ಹಣದ ಕೊರತೆಯಿಂದ ನಿಮ್ಮ ಕೆಲವು ಕೆಲಸ ನಿಲ್ಲಬಹುದು
ಸಾಹಿತ್ಯ-ತತ್ವಶಾಸ್ತ್ರಗಳ ಕಡೆ ಮನಸ್ಸು ಹರಿಸಬಹುದು
ಅನಾರೋಗ್ಯ ಪೀಡಿತರಿಗೆ ಆರೋಗ್ಯ ಸುಧಾರಿಸಲಿದೆ
ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.
ಶ್ರೀ ಶೋಭಕೃತು ನಾಮಸಂವತ್ಸರ, ಉತ್ತರಾಯಣ, ಶಿಶಿರ ಋತು, ಫಾಲ್ಗುಣ ಮಾಸ, ಶುಕ್ಲ ಪಕ್ಷ, ದ್ವಾದಶಿ ತಿಥಿ, ಆಶ್ಲೇಷ ನಕ್ಷತ್ರ, ರಾಹುಕಾಲ ಶುಕ್ರವಾರ ಬೆಳಗ್ಗೆ 10.30 ರಿಂದ 12.00 ರವರೆಗೆ ಇರಲಿದೆ.
ಮೇಷ ರಾಶಿ
- ಈ ದಿನ ಕೆಲಸದ ಒತ್ತಡದಿಂದ ಪ್ರಾರಂಭವಾಗುತ್ತದೆ
- ಸಾಯಂಕಾಲದವರೆಗೂ ತುಂಬಾ ಕಷ್ಟಪಟ್ಟು ಸಂಜೆ ಸ್ವಲ್ಪ ಆರಾಮವಾಗಬಹುದು
- ಕುಟುಂಬದ ಕೆಲಸಕ್ಕಾಗಿ ಹೆಚ್ಚು ಓಡಾಡಬೇಕಾಗುತ್ತದೆ
- ಅನಾರೋಗ್ಯ ಪೀಡಿತರಿಗೆ ಆರೋಗ್ಯ ಸುಧಾರಿಸಲಿದೆ
- ಕೆಲಸ ಮಾಡುವ ಸ್ಥಳದಲ್ಲಿ ಹೆಚ್ಚು ಸವಾಲಿನ ಕೆಲಸಗಳು ಎದುರಾಗಬಹುದು
- ಆತ್ಮವಿಶ್ವಾಸ ಹೆಚ್ಚುತ್ತದೆ ತಾಳ್ಮೆ ಇರಬೇಕಾಗುತ್ತದೆ
- ಸುಬ್ರಹ್ಮಣ್ಯ ಸ್ವಾಮಿಯನ್ನು ಪ್ರಾರ್ಥನೆ ಮಾಡಿ
ವೃಷಭ
- ಇಂದು ಇರುವುದರಲ್ಲಿ ಉತ್ತಮ ದಿನ
- ವ್ಯಾಪಾರ ವ್ಯವಹಾರಕ್ಕೆ ಸಂಬಂಧಿಸಿದ ವಿಚಾರಗಳು ದಿನವಿಡೀ ಬರುತ್ತಿರುತ್ತವೆ
- ಹಿಂದೆ ವ್ಯವಹರಿಸಿ ನಷ್ಟ ಮಾಡಿಕೊಂಡಿದ್ದು ಈ ದಿನ ಸರಿದೂಗಬಹುದು
- ಸಾಹಿತ್ಯ – ತತ್ವಶಾಸ್ತ್ರಗಳ ಕಡೆ ಮನಸ್ಸು ಹರಿಸಬಹುದು
- ಆತ್ಮಿಯರೊಂದಿಗೆ ಉತ್ತಮ ಸಮಯ ಕಳೆಯಲು ಅವಕಾಶಗಳಿವೆ
- ಸರ್ಕಾರಿ ನೌಕರರಿಗೆ ಒತ್ತಡ ಕಡಿಮೆ ಆಲಸ್ಯ ಬೇಡ
- ರೋಗಿಗಳಿಗೆ ಹಣ್ಣುಗಳನ್ನು ನೀಡಿ
ಮಿಥುನ
- ಹೊಸ ಹೊಸ ವಿಚಾರ ತಿಳಿಯಲು ಉತ್ಸುಕರಾಗಿರುತ್ತೀರಿ -ಪ್ರಯತ್ನಿಸಿ
- ನೀವು ಉಪಯೋಗಿಸುವ ವಾಹನದಲ್ಲಿ ಸಮಸ್ಯೆ ಕಾಣಬಹುದು
- ಹಣದ ಕೊರತೆಯಿಂದ ನಿಮ್ಮ ಕೆಲವು ಕೆಲಸ ನಿಲ್ಲಬಹುದು
- ಕಾನೂನು ವಿಷಯಗಳಲ್ಲಿ ಗೊಂದಲವಿರುತ್ತದೆ
- ಅನುಭವಿಗಳ ಭೇಟಿ ಸಲಹೆ ಸಿಕ್ಕರು ಪ್ರಯೋಜನವಿಲ್ಲ
- ಸರಿಯಾದ ವ್ಯವಸ್ಥೆ ಮಾಡಿಕೊಂಡು ಕಾರ್ಯಕ್ಕೆ ಮುಂದುವರಿಯಬೇಕು
- ದುರ್ಗಾ ಆರಾಧನೆ ಮಾಡಿ
ಕಟಕ
- ಹೊಸ ಕೆಲಸವನ್ನು ಪ್ರಾರಂಭಿಸಲು ಉತ್ತಮ ದಿನ
- ಸಾಮಾಜಿಕ ಕಾರ್ಯಗಳಲ್ಲಿ ಭಾಗಿಯಾಗಲು ಅವಕಾಶವಿದೆ
- ಆರೋಗ್ಯ ಸುಧಾರಣೆ ಇದೆ
- ನಿಮ್ಮ ಬಗ್ಗೆ ಹೇಳಿಕೊಳ್ಳುವುದನ್ನು ನಿಲ್ಲಿಸಬೇಕು , ಆತ್ಮಪ್ರಶಂಸೆ ಬೇಡ
- ಸ್ವಲ್ಪ ದೂರ ಪ್ರಯಾಣದ ಯೋಗವಿದೆ
- ನಿಮ್ಮ ಗುರುಗಳ ಆಶೀರ್ವಾದ ಪಡೆಯಿರಿ
ಸಿಂಹ
- ಬೇರೆಯವರಿಗೆ ಸಹಾಯ ಮಾಡಲು ಮುಂದಾಗುತ್ತೀರಿ
- ಇಂದು ಸಾಲ, ನಷ್ಟ ಸಂಭವಿಸಬಹುದಾದ ದಿನ
- ನಿಮ್ಮ ಸ್ವಭಾವ ವರ್ತನೆಯಿಂದ ಸಂಬಂಧಿಕರಿಗೆ ಕೋಪ
- ಬೇರೆಯವರೊಂದಿಗೆ ಜಗಳ ಮಾಡುವ ಬದಲು ವಿಷಯ ಅರ್ಥ ಮಾಡಿಕೊಳ್ಳಬೇಕು
- ಕೆಲವರು ನಿಮಗೆ ನಂಬಿಕೆ ದ್ರೋಹ ಮಾಡಬಹುದು ಹುಷಾರಾಗಿರಿ
- ಗಾಯತ್ರಿ ದೇವಿಯನ್ನು ಉಪಾಸನೆ ಮಾಡಿ
ಕನ್ಯಾ
- ವಿದ್ಯಾರ್ಥಿಗಳ ಪರಿಶ್ರಮ ಫಲದಾಯಕವಾಗಿರುತ್ತದೆ
- ಶುಭ ಸಮಾರಂಭಗಳಲ್ಲಿ ಭಾಗವಹಿಸುವ ಅವಕಾಶವಿದೆ
- ಸಣ್ಣ ಪುಟ್ಟ ಕನಸುಗಳು ನನಸಾಗುವ ದಿನ
- ಸಮಯ ಉದ್ಯೋಗದಲ್ಲಿ ಪ್ರಗತಿ, ಏನೋ ಸಾಧಿಸಿದ ಅನುಭವ
- ಇಂದು ಮನೆಯಲ್ಲಿ ವಾತಾವರಣ ಚೆನ್ನಾಗಿರುವುದಿಲ್ಲ
- ತಾಯಿ, ಅಕ್ಕ, ಹೆಂತಿ ಯಾರಿಗಾದರೂ ಅನಾರೋಗ್ಯದಿಂದ ಬೇಸರವಾಗಬಹುದು
- ಧನವಂತರಿ ದೇವತೆಯನ್ನು ಪ್ರಾರ್ಥನೆ ಮಾಡಿ
ತುಲಾ
- ಮನೆಯಲ್ಲಿ ಉತ್ಸಾಹದ ವಾತಾವರಣ ಇರುತ್ತದೆ
- ಉದ್ಯಮಿಗಳು ದೊಡ್ಡ ಹೂಡಿಕೆ ಮಾಡಬಾರದು
- ವ್ಯವಹಾರಕ್ಕೆ ಸಂಬಂಧಿಸಿದಂತೆ ಮಾತುಕತೆ ಸಭೆ ನಡೆಯಬಹುದು
- ಶಿಸ್ತು ಬದ್ಧವಾದ ನಡವಳಿಕೆ ಇರಬೇಕಾದ ದಿನ
- ಇಂದು ಸ್ನೇಹಿತರ ಬೆಂಬಲ ಸಿಗಬಹುದು
- ವೆಚ್ಚಗಳನ್ನು ನಿಯಂತ್ರಿಸಲು ಕೆಲಸ ಹೆಚ್ಚಾಗುವ ಸಾಧ್ಯತೆಗಳಿವೆ
- ಮಹಾವಿಷ್ಣುವಿನ ಪ್ರಾರ್ಥನೆ ಮಾಡಿ
ವೃಶ್ಚಿಕ
- ಮಾರ್ಕೆಟಿಂಗ್ ಸಂಬಂಧಿತ ಕೆಲಸಗಳಲ್ಲಿ ಉತ್ತಮ ದಿನ
- ಮಕ್ಕಳೊಂದಿಗೆ ಕಾಲ ಕಳೆಯುತ್ತೀರಿ
- ಕುಟುಂಬ ಸಾಮರಸ್ಯ ಚೆನ್ನಾಗಿರುತ್ತೆ
- ವಿದ್ಯಾರ್ಥಿಗಳಿಗೆ ಓದಿನ ವಿಚಾರದಲ್ಲಿ ಬೇಸರ – ಬಲವಂತ
- ಜನಪ್ರಿಯತೆ ಸಿಗುವ ಬಹುದಾದ ದಿನ
- ಕಲೆಗಳನ್ನು ನೋಡಿ ಆನಂದಿಸುತ್ತೀರಿ, ಕಾರ್ಯಕ್ಷೇತ್ರದಲ್ಲಿ ಯಶಸ್ಸು
- ನವಗ್ರಹರ ಪ್ರಾರ್ಥನೆ ಮಾಡಿ
ಧನುಸ್ಸು
- ಅಧೀನ ಉದ್ಯೋಗಸ್ಥರು ನಿಮ್ಮೊಂದಿಗೆ ಸಂತೋಷದಿಂದ ಇರುತ್ತಾರೆ
- ನಿಮ್ಮ ಧೈರ್ಯ ಆತ್ಮವಿಶ್ವಾಸ ಹೆಚ್ಚಾಗುತ್ತದೆ
- ಸಮಸ್ಯೆಗಳು ದೂರವಾಗುವ ಸಮಯ
- ನಿಮ್ಮ ಆರ್ಥಿಕ ಸ್ಥಿತಿ ಬಲವಾಗುತ್ತದೆ
- ನಿಮ್ಮ ಸಮಸ್ಯೆಗಳು ದೂರವಾಗುವ ಸಮಯ ಹತ್ತಿರ ಬರುತ್ತಿದೆ
- ವಿದೇಶದಿಂದ ಉದ್ಯೋಗವಕಾಶಗಳು ಬರುವ ಸಾಧ್ಯತೆಗಳಿವೆ
- ಮನೆಯಲ್ಲಿ ಚಿಕ್ಕ ಮಕ್ಕಳಿಗೆ ಸಮಸ್ಯೆ- ಜಾಗ್ರತೆ – ಸೂಕ್ತ ಸಲಹೆ ಪಡೆಯಿರಿ
- ಗಣಪತಿಯನ್ನು ಪ್ರಾರ್ಥನೆ ಮಾಡಿ
ಮಕರ
- ಆಧ್ಯಾತ್ಮಿಕ ವಿಚಾರದಲ್ಲಿ ಆಸಕ್ತಿ ಕಾಣಬಹುದು
- ಕುಟುಂಬ ಸದಸ್ಯರ ಬಂಧುಗಳ ಸಮ್ಮುಖದಲ್ಲಿ ಹಲವು ವಿಷಯ ಹೇಳಬಹುದು
- ಕಾರ್ಯಕ್ಷೇತ್ರದಲ್ಲಿ ಉನ್ನತ ಸ್ಥಾನ ಸಿಗಬಹುದು
- ವೈವಾಹಿಕ ಜೀವನದಲ್ಲಿ ಹೊಂದಾಣಿಕೆ ಕೊರತೆ
- ಮಾತು ಮಾಧುರ್ಯ ಎಲ್ಲರ ಆಕರ್ಷಣೆ
- ಆಸಕ್ತಿ – ಉತ್ಸಾಹಗಳು ಹೆಚ್ಚಾಗಿ ಕಾಣುವ ದಿನ, ಆದರೆ ಮನೆಯಲ್ಲಿ ಬೇಸರವಾಗಬಹುದು
- ಇಂದು ಧ್ಯಾನಕ್ಕೆ ಶರಣು ಹೋಗಿ
ಕುಂಭ
- ಅದೃಷ್ಟದ ಕೊರತೆಯಿಂದ ಕೆಲವು ದುಷ್ಪರಿಣಾಮಗಳು ಕಾಣಬಹುದು
- ದೈಹಿಕವಾಗಿ ತುಂಬಾ ಪ್ರಯಾಸ ಪಡಬೇಕಾಗುತ್ತದೆ
- ವಿನಾಕಾರಣ ಜನರೊಂದಿಗೆ ನಡೆಯಬಹುದು
- ತಾಳ್ಮೆ ಮುಖ್ಯ, ಕೆಲಸಗಳಲ್ಲಿ ಹಿನ್ನಡೆ
- ವ್ಯವಹಾರದ ದೋಷದಿಂದ ಆರ್ಥಿಕ ನಷ್ಟ
- ಪ್ರಯಾಣದ ಸಮಯದಲ್ಲಿ ಸಮಸ್ಯೆ , ಸ್ವಲ್ಪದರಲ್ಲಿ ಪಾರು ಎಣಿಸಬಹುದು
- ಶ್ರೀಕೃಷ್ಣನನ್ನು ಅರ್ಚನೆ ಮಾಡಿ
ಮೀನ
- ಅವಿವಾಹಿತರು ತುಂಬಾ ಬೇಸರ ಮಾಡಿಕೊಳ್ಳುವ ದಿನ
- ಹೊಸ ವಿವಾಹವಾದವರಿಗೆ ಶುಭದಿನ
- ವಿದ್ಯಾರ್ಥಿಗಳು ಉನ್ನತ ಶಿಕ್ಷಣದಲ್ಲಿ ಪ್ರವೇಶ ಪಡೆಯಲು ಅವಕಾಶ ಇರುತ್ತದೆ
- ಹಣಗಳಿಸುವ ಹೊಸ ಮೂಲಕ್ಕಾಗಿ ಶೋಧನೆ ನಡೆಯಬಹುದು
- ನಂಬಿ ಮೋಸ ಹೋಗಬಾರದು
- ಹಣದ ಅವಶ್ಯಕತೆಯಿಂದ ದಾರಿ ತಪ್ಪಬಾರದೆಂಬ ಸಂದೇಶ ನೆನಪಿರಲಿ
- ತಂದೆಯವರ ಸೇವೆ ಮಾಡಿ ಅಥವಾ ತತ್ಸಮಾನರಿಗೆ ಸೇವೆ ಮಾಡಿ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ