ಶಕ್ತಿ, ಸಾಮರ್ಥ್ಯ ನಿಮಗೆ ಇರುವ ಜನ ಬೆಂಬಲ ನಿಮ್ಮ ಅರಿವಿಗೆ ಇರುವುದಿಲ್ಲ
ನವಗ್ರಹರ ಆರಾಧನೆ ಮಾಡಿ ಅದರಲ್ಲೂ ಸೂರ್ಯಗ್ರಹನನ್ನು ಪ್ರಾರ್ಥನೆ ಮಾಡಿ
ಮನೆಯ ನವೀಕರಣ ಅಥವಾ ಆಭರಣಗಳನ್ನು ಖರೀದಿಯ ಚರ್ಚೆ ನಡೆಯಲಿದೆ
ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.
ಶ್ರೀ ಕ್ರೋಧಿನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ಚೈತ್ರ ಮಾಸ, ಕೃಷ್ಣ ಪಕ್ಷ, ಏಕಾದಶಿ ತಿಥಿ, ಪೂರ್ವಾಭಾದ್ರಾ ನಕ್ಷತ್ರ, ರಾಹುಕಾಲ ಸೋಮವಾರ ಬೆಳಗ್ಗೆ 7.30 ರಿಂದ 9.00 ರವರೆಗೆ ಇರಲಿದೆ.
ಮೇಷ ರಾಶಿ
- ವ್ಯಾವಹಾರಿಕವಾಗಿ ಬುದ್ಧಿವಂತಿಕೆಯಿಂದ ಒಳ್ಳೆಯ ಕೆಲಸಗಳಾಗುತ್ತವೆ
- ಎರಡೆರಡು ಕೆಲಸಗಳನ್ನು ಒಟ್ಟಿಗೆ ಮಾಡಲು ಪ್ರಯತ್ನಿಸಬೇಡಿ
- ಸಂಬಂಧಿಕರಲ್ಲಿ ನಿಮ್ಮ ಬಗ್ಗೆ ವಿಶೇಷವಾದ ಒಲವು ಮೂಡಬಹುದು
- ಹೆಚ್ಚಿನ ರಕ್ತದೊತ್ತಡ ಇರುವ ಜನರು ಜಾಗ್ರತೆವಹಿಸಿ
- ಔಷಧೋಪಚಾರವನ್ನು ವೈದ್ಯರ ಸಲಹೆ ಮೇರೆಗೆ ಸರಿಯಾದ ರೀತಿಯಲ್ಲಿ ತೆಗೆದುಕೊಳ್ಳಿ
- ದೇವಿಯನ್ನು ಉಪಾಸನೆ ಮಾಡಿ
ವೃಷಭ
- ಆಸ್ತಿಯ ಖರೀದಿ ಅಥವಾ ಮಾರಾಟದಿಂದ ಲಾಭ ಗಳಿಸಬಹುದು
- ಕಾನೂನು ಚೌಕಟ್ಟಿನಲ್ಲಿ ನಿಮ್ಮ ವ್ಯವಹಾರವನ್ನು ನಡೆಸಿ
- ವಿದ್ಯಾರ್ಥಿಗಳು ಭವಿಷ್ಯದ ಬಗ್ಗೆ ಹೆಚ್ಚಿನ ಆಲೋಚನೆ ಇಟ್ಟುಕೊಳ್ಳಿ
- ಈ ದಿನ ನಾಸ್ತಿಕತೆ ಬೇಡ
- ಸತ್ಯಶೋಧನೆಗೆ ಮುಂದಾಗಬೇಕು
- ನಿಮ್ಮ ಜೀವನದಲ್ಲಿ ಸತ್ಯ ಶೋಧನ ಸತ್ಯ ಸಾಧನ ಬಹಳ ಮುಖ್ಯ
- ಮಹನೀಯರ ಜೀವನ ಕಥನ ಓದಿ ಸ್ಮರಣೆ ಮಾಡಿ
ಮಿಥುನ
- ಜಾಹೀರಾತುಗಳನ್ನ ನೋಡಿ, ವ್ಯಕ್ತಿಯ ಶ್ರೀಮಂತಿಕೆ ನೋಡಿ, ನಾವು ಹಣ ಹೂಡಿಕೆ ಮಾಡುವ ಕೆಟ್ಟ ಯೋಚನೆ ಬೇಡ
- ನಿಮ್ಮ ಜೀವನ ಶೈಲಿಯಲ್ಲಿ ಬದಲಾವಣೆ ತಂದುಕೊಳ್ಳಿ
- ನೀವು ನೀವಾಗಿರಿ ಬೇರೆಯವರಿಗೆ ಹೋಲಿಕೆ ಮಾಡಿಕೊಳ್ಳಬೇಡಿ
- ವ್ಯವಹಾರವನ್ನು ಬೇರೆಯವರಿಗೆ ಹೋಲಿಕೆ ಮಾಡಬೇಡಿ
- ದುರ್ಗಾ ಪರಮೇಶ್ವರಿಯನ್ನು ಪ್ರಾರ್ಥನೆ ಮಾಡಿ
ಕಟಕ
- ಆರೋಗ್ಯ ದೃಷ್ಟಿಯಿಂದ ನರ ಅಥವಾ ಮೂಳೆಗೆ ಸಣ್ಣಪುಟ್ಟ ತೊಂದರೆಯಾಗಬಹುದು
- ಯಾವುದೇ ವಿಚಾರದಲ್ಲಿ ತಾತ್ಸಾರ ಮಾಡಬೇಡಿ
- ಹಳೆ ನೋವುಗಳು ಇರುವಂತವರಿಗೆ ಬಹಳ ಕಷ್ಟ ಪಡಬೇಕಾದ ದಿನ
- ಕಾನೂನಾತ್ಮಕವಾದ ವಿಚಾರಗಳು ಎದುರಾದರೆ ಈ ದಿನ ಸುಮ್ಮನೆ ಇರಿ
- ಆತುರದ ನಿರ್ಧಾರಗಳನ್ನು ಮಾಡಬೇಡಿ
- ಏನಾದರೂ ಖರೀದಿ ಮಾಡುವ ಇಚ್ಛೆ ಇದ್ದರೆ ನಿಮ್ಮ ಜೊತೆ ಅನುಭವಿಗಳನ್ನು ಕರೆದುಕೊಂಡು ಹೋಗಿ ಇಲ್ಲದಿದ್ದರೆ ಮೋಸ ಹೋಗಬಹುದು
- ಅಂಬಾ ಭವಾನಿಯನ್ನು ಪ್ರಾರ್ಥನೆ ಮಾಡಿ
ಸಿಂಹ
- ಆಲಸ್ಯದಿಂದ ಸೋಮಾರಿತನದಿಂದ ಇವತ್ತಿನ ಕೆಲಸಗಳನ್ನ ನಾಳೆಗೆ ಮುಂದೂಡಬೇಡಿ
- ನಷ್ಟವನ್ನ ತಪ್ಪಿಸಬೇಕಾದರೆ ಆಲಸ್ಯದಿಂದ ದೂರವಿರಿ
- ನಿಮ್ಮ ವೈಯಕ್ತಿಕ ಜೀವನಕ್ಕೆ ಬೇಕಾದ ಸಾಮಗ್ರಿಗಳನ್ನು ಹೆಚ್ಚು ಗಮನ ಕೊಟ್ಟು ಕೊಂಡುಕೊಳ್ಳುತ್ತೀರಿ
- ಉದ್ಯೋಗದಲ್ಲಿ ನಿಮ್ಮ ಹಕ್ಕು ಅಥವಾ ಜವಾಬ್ದಾರಿ ಹೆಚ್ಚಾಗುವ ದಿನ
- ಮಕ್ಕಳಿಗೆ ಸಿಹಿತಿಂಡಿಯನ್ನು ಕೊಡಿಸಿ ಸಂತೋಷವಾಗಿರುತ್ತಾರೆ
- ಮಾತಾ ಅನ್ನಪೂರ್ಣೇಶ್ವರಿಯನ್ನು ಪ್ರಾರ್ಥನೆ ಮಾಡಿ
ಕನ್ಯಾ
- ವಿದ್ಯಾರ್ಥಿಗಳಿಗೆ ತುಂಬಾ ಒಳ್ಳೆದಾಗುವ ದಿನ ವ್ಯರ್ಥ ಮಾಡಿಕೊಳ್ಳಬೇಡಿ
- ಹೃದ್ರೋಗಕ್ಕೆ ಒಳಗಾಗಿದವರು ಜಾಗ್ರತೆವಹಿಸಿ
- ವೈದ್ಯಕೀಯ ಪರೀಕ್ಷೆ ಮಾಡಿಸಿಕೊಳ್ಳಿ ಕೆಲವರಿಗೆ ಇಂದು ಹೃದಯಕ್ಕೆ ಸಂಬಂಧಿಸಿದ ಸಮಸ್ಯೆ ಕಾಡಬಹುದು
- ಆರೋಗ್ಯದಲ್ಲಿ ಸ್ವಲ್ಪ ವ್ಯತ್ಯಾಸ ಕಂಡರೂ ತಕ್ಷಣ ವೈದ್ಯರ ಸಲಹೆ ಪಡೆದುಕೊಳ್ಳಿ
- ಔಷದೋಪಚಾರ ಮಾಡಿಕೊಳ್ಳಬೇಕಾದರೆ ಸ್ವಯಂ ವೈದ್ಯ ಬೇಡ
- ನವಗ್ರಹರ ಆರಾಧನೆ ಮಾಡಿ ಅದರಲ್ಲೂ ಸೂರ್ಯಗ್ರಹನನ್ನು ಪ್ರಾರ್ಥನೆ ಮಾಡಿ
ತುಲಾ
- ನಿಮಗಿರುವ ಜಾಣ್ಮೆ ಬುದ್ಧಿವಂತಿಕೆಯಿಂದ ಹಲವಾರು ಕೆಲಸಗಳನ್ನು ಮಾಡಿ ಪೂರೈಸುತ್ತೀರಿ
- ನಿಮಗೆ ವಿರೋಧಿಗಳಾಗಿ ವರ್ತಿಸುವವರು ಈ ದಿನ ಸುಮ್ಮನಾಗಿಬಿಡುತ್ತಾರೆ
- ಕುಟುಂಬದಲ್ಲಿ ಉತ್ತಮವಾದ ವಾತಾವರಣವಿದೆ
- ಮಕ್ಕಳ ಬಗ್ಗೆ ಯಾವ ಯೋಚನೆ ಇರುವುದಿಲ್ಲ
- ಮನೆಯ ನವೀಕರಣ ಅಥವಾ ಆಭರಣಗಳನ್ನು ಖರೀದಿಯ ಚರ್ಚೆ ನಡೆಯಲಿದೆ
- ನವಗ್ರಹರ ಪ್ರಾರ್ಥನೆ ಮಾಡಿ
- ದಕ್ಷಿಣಾಮೂರ್ತಿಯನ್ನು ಸ್ಮರಣೆ ಮಾಡಿ
ವೃಶ್ಚಿಕ
- ಸರಿಯಾದ ಅನುಭವಿಗಳ ಮಾತನ್ನು ನೀವು ಕೇಳಿ
- ನಿಮ್ಮ ಸ್ವಭಾವವನ್ನು ಬದಲಾಯಿಸಿಕೊಳ್ಳಲು ಪ್ರಯತ್ನಿಸಿ
- ಕುಟುಂಬದ ದೃಷ್ಟಿಯಿಂದ ಯೋಚನೆ ಮಾಡಿದಾಗ ಈ ವ್ಯಕ್ತಿಯನ್ನು ತಿದ್ದಲು ಆಗುವುದಿಲ್ಲ
- ಸ್ವಲ್ಪ ಬದಲಾವಣೆಯಿಂದ ಅನುಕೂಲವಾಗಲಿದೆ
- ಆಂಜನೇಯ ಸ್ವಾಮಿಯನ್ನು ಪ್ರಾರ್ಥನೆ ಮಾಡಿ
ಧನುಸ್ಸು
- ಆರ್ಥಿಕವಾಗಿ ನಿಮ್ಮ ಸ್ಥಿತಿಗತಿ ಸುಧಾರಣೆಯಾಗಲಿದೆ
- ನಿಮ್ಮ ಅಶಿಸ್ತು ಒಂದಷ್ಟು ಹಣದ ವಿಚಾರವಾಗಿ ಹಾಳು ಮಾಡಬಹುದು
- ನ್ಯಾಯ ಸಮ್ಮತವಾಗಿ ನಿಮ್ಮ ಕೈ ಸೇರಬೇಕಾದ ಹಣಕ್ಕೆ ನಿಮ್ಮ ಅಶಿಸ್ತು ಕಾರಣವಾಗಲಿದೆ
- ನಿಮ್ಮ ನೌಕರಿಯ ಬಗ್ಗೆ ಎಚ್ಚರಿಕೆಯನ್ನು ವಹಿಸಬೇಕು
- ಕುಟುಂಬದವರಿಂದ ಖರ್ಚಿಗೋಸ್ಕರ ಹಣವನ್ನು ಪಡೆದುಕೊಳ್ಳುತ್ತಿದ್ದರೆ ಅದು ನಿಂತು ಹೋಗಲಿದೆ
- ಈ ದಿನ ಶಿಸ್ತು ಇಲ್ಲದೆ ಇರುವುದು
- ಕಡಿಮೆ ಹಣವನ್ನು ಸ್ವೀಕಾರ ಮಾಡಿ ಬೇಸರವನ್ನು ಮಾಡಿಕೊಳ್ಳುತ್ತೀರಿ
- ವಿದ್ಯಾರ್ಥಿಗಳಿಗೆ ಪ್ಯಾಕೆಟ್ ಮನಿ ತಪ್ಪು ಹೋಗಲಿದೆ
- ಲಕ್ಷ್ಮಿ ನಾರಾಯಣ ಹೃದಯ ಸ್ತೋತ್ರ ಮಾಡಿ
ಮಕರ
- ವ್ಯಾವಹಾರಿಕವಾದ, ಉದ್ಯೋಗಕ್ಕೆ ಸಂಬಂಧಪಟ್ಟಂತಹ ವಿಚಾರವಾಗಿ ಮನೆಯವರನ್ನು ನಿರ್ಲಕ್ಷ್ಯ ಮಾಡಬೇಡಿ
- ರಾಜಕೀಯ ವ್ಯಕ್ತಿಗಳಿಗೆ ಉತ್ತಮವಾದ ಸ್ಥಾನಮಾನ ಸಿಗಲಿದೆ
- ನೀವು ಸರಿಯಾದ ನಿಲುವನ್ನು ಪಡೆದುಕೊಂಡರೆ ಒಳ್ಳೆಯದು
- ಸಮರ್ಪಕವಾಗಿ ನಿಭಾಯಿಸಬಲ್ಲ ಕೆಲಸಗಳ ಬಗ್ಗೆ ಮಾತ್ರ ಗಮನಹರಿಸಿ
- ಭವಾನಿ ದೇವರನ್ನು ಪ್ರಾರ್ಥನೆ ಮಾಡಿ
ಕುಂಭ
- ಶಕ್ತಿ, ಸಾಮರ್ಥ್ಯ ನಿಮಗೆ ಇರುವ ಜನ ಬೆಂಬಲ ನಿಮ್ಮ ಅರಿವಿಗೆ ಇರುವುದಿಲ್ಲ
- ಆಪತ್ತಿನಲ್ಲಿರುವವರಿಗೆ ಸಹಾಯ ಮಾಡಿ
- ಅನುಭವಕ್ಕೆ ಬರಲಿದೆ
- ಅಪರಿಚಿತರಿಂದ ಹಲ್ಲೆಗೊಳಗಾಗುತ್ತೀರಿ
- ನೀವು ಯಾರು ಅಂತ ಹೇಳಿಕೊಳ್ಳಲು ಅವಕಾಶವಿರುವುದಿಲ್ಲ
- ಮೃತ್ಯುಂಜಯನನ್ನು ಪ್ರಾರ್ಥನೆ ಮಾಡಿ
ಮೀನ
- ಮನಸ್ಸಿಗೆ ಅತೃಪ್ತಿ ಭಾವನೆ ಉಂಟಾಗಬಹುದು
- ಅನಗತ್ಯವಾಗಿ ದೂರದ ಪ್ರಯಾಣ ಮಾಡುವ ಪರಿಸ್ಥಿತಿ ಒದಗಿ ಬರಬಹುದು
- ಉದ್ಯೋಗದ ದೃಷ್ಟಿಯಿಂದ ತಂತ್ರಗಾರಿಕೆ ಬದಲಾಯಿಸುವ ಅವಕಾಶವನ್ನ ಮೊರೆ ಹೋಗುತ್ತೀರಿ
- ದುಬಾರಿ ವಸ್ತುಗಳ ಬಗ್ಗೆ ವಿಚಾರ ಮಾಡುತ್ತೀರಿ
- ಕಾಲಾಹರಣವಾಗಲಿದೆ ಆದರೆ ಬದಲಾವಣೆ , ಬೆಳವಣೆಗೆ ಅಗುವುದಿಲ್ಲ
- ಸರಿಯಾದ ನಿಲುವಿಗೆ ಮನಸ್ಸೇ ಕಾರಣ ಅನ್ನುವುದು ತಿಳಿಯಿರಿ
- ಆಂಜನೇಯ ಸ್ವಾಮಿಯನ್ನು ಪ್ರಾರ್ಥನೆ ಮಾಡಿ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ