಕ್ಷ್ಮಿಯನ್ನು ಪ್ರಾರ್ಥಿಸಿ
ಕುಂಭ
- ಸಾಂಸಾರಿಕವಾಗಿರುವ ಜಂಜಾಟಗಳನ್ನು ಧೈರ್ಯವಾಗಿ ಎದುರಿಸಿ ಮುನ್ನುಗುತ್ತೀರಿ ಅದರಲ್ಲಿ ಸಫಲತೆ ಕಾಣುತ್ತೀರಿ
- ನೌಕರಿಯ ವಿಚಾರದಲ್ಲಿ ಬೇರೆಯವರ ಕೈಕೆಳಗೆ ಕೆಲಸ ಮಾಡುವುದು ನಿಮ್ಮ ಮನಸ್ಸಿಗೆ ಬೇಸರ ಉಂಟು ಮಾಡುತ್ತದೆ
- ಬುದ್ಧಿಗೆ, ಪರಿಶ್ರಮಕ್ಕೆ ತಕ್ಕ ಪ್ರತಿಫಲ ಸಿಗದೆ ಆಂತರಿಕ ನೋವು ಕಾಡುತ್ತದೆ
- ಮನೋರಂಜನಾ ಕಲಾವಿದರಿಗೆ ಹೆಚ್ಚು ಬೇಡಿಕೆ ಹೆಚ್ಚಾಗಬಹುದು
- ಧಾರ್ಮಿಕ ಮುಖಂಡರಿಗೆ ಹಿನ್ನಡೆ ಸಂಭವ ಹಾಗೆ ಅವಮಾನ ಹೆಚ್ಚಾಗುವ ಸಾಧ್ಯತೆ
- ಕಾರ್ಯ ನಿಮಿತ್ತ ಹೆಚ್ಚು ಓಡಾಟ, ಆಯಾಸವಾದರೂ ಮನಸ್ಸಿಗೆ ತೃಪ್ತಿ
- ಆಂಜನೇಯ ಸ್ವಾಮಿಯನ್ನು ಪ್ರಾರ್ಥಿಸಿ
ಮೀನ
- ಸಮಾಜದ ಹಿತಕ್ಕಾಗಿ ವೈಜ್ಞಾನಿಕವಾದ ಸಂಶೋಧನೆ ಮಾಡುವವರಿಗೆ ಶುಭಫಲವಿದೆ
- ಅಪೇಕ್ಷಿತ ಸ್ಥಳಕ್ಕೆ ವರ್ಗಾವಣೆಯ ಅವಕಾಶವಿದೆ
- ನೌಕರಿಯಲ್ಲಿ ಕಾಡುತ್ತಿದ್ದ ಅಭದ್ರತೆ ನಿಮ್ಮಿಂದ ದೂರವಾಗಬಹುದು
- ಪ್ರಾಮಾಣಿಕ ಪ್ರಯತ್ನಕ್ಕೆ ಸದಾಕಾಲ ಜಯವಿದೆ
- ನಿಮಗೆ ಸಲ್ಲಬೇಕಾದದ್ದು ನಿಮ್ಮನ್ನೇ ಹುಡುಕಿಕೊಂಡು ಬರುತ್ತದೆ
- ದುರ್ಗಾದೇವಿಯನ್ನು ಪ್ರಾರ್ಥನೆ ಮಾಡಿ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ