ವಿದ್ಯಾರ್ಥಿಗಳು ಅನಾರೋಗ್ಯದ ಸಮಸ್ಯೆಗಳನ್ನು ಅನುಭವಿಸಬೇಕಾಗುತ್ತದೆ
ಶಾಲಾ- ಕಾಲೇಜುಗಳಲ್ಲಿ ವಿವಾದಕ್ಕೆ ಅವಕಾಶವನ್ನು ಮಾಡಿಕೊಡಬೇಡಿ
ನಿಮ್ಮ ತೀರ್ಮಾನವನ್ನು ಸ್ಥಿರ ಮಾಡಿಕೊಂಡರೆ ವ್ಯವಹಾರದಲ್ಲಿ ಲಾಭವಿದೆ
ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.
ಶ್ರೀ ಕ್ರೋಧಿನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ಚೈತ್ರ ಮಾಸ, ಕೃಷ್ಣ ಪಕ್ಷ, ಏಕಾದಶಿ ತಿಥಿ, ಪೂರ್ವಾಭಾದ್ರಾ ನಕ್ಷತ್ರ, ರಾಹುಕಾಲ ಶನಿವಾರ ಬೆಳಗ್ಗೆ 9.00 ರಿಂದ 10.30 ರವರೆಗೆ ಇರಲಿದೆ.
ಮೇಷ ರಾಶಿ
- ಈ ದಿನ ದೊಡ್ಡವರ ಕೋಪಕ್ಕೆ ಗುರಿಯಾಗುತ್ತೀರಿ
- ಮಕ್ಕಳಿಂದ ತೊಂದರೆಯ ಸೂಚನೆ ಇದೆ
- ಆರೋಗ್ಯದ ಬಗ್ಗೆ ಗಮನಹರಿಸಿ
- ಬೇರೆಯವರ ಮಾತಿಗೆ ಮರಳಾಗಬೇಡಿ
- ನಿಮ್ಮ ತೀರ್ಮಾನವನ್ನು ಸ್ಥಿರ ಮಾಡಿಕೊಂಡರೆ ವ್ಯವಹಾರದಲ್ಲಿ ಲಾಭವಿದೆ
- ಮಹಿಳಾ ನೌಕರರಿಗೆ ಶುಭ ಸಮಾಚಾರವಿದೆ
- ನಿಮ್ಮ ಸ್ವಭಾವದಲ್ಲಿ ಬದಲಾವಣೆಯನ್ನು ಮಾಡಿಕೊಳ್ಳಿ
- ಹಿರಿಯರ ಮಾತಿಗೆ ಗೌರವವನ್ನು ಕೊಡಿ
- ನಿಮ್ಮ ಕೆಲಸಕೋಸ್ಕರವಾಗಿ ಹೊರಗೆ ಹೋದರು ಮಾನಸಿಕವಾಗಿ ಸಮಾಧಾನವಿರಬೇಕು
- ವಿದ್ಯಾರ್ಥಿಗಳು ಮನಸ್ಸನ್ನು ಕೇಂದ್ರಿಕರಿಸಿ
- ನಿಮ್ಮ ಗುರುಗಳನ್ನು ಪ್ರಾರ್ಥನೆ ಮಾಡಿ
ವೃಷಭ
- ಯಾವತ್ತೊ ಮಾಡಿದ ಸಾಲ ಅಥವಾ ಬೇರೆಯವರಿಂದ ಪಡೆದ ಪದಾರ್ಥ, ವಸ್ತುವನ್ನು ಹಿಂದಿರುಗಿಸುತ್ತೀರಿ
- ಕುಟುಂಬದಲ್ಲಿ ವಾಗ್ವಾದಗಳು ನಡೆಯಬಹುದು
- ಪಾಲುದಾರಿಕೆ ಅಥವಾ ಹಣ ಹೂಡಿಕೆಯಿಂದ ಆರ್ಥಿಕ ಸಂಕಷ್ಟವನ್ನು ತಂದು ಕೊಳ್ಳುತ್ತೀರಿ
- ಇಂದು ದುರಾಲೋಚನೆಗಳು ಬರಬಹುದು
- ವರ್ಗಾವಣೆಯ ವಿಚಾರದಲ್ಲಿ, ನ್ಯಾಯಾಲಯದಲ್ಲಿ ಕಾರ್ಯ ನಿರ್ವಹಿಸುವವರಿಗೆ ಶುಭಪಲವಿದೆ
- ವಿಷ್ಣು ಸಹಸ್ರನಾಮವನ್ನು ಶ್ರವಣ ಮಾಡಿ
ಮಿಥುನ
- ಅನಾರೋಗ್ಯ ನಿಮ್ಮನ್ನು ಕಾಡಬಹುದು
- ಆರೋಗ್ಯದ ಬಗ್ಗೆ ಹೆಚ್ಚು ಗಮನಕೊಡಿ
- ಹಿತಶತ್ರುಗಳಿಂದ ತೊಂದರೆಯಾಗಬಹುದು
- ವಿದ್ಯಾರ್ಥಿಗಳಿಗೆ ಮುನ್ನಡೆ ಇದೆ
- ಶಾಲಾ-ಕಾಲೇಜುಗಳಲ್ಲಿ ವಿವಾದಕ್ಕೆ ಅವಕಾಶವನ್ನು ಮಾಡಿಕೊಡಬೇಡಿ
- ಮಹಿಳೆಯರಿಗೆ ಮೋಸವಾಗುವ ಸಾಧ್ಯತೆ ಇದೆ
- ಅನಗತ್ಯವಾದ ವಸ್ತು ಖರೀದಿಯನ್ನು ಮಾಡಬೇಡಿ
- ಉಗ್ರ ನರಸಿಂಹನನ್ನು ಪ್ರಾರ್ಥನೆ ಮಾಡಿ
ಕಟಕ
- ಸರ್ಕಾರಿ ಕೆಲಸ ಕಾರ್ಯಗಳಲ್ಲಿ ಅನುಕೂಲವಿದೆ
- ಹಣದ ವಿಚಾರದಲ್ಲಿ ಕಿರಿಕಿರಿಯಾಗಬಹುದು
- ಅನಾವಶ್ಯಕವಾದ ದ್ವೇಷ ಮಿತ್ರರಲ್ಲಿ ಕಲಹ ಉಂಟಾಗಬಹುದು
- ಈ ದಿನ ಮಕ್ಕಳಿಂದ ನೋವಾಗಬಹುದು
- ಕೃಷಿ ಕ್ಷೇತ್ರದಲ್ಲಿ ವ್ಯಾಪರಸ್ಥರಿಗೆ ಅನುಕೂಲವಿದೆ
- ಕಮಿಷನ್ ಏಜೆಂಟ್ಸ್ ಗಳಿಗೆ ಹಿನ್ನಡೆಯಾಗಬಹುದು
- ಹಳೆಯ ವ್ಯವಹಾರಗಳಿಂದ ಹಾನಿಯಾಗಬಹುದು
- ದುರ್ಗಾದೇವಿಯ ಪ್ರಾರ್ಥನೆ ಮಾಡಿ
ಸಿಂಹ
- ಕಠಿಣವಾದ ನಿರ್ಧಾರಗಳಿಂದ ಉತ್ತಮವಾದ ಫಲವನ್ನು ಹೊಂದುತ್ತೀರಿ
- ಯತ್ನ ಕಾರ್ಯದಲ್ಲಿ ಜಯ ನಿಮಗೆ ಸಿಗಲಿದೆ
- ವೈದ್ಯರ ನಿರ್ಲಕ್ಷ್ಯ ಅನಾರೋಗ್ಯಕ್ಕೆ ಕಾರಣವಾಗಬಹುದು
- ಅತಿಯಾದ ಒತ್ತಡ, ಅಪವಾದ, ಸರಿ ತಪ್ಪುಗಳ ಬಗ್ಗೆ ಸರಿಯಾದ ಯೋಚನೆ ಬದಲಾಗಲಿದೆ
- ಸಾಯಂಕಾಲ ವೈಯಕ್ತಿಕವಾದ ವಿಚಾರಗಳಿಗೆ ತೊಂದರೆಯಾಗಬಹುದು
- ಅಡ್ಡಿಯಾಗುವ ಯಾವುದೇ ಕೆಲಸಗಳಿದ್ದರು ಗಮನಹರಿಸಿ
- ಇಂದು ಮಕ್ಕಳಿಂದ ಕಿರಿಕಿರಿಯಾಗಬಹುದು
- ವಿದ್ಯಾರ್ಥಿಗಳು ಅನಾರೋಗ್ಯದ ಸಮಸ್ಯೆಗಳನ್ನು ಅನುಭವಿಸಬೇಕಾಗುತ್ತದೆ
- ಧನ್ವಂತರಿ ಮಹಾವಿಷ್ಣುವನ್ನು ಪ್ರಾರ್ಥನೆ ಮಾಡಿ
ಕನ್ಯಾ
- ಪ್ರತಿಫಲಕ್ಕೆ ತಕ್ಕ ಪರಿಶ್ರಮ ನೋಡುತ್ತೀರಿ
- ಮಕ್ಕಳ ವಿದ್ಯಾಭ್ಯಾಸದ ಕಡೆ ಗಮನ ಕೊಡಿ
- ಉತ್ತಮ ಬುದ್ಧಿವಂತಿಕೆಯನ್ನು ಉಪಯೋಗ ಮಾಡಿದರೆ ಲಾಭ ಸಿಗಲಿದೆ
- ಹಣಕಾಸಿನ ಸ್ಥಿತಿ ಉತ್ತಮವಾಗಿರುತ್ತದೆ
- ವಿರೋಧ, ದ್ವೇಷವನ್ನು ನಿಮ್ಮ ಶತ್ರುಗಳು ಹೆಚ್ಚು ಮಾಡುತ್ತಾರೆ
- ಇಂದು ಅಹಂಕಾರವನ್ನು ಬಿಡಿ
- ಗುರುಗಳ ಮಾರ್ಗದರ್ಶನ ಪಡೆದುಕೊಳ್ಳಿ
ತುಲಾ
- ಆದಾಯದಷ್ಟೇ ಖರ್ಚಿದೆ ಹಾಗೆ ಆರೋಗ್ಯದಲ್ಲಿ ವ್ಯತ್ಯಯ ಉಂಟಾಗಬಹುದು ವೈದ್ಯರ ಸಲಹೆ ಪಡೆಯಿರಿ
- ಈ ದಿನ ಪ್ರಿಯರ ಭೇಟಿಯಾಗಲಿದೆ
- ಮನಶಾಂತಿಗೆ ದೇವರನ್ನು ಪ್ರಾರ್ಥನೆ ಮಾಡಿ
- ವೈರಾಗ್ಯದ ಭಾವ ಅಧಿಕವಾಗಿ ಕಾಡಬಹುದು
- ನೀರಸ ಭಾವನೆಯಿಂದ ಎಲ್ಲರ ಮೇಲೂ ಪರಿಣಾಮ ಬೀರಬಹುದು
- ಮಕ್ಕಳಿಗೆ, ಮನೆಯವರಿಗೆ ಸ್ಫೂರ್ತಿದಾಯಕವಾದ ಕೆಲಸಗಳಲ್ಲಿ ಉತ್ಸುಕರಾಗಿರಿ
- ಧ್ಯಾನವನ್ನು ಮಾಡಿ ಮನಶಾಂತಿ ಸಿಗಲಿದೆ
ವೃಶ್ಚಿಕ
- ಆಲಸ್ಯ ಹೆಚ್ಚಾಗಿ ಕಾಡಬಹುದು
- ಆಕಸ್ಮಿಕ ಅವಘಡಗಳಿಂದ ಹಣ ಖರ್ಚಾಗಬಹುದು
- ಒತ್ತಡದಿಂದ ನಿದ್ರಾಭಂಗವಾಗಲಿದೆ
- ಕೆಲಸ ಕಾರ್ಯಗಳಲ್ಲಿ ಹಿನ್ನಡೆಯಾಗಬಹುದು
- ಅಪರಿಚಿತರಿಂದ ತೊಂದರೆಯಾಗಬಹುದು ಎಚ್ಚರಿಕೆವಹಿಸಿ
- ಮನೆಯವರ ಮಾತನ್ನು ಕೇಳದೆ ನಷ್ಟ ಹೊಂದುತ್ತೀರಿ
- ರಾತ್ರಿಯ ಹೊತ್ತಿಗೆ ನಿಮಗೆ ಜ್ಞಾನೋದಯವಾಗಬಹುದು
- ಕೆಂಪು ಹೂವಿನಿಂದ ದುರ್ಗಾ ದೇವಿಯನ್ನು ಅರ್ಚನೆ ಮಾಡಿ
ಧನುಸ್ಸು
- ಯಾವುದೋ ಕೆಲಸದಿಂದ, ಮಾತಿನಿಂದ ಅವಮಾನವಾಗಬಹುದು
- ಖುಷಿಯಿಂದ ಹಾಕಿದ ಯೋಜನೆ, ಪ್ರಯಾಣ ಅಡ್ಡಿಯಿಂದ ನಿಂತು ಹೋಗಬಹುದು
- ಇಂದು ಕುಟುಂಬದಲ್ಲಿ ಕಿರಿಕಿರಿಯಾಗಬಹುದು
- ಹಣಕಾಸಿನ ವಿಚಾರದಲ್ಲಿ ಮನಸ್ತಾಪ ಆಗಬಹುದು
- ಮಾನಸಿಕ ನೋವನ್ನು ಬೇರೆಯವರ ಹತ್ತಿರ ಹಂಚಿಕೊಳ್ಳಿ
- ಅಳುವುದರಿಂದ ಅಥವಾ ಬೇಸರ ಮಾಡಿಕೊಳ್ಳುವುದರಿಂದ ಪ್ರಯೋಜನವಿಲ್ಲ
- ಮಕ್ಕಳ, ಮೊಮ್ಮಕ್ಕಳ ಪ್ರತಿಭೆ, ಚಟುವಟಿಕೆಯಿಂದ ಸಮಾಧಾನ ಸಿಗಲಿದೆ
- ಶಾಸ್ತ್ರೀಯ ಸಂಗೀತವನ್ನು ಕೇಳಿ ಮನಸ್ಸಿಗೆ ಸಮಾಧಾನ ಸಿಗಲಿದೆ
- ಶುಭವಾಗಲಿದೆ
ಮಕರ
- ದಾಯಾದಿಗಳ ಕಲಹ ಗೊತ್ತಾಗಲಿದೆ
- ಕೋರ್ಟ್ ಕೇಸ್ ಗಳಿದ್ದರೆ ನಿಮಗೆ ಜಯ ಸಿಗಲಿದೆ
- ಇಂದು ಅತಿಯಾಗಿ ಖರ್ಚಾಗುವ ದಿನ
- ಮಾತಿನ ಚಕಮಕಿ, ಮನಕ್ಲೇಶ, ಅಸಹನೆ, ಅಸಮಾಧಾನ ಕಾಡಲಿದೆ
- ಮರಗೆಲಸ ಮಾಡುವವರಿಗೆ ಲಾಭವಿದೆ
- ಸ್ತ್ರೀ ವೈದ್ಯರಿಗೆ ಬೆಲೆ, ಬೇಡಿಕೆ ಹಾಗೂ ಲಾಭದ ದಿನ
- ಲಲಿತ ಸಹಸ್ರನಾಮವನ್ನು ಪಠಣೆ ಮಾಡಿ
ಕುಂಭ
- ವಿಲಾಸಿ ಜೀವನಕ್ಕೆ ಹೆಚ್ಚು ಹಣ ಖರ್ಚು ಮಾಡುತ್ತೀರಿ
- ಸೌಂದರ್ಯವರ್ಧಕ ವ್ಯಾಪಾರಿಗಳಿಗೆ ಅಧಿಕ ಲಾಭವಿದೆ
- ಅನಗತ್ಯವಾದ ಖರ್ಚಿಗೆ ನೂರು ದಾರಿಯಿರಲಿದೆ
- ವಿದ್ಯಾರ್ಥಿಗಳಿಗೆ ವಿದ್ಯಾಕ್ಷೇತ್ರದಲ್ಲಿ ಪ್ರಗತಿಯಿದೆ
- ನೌಕರರಿಗೆ ವರ್ಗಾವಣೆಯ ವಿಚಾರದಲ್ಲಿ ಅಡ್ಡಿಯಾಗಬಹುದು
- ಪಿತ್ರಾರ್ಜಿತ ಆಸ್ತಿಯ ಲಾಭದ ಸೂಚನೆಗಳು ಕಾಣಲಿದೆ
- ಬಂಧುಗಳಲ್ಲಿ ಮಾತು ಬೆಳೆದು ನಿಷ್ಠೂರವಾಗಬಹುದು
- ದಾಂಪತ್ಯದಲ್ಲಿ ವಿರಸ ಕಾಣಬಹುದು
- ಗಣಪತಿಗೆ 21 ಗರಿಕೆಯನ್ನು ಸಮರ್ಪಣೆ ಮಾಡಿ
ಮೀನ
- ವಾಹನದಿಂದ, ಕಬ್ಬಿಣದ ಸಾಮಾಗ್ರಿಗಳಿಂದ ಪೆಟ್ಟಾಗಬಹುದು
- ಶರೀರದ ಮೇಲೆ ಆಗುವ ಗಾಯಕ್ಕೆ ಹೆಚ್ಚು ಗಮನ ಕೊಟ್ಟು ಗುಣಪಡಿಸಿಕೊಳ್ಳಿ
- ಎಷ್ಟೇ ಹಣ ಬಂದರೂ ಕೈ ನಲ್ಲಿ ನಿಲ್ಲುತ್ತಿಲ್ಲ ಎನ್ನುವ ಕೊರಗು ಕಾಡಲಿದೆ
- ಆಸ್ತಿ, ಮನೆ, ನಿವೇಶನವನ್ನು ಮಾರಾಟ ಮಾಡುವ ಆಸಕ್ತಿಯನ್ನು ತೋರುತ್ತೀರಿ
- ಸಂಬಂಧಿಕರಲ್ಲಿ ವಿಶ್ವಾಸವನ್ನು ಕಾಯ್ದಕೊಳ್ಳುವ ಪ್ರಯತ್ನ ಮಾಡಿ
- ಸ್ತ್ರೀಯರಿಗೆ ಶುಭವಾದ ಉತ್ತಮವಾದ ವಾತಾವರಣವಿದೆ ಆದರೂ ಮಾನಸಿಕ ಬೇಸರ ಕಾಡಬಹುದು
- ಶನೇಶ್ವರನ ದೇವಸ್ಥಾನಕ್ಕೆ ಹೋಗಿ ಎಳ್ಳೆಣ್ಣೆಯನ್ನು ನೀಡಿ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ